ಮನೆ Latest News ನಾನು ಪಕ್ಷ ಸಂಘಟನೆ ಮಾತ್ರ ಮಾಡುತ್ತಿದ್ದೇನೆ,ನನ್ನ ಮೇಲೆ ತಪ್ಪು ಹೊರಿಸುವುದು ಬೇಡ; ಬೆಂಗಳೂರಿನಲ್ಲಿ ಬಿಜೆಪಿರಾಜ್ಯಾಧ್ಯಕ್ಷ ಬಿ.ವೈ....

ನಾನು ಪಕ್ಷ ಸಂಘಟನೆ ಮಾತ್ರ ಮಾಡುತ್ತಿದ್ದೇನೆ,ನನ್ನ ಮೇಲೆ ತಪ್ಪು ಹೊರಿಸುವುದು ಬೇಡ; ಬೆಂಗಳೂರಿನಲ್ಲಿ ಬಿಜೆಪಿರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ

0

 

ಬೆಂಗಳೂರು; ನಾನು ಪಕ್ಷ ಸಂಘಟನೆ ಮಾತ್ರ ಮಾಡುತ್ತಿದ್ದೇನೆ,ನನ್ನ ಮೇಲೆ ತಪ್ಪು ಹೊರಿಸುವುದು ಬೇಡ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

23 ಜಿಲ್ಲೆಗಳ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಚುನಾವಣೆ ಪ್ರಕ್ರಿಯೆ ಹೇಗೆ ನಡೆದಿದೆ ಎನ್ನುವುದನ್ನು ಹಿರಿಯರಿಗೆ ತಿಳಿಸಲು ಇಚ್ಚಿಸುತ್ತೇನೆ. ನಾನು ಯಾವುದೇ ಅಭಿಪ್ರಾಯ ಕೊಟ್ಟಿಲ್ಲ. ಕೇಂದ್ರದಿಂದ ಕ್ಯಾ. ಗಣೇಶ್ ಕಾರ್ಣಿಕ್ ಅವರಿಗೆ ಚುನಾವಣೆ ಜವಾಬ್ದಾರಿ ನೀಡಿದ್ದರು.13 ಜನ ವೀಕ್ಷಕರ ನೇಮಕ ಆಗಿತ್ತು.ರಿಟರ್ನಿಂಗ್ ಆಫಿಸರ್‌ಗಳನ್ನೂ ನೇಮಕ ಮಾಡಲಾಗಿತ್ತು.ಜಿಲ್ಲಾ ತಂಡದಿಂದ ಮೂರು ಹೆಸರನ್ನು ಕಳಿಸಿದ್ದು, ಹೈಕಮಾಂಡ್ ಅಲ್ಲಿಂದ ಅಂತಿಮ ಮಾಡಿ ಕಳಿಸಿದೆ.ಚುನಾವಣಾ ಪ್ರಕ್ರಿಯೆಯಲ್ಲಿ ವಿಜಯೇಂದ್ರ ಪಾತ್ರ ಶೂನ್ಯ‌. ರಾಜ್ಯದಲ್ಲಿ ನನ್ನ ಅಭಿಪ್ರಾಯ ಇಲ್ಲ. ನಾನು ಸುಧಾಕರ್ ಅವರನ್ನೂ ದೂಷಿಸಲ್ಲ. ಸುಧಾಕರ್ ಅವರ ಆಕ್ರೋಶಭರಿತ ಮಾತನ್ನು ನೋಡಿದ್ದೇನೆ. ನಮ್ಮನ್ನು ಸಮಾಧಿ ಮಾಡಲು ಹೊರಟಿದ್ದಾರೆ ಅಂತ ಹೇಳಿದ್ದಾರೆ.ಈ ರೀತಿ ಆಕ್ರೋಶದ ಮಾತು ಸರಿಯಲ್ಲ ಎಂದಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಈಗ ಆಯ್ಕೆಯಾಗಿರುವ ವ್ಯಕ್ತಿ ಕೂಡ ಬಿಜೆಪಿಯವನೇ. ಅವರ ಸಂಬಂಧಿಕ ಕೂಡಾ ಹೌದು. ನಾನು ತಿದ್ದಿಕೊಳ್ಳಬೇಕು ಅಂತ ಅವರು ಮತ್ತು ಇತರರು ಹೇಳಿದ್ದಾರೆ.ನಾನು ಖಂಡಿತ ತಿದ್ದಿಕೊಳ್ಳುತ್ತೇನೆ.ಸುಧಾಕರ್ ಅವರು ತಾಳ್ಮೆ ಮುಗಿಯಿತು, ಇನ್ನು ಯುದ್ಧ ಎಂದಿದ್ದಾರೆ, ಆ ರೀತಿ ಮಾತಾಡಬಾರದು. ನಾನು ಸುಧಾಕರ್ ಮತ್ತು ಇತರರ ಜೊತೆ ಮಾತಾಡುತ್ತೇನೆ.ನಾನು ಪಕ್ಷ ಸಂಘಟನೆ ಮಾತ್ರ ಮಾಡುತ್ತಿದ್ದೇನೆ.ನನ್ನ ಮೇಲೆ ತಪ್ಪು ಹೊರಿಸುವುದು ಬೇಡ. ಸುಧಾಕರ್ ಅವರು ಅನ್ಯತಾ ಭಾವಿಸಬಾರದು.ಆ ರೀತಿ ಮಾತಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ನಾಳೆ ಯತ್ನಾಳ್ ಟೀಮ್ ಸಭೆ ಹಾಗೂ ರಾಜ್ಯಾಧ್ಯಕ್ಷ ಅಭ್ಯರ್ಥಿ ಆಯ್ಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಆಲ್ ದಿ ಬೆಸ್ಟ್, ಒಳ್ಳೆಯದಾಗಲಿ ಎಂದ ಅವರು ಶ್ರೀರಾಮುಲು ಜೊತೆ ನಾನು ಮಾತಾಡಿದ್ದೇನೆ.ಅಂದು ಮಾತಾಡಿದೆ, ಮರು ದಿನವೂ ಮಾತಾಡಿದೆ. ಏನೇ ಸಮಸ್ಯೆ ಇದ್ದರೂ ಕುಳಿತು ಮಾತಾಡುತ್ತೇವೆ.ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದ್ರು.ಸುಧಾಕರ್ ಹಗುರವಾಗಿ ಮಾತಾಡಬಾರದು, ಅದು ಅವರಿಗೆ ಶೋಭೆ ತರಲ್ಲ.ಸುಧಾಕರ್ ಅವರು ಹಾಗೆಲ್ಲ‌ ಮಾತಾಡಬಾರದು ಅಂತ ಆಗ್ರಹ ಮಾಡಲ್ಲ, ಮನವಿ ಮಾಡುತ್ತೇನೆ.ನಾನು ಸುಧಾಕರ್ ಅವರನ್ನೂ ಭೇಟಿ ಮಾಡುತ್ತೇನೆ.ನನ್ನ ಮೇಲೆ ಸುಧಾಕರ್ ಆರೋಪ ಮಾಡೋದು ಸರಿಯಲ್ಲ.ಅವರು ಹಾಗೆಲ್ಲಾ ಮಾತಾಡುವುದು ಅವರಿಗೂ ಗೌರವ ಕೊಡಲ್ಲ, ಪಕ್ಷಕ್ಕೂ ಗೌರವ ಸಿಗಲ್ಲ. ಪಕ್ಷ ನನ್ನ ಸ್ವತ್ತೂ ಅಲ್ಲ, ಅವರ ಸ್ವತ್ತೂ ಅಲ್ಲ. ಮುಂದಿನ ಸಿಎಂ ಆಗಲು ನಾನು ಪಕ್ಷ ಸಂಘಟನೆ ಮಾಡುತ್ತಿಲ್ಲ.ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಆಯ್ಕೆಯಲ್ಲಿ ನನ್ನ ಪಾತ್ರ ಇಲ್ಲ. ಯಾವ ಜಿಲ್ಲೆಯಲ್ಲೂ ನನ್ನ ಪಾತ್ರ ಇಲ್ಲ. ಶ್ರೀರಾಮುಲು ಸಚಿವರಾಗಿ, ಹಿರಿಯರಾಗಿ ಪಕ್ಷಕ್ಕೆ ಅವರದ್ದೇ ಆದ ಶಕ್ತಿ ತುಂಬಿದ್ದಾರೆ.ಕೋರ್ ಕಮಿಟಿಯಲ್ಲಿ ನಡೆದಿದ್ದು ಮಾಧ್ಯಮಗಳಲ್ಲಿ ಚರ್ಚೆ ಮಾಡಬಾರದು ಅಂತ ಅವರಿಗೆ ಮನವಿ ಮಾಡಿದ್ದೇನೆ ಎಂದ್ರು.