ಬೆಂಗಳೂರು; ಸಿಎಂ ಕುಮ್ಮಕ್ಕಿನಿಂದ ಜಮೀರ್ ಅಹಮದ್ ನೇತೃತ್ವ ವಹಿಸಿ ರೈತರ ಜಮೀನಿಗೆ ಕನ್ನ ಹಾಕಿದ್ದಾರೆ ಎಂದು ವಿಧಾನಸೌಧದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಉಪಚುನಾವಣೆ ಬಗ್ಗೆ ಮಾತನಾಡಿದ ಅವರು ಶಿಗ್ಗಾಂವ್ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ಗೆದ್ದಾಗಿದೆ ಎಂಬ ವಾತಾವರಣ ಇದೆ. ಸಂಡೂರು, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದರು.ಸಿಎಂ ಇಂದು ನಾಳೆ ಕಾರ್ಯಕ್ರಮಗಳನ್ನು ಕ್ಯಾನ್ಸಲ್ ಮಾಡಿ ಬೀಡು ಬಿಡ್ತಾರೆ ಅಂದರೆ ಕೈಜಾರಿ ಹೋಗುವ ಆತಂಕ ಬಂದಿದೆ.. ವಕ್ಫ್ ವಿಚಾರದಲ್ಲಿ ಸಿಎಂ ಧೋರಣೆಯನ್ನು ಜನ ಪ್ರಶ್ನೆ ಮಾಡುತ್ತಿದ್ದಾರೆ. ಇದರ ಪರಿಣಾಮ ಉಪಚುನಾವಣೆ ಮೇಲೆ ಬೀರಲಿದೆ. ರಾಜ್ಯ ಸರ್ಕಾರದ ಹಿಂದೂ ವಿರೋಧಿ ನಡವಳಿಕೆ ಅವರಿಗೆ ಶಾಪ ಆಗುತ್ತದೆ ಎಂದರು.
ಇನ್ನು ಮೂರೂವರೆ ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಅವರು ಅವರ ಶಾಸಕರಿಗೆ ವಿಶ್ವಾಸ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣೆ ವೇಳೆ ಕೆಲವು ಸಮುದಾಯದ ಮತ ಕೀಳುವ ಪ್ರಯತ್ನ ಈ ಮೂಲಕ ಮಾಡುತ್ತಿದ್ದಾರೆ. ಅವರು ಯಾವಾಗ ರಾಜೀನಾಮೆ ಕೊಡುತ್ತಾರೆ ಅಂತಾ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಖರ್ಗೆ ಅವರಿಗೆ ಗೊತ್ತಿದೆ ಎಂದರು.
ಜಯನಗರ ಕ್ಷೇತ್ರದ ಅನುದಾನದ ವಿಚಾರದಲ್ಲಿ ತಗ್ಗಿ ಬಗ್ಗಿ ನಡೆಯಬೇಕು ಎಂಬ ಡಿಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅಧಿಕಾರದ ದರ್ಪ ಈ ರೀತಿ ಮಾತಾಡಿಸುತ್ತಿದೆ. ಅಧಿಕಾರದ ದರ್ಪದಿಂದ ಈ ರೀತಿಯ ಮಾತುಗಳು ಬರುತ್ತವೆ. ಬಿಜೆಪಿ ಶಾಸಕ ರಾಮಮೂರ್ತಿ ಗೆದ್ದಿದ್ದಾರೆ ಎಂಬ ಕಾರಣಕ್ಕೆ ಪ್ರಜಾಪ್ರಭುತ್ವದಲ್ಲಿದ್ದೇವೋ, ಸರ್ವಾಧಿಕಾರದಲ್ಲಿದ್ದೇವೋ. ಜಯನಗರದ ಜನ ಏನು ಮಾಡಿದ್ದಾರೆ?. ವಿಪಕ್ಷ ಶಾಸಕರ ಮೇಲೆ ದಬ್ಬಾಳಿಕೆ ನಿಮಗೆ ಶೋಭೆ ತರಲ್ಲ ಡಿ.ಕೆ. ಶಿವಕುಮಾರ್ ಅವರೇ. ಇದು ಜಯನಗರ ಕ್ಷೇತ್ರದ ಮತದಾರರಿಗೆ ಮಾಡಿದ ಅಪಮಾನ. ಅಧಿಕಾರ ಯಾವತ್ತು ಶಾಶ್ವತ ಅಲ್ಲ ಡಿ.ಕೆ. ಶಿವಕುಮಾರ್ ಅವರೇ. ನೀವು ಅನುದಾನ ಕೊಡುವುದು ದೂರದ ಮಾತು, ಆದರೆ ಮಾತಿನ ಮೇಲೆ ಹಿಡಿತ ಇರಬೇಕಾಗುತ್ತದೆ ಎಂದಿದ್ದಾರೆ.
ವಕ್ಫ್ ನೋಟೀಸ್ ವಾಪಸ್ ಪಡೆದಿರುವ ಬಗ್ಗೆ ಕಂದಾಯ ಆಯುಕ್ತಾಲಯದಿಂದ ಮಾಹಿತಿ ವಿಚಾರದ ಬಗ್ಗೆ ಮಾತನಾಡಿದ ಅವರು ಇಂತಹ ಮಣ್ಣು ತಿನ್ನುವ ಕೆಲಸಕ್ಕೆ ಯಾಕೆ ಕೈ ಹಾಕಬೇಕಿತ್ತು. ಜಮೀರ್ ಅಹಮದ್ ಗೆ ಯಾಕೆ ಸಿಎಂ ಗುತ್ತಿಗೆ ಕೊಡಬೇಕಾಗಿತ್ತು?. ಹಾವೇರಿಯಲ್ಲಿ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಯಾರು ಹೊಣೆಗಾರರು?. ಆಡಳಿತ ನಡೆಸುತ್ತಿರುವ ಸರ್ಕಾರ ರೈತರ ಜೀವನಕ್ಕೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದೆ. ಎಂದರು.
ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ವಿ ಸೋಮಣ್ಣ ವಾಗ್ದಾಳಿ
ಬಳ್ಳಾರಿ: ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ವಿ ಸೋಮಣ್ಣ ಅವರು ಬಳ್ಳಾರಿಯಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿದ್ರು.ಈ ವೇಳೆ ಮಾತನಾಡಿದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಪಕ್ಷ ರಾಜ್ಯವನ್ನ ಆರ್ಥಿಕ ದಿವಾಳಿಯತ್ತ ತೆಗೆದುಕೊಂಡು ಹೋಗ್ತಿದೆ. ಎಲ್ಲದಕ್ಕೂ ಎಸ್ ಐಟಿ ಮಾಡಿ. ವಾಲ್ಮೀಕಿ ಹಗರಣದಲ್ಲಿ ಇ.ತುಕಾರಂ ಫಲಾನುಭವಿ. ಕಾಂಗ್ರೆಸ್ ಶಾಸಕರಾಗಿದ್ದ ರೋಷನ್ ಬೇಗ್, ಹ್ಯಾರೀಸ್ ಹೆಸರು ಕೂಡ ಇದೆ. ಅವರು ವಕ್ಫ್ ಆಸ್ತಿಯನ್ನ ದುರುಪಯೋಗ ಮಾಡಿದ್ದಾರೆ ಎಂದ್ರು.
ಇನ್ನು ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ ಇಡೀ ಸರ್ಕಾರ ಇಂದು ಇಲ್ಲಿ ಪ್ರಚಾರ ಮಾಡ್ತಿದೆ.ತೊಳಲಾಟ ಬಂದಿದೆ, ಉಪಚುನಾವಣೆ ಬರದಿದ್ದರೆ ಸರ್ಕಾರ ತೆಗೆಯುತ್ತಾರೆ ಅಂತ ಅವರೇ ಅಂದುಕೊಂಡಿದ್ದಾರೆ.ನೀವೇ ತಪ್ಪು ಮಾಡಿ ಯಾಕೆ 14 ಸೈಟ್ ವಾಪಾಸ್ ತೆಗೆದುಕೊಂಡ್ರಿ. ಒಂದು ತಪ್ಪು ಮಾಡಿ ಸರ್ಕಾರವನ್ನ ಸಿಎಂ ಕತ್ತಲ ಕೋಣೆಯಲ್ಲಿ ಇಟ್ಟಿದ್ದಾರೆ.ಗುಡಿ ಗೋಪುರ, ಮಠ ಮಂದಿರ, ದೇವಸ್ಥಾನಗಳ ಮೇಲೆ ಕಣ್ಣು ಬಿದ್ದಿದೆ. ಜನ ತುಂಬಾ ಬುದ್ದಿವಂತರಿದ್ದಾರೆ.ಮೂರು ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ ಎಂದರು.
ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮುಡಾ ಪ್ರಕರಣದಲ್ಲಿ ತರಾತುರಿಯಲ್ಲಿ ಎಸ್ ಐಟಿ ಮಾಡಿದ್ದೀರಿ.ಸಿಬಿಐ ಅರೆಸ್ಟ್ ಮಾಡಬಾರದು ಅಂತ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದಾರೆ. ನಿರುದ್ಯೋಗಿ ಭತ್ಯೆ ಯಾರಿಗೆ ಕೊಟ್ಟಿದ್ದೀರಿ?. ಆದರೆ ಚೆನ್ನಾಗಿ ಲಾಂಚ್ ಮಾಡಿದ್ದೀರಿ ಎಂದರು. ಬಿಜೆಪಿ ಸರ್ಕಾರ 40% ಭ್ರಷ್ಟಾಚಾರದ ತನಿಖೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ವಾಲ್ಮೀಕಿಯ ಭ್ರಷ್ಟಾಚಾರ ವೈಟ್ ಅಂಡ್ ಬ್ಲಾಕ್ ನಲ್ಲಿ ಹೊರ ಬಂದಿದೆ. ಗಲಭೆ, ಅವಘಡ ಆದರೆ ನಡೆದರೆ ಯಾವುದೇ ತನಿಖೆ ಮಾಡೊಲ್ಲ. ಆಯೋಗ ಯಾಕೆ ಮಾಡಿದ್ರಿ?. ಕಾಂಗ್ರೆಸ್ ಪಕ್ಷದ ನಾಯಕರಾರ ಸೋನಿಯಾ ಗಾಂಧಿ, ರಾಹುಲ್ ಭ್ರಷ್ಟಾಚಾರದ ಬೇಲ್ ನಲ್ಲಿ ಇದ್ದಾರೆ ಎಂದಿದ್ದಾರೆ.