ಮನೆ Latest News ಸಚಿವ ಸತೀಶ್ ಜಾರಕಿಹೊಳಿ‌ ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಸಚಿವ ಸತೀಶ್ ಜಾರಕಿಹೊಳಿ‌ ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

0

ಬೆಂಗಳೂರು; ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು  ಭೇಟಿ ಮಾಡಿದ್ದಾರೆ.  ಶಿವಾನಂದ ಸರ್ಕಲ್ ಬಳಿ  ಇರುವ ಸರ್ಕಾರಿ ನಿವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದಾರೆ.

ಭೇಟಿಯ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಚಿವರನ್ನ ಭೇಟಿ ಮಾಡಿದ್ದೇವೆ.ಶಿಕಾರಿಪುರದ ಮುಖಂಡರ ಜೊತೆ ಭೇಟಿಯಾಗಿದ್ದೇವೆ. ಸ್ಟೇಟ್ ಹೈವೆಯಲ್ಲಿ ಎರಡು ಟೋಲ್ ಬರುತ್ತವೆ. ಇದರಿಂದ ರೈತರಿಗೆ ಅನಾನುಕೂಲವಾಗಿದೆ.ಮಕ್ಕಳು ಶಾಲೆಗೆ ಹೋಗುವುದು ತೊಂದರೆಯಾಗುತ್ತಿದೆ. ಟೋಲ್ ಶಿಫ್ಟ್ ಗೆ ಹೋರಾಟಗಳು ನಡೆದಿವೆ.ಟೋಲ್ ಅನ್ನ ಶಿಫ್ಟ್ ಮಾಡುವಂತೆ ಮನವಿ ಮಾಡಿದ್ದೇವೆ. ಸಚಿವರು ಸಕಾರಾತ್ಮಕವಾಗಿ ಭರವಸೆ ಕೊಟ್ಟಿದ್ದಾರೆ.ಶೀಘ್ರದಲ್ಲೇ ಸಭೆ ಕರೆಯುವುದಾಗಿ ಹೇಳಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಇನ್ನು  ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ  ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ ಹೇಳಿಕೆ ವಿಜಯೇಂದ್ರ ಭೇಟಿ ಮಾಡಿದ್ರು.ಅದಕ್ಕೆ ರಾಜಕೀಯ ಟಚ್ ಕೊಡೋದು ಸರಿಯಲ್ಲ. ಅದಕ್ಕೆ ಕಾರಣಗಳೂ ಏನೂ ಇಲ್ಲ. ವಿಪಕ್ಷದವರು ಶಾಸಕರು ಇಲಾಖೆ ಸಮಸ್ಯೆ ಬಗ್ಗೆ ಬರಲೇಬೇಕಾಗುತ್ತದೆ .ಈ ಸಮಯ ಅಂದ್ರೆ ರಸ್ತೆ ಕೆಟ್ಟಿದ್ದರೆ ಬರಲೇಬಾರದಾ? ಈಗ ಸಿಎಂ ಆಗುವಂತ ಅವಕಾಶವೂ ಇಲ್ಲ ಸನ್ನಿವೇಶವೂ ಇಲ್ಲ.ಕಳೆದ ದಸರಾದಿಂದಲೇ ಮೀಟಿಂಗ್ ಬಗ್ಗೆ ಚರ್ಚೆ ಇದೆ.ಅಕ್ಟೋಬರ್ ೩ ರಿಂದ ಕಳೆದ ವರ್ಷದಿಂದ ಹೀಗೇ ಮಾತು ಬರ್ತಾ ಇದೆ.ಬಸ್ ಅಲ್ಲಿಯೇ ನಿಂತಿದೆ, ನಾನೊಬ್ಬನೇ ಮೈಸೂರು ಹೋಗ್ತಾ ಇದ್ದೇನೆ.ಮುಡಾ ಇಶ್ಯು ಶುರುವಾಗಿದ್ದು ಈಗ ಮೂರು ತಿಂಗಳಿಂದ ಈಚೆಗೆ.ಅದಕ್ಕಿಂತ ಮೊದಲೂ ಹಲವು ಇಲಾಖೆಯ ಸಚಿವರನ್ನು ಭೇಟಿ ಮಾಡಿದ್ದೇನೆ ಇಲಾಖೆ ಭೇಟಿ ಬಿಟ್ಟು ಬೇರೇನೂ ಇಲ್ಲ. ಮುಡಾ ಪ್ರಕರಣದಲ್ಲಿ ಏನಾದ್ರೂ ಪ್ರೂವ್ ಆಗಿದೆಯಾ? ಹೈಕಮಾಂಡ್ ನಾಯಕರಿಂದ ನನಗೆ ಯಾವ ಸೂಚನೆಯೂ ಇಲ್ಲ ಏನೂ ಇಲ್ಲ.ನಿರಂತರವಾಗಿ ದೆಹಲಿ ಭೇಟಿ ಇರುತ್ತದೆ.೨೨೪ ಎಂಎಲ್ಎಗಳಿಗೆ ಎಲ್ಲರಿಗೂ ಸಿಎಂ ಆಗಬೇಕು ಅಂತ ಆಸೆ ಇರುತ್ತದೆ.ಮೊದಲು ಶಾಸಕ, ಆಮೇಲೆ ಮಂತ್ರಿ, ಮಂತ್ರಿಯಾದ ಮೇಲೆ ಸೀನಿಯಾರಿಟಿ, ಆಮೇಲೆ ಸಿನಿಯಾರಿಟಿ ಮೇಲೆ ಡಿಸಿಎಂ ಆಮೇಲೆ ಸಿಎಂ, ಆಮೇಲೆ ಕೇಂದ್ರ ಮಂತ್ರಿ ಹೀಗೆ ಎಲ್ಲರಿಗೂ ಆಸೆ ಇರುತ್ತದೆ ಎಂದರು.

ಇನ್ನು  ಟೋಲ್ ಸಮಸ್ಯೆ ಬಗ್ಗೆ ವಿಜಯೇಂದ್ರ  ಅವರು ಸತೀಶ್ ಜಾರಕಿಹೊಳಿ ಜೊತೆ ಚರ್ಚೆ ಮಾಡಿದ  ಬಗ್ಗೆ ಮಾತನಾಡಿದ ಅವರು ಕುಟ್ರಳ್ಳಿ  ಕಣಿವೆಮನೆ ಟೋಲ್ ತೆರವುಗೊಳಿಸಲು ವಿಜಯೇಂದ್ರ ಮನವಿ ಮಾಡಿದ್ದಾರೆ.ಸ್ಥಳೀಯ ಮುಖಂಡರ ಜೊತೆಗೆ ಬಂದು ಸಮಸ್ಯೆ ಬಗ್ಗೆ ಚರ್ಚೆ ವಿಜಯೇಂದ್ರ ಚರ್ಚೆ ಮಾಡಿದ್ದಾರೆ ಎಂದ್ರು.