ಮನೆ Latest News ಬೆಂಗಳೂರಿನಲ್ಲಿ ನಡೆದ 3 ದಿನಗಳ ಕಾಲ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಅದ್ಧೂರಿ ತೆರೆ

ಬೆಂಗಳೂರಿನಲ್ಲಿ ನಡೆದ 3 ದಿನಗಳ ಕಾಲ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಅದ್ಧೂರಿ ತೆರೆ

0

ಬೆಂಗಳೂರಿನಲ್ಲಿ ನಡೆದ 3 ದಿನಗಳ ಕಾಲ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಸಮಾವೇಶದಲ್ಲಿ ಹಲವು ದೇಶಗಳ ನೂರಾರು ಉದ್ಯಮಿಗಳು ಭಾಗಿಯಾಗಿದ್ದರು. ಇನ್ವೆಸ್ಟ್ ಕರ್ನಾಟಕ- 2025 ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. 19 ದೇಶಗಳಿಂದ ರಾಜ್ಯಕ್ಕೆ ಬೃಹತ್ ಬಂಡವಾಳ ಹರಿದು ಬಂದಿದೆ. 3 ದಿನಗಳಲ್ಲಿ ಒಟ್ಟು 10,27,378 ರೂ. ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಾರೆ.

ಇನ್ನು ಇನ್ವೆಸ್ಟ್ ಕರ್ನಾಟಕ- 2025 ಮುಕ್ತಾಯ ಹಿನ್ನೆಲೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಡಿಸಿಎಂ ಡಿ.ಕೆ‌ ಶಿವಕುಮಾರ್ ಜಂಟಿ‌ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಇಂದು ಬಂಡವಾಳ ಹೂಡಿಕೆದಾರರ ಸಮಾವೇಶ ಮುಕ್ತಾಯವಾಗಿದೆ. ಸಿಎಂ, ಡಿಸಿಎಂ ಮಾರ್ಗದರ್ಶನದಲ್ಲಿ ಫೆ.11ರಂದು ಕಾರ್ಯಕ್ರಮ ಉದ್ಘಾಟನೆ ಮಾಡಿದ್ವಿ. ಫೆ. 12,13 ಮತ್ತು 14ರಂದು ನಿರಂತರ ಗೋಷ್ಠಿ, ಕಾರ್ಯಕ್ರಮ ನಡೆಯಿತು. ಅವಾರ್ಡ್, ಒಡಂಬಡಿಕೆ ಮೂಲಕ ಭವ್ಯ ರೀತಿಯಲ್ಲಿ ಮುಕ್ತಾಯ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯರಿಗೆ ಧನ್ಯವಾದ, ಅವರ ಮಾರ್ಗದರ್ಶನ ಶಕ್ತಿ‌ ತುಂಬಿದೆ. ಕಾರ್ಯಕ್ರಮಕ್ಕೆ‌ ಶೋಭೆ ತರುವ ಕೆಲಸ ಸಿಎಂ ಮಾಡಿದ್ದಾರೆ. ಡಿಸಿಎಂ ಸಂಪೂರ್ಣ ನಾಲ್ಕು ದಿನಗಳ ಇದ್ದು, ನೇತೃತ್ವದಲ್ಲಿ ವಹಿಸಿಕೊಂಡಿದ್ದಾರೆ. ಕಳೆದ 6 ತಿಂಗಳುಗಳಿಂದ‌ ದೇಶಗಳನ್ನ ಸುತ್ತಿದ್ವಿ.ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ವಿ.ಅದರ ಪ್ರಯುಕ್ತ ಇಂದು ೧೦,೨೭,೩೭೮ ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಗಿದೆ ಎಂದರು.

ಇದರಿಂದಾಗಿ 10 ಲಕ್ಷ ಕೋಟಿ ಹೂಡಿಕೆಯಿಂದ 6 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ. 75% ಹೂಡಿಕೆ ಆಗಿದೆ.ಉತ್ತರ ಕರ್ನಾಟಕ ಭಾಗಕ್ಕೆ 45%  ಸಿಗಲಿದೆ. Mou ಗಳನ್ನ ಸುಮ್ಮನೇ ಸಹಿ ಮಾಡಿಲ್ಲ. ಸ್ಕ್ರೀನಿಂಗ್ ಮಾಡಿ ಒಡಂಬಡಿಕೆ ಆಗಿದೆ. ಕೀ ಹೂಡಿಕೆ 25 ಆಗಿದೆ. JWS ಗ್ರೂಪ್ 25 ಸಾವಿರ ಕೋಟಿ ಹೂಡಿಕೆ ಮಾಡಿದೆ. ವೋಲ್ವೊ 1400 ಕೋಟಿ ಹೂಡಿಕೆ ಮಾಡಿದೆ. ದೇಶಕ್ಕೆ ಮಾತ್ರವಲ್ಲ, ವಿದೇಶಕ್ಕೂ ವೋಲ್ವೊ ರಪ್ತು ಮಾಡಲಿದೆ. ಹೋಂಡಾ 600 ಕೋಟಿ ಹೂಡಿಕೆ ಮಾಡಿದೆ ಎಂದ್ರು.

5% ಇನ್ಸೆಂಟಿವ್ ಹೆಚ್ಚು ಮಕ್ಕಳಿಗೆ ಕೊಡಲು ತೀರ್ಮಾನ ಮಾಡಿದ್ದೇವೆ: ಉಪಮುಖ್ಯಮಂತ್ರಿ ಡಿ.ಕೆ‌ ಶಿವಕುಮಾರ್ ಹೇಳಿಕೆ

ಬೆಂಗಳೂರಿನಲ್ಲಿ ನಡೆದ 3 ದಿನಗಳ ಕಾಲ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಈ ಹಿನ್ನೆಲೆ ಉಪಮುಖ್ಯಮಂತ್ರಿ ಡಿ.ಕೆ‌ ಶಿವಕುಮಾರ್ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ್ರು.

ಈ ವೇಳೆ ಮಾತನಾಡಿದ ಅವರು ಮಹಿಳೆಯರಲ್ಲಿನ ವಿದ್ಯೆ , ಸಾಮರ್ಥ್ಯ ಯಾವ ಪುರುಷರಿಗೂ ಕಡಿಮೆ ಇಲ್ಲ. 5% ಇನ್ಸೆಂಟಿವ್ ಹೆಚ್ಚು ಮಕ್ಕಳಿಗೆ ಕೊಡಲು ತೀರ್ಮಾನ ಮಾಡಿದ್ದೇವೆ. ಗ್ರೀನ್ ಎನರ್ಜಿಗೆ 5% ಇನ್ಸೆಂಟಿವ್. ಎಲೆಕ್ಟ್ರಿಕ್ ವಾಹನಗಳಿಗೆ ಕೊಡ್ತೇವೆ. ಪ್ರವಾಸೋದ್ಯಮಕ್ಕೂ ಹೆಚ್ಚು ಒತ್ತು ಕೊಟ್ಟಿದ್ದೇವೆ.ದೊಡ್ಡಬಳ್ಳಾಪುರ ಬಳಿ 40 ಸಾವಿರ ಜನರಿಗೆ ಕೆಲಸ ಕೊಡಲು ಮುಂದೆ ಬಂದಿದ್ದಾರೆ.ಕೆಲಸ ತಿಂಗಳ ಹಿಂದೆ ಡಿನ್ನರ್ ಮೀಟಿಂಗ್ ಸಹ ಅವರೊಂದಿಗೆ ಮಾಡಿದ್ವಿ. ಏರ್ ಶೋ ಗೆ ನಾನೂ ಹೋಗಿದ್ದೆ. ದೊಡ್ಡ‌ ದೊಡ್ಡ ವಿಮಾನದ 50% ಬಿಡಿ ಭಾಗ ಇಲ್ಲೇ ತಯಾರಾಗುತ್ತಿದೆ.ಇಲ್ಲಿಂದ ದೇಶ ವಿದೇಶಗಳಿಗೆ ರವಾನೆ ಆಗುತ್ತಿದೆ ಎಂದರು. ಉದ್ಘಾಟನಾ ಸಮಾರಂಭಕ್ಕೆ ರಾಜನಾಥ್ ಸಿಂಗ್, ಪಿಯೂಶ್ ಗೋಯಲ್ ಬಂದಿದ್ರು.ಅವರ ಭದ್ದತೆ ಕರ್ನಾಟಕ ಮಾನವ ಸಂಪನ್ಮೂಲ, ಸಾಂಪ್ರದಾಯಿಕ, ಹೂಡಿಕೆ ಬಗ್ಗೆ ಸಂದೇಶ ಕೊಟ್ಟು ಹೋಗಿದ್ದಾರೆ ಎಂದು ತಿಳಿಸಿದ್ರು.

ಇದೇ ವೇಳೆ ಮಾತನಾಡಿದ ಅವರು ಕರ್ನಾಟಕ ರಾಜ್ಯದ ಇತಿಹಾಸ ದೇಶಕ್ಕೆ ಒಂದು ಮಾದರಿ.2000 ಇಸವಿಯಲ್ಲಿ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮ ವಿಧಾನಸೌಧದಲ್ಲಿ ನಡೀತು. ಕೆಲವು ಸಕ್ಸಸ್, ಮತ್ತೆ ಕೆಲಸ ಫೇಲ್ಯುಯರ್ ಆಗಿವೆ.ಇಡೀ ಪ್ರಪಂಚದ ಹೂಡಿಮೆದಾರರ ಕಂಪನಿಗಳು ಇಲ್ಲಿ ಭಾಗಿಯಾಗಿದ್ದರು.ಇಲ್ಲಿನ‌ ಪರಿಸರ, ಪ್ರತಿಭೆ, ಶಿಕ್ಷಣ‌ ದೇಶದಲ್ಲಿ ಯಾವ ರಾಜ್ಯದಲ್ಲೂ ಇಲ್ಲ.10 ಲಕ್ಷ ಕೋಟಿ ರೂ. ಹೂಡಿಕೆ ಆಗಿದೆ, 6.3 MOVಗೆ ಸಹಿ ಮಾಡಿದ್ದಾರೆ. ಹೊಸ ಕೈಗಾರಿಕಾ ನೀತಿ ತಂದಿದ್ದೇವೆ.ಬೆಂಗಳೂರಿನಲ್ಲಿ 1.4 ಕೋಟಿ ಜನಸಂಖ್ಯೆ‌ ಇದೆ.ಸುಮಾರು 1.10 ಲಕ್ಷ ವಾಹನಗಳು ಬೆಂಗಳೂರಿನಲ್ಲಿವೆ.ಬ್ರ್ಯಾಂಡ್ ಬೆಂಗಳೂರು ತೆಗೆದುಕೊಂಡು ಹೋಗುವ ಕಲ್ಪನೆ ಇದೆ.ನಮ್ಮ‌ ರಾಜ್ಯದಲ್ಲಿ ಭೂಮಿಗೆ ಬೆಲೆ ಜಾಸ್ತಿ.ನಂಜುಂಡಪ್ಪ ವರದಿ ಆಧಾರದ ಮೇಲೆ ಅವಕಾಶ ಒದಗಿಸುತ್ತಿದ್ದೇವೆ ಎಂದ್ರು.

ಪ್ರತಿ ವರ್ಷವೂ ಹೊಸ ಚಿಂತನೆಗೆ ಆಲೋಚನೆ ಮಾಡ್ತೀವಿ.SMV ಗಳಿಗೆ ಪ್ಲಾಟ್ ಫಾಮ್ ಮಾಡಿದ್ದೇವೆ, ಒಂದು ಪೋರ್ಟಲ್ ಮಾಡಿದ್ದೇವೆ.ಸೇಲರ್, ಬೈಯರ್ಸ್ ಗೆ ಉಪಯುಕ್ತ ಆಗಲಿದೆ.ಅತಿ ಹೆಚ್ಚು ಹೂಡಿಕೆ, ಉದ್ಯೋಗವಾಕಾಶ ಸೃಷ್ಟಿ.ಸಾಧನೆಗೈದ ವ್ಯಕ್ತಿ, ಸಂಸ್ಥೆಗೆ ಅವಾರ್ಡ್ ಕೊಡುವ ಕೆಲಸ ಮಾಡಿದ್ದೇವೆ.ಇದನ್ನ ಮುಂದುವರೆಸುತ್ತೇವೆ. ಅವಾರ್ಡ್ ಪುರಸ್ಕೃತರನ್ನ ನಾವು ಆಯ್ಕೆ ಮಾಡಿಲ್ಲ.ಸಮಿತಿ ಮೂಲಕ ಆಯ್ಕೆ ಮಾಡಿ ಪ್ರಶಸ್ತಿ ನೀಡಿದ್ದೇವೆ ಎಂದರು.

ಕೇಂದ್ರದ ಬಜೆಟ್ ಸಹ ಗಮನಿಸಿದ್ದೇವೆ. ಹೂಡಿಕೆದಾರರಿಗೆ ಒಂದು ವೇದಿಕೆ ಮಾಡುತ್ತೇವೆ.ಬೇರೆ ರಾಜ್ಯಗಳಿಂದಲೂ ಈ ಮೀಟ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಹೊಸದಾಗಿ ಮ್ಯಾನಿಫ್ಯಾಕ್ಚರ್ ಮಾಡಿದ್ರೆ 10% ಇನ್ಸೆಂಟಿವ್ ಕೊಡ್ತೀವಿ.ಇಡೀ ದೇಶದಲ್ಲಿ ನಮ್ಮ ರಾಜ್ಯವನ್ನ ಯಾರೂ ಮುಟ್ಟಿಲ್ಲ.ಹೆಲಿಕಾಪ್ಟರ್, ಡ್ರೋನ್ ತಯಾರಿಸಿದ್ದನ್ನ ಇಲ್ಲಿ ನೋಡಿದ್ದೇವೆ.ಮುಕ್ತ ಕಂಠದಿಂದ ಎಲ್ಲರಿಗೂ ಅಭಿನಂದಿಸುತ್ತೇವೆ ಎಂದು ಹೇಳಿದ್ದಾರೆ.