ಬಳ್ಳಾರಿ; ಇಂದು ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ದರ್ಶನ್, ನಟ ಧನ್ವೀರ್ ಹಾಗೂ ಆಪ್ತ ಹೇಮಂತ್ ಭೇಟಿಯಾಗಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ನಟ ಧನ್ವೀರ್ ಹಾಗೂ ಆಪ್ತ ಹೇಮಂತ್ ನಟ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ.
ಭೇಟಿ ವೇಳೆ 30 ನಿಮಿಷಗಳ ಕಾಲ ಜೈಲು ಸಂದರ್ಶಕರ ಕೊಠಡಿಯಲ್ಲಿ ದರ್ಶನ ಪತ್ನಿ ಹಾಗೂ ಸ್ನೇಹಿತರೊಂದಿಗೆ ಮಾತನಾಡಿದ್ದಾರೆ.ಕಳೆದ ಬಾರಿ ತೀರಾ ಕೋಪದಲ್ಲಿದ್ದಂತೆ ಕಾಣುತ್ತಿದ್ದ ದರ್ಶನ್ ಅವರು ಈ ಬಾರಿ ಪತ್ನಿಯ ಭೇಟಿಗೆ ಬಂದಂತಹ ವೇಳೆ ಅತ್ಯಂತ ಸೌಮ್ಯ ಸ್ವಭಾವದಲ್ಲಿ ಕಾಣಿಸಿದ್ದಾರೆ.
ಇನ್ನು ಪತ್ನಿಯ ಭೇಟಿಗೆ ಬಂದ ವೇಳೆ ದರ್ಶನ್ ವಕೀಲರು ಕೊಟ್ಟ ಪತ್ರ ಹಿಡಿದು ಬಂದ ಬಂದಿದ್ದಾರೆ.ನಿನ್ನೆ ವಕೀಲರು ಕೋರಿಯರ್ ಮೂಲಕ ಕಳಿಸಿದ್ದ ದರ್ಶನ್ ಗೆ ಪತ್ರ ಕಳುಹಿಸಿದ್ದರು. ಇನ್ನು ದರ್ಶನ್ ಕಂಡ ಕೂಡಲೇ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಹಾಗೂ ಆಪ್ತ ಹೇಮಂತ್ ಭಾವುಕರಾಗಿದ್ದಾರೆ.ದರ್ಶನ್ ಅವರನ್ನು ನೋಡಿ ಕಣ್ಣೀರಾಕಿದ ಧನ್ವೀರ್ ಹಾಗೂ ಹೇಮಂತ್ ಕಣ್ಣೀರು ಹಾಕಿದ್ದಾರೆ.ಈ ವೇಳೆ ಧನ್ವೀರ್ ಹಾಗೂ ಹೇಮಂತ್ ರನ್ನ ಆರೋಪಿ ದರ್ಶನ್ ಸಮಾಧಾನ ಪಡಿಸಿದ್ದಾರೆ.
ಪತಿಗಾಗಿ ವಿಜಯಲಕ್ಷ್ಮೀ ಬ್ಯಾಗ್ನಲ್ಲಿ ಟೂತ್ಪೇಸ್ಟ್ , ಸಂತೂರ್ ಸೋಪ್, ಹಣ್ಣು, ಬೇಕರಿ ತಿಂಡಿ ತಂದಿದ್ದರು ಎನ್ನಲಾಗಿದೆ.ಜೈಲು ಸಂದರ್ಶಕರ ಕೊಠಡಿಯಲ್ಲಿ 30 ನಿಮಿಷಗಳ ಕಾಲ ದರ್ಶನ್ ಮಾತನಾಡಿದ್ದು ಬೇಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ ಎನ್ನಲಾಗಿದೆ. ಮಾತನಾಡಿದ ಬಳಿಕ ಪತ್ನಿ ತಂದ ವಸ್ತುಗಳನ್ನು ಹಿಡಿದು ದರ್ಶನ್ ತಮ್ಮ ಸೆಲ್ ನತ್ತ ತೆರಳಿದ್ದಾರೆ ಎನ್ನಲಾಗಿದೆ.
ಬಳ್ಳಾರಿ ಜೈಲಿನಲ್ಲಿ ಡಿ ಬಾಸ್ ದರ್ಶನ್ ಎನ್ನೆಲ್ಲಾ ಕೆಲಸ ಮಾಡ್ತಿದ್ದಾರೆ ಗೊತ್ತಾ?
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದ ನಟ ದರ್ಶನ್ ಅವರಿಗೆ ಅಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ವಿಚಾರ ಬಯಲಾಗುತ್ತಿದ್ದಂತೆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿತ್ತು. ಅಲ್ಲದೇ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಸದ್ಯ ಬಳ್ಳಾರಿ ಜೈಲಿನಲ್ಲಿರುನ ನಟ ದರ್ಶನ್ ಅವರನ್ನು ಅಲ್ಲಿ ವಿಶೇಷ ಭದ್ರತಾ ಸೆಲ್ ನಲ್ಲಿ ಇರಿಸಲಾಗಿದೆ. ಪರಪ್ಪನ ಅಗ್ರಹಾರಕ್ಕಿಂತ ಬಳ್ಳಾರಿ ಜೈಲು ಸ್ಟ್ರಿಕ್ಟ್ ಇದು ಡಿ ಬಾಸ್ ದರ್ಶನ್ ಗೆ ಉಸಿರು ಬಿಗಿ ಹಿಡಿದ ಅನುಭವವಾಗುತ್ತಿದೆ. ಇನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ತೂಗುದೀಪ ಹಾಗೂ ಇಬ್ಬು ವಕೀಲರು ಮೊನ್ನೆ ಡಿ ಬಾಸ್ ನ ಭೇಟಿಯಾಗಿದ್ದರು.
ಇನ್ನು ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಏನ್ ಮಾಡ್ತಿದ್ರು ಅನ್ನೋದಕ್ಕೆ ವೈರಲ್ ಆದ ಫೋಟೋ ವೀಡಿಯೋಗಳೇ ಉತ್ತರ ನೀಡಿದ್ದವು. ಆದರೆ ಬಳ್ಳಾರಿ ಜೈಲಿನಲ್ಲಿ ಚಿತ್ರಣವೇ ಸಂಪೂರ್ಣ ಬದಲಾಗಿ ಹೋಗಿದೆ. ಬಳ್ಳಾರಿ ಜೈಲಿನಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ದರ್ಶನ್ ನಡೆದುಕೊಳ್ಳುತ್ತಿದ್ದಾರಂತೆ. ಅಲ್ಲದೇ ಜೈಲಾಧಿಕಾರಿಗಳ ಸೂಚನೆಯಲ್ಲಿ ಅವರ ಸೆನ್ ನಲ್ಲಿರುವ ಶೌಚಾಲಯವನ್ನು ಕ್ಲೀನ್ ಮಾಡಿದ್ದಾರಂತೆ. ಅಲ್ಲದೇ ಅವರ ಬಟ್ಟೆಯನ್ನು ಅವರೇ ವಾಶ್ ಮಾಡಿ ಕೊಳ್ಳುತ್ತಿದ್ದು ಸಾಮಾನ್ಯ ಕೈದಿಯಂತೆ ಡಿ ಬಾಸ್ ಜೈಲಿನಲ್ಲಿ ಎಲ್ಲಾ ಕೆಲಸಗಳನ್ನು ಅವರೇ ಮಾಡಿಕೊಳ್ಳುತ್ತಿದ್ದಾರಂತೆ ಅಲ್ಲದೇ ಎಲ್ಲರ ಜೊತೆ ದರ್ಶನ್ ಅರು ಹೊಂದಿಕೊಳ್ಳುಲು ಪ್ರಯತ್ನಿಸುತ್ತಾರಂತೆ.