ಮನೆ Latest News ಏಳನೇ ಬಾರಿಗೆ ನಟ ದರ್ಶನ್ ಅವರನ್ನು ಭೇಟಿಯಾದ ಪತ್ನಿ ವಿಜಯಲಕ್ಷ್ಮೀ; ಪತಿಗಾಗಿ ಬನಶಂಕರಿ ದೇವಿಯ ಪ್ರಸಾದ...

ಏಳನೇ ಬಾರಿಗೆ ನಟ ದರ್ಶನ್ ಅವರನ್ನು ಭೇಟಿಯಾದ ಪತ್ನಿ ವಿಜಯಲಕ್ಷ್ಮೀ; ಪತಿಗಾಗಿ ಬನಶಂಕರಿ ದೇವಿಯ ಪ್ರಸಾದ ತಂದ ವಿಜಿ

0

 

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನು ಪ್ರತಿ ವಾರ ಅವರ ಪತ್ನಿ ವಿಜಯಲಕ್ಷ್ಮೀ ಅವರು ಭೇಟಿಯಾಗುತ್ತಲೇ ಇದ್ದಾರೆ, ಮೊನ್ನೆ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಪ್ರಸಾದ ತೆಗೆದುಕೊಂಡು ಬಂದು ಪತಿಗೆ ನೀಡಿದ್ದರು. ಇದೀಗ ಮತ್ತೆ ಪತಿಗಾಗಿ ಪ್ರಸಾದ ತಂದಿದ್ದಾರೆ ವಿಜಯಲಕ್ಷ್ಮೀ.

ದರ್ಶನ್ ಜೈಲು ಸೇರಿದಾಗಿನಿಂದ ದರ್ಶನ್ ಅವರನ್ನು ಸಂಕಷ್ಟದಿಂದ ಪಾರು ಮಾಡಲು ನಿರಂತರವಾಗಿ ವಿಜಯಲಕ್ಷ್ಮೀ ದೇವರ ಮೊರೆ ಹೋಗುತ್ತಲೇ ಇದ್ದಾರೆ. ಮೊನ್ನೆ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ದರ್ಶನ್ ಗಾಗಿ ವಿಶೇಷ ಪೂಜೆ ಸಲ್ಲಿಸಿದ್ದರು. ಬಳಿಕ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವ ಚಂಡಿಕಾಯಾಗ ನೆರವೇರಿಸಿದ್ರು. ನಿನ್ನೆ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಪತಿಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದರು. ಸ್ನೇಹಿತೆಯೊಂದಿಗೆ ತೆರಳಿ ಪೂಜೆ ಸಲ್ಲಿಸಿದ್ದರು.ಇಂದು ಅದೇ ಪ್ರಸಾದವನ್ನು ತೆಗೆದುಕೊಂಡು ಪತಿಯ ಭೇಟಿಗಾಗಿ ಪರಪ್ಪನ ಅಗ್ರಹಾರ ಜೈಲಿಗೆ ವಿಜಯಲಕ್ಷ್ಮೀ ಆಗಮಿಸಿದ್ದರು.

 ನಟ ದರ್ಶನ್ ಸಹೋದರ ದಿನಕರ್ ‌ಜೊತೆ ವಿಜಯಲಕ್ಷ್ಮಿ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದರು. ಬರುವಾಗ ಪತಿಗಾಗಿ ಜೊತೆಯಲ್ಲಿ ಬನಶಂಕರಿ ದೇವಿ ಪ್ರಸಾದ ತಂದಿದ್ದಾರೆ, ನಿನ್ನೆ ಭೀಮನ ಅಮಾವಾಸ್ಯೆ ಪ್ರಯುಕ್ತ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು ವಿಜಿ. ನಟ ದರ್ಶನ್ ಗೆ ಎದುರಾಗಿರುವ ಸಂಕಷ್ಟ ದೂರಾಗಲಿ ಎಂದು ಪ್ರಾರ್ಥಿಸಿದ್ದರು. ಇಂದು  ಪೂಜೆ ಮಾಡಿಸಿದಂತ ಪ್ರಸಾದ, ಹೂ ದರ್ಶನ್ ಗೆ ನೀಡಿದ್ದಾರೆ ಎನ್ನಲಾಗಿದೆ.

ಮಾವ ದರ್ಶನ್ ಶೀಘ್ರ ಬಿಡುಗಡೆಯಾಗಲಿ ಎಂದು ದೇವಸ್ಥಾನ ಸುತ್ತುತ್ತಿದ್ದಾರೆ ಅಳಿಯ ಚಂದನ್

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ಹತ್ತಿರ ಹತ್ತಿರ 2 ತಿಂಗಳಾಗುತ್ತಾ ಬಂತು.ದರ್ಶನ್ ಅವರು ಅರೆಸ್ಟ್ ಆದಾಗಿನಿಂದ ಅವರನ್ನು ಹೊರಗಡೆ ತರಲು ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್, ಸಹೋದರ ದಿನಕರ್ ತೂಗುದೀಪ ಅವರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಆಗಾಗ್ಗೆ ಜೈಲಿಗೆ ಭೇಟಿ ನೀಡುತ್ತಲೇ ಇದ್ದಾರೆ. ಇನ್ನು ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆದಾಗಿನಿಂದ ವಿಜಯಲಕ್ಷ್ಮೀ ದರ್ಶನ್ ಆಗಾಗ್ಗೆ ಬಂದು ಭೇಟಿ ಮಾಡುತ್ತಲೇ ಇದ್ದಾರೆ. ವಿಜಯಲಕ್ಷ್ಮೀ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಬಂದಾಗೆಲ್ಲಾ ಬಹುತೇಕ ಸಂದರ್ಭದಲ್ಲಿ ದರ್ಶನ್ ಅವರ ಸಹೋದರಿ ದಿವ್ಯ ಅವರ ಪುತ್ರ ಚಂದನ್ ವಿಜಯಲಕ್ಷ್ಮೀ ದರ್ಶನ್ ಅವರ ಜೊತೆ ಜೈಲಿಗೆ ಬಂದು ಮಾವನನ್ನು ಭೇಟಿ ಮಾಡಿ ಧೈರ್ಯ ತುಂಬುತ್ತಲೇ ಇದ್ದಾರೆ. ದರ್ಶನ್ ಅವರು ಜೈಲಿಗೆ ಶಿಫ್ಟ್ ಆಗುವ ದಿನ ಕೂಡ ಚಂದನ್ ದರ್ಶನ್ ಅವರನ್ನು ಪೊಲೀಸ್ ವಾಹನದ ಹೊರಗಿನಿಂದ ನೋಡುತ್ತಾ ಭಾವುಕರಾಗಿ ನಿಂತಿದ್ದರು. ಮಾವನಿಗೆ ಚಂದನ್ ಆಗಾಗ್ಗೆ ದೇವಸ್ಥಾನಕ್ಕೂ ಭೇಟಿ ನೀಡುತ್ತಲೇ ಇದ್ದಾರೆ. ಮೊನ್ನೆ ಮಾವ ದಿನಕರ್ ಅವರ ಜೊತೆ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು.

ಇದೀಗ ಮಾವ ದರ್ಶನ್ ಗಾಗಿ ಚಂದನ್ ಮತ್ತೆ ಟೆಂಪಲ್ ರನ್ ನಡೆಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿರುವ ಆರತಿ ಉಕ್ಕಡ ದೇಗುಲಕ್ಕೆ ಚಂದನ್ ಭೇಟಿ ಕೊಟ್ಟಿದ್ದಾರೆ. ಆರತಿ ಉಕ್ಕಡದಲ್ಲಿ ದರ್ಶನ್ ಅಳಿಯ ಚಂದನ್ ಮಾವನಿಗಾಗಿ  ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆದಷ್ಟು ಬೇಗ ಮಾವ ಸಂಕಷ್ಟದಿಂದ ಪಾರಾಗಲಿ ಎಂದು ಬೇಡಿಕೊಂಡಿದ್ದಾರೆ.