ಮನೆ Latest News ಬಿಜೆಪಿ ಎಷ್ಟೇ ಚೀರಾಡಲಿ ಬಟ್ಟೆ ಹರಿದುಕೊಳ್ಳಲಿ ನನ್ನ ರಾಜೀನಾಮೆ ಪ್ರಶ್ನೆಯೇ ಇಲ್ಲ: ಸಚಿವ ಪ್ರಿಯಾಂಕ್ ಖರ್ಗೆ...

ಬಿಜೆಪಿ ಎಷ್ಟೇ ಚೀರಾಡಲಿ ಬಟ್ಟೆ ಹರಿದುಕೊಳ್ಳಲಿ ನನ್ನ ರಾಜೀನಾಮೆ ಪ್ರಶ್ನೆಯೇ ಇಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

0

ಬೆಂಗಳೂರು; ಬಿಜೆಪಿ ಎಷ್ಟೇ ಚೀರಾಡಲಿ ಬಟ್ಟೆ ಹರಿದುಕೊಳ್ಳಲಿ ನನ್ನ ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ನಾನು 27 ನೇ ತಾರೀಕಿಗೇ ಗೃಹ ಸಚಿವರು ಸಿಎಂ ಸಿದ್ದರಾಮಯ್ಯ ಅವರಿಗೆ ಸ್ವತಂತ್ರ ತನಿಖೆ ಆಗಲಿ ಅಂತ ಮನವಿ ಮಾಡಿದ್ದೆ. ವಿರೋಧ ಪಕ್ಷಗಳು ಆರೋಪ‌ ಮಾಡ್ತಾರೆ ಅಂತ ತನಿಖೆಗೆ ಆಗ್ರಹಿಸಿದ್ದೆ. ಸಿಎಂ ಭೇಟಿ ಮಾಡಿ ಮಾಹಿತಿ ನೀಡಿದ್ದೇನೆ, ಗೃಹ ಸಚಿವರನ್ನೂ ಕೂಡ ಭೇಟಿ ಮಾಡಿದ್ದೇನೆ. ಬಿಜೆಪಿಗೆ ಸಿಬಿಐ ಬೇಕು ಎನ್ನುತ್ತದೆ. ಸುಮ್ಮನೆ ಬಹಳ ದೊಡ್ಡ ಹಗರಣ ಆಗಿದೆ ಅಂತ ಬಿಂಬಿಸುತ್ತಿದ್ದಾರೆ. ಏನಂತ ಮುತ್ತಿಗೆ ಹಾಕ್ತಾರೆ ಬಿಜೆಪಿಯವರು?. ಒಂದಾದರೂ ಸಾಕ್ಷಿ ಇದೆಯಾ?. ಬಿಜೆಪಿ ಮಾಡುತ್ತಿರುವುದು ಹಾಸ್ಯಾಸ್ಪದ ಎಂದಿದ್ದಾರೆ.

ಒಂದು ಪುರಾವೆ ಒಂದು ರೆಕಾರ್ಡ್ ಇಟ್ಟುಕೊಂಡು ಬನ್ನಿ ಬಿಜೆಪಿಯವರೇ. ನನ್ನ ಆಪ್ತ ಮಾಡಿರಬಹುದು ಎಂದು ಈ ನಾಟಕವಾ?. ಬಿಜೆಪಿಯವರನ್ನು ಯಾಕೆ ಸೀರಿಯಸ್ ಆಗಿ ತೆಗೆದುಕೊಳ್ತಿದ್ದೀರಿ ಮಾಧ್ಯಮದವರು?. ಮುನಿರತ್ನ ವಿಚಾರದಲ್ಲಿ ಒಂದೇ ಒಂದು ನೋಟೀಸ್ ನೀಡಿದ್ದಾರಾ ಬಿಜೆಪಿಯವರು. ನಾನು ರಾಜೂ ಕಪನೂರ್ ನನ್ನ ಆಪ್ತ ಅಲ್ಲ ಎಂದು ಹೇಳಿಯೇ ಇಲ್ಲ. ರಾಜೂ ಕಪನೂರ್ ಅವರು ಬಿಜೆಪಿ ನಾರ್ತ್ ಅಭ್ಯರ್ಥಿ ಚಂದು ಪಾಟೀಲ್ ಜೊತೆಗೆ ಇರುವ ಫೋಟೋ ನಮ್ಮ ಬಳಿಯೂ ಇದೆ. ರಾಜೂ ಕಪನೂರು ಕಾಂಗ್ರೆಸ್ ಗೆ ಬರುವ ಮೊದಲು ಬಿಜೆಪಿಯಲ್ಲಿದ್ದರು. ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷರಾಗಿದ್ದರು ರಾಜೂ ಕಪನೂರ್. ನಾವು ಲಾಜಿಕ್ ಆಗಿಯೇ ಮಾತಾಡ್ತಿದ್ದೇನೆ, ಬಿಜೆಪಿಯವರು ಲಾಜಿಕ್ ಮಾತಾಡ್ತಿಲ್ಲ. ವಿಜಯೇಂದ್ರ ವಿರುದ್ದ ಮನಿ ಲಾಂಡ್ರಿಂಗ್ ಕೇಸ್ ಆಗಿದೆಯಲ್ಲ ಹಾಗಿದ್ರೆ ಯಾಕೆ ರಾಜೀನಾಮೆ ನೀಡ್ತಿಲ್ಲ?. ಕಲಬುರ್ಗಿ ಮುತ್ತಿಗೆಗೆ ಎಷ್ಡು ಜನ ಬರ್ತೀರಿ ಅಂತ ಮೊದಲೇ ಹೇಳಿ. ಅಷ್ಟು ಜನರಿಗೆ ಟೀ ವ್ಯವಸ್ಥೆ ಮಾಡ್ತೇವೆ, ಇಲ್ಲದಿದ್ದರೆ ಆಮೇಲೆ ನೀರೂ ಕೊಟ್ಟಿಲ್ಲ ಅಂತ ಪ್ರತಿಭಟನೆ ಮಾಡ್ತೀರಾ. ಎಷ್ಟೇ ಚೀರಾಡಲಿ ಬಟ್ಟೆ ಹರಿದುಕೊಳ್ಳಲಿ ನನ್ನ ರಾಜೀನಾಮೆ ಪ್ರಶ್ನೆಯೇ ಇಲ್ಲ. ಯಾವುದಾದರೂ ದಾಖಲೆ ಇದ್ದರೆ ತೋರಿಸಲಿ. ವಿಜಯೇಂದ್ರ ಅವರೇನು ಸುಪ್ರೀಂ ಕೋರ್ಟಾ? ನನ್ನ ರಾಜೀನಾಮೆ ಕೇಳಲು ಇವರು ಸುಪ್ರಿಂ ಕೋರ್ಟಾ?. ಎಫ್ ಎಸ್ ಎಲ್ ನಡೆಸುತ್ತಿರುವುದು ನಾನ?. ನಾನು ಕಾನೂನು ಅಂತ ನಾನು ಹೇಳಿದ್ದೀನಾ ಯಾವತ್ತಾದ್ರೂ?. ಬಿಜೆಪಿ ಆಂದೋಲನ ಸಮಿತಿ ಸತ್ಯ ಶೋಧನಾ ಸಮಿತಿ ಎಲ್ಲವನ್ನು ಕೂಡ ಅವರದೇ ಪಕ್ಷದ ಒಳಗೆ ಮಾಡಿಕೊಳ್ಳಲಿ. ಬಿಜೆಪಿಯಲ್ಲೇ ವಿಜಯೇಂದ್ರ ಮಾತಿಗೆ ಕಿಮ್ಮತ್ತಿಲ್ಲ, ಉಳಿದವರು ಯಾಕೆ ಅವರ ಮಾತಿಗೆ ಕಿಮ್ಮತ್ತು ಕೊಡಬೇಕು ಎಂದಿದ್ದಾರೆ.

ಜನವರಿ 4 ರಂದು ಕಲ್ಬುರ್ಗಿಯಲ್ಲಿ ಬಿಜೆಪಿ ಬೃಹತ್ ಹೋರಾಟ;ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಹೇಳಿಕೆ

ಬೆಂಗಳೂರು; ಜನವರಿ 4 ರಂದು ಕಲ್ಬುರ್ಗಿಯಲ್ಲಿ ಬಿಜೆಪಿ ಬೃಹತ್ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಬಹಳ ಗಂಭೀರವಾದ ವಿಷಯ. ಜನವರಿ 3 ರವರೆಗೆ ಬಿಜೆಪಿ ಕಾಯುತ್ತಿದೆ. ಭಗವಂತ ಬುದ್ದಿ ಕೊಟ್ಟು ಸಿಎಂ ಸಿಬಿಐ ತನಿಖೆಗೆ ಆದೇಶ ಮಾಡಿದರೆ ಉತ್ತಮ. ಜನವರಿ 4 ರಂದು ಕಲ್ಬುರ್ಗಿಯಲ್ಲಿ ಬಿಜೆಪಿ ಬೃಹತ್ ಹೋರಾಟ ಹಮ್ಮಿಕೊಂಡಿದೆ. ಖರ್ಗೆಯವರ ಮನೆಗೆ ಕೂಡಾ ಬಿಜೆಪಿ ಮುತ್ತಿಗೆ ಹಾಕಲಿದೆ. ಜವಾಬ್ದಾರಿಯುತ ಸಚಿವ ಆಗಿದ್ದರೆ ನಿನ್ನೆ ಪ್ರಿಯಾಂಕ್ ಖರ್ಗೆ ನಾನ್ಯಾಕೆ ರಾಜೀನಾಮೆ ಕೊಡಬೇಕು ಎಂದು ಕೇಳುತ್ತಿರಲಿಲ್ಲ. ರಾಜೂ ಕಪನೂರ್ ಪ್ರಿಯಾಂಕ್ ಖರ್ಗೆ ಪರಮಾಪ್ತ. ಅದಕ್ಕೆ ನಾವು ಖರ್ಗೆ ರಾಜೀನಾಮೆ, ಸಿಬಿಐ ತನಿಖೆಗೆ ಕೇಳುತ್ತಿದ್ದೇವೆ. ರಾಜೂ ಕಪನೂರ್ ಪ್ರಭಾವಿ ಕಾಂಗ್ರೆಸ್ ಮುಖಂಡ ಎಂದಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವನನ್ನು ತೊಡೆಯ ಮೇಲೆ ಕೂರಿಸಿಕೊಂಡಿಲ್ಲ ಅಷ್ಟೇ. ಸ್ವಲ್ಪ ದಿನ ಆದರೆ ತಲೆಯ ಮೇಲೆ ಕೂರಿಸಿಕೊಳ್ಳುತ್ತಾರೆ. 12 ಕೋಟಿ ಟೆಂಡರ್ ಕೊಡಿಸುತ್ತೇನೆ ಎಂದು ಲಂಚಕ್ಕೆ ಪೀಡಿಸಿ ಲಂಚ‌ ಕೊಡಲು ಆಗದೇ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಿಯಾಂಕ್ ಖರ್ಗೆ ಸರ್ವ ಇಲಾಖೆ ಸಚಿವ, ಎಲ್ಲಾ ಇಲಾಖೆಗಳಿಗೂ ಇವರೇ ಮೇಟಿ. ಸದನದಲ್ಲಿ ಸಿಎಂ, ಗೃಹ ಸಚಿವರಿದ್ದರೂ ಇವರೇ ಮಾತಾಡುತ್ತಾರೆ. ಪ್ರಿಯಾಂಕ್ ಖರ್ಗೆ ಮೇಧಾವಿ, ಬುದ್ದಿವಂತ. ಯಡಿಯೂರಪ್ಪನವರ ಫೋಕ್ಸೋ ಕೇಸ್ ಬಗ್ಗೆ ಖರ್ಗೆ ಮಾತಾಡುತ್ತಾರೆ. ಸ್ವಾಮಿ ಪ್ರಿಯಾಂಕ್ ಖರ್ಗೆಯವರೇ, ನೀವೇನು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟಾ? ನೀವೇನು ಯಡಿಯೂರಪ್ಪನವರ ಕೇಸ್ ಬಗ್ಗೆ ಮಾತನಾಡುವುದು? ಎಂದು ಗುಡುಗಿದ್ದಾರೆ.

ಪ್ರಕರಣ ಸಿಐಡಿ ತನಿಖೆ ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು  ಗೃಹ ಸಚಿವರು ಕೇವಲ ತುಮಕೂರಿಗೆ ಮಾತ್ರ ಸೀಮಿತ ಆಗುವುದು ಬೇಡ. ಅವರು ಇಡೀ ರಾಜ್ಯಕ್ಕೆ ಗೃಹ ಸಚಿವರು. ನೀವು ನಿಜವಾದ ಗೃಹ ಸಚಿವರೇ ಆಗಿದ್ದರೆ ಕೂಡಲೇ ಸಚಿನ್ ಮನೆಗೆ ಭೇಟಿ ನೀಡಿ. ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿ. ಈಶ್ವರ್ ಖಂಡ್ರೆ ನಿನ್ನೆ ಪೊಲೀಸರಿಂದ ತಪ್ಪಾಗಿದೆ ಅಂತ ಒಪ್ಪಿಕೊಂಡಿದ್ದಾರೆ. ಪ್ರಕರಣವನ್ನು ಸಿಬಿಐಗೆ ಕೊಟ್ಟು, ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಿ.ಕೋಳಿ ಕೇಳಿ ಮಸಾಲೆ ಅರೆಯಲು ಸಾಧ್ಯವೇ? ಎಂದಿದ್ದಾರೆ.

ಸಚಿನ್ ತನ್ನ ಖಾತೆಗೆ 60 ಲಕ್ಷ ಹಣ ಹಾಕಿಸಿಕೊಂಡಿದ್ದ ಎಂಬ ರಾಜು ಕಪನೂರು ಸಹೋದರ ಪ್ರಕಾಶ್ ಕಪನೂರು ಹೇಳಿಕೆ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಪುಡಾರಿಗಳಿಂದ ಇನ್ನು ಏನು ನಿರೀಕ್ಷೆ ಮಾಡಲು ಸಾಧ್ಯ?.ಸಹಜವಾಗಿ ಇಂತಹ ಹೇಳಿಕೆ‌ ಕೊಡುತ್ತಾರೆ. ಅವರಿಂದ ಇದು ನಿರೀಕ್ಷೆಯ ಉತ್ತರ ಬರುತ್ತದೆ ಅಂತ ಗೊತ್ತಿದೆ. ಪ್ರಿಯಾಂಕ್ ಖರ್ಗೆಯವರೇ ನಿಮಗೆ ತಾಕತ್ತು ಇದ್ದರೆ, ಧೈರ್ಯ ಇದ್ದರೆ ಸಚಿನ್ ಅವರ ಕುಟುಂಬ ಭೇಟಿಯಾಗಿ. ಸಚಿನ್ ಗ್ರಾಮಕ್ಕೆ ಭೇಟಿ ನೀಡಿ. ಅಧಿಕಾರ ಶಾಶ್ವತ ಅಲ್ಲ.ನಿಮ್ಮ ದುರಹಂಕಾರ ಬಿಡಿ ಎಂದಿದ್ದಾರೆ.