ಮನೆ Latest News ಕುಮಾರಸ್ವಾಮಿ ಮಾಡಿದ ಸಾಲ ಮನ್ನಾ 8 ಸಾವಿರ ಕೋಟಿ ಬಾಲೆನ್ಸ್ ಇದೆ: ಸಚಿವ ಚೆಲುವರಾಯಸ್ವಾಮಿ ಹೇಳಿಕೆ

ಕುಮಾರಸ್ವಾಮಿ ಮಾಡಿದ ಸಾಲ ಮನ್ನಾ 8 ಸಾವಿರ ಕೋಟಿ ಬಾಲೆನ್ಸ್ ಇದೆ: ಸಚಿವ ಚೆಲುವರಾಯಸ್ವಾಮಿ ಹೇಳಿಕೆ

0

ಬೆಂಗಳೂರು; ಕುಮಾರಸ್ವಾಮಿ ಮಾಡಿದ ಸಾಲ ಮನ್ನಾ 8 ಸಾವಿರ ಕೋಟಿ ಬಾಲೆನ್ಸ್ ಇದೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ ಡಿಎಪಿ ಕೇಂದ್ರ ಸರ್ಕಾರ ವಿತರಣೆ  ಮಾಡುತ್ತದೆ, ಉತ್ಪಾದನೆ ಕೂಡ ಕೇಂದ್ರ ಸರ್ಕಾರ ಮಾಡುತ್ತದೆ. ರಾಜ್ಯಕ್ಕೆ  ಕೇಂದ್ರ ಸರ್ಕಾರವೇ ಸರಬರಾಜು ಮಾಡುತ್ತದೆ. ಡಿಎಪಿಗಳ ಕೆಮಿಕಲ್ಸ್ ನಿಂದ ಜಮೀನು ಹಾಳಾಗುತ್ತದೆ. ಅಲ್ಲದೇ ಇಳುವರಿಯೂ ಸರಿಯಾಗಿ ಬರಲ್ಲ. ಹೀಗಾಗಿ ಸಂಶೋಧಕರ‌ ಜೊತೆಗೆ ಸಭೆ ಮಾಡ್ತಿದ್ದೇವೆ. ನಮ್ಮ ರಾಜ್ಯಕ್ಕೆ ಮಾತ್ರ ಕೊರತೆ ಆಗಿಲ್ಲ, ಬೇರೆ ಬೇರೆ ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಡುತ್ತದೆ. ನಾವು ಇಪ್ಕೋ ಜೊತೆಗೆ ಡಿಎಪಿ ಒದಗಿಸುತ್ತಿದ್ದೇವೆ. ರಾಜ್ಯದಲ್ಲಿ ಈಗಾಗಲೇ ಪರ್ಟಿಲೈಸರ್ ಪೂರೈಕೆ ಮಾಡ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಯಾವುದೇ ರೀತಿ ಪರ್ಟಿಲೈಸರ್ ಕೊರತೆ ಇಲ್ಲ. ಮುಂದೆ ಡಿಎಪಿಯ ಕೊರತೆ ಇರೋದ್ರಿಂದ ಮುಂದಿನ ವರ್ಷ ತೊಂದರೆ ಆಗಬಹುದು. ಹೀಗಾಗಿ ಡಿಎಪಿ ಬಳಕೆ ಜೊತೆಗೆ ಕೊರತೆ ಬಗ್ಗೆ ಜಾಗೃತಿ ಮಾಡ್ತಿದ್ದೇವೆ ಎಂದರು.

ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಡಿಎಪಿ ಕೊರತೆ ಇಲ್ಲ, ಆ ರೀತಿಯ ಯಾವುದೇ ಕಂಪ್ಲೈಂಟ್ ಕೂಡ ಬಂದಿಲ್ಲ. ಕೇಂದ್ರ ಸರ್ಕಾರ ಪರ್ಟಿಲೈಸರ್ ಕೊಡುತ್ತದೆ. ಡಿಎಪಿ ಬಳಕೆ ಬಗ್ಗೆ ಯೂನಿವರ್ಸಿಟಿಗಳ ಜೊತೆಗೆ ಚರ್ಚೆ ಮಾಡಿದ್ದೇವೆ. ಹಂತ ಹಂತವಾಗಿ ಕಾರ್ಯಕ್ರಮ ಮಾಡಿ ಎಂದು ಹೇಳಿದ್ದೇವೆ. ಕುಮಾರಸ್ವಾಮಿ ನಮ್ಮನ್ನ ಬೆಂಬಲಿಸಲು ಆಗತ್ತಾ?. 2016 ರಲ್ಲಿ ಪೂರ್ಣ ಪ್ರಮಾಣದ ಸರ್ಕಾರ ಬಂದ್ರೆ ಪಕ್ಷ ಡಿಸಾಲ್ವ್ ಮಾಡ್ತಿನಿ ಎಂದು ಹೇಳಿದ್ರು.ಆದ್ರೆ ಹೇಳಿದಂತೆ ಮಾಡಿದ್ರಾ? 2023 ರಲ್ಲಿಯೂ ಅದೇ ರೀತಿ ಹೇಳಿದ್ರು. ಜೆಡಿಎಸ್ 2023 ರಲ್ಲಿ ಎಷ್ಟು ಸ್ಥಾನ ಬಂತು?. ಜೆಡಿಎಸ್ ನ್ನ ರಾಜ್ಯದ ಜನರು ಸ್ವೀಕಾರ ಮಾಡಿಲ್ಲ. ಜಯ ಪ್ರಕಾಶ್ ಹೆಗಡೆ, ಬೊಮ್ಮಾಯಿ ಕಾಲದಲ್ಲಿ ಬಂದ ಬಹುಮತ ಮತ್ತೆ ಬಂದಿದ್ಯಾ?. ದೇವೇಗೌಡರ ಮಾತು, ಕುಮಾರಸ್ವಾಮಿ ಏನು ಹೇಳಿದ್ರು ಹಾಕ್ತಿರಿ. ಜೆಡಿಎಸ್ ನವರು ಗೆಲ್ಲೋಕೆ ಬಿಜೆಪಿ ಬೆಂಬಲ ಪಡೆಯುತ್ತಿದ್ದಾರೆ. ನಾವು ನಮ್ಮ ಸ್ಥಾನ ಹೆಚ್ಚಿಸಿಕೊಂಡಿದ್ದೇವೆ. ಬೈ ಎಲೆಕ್ಷನ್ ನಲ್ಲಿ ಮೂರು ಕ್ಷೇತ್ರ ಗೆದ್ದಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ 9 ಸ್ಥಾನಕ್ಕೇರಿಸಿಕೊಂಡಿದ್ದೇವೆ ಎಂದರು.

ಕುಮಾರಸ್ವಾಮಿ ಆರೋಗ್ಯ ವಿಚಾರದ ಬಗ್ಗೆ ಮಾತನಾಡಿದ ಅವರು ಅವರ ಆರೋಗ್ಯದ ಬಗ್ಗೆ ನಾವು ಎಲ್ಲಿಯೂ ಮಾತಾಡಿಲ್ಲ. ಅವರು ಆರೋಗ್ಯವಾಗಿರಲಿ ಅಂತ ಎಲ್ಲರೂ ಬಯಸುತ್ತಿದ್ದೇವೆ. ದೇವೇಗೌಡರು ಆರೋಗ್ಯವಾಗಿದ್ದಾರೆ, ಅವರು ಕಟ್ಟಿದ ಪಕ್ಷ ಆರೋಗ್ಯ ಕ್ಷೀಣಿಸುತ್ತಿದೆ. ನಿಖಿಲ್ ಪಕ್ಷವನ್ನ ಕಟ್ತಾರೆ, ಕಟ್ಟಲಿ, ಸೂರಜ್ ನೇತೃತ್ವದಲ್ಲಿ ಕಟ್ತಾರೋ ಕಟ್ಟಲಿ. ಅದರಲ್ಲಿ ನಮ್ಮ ಆಕ್ಷೇಪ ಇಲ್ಲ, ಅವರು ಅವರ ಪಕ್ಷ ಕುಟುಂಬ ವಿಚಾರ. ಅವರ ಶಾಸಕರು ಬೆಂಬಲ ಕೊಟ್ಟು ಇದ್ದಾರೆ, ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಕುಮಾರಸ್ವಾಮಿ ಅವರಿಗೆ ನಮ್ಮ ಸರ್ಕಾರವನ್ನ ಟೀಕೆ ಮಾಡೋ ನೈತಿಕತೆ ಇಲ್ಲ. ನಮ್ಮಂತೆ ಅವರು ಮೋದಿ ಜೊತೆಗೆ ಇದ್ದು ಒಂದು ಗ್ಯಾರಂಟಿ ಕೊಟ್ಟಿಲ್ಲ. ಕುಮಾರಸ್ವಾಮಿ ಮಾಡಿದ ಸಾಲ ಮನ್ನಾ 8 ಸಾವಿರ ಕೋಟಿ ಬಾಲೆನ್ಸ್ ಇದೆ. ಒಂದು ಲಕ್ಷ ಕೋಟಿ ಅವರು ಬ್ಯಾಲೆನ್ಸ್ ಉಳಿಸಿ ಹೋಗಿದ್ದಾರೆ. ನಮ್ಮ ಪಕ್ಷ ರಾಷ್ಟ್ರೀಯಮಟ್ಟದಲ್ಲಿ ಸುಧಾರಣೆ ಕಂಡಿದ್ದೇವೆ. ನಾವು ನಮ್ಮ ಬಲವನ್ನ ಹೆಚ್ಚಿಸಿಕೊಂಡಿದ್ದೇವೆ. ದೇವೇಗೌಡ್ರು, ಕುಮಾರಸ್ವಾಮಿ ನಿಂತ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಬೊಮ್ಮಾಯಿ ತಮ್ಮ ಮಗನನ್ನ ಗೆಲ್ಲಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅವರು ನಮ್ಮ ಸರ್ಕಾರವನ್ನ ಟೀಕೆ ಮಾಡೋದ್ರಲ್ಲಿದ್ದಾರೆ. ನಮ್ಮ ಸಿಎಂ, ಡಿಸಿಎಂ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ತಿಳಿಸಿದ್ರು.

ಟ್ಯಾಕ್ಸ್ ಏರಿಸಿ ಗ್ಯಾರಂಟಿ ಗೆ 2 ಸಾವಿರ ಕೊಡ್ತಿದ್ದಾರೆ ಹೆಚ್‌ಡಿಕೆ ಆರೋಪದ ಬಗ್ಗೆ ಮಾತನಾಡಿದ ಅವರು ರಾಜ್ಯಗಳು ಆಗಾಗ ಟ್ಯಾಕ್ಸ್ ಹೆಚ್ಚಳ‌ ಮಾಡುತ್ತಲೇ‌ ಇರುತ್ತವೆ. ಎರಡು ವರ್ಷ, ಐದು ವರ್ಷ ಅವಧಿಯಲ್ಲಿ ಟ್ಯಾಕ್ಸ್ ಹೆಚ್ಚಳ ಮಾಡ್ತಾ ಬಂದಿದ್ದಾರೆ . ಮನಮೋಹನ್ ಸಿಂಗ್ ಇದ್ದಾಗ ಏನು ದರ ಇತ್ತು? ಈಗ ಏನು ಬದಲಾವಣೆ ಆಗಿದೆ ನೋಡಬೇಕು. ಸರ್ಕಾರಗಳು ಆಗಾಗ ಟ್ಯಾಕ್ಸ್ ‌ಹೆಚ್ಚಳ ನೀಡುತ್ತಲೇ ಇರ್ತಾರೆ. ಅವರು ಎರಡು ವರ್ಷದಲ್ಲಿ ಹಾಸನ, ರಾಮನಗರ, ಮಂಡ್ಯದಲ್ಲಿನ ಬದಲಾವಣೆ ಬಗ್ಗೆ ಪಟ್ಟಿ ಕೊಡಲಿ. ನಾವು ಎರಡು ವರ್ಷದ ಪಟ್ಟಿ‌ ಕೊಡ್ತೇವೆ, ಯಾವೆಲ್ಲ ಬದಲಾವಣೆ ಆಗಿದೆ ನೋಡೋಣ ಎಂದು ಕುಮಾರಸ್ವಾಮಿ ಗೆ ಚೆಲುವರಾಯಸ್ವಾಮಿ ಸವಾಲ್ ಹಾಕಿದ್ದಾರೆ.

ಕುಮಾರಸ್ವಾಮಿ ಅವರ ಮಗ ಮೂಲಕ ಪಕ್ಷ ಕಟ್ಟೋಕೆ ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಜೊತೆಗಿದ್ದು ನಿಖಿಲ್ ಗೆಲ್ಲಿಸಿಕೊಳ್ಳಲು ಆಗಿಲ್ಲ. ಪಿಜಿಆರ್ ಸಿಂದ್ಯಾ, ಬೊಮ್ಮಾಯಿ, ಸೇರಿದಂತೆ ಎಲ್ಲರೂ ಇದ್ದಾಗ ಎಷ್ಟು ‌ಸ್ಥಾನಗಳನ್ನ ಗೆದ್ದಿದ್ದಾರೆ. ಜೆಡಿಎಸ್ ಪಕ್ಷವನ್ನೇ ಅವರ ಕುಟುಂಬವನ್ನಾಗಿಸಿಕೊಂಡಿದ್ದಾರೆ. ಇನ್ನು ನಾಲ್ಕೈದು ಕ್ಷೇತ್ರಗಳಲ್ಲಿ ಕುಟುಂಬಸ್ಥರಿಗೆ ಕೊಡಲಿ. ಅವರ ಕುಟುಂಬವನ್ನು ನಾವು ಟೀಕೆ ಮಾಡಲ್ಲ. ಎಲ್ಲ ಪಕ್ಷದಲ್ಲಿ ಅಲ್ಲಲ್ಲಿ ಕುಟುಂಬ ರಾಜಕಾರಣ ಇದೆ, ಇಲ್ಲ ಅಂತಲ್ಲ. ಆದ್ರೆ ಕುಮಾರಸ್ವಾಮಿ ತಮ್ಮ ಮಗನನ್ನು ‌ಗೆಲ್ಲಿಸಿಕೊಳ್ಳಲಿಲ್ಲ. ಬಿಜೆಪಿ, ಕಾಂಗ್ರೆಸ್ ಗೆ ಜೆಡಿಎಸ್ ನವರು ಯಾರೇ ಸೇರಿಕೊಳ್ಳಲಿ. ಅದರಲ್ಲಿ ತಪ್ಪೇನಿಲ್ಲ, ಅವರಿಂದ ನಷ್ಟ ಆಗಲ್ಲ ಅಂತಿದ್ರು. ಅವರು ೧೨೩ ಸೀಟು ಗೆಲ್ಲಲಿ ನಮಗೆನು ಬೇಜಾರಿಲ್ಲ. ಮುಂದೆ ಏನಾಗುತ್ತೆ ಅನ್ನೋದನ್ನ ನೋಡೊಣ ಎಂದಿದ್ದಾರೆ.