ಮನೆ Latest News ಈಶ್ವರಪ್ಪ ಬಿಜೆಪಿಗೆ ಬರುವ ಬಗ್ಗೆ ರಾಜ್ಯಮಟ್ಟದಲ್ಲಾಗಲಿ, ಕೇಂದ್ರ ಮಟ್ಟದಲ್ಲಾಗಲಿ ಚರ್ಚೆಯಾಗಿಲ್ಲ; ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ...

ಈಶ್ವರಪ್ಪ ಬಿಜೆಪಿಗೆ ಬರುವ ಬಗ್ಗೆ ರಾಜ್ಯಮಟ್ಟದಲ್ಲಾಗಲಿ, ಕೇಂದ್ರ ಮಟ್ಟದಲ್ಲಾಗಲಿ ಚರ್ಚೆಯಾಗಿಲ್ಲ; ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ

0

ಬೆಂಗಳೂರು ; ಈಶ್ವರಪ್ಪ ಬಿಜೆಪಿಗೆ ಬರುವ ಬಗ್ಗೆ ರಾಜ್ಯಮಟ್ಟದಲ್ಲಾಗಲಿ, ಕೇಂದ್ರ ಮಟ್ಟದಲ್ಲಾಗಲಿ ಚರ್ಚೆಯಾಗಿಲ್ಲ ಎಂದು  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ಅಮಿತ್ ಶಾ ಭೇಟಿ ಬಗ್ಗೆ ಮಾತನಾಡಿದ ಅವರು ನಿನ್ನೆ ನಾನು, ನಮ್ಮ ಪಕ್ಷದ ಎಲ್ಲಾ ಮುಖಂಡರು ಗೃಹಸಚಿವ ಅಮಿತ್ ಶಾ ಜೊತೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹೇಗೆ ಒಡೆದು ಆಳುವ ರೀತಿ ನಡೆದುಕೊಳ್ಳುತ್ತಿದೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹೇಗೆಲ್ಲಾ ಹೋರಾಟ ಮಾಡಿದ್ದೇವೆ ಅಂತ ಮಾಹಿತಿ ನೀಡಿದ್ದೇವೆ. ನಾವೆಲ್ಲರೂ, ಪಕ್ಷದ ಹಿರಿಯ ಮುಖಂಡರು ಒಟ್ಟಾಗಿ ಹೋಗಬೇಕು ಅಂತಾ ಸೂಚಿಸಿದ್ದಾರೆ‌. ಆಗ ಮಾತ್ರ ಜನರು, ಕಾರ್ಯಕರ್ತರು ವಿಶ್ವಾಸದಲ್ಲಿ ಇರುತ್ತಾರೆ. ಕಾರ್ಯವೈಖರಿ ಬಗ್ಗೆ ವಿಪಕ್ಷವಾಗಿ ನಮಗೂ ಜವಾಬ್ದಾರಿ ಇದೆ.ವಿಪಕ್ಷ ಸ್ಥಾನದಲ್ಲಿ ಇದ್ದರೂ ನಮಗೆ ಹೆಚ್ಚು ಜವಾಬ್ದಾರಿ ಇದೆ. ಒಟ್ಟಾಗಿ ಹೋಗಿ ಅಂತಾ ಸೂಚಿಸಿದ್ದಾರೆ ಎಂದರು.

ರಾಜ್ಯಾಧ್ಯಕ್ಷ ನೇಮಕ ವಿಚಾರದ ಬಗ್ಗೆ ಮಾತನಾಡಿದ ಅವರು ನಾನಂತೂ ಕಳೆದ ಒಂದೂವರೆ ವರ್ಷದಿಂದ ಕೊಟ್ಟ ಜವಾಬ್ದಾರಿ ಶ್ರದ್ಧೆಯಿಂದ ನಿಭಾಯಿಸಿದ್ದೇನೆ. ಪ್ರತಿ ಬಾರಿ ಕೇಂದ್ರದ ನಾಯಕರಿಗೆ ಏನೆಲ್ಲಾ ಆಗಿದೆ, ಮಾಡಿದ್ದೇವೆ ಅಂತ‌ ಮಾಹಿತಿ ನೀಡಿದ್ದೇನೆ. ರಾಷ್ಟ್ರೀಯ ಪಕ್ಷವಾಗಿ ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದ್ರು. ಇನ್ನು ಈಶ್ವರಪ್ಪ ಮತ್ತೆ ಬಿಜೆಪಿಗೆ ಬರುವ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜ್ಯಮಟ್ಟದಲ್ಲಾಗಲಿ, ಕೇಂದ್ರ ಮಟ್ಟದಲ್ಲಾಗಲಿ ಈ ಬಗ್ಗೆ ಚರ್ಚೆಯಾಗಿಲ್ಲ. ಚರ್ಚೆ ನಾವ್ಯಾರೂ ಮಾಡಲು ಆಗಲ್ಲ. ನಿಜ, ಎಲ್ಲರೂ ಒಟ್ಟಾಗಿ, ಒಂದಾಗಿ ಹೋಗಬೇಕು ಎನ್ನುವ ಬಯಕೆ ಇದೆ. ಇಲ್ಲಿ ನಾವು ಚರ್ಚೆ ಮಾಡಲು ಆಗಲ್ಲ, ರಾಷ್ಟ್ರೀಯ ನಾಯಕರು ಕುಳಿತು ಚರ್ಚೆ ಮಾಡಬೇಕು ಎಂದರು.

ಬರುವ ದಿನಗಳಲ್ಲಿ ನಮ್ಮ ಪಕ್ಷಕ್ಕೆ ಒಳ್ಳೆಯ ಅವಕಾಶ ಇದೆ ಅಂತ ಅಮಿತ್ ಶಾ ಹೇಳಿದ್ದಾರೆ. ಎಲ್ಲರೂ ವ್ಯತ್ಯಾಸ ಮರೆತು ಹೋಗಿ ಅಂದಿದ್ದಾರೆ ಅಮಿತ್ ಶಾ. ಹಳೆಯದೆಲ್ಲಾ ಮರೆತು ಒಟ್ಟಾಗಿ ಹೋಗಿ ಅಂತ ಅಮಿತ್ ಶಾ ಕಿವಿಮಾತು ಹೇಳಿದ್ದಾರೆ. ನಾನು ಪಕ್ಷ ಕೊಟ್ಟ ಎಲ್ಲಾ ಜವಾಬ್ದಾರಿ‌ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದೇನೆ. ಪಕ್ಷದ ತೀರ್ಮಾನ ಏನಿರುತ್ತದೆ ಅಂತಾ ನೋಡೋಣ.ಅಂತಿಮವಾಗಿ ಯಾರನ್ನು ಅಧ್ಯಕ್ಷರಾಗಿ ಮಾಡಬೇಕು, ಯಾರನ್ನು ಅಧ್ಯಕ್ಷರಾಗಿ ಮಾಡಿದರೆ ಒಳ್ಳೆಯದು ಅಂತ ವರಿಷ್ಠರು ತೀರ್ಮಾನ ಮಾಡುತ್ತಾರೆ. ಯಾರ ತಮಯಾರು ತಪ್ಪನ್ನು ಅರ್ಥ ಮಾಡಿಕೊಂಡು ಪಕ್ಷಕ್ಕೆ ವಾಪಸ್ ಬರಬೇಕು ಅಂದುಕೊಂಡಿದ್ದಾರೋ ಬರಬಹುದು ಎಂದರು.