ಮನೆ Latest News ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಸಂಖ್ಯೆ 17ಕ್ಕೆ ಏರಿಕೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಸಂಖ್ಯೆ 17ಕ್ಕೆ ಏರಿಕೆ

0

ಬೆಂಗಳೂರು: ಚಿತ್ರದುರ್ಗ ಮೂಲದ ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ದರ್ಶನ್ ಸೇರಿದಂತೆ ಒಟ್ಟು 13 ಜನರನ್ನು ಪೊಲೀಸರು ಬಂಧಿಸಿದ್ದಾರೆ.ಆದರೆ ಆ ಪ್ರಕರಣದಲ್ಲಿ ಕೇವಲ 13 ಜನ ಮಾತ್ರವಲ್ಲ. ಒಟ್ಟು 17 ಜನ ಇದ್ದಾರೆ ಅನ್ನೋದು ಪೊಲೀಸರಿಗೆ ಗೊತ್ತಾಗಿದೆ.ಸದ್ಯ ಈ 17 ಜನರಲ್ಲಿ ಮೂವರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸಪರು ಬಲೆ ಬೀಸಿದ್ದಾರೆ.

 ಕಾಮಾಕ್ಷಿ ಠಾಣೆಯ ಪೊಲೀಸರು ದಾಖಲಿಸಿರುವಂತ ಎಫ್‌ಐಆರ್ ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿ.  ನಟ ದರ್ಶನ್ ಎ2 , ಪವನ್ ಎ3, ರಾಘವೇಂದ್ರ ಎ4, ನಂದೀಶ್ ಎ5, ಜಗದೀಶ್ ಆಲಿಯಾಸ್ ಜಗ್ಗು ಎ6, ಅನು ಎ7, ರವಿ ಎ8, ರಾಜು ಎ9, ವಿನಯ್ ಎ10, ನಾಗರಾಜು ಎ11, ಲಕ್ಷ್ಮಣ್ ಎ12, ದೀಪಕ್ ಎ13, ಪ್ರದೋಶ್ 14, ಕಾರ್ತಿಕ್ ಎ15, ಕೇಶವಮೂರ್ತಿ ಎ16 ಹಾಗೂ ನಿಖಿಲ್ ನಾಯಕ್ ಎ17 ಎಂಬುದಾಗಿ ಉಲ್ಲೇಖಿಸಲಾಗಿದೆ.

ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಲು ಹೋದ ಡಿ ಗ್ಯಾಂಗ್ ಲಾಕ್ ಆಗಿದ್ದು ಹೇಗೆ?

ತಮ್ಮ ಅಭಿಮಾನಿಯನ್ನೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಟ ದರ್ಶನ್, ಅವರ ಸ್ನೇಹಿತೆ ಪವಿತ್ರ ಗೌಡ ಸೇರಿ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. 3 ಮಂದಿ ತಲೆಸರೆಸಿಕೊಂಡಿದ್ದಾರೆ.ಇನ್ನು ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಹಲವು ಶಾಕಿಂಗ್ ಸುದ್ದಿಗಳು ಹೊರ ಬಿದ್ದಿವೆ. ಆರೋಪಿಗಳು ದರ್ಶನ್ ಅವರು ತಮ್ಮಿಂದ ಯಾವ ರೀತಿ ಈ ಕೆಲಸ ಮಾಡಿಸಿದ್ರು ಅನ್ನೋದನ್ನು ಬಾಯ್ಬಿಟ್ಟಿದ್ದಾರೆ.

ಅಂದ್ಹಾಗೆ ಈ ಕೊಲೆಯಾದ ಬಳಿಕ ವಾಟ್ಸಾಪ್ ಕಾಲ್ ಮೂಲಕ ಹೇಗೆ ಮೃತದೇಹವನ್ನು ಸಾಗಿಸೋದು ಅನ್ನೋ ಬಗ್ಗೆ ಪ್ಲ್ಯಾನ್ ಮಾಡಲಾಗಿತ್ತಂತೆ.ದರ್ಶನ್ ಗೆ ವಾಟ್ಸಾಪ್ ಕಾಲ್ ಮಾಡಿ ಮೃತದೇಹ ಸಾಗಿಸೋ ಬಗ್ಗೆ ಮಾತುಕತೆ ನಡೆದಿದೆ. ಇದೇ ವೇಳೆ ಡೆಡ್ ಬಾಡಿಯನ್ನು ಕೊಲೆಯಾದ ಜಾಗದಿಂದ ತೆಗೆದುಕೊಂಡು ಹೋಗಿ ಬೇರೆ ಕಡೆ ಹಾಕಲು ಈ ಡಿ ಗ್ಯಾಂಗ್ ನ ಇತರೆ ಆರೋಪಿಗಳು ಬರೋಬ್ಬರಿ 30 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.

ದರ್ಶನ್ ಅವರಿಂದ 30 ಲಕ್ಷ ರೂಪಾಯಿ ನೀಡೋದಾಗಿ ಭರವಸೆ ಸಿಕ್ಕಿದ ಬಳಿಕ ಆರೋಪಿಗಳು ಮೃತದೇಹವನ್ನು ರಾಜ ರಾಜೇಶ್ವರಿ ನಗರದ ಪಟ್ಟಣಗೆರೆಯ ಕಾರ್ ಶೆಡ್ ನಿಂದ ಸ್ಕಾರ್ಫಿಯೋ ಕಾರ್ ಮೂಲಕ ತೆಗೆದುಕೊಂಡು ಬಂದು ಸುಮನಹಳ್ಳಿ ಬ್ರಿಡ್ಜ್ ಬಳಿ ರಾಜ ಕಾಲುವೆಗೆ ಎಸೆದಿದ್ದಾರೆ.

ಇನ್ನು ಜೂನ್ 8 ರಂದು ರಾತ್ರಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದ್ದು ಜೂನ್ 9 ರಂದು ಮುಂಜಾನೆ 3 ಗಂಟೆ ಸುಮಾರಿಗೆ ಮೃತದೇಹವನ್ನು ಕೊಲೆಯಾದ ಜಾಗದಿಂದ ತಂದು ರಾಜಕಾಲುವೆಗೆ ಆರೋಪಿಗಳು ಎಸೆದಿದ್ದಾರೆ. ಶವವನ್ನು ರಾಜಕಾಲುವೆ ಮಧ್ಯೆ ಎಸೆಯೋದಕ್ಕೆ ಆರೋಪಿಗಳು ಪ್ಲ್ಯಾನ್ ಮಾಡಿದ್ರು. ಆದ್ರೆ ಶವ ರಾಜಕಾಲುವೆಯ ತುದಿಯಲ್ಲೇ ಸಿಕ್ಕಿ ಹಾಕಿಕೊಂಡಿತ್ತು. ಹಾಗಾಗಿ ಬೀದಿನಾಯಿಗಳು ಅವುಗಳನ್ನು ತಿನ್ನಲು ಶುರುಮಾಡಿವೆ. ಇದನ್ನು ಪಕ್ಕದ ಅಪಾರ್ಟೆ ಮೆಂಟ್ ಸಿಕ್ಯೂರಿಟಿ ಗಾರ್ಡ್ ನೋಡಿದ್ದಾರೆ. ಬಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣದ ಬೆನ್ನು ಹತ್ತಿದ್ದಾರೆ.

ಅನುಮಾನಸ್ಪದ ವ್ಯಕ್ತಿಗಳಿಗೆ ಪೊಲೀಸರಿಂದ ಕರೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಸುದ್ದಿ ಸಿಗುತ್ತಿದ್ದಂತೆ ನಟ ದರ್ಶನ್ ಅಲರ್ಟ್ ಆಗಿದ್ದಾರೆ. ಈ ಕೇಸಿನಲ್ಲಿ ನಾನು ಬಚಾವ್ ಆಗ್ಬೇಕು ಅಂತ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.ಮೂವರಿಗೂ ಕರೆ ಮಾಡಿ ನೀವು ಮೂವರು ಕೂಡ ಪೊಲೀಸರಿಗೆ ಶರಣಾಗಿ ಎಂದಿದ್ದಾರೆ. ಅಲ್ಲದೇ 30 ಲಕ್ಷ ರೂಪಾಯಿಯ ಆಫರ್ ಕೊಟ್ಟಿದ್ದಾರೆ. ಅದರಂತೆ ತಾವೇ ಕೊಲೆ ಮಾಡಿದ್ದೆಂದು ಠಾಣೆಗೆ ಹೋಗಿ ಮೂವರು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆದರೆ ಮೂವರನ್ನ ಪ್ರತ್ಯೇಕವಾಗಿ ವಿಚಾರಣೆ ಮಾಡುವಾಗ ವಿಭಿನ್ನ ಹೇಳಿಕೆ ಕೊಟ್ಟಿದ್ದಾರೆ. ಇವರ ಹೇಳಿಕೆಗಳ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ.ಆರಂಭದಲ್ಲಿ ಹಣಕಾಸು ವಿಚಾರಕ್ಕೆ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಹೇಳಿದ್ದಾರೆ.ಆದರೆ ಪೊಲೀಸರು ತಮ್ಮದೇ ಭಾಷೆಯಲ್ಲಿ ಆರೋಪಿಗಳ ಬಾಯಿ ಬಿಡಿಸಿದಾಗ ಅವರು ನಿಜಾಂಶ ಹೇಳಿದ್ದಾರೆ. ದರ್ಶನ್ ಹಾಗೂ ಪವಿತ್ರ ಗೌಡ ಹೆಸರು ಹೇಳಿದ್ದಾರೆ.ಆರೋಪಿಗಳ ಹೇಳಿಕೆಯಂತೆ ಪ್ರಕರಣದಲ್ಲಿ ದರ್ಶನ್ ಹಾಗೂ ಪವಿತ್ರ ಗೌಡ ಭಾಗಿಯ ಬಗ್ಗೆ ಟೆಕ್ನಿಕಲ್ ಅವಿಡೆನ್ಸ್ ಸಂಗ್ರಹಿಸಿ ದರ್ಶನ್ ಹಾಗೂ ಪವಿತ್ರ ಅವರನವ್ನು ಬಂಧಿಸಿದ್ದಾರೆ.