ಮನೆ Latest News ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಚರ್ಚೆ ವಿಚಾರ ಒಂದು ಹಂತಕ್ಕೆ ಬಂದಿದೆ : ವಿಧಾನಸೌಧದಲ್ಲಿ ಸಚಿವ...

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಚರ್ಚೆ ವಿಚಾರ ಒಂದು ಹಂತಕ್ಕೆ ಬಂದಿದೆ : ವಿಧಾನಸೌಧದಲ್ಲಿ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ

0

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಚರ್ಚೆ ವಿಚಾರ ಒಂದು ಹಂತಕ್ಕೆ ಬಂದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಅವರು ರಣ್ ದೀಪ್ ಸಿಂಗ್ ಸುರ್ಜೇವಾಲ ಬಂದು ಸ್ಪಷ್ಟಪಡಿಸಿದ್ದಾರೆ.ಎಲ್ಲವೂ ಒಂದು ಹಂತಕ್ಕೆ ಬಂದಿದೆ. ಸಿಎಂ, ಡಿಸಿಎಂ, ರಾಜಣ್ಣ, ಸತೀಶ್ ಜಾರಕಿಹೊಳಿ, ಪರಮೇಶ್ವರ್, ಎಂಬಿ ಪಾಟೀಲ್, ಈಶ್ವರ್ ಖಂಡ್ರೆ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.

ಜಾತಿ ಜನಗಣತಿ ಕ್ಯಾಬಿನೆಟ್ ನಲ್ಲಿ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅವರು ಯಾವ ಜಾತಿಗಳಿಗೂ ಅನ್ಯಾಯ ಆಗಬಾರದು. ಸಿಎಂ ಬಳಿ ಈಗಾಗಲೇ ಚರ್ಚೆ ಮಾಡಿದ್ದೇವೆ. ವರದಿ ನೋಡಿದ ಮೇಲೆ ಗೊತ್ತಾಗಲಿದೆ.ವೀರಶೈವ ಮಹಾಸಭಾ ಸೇರಿದಂತೆ ಕೆಲವರು ಸಮುದಾಯಗಳು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಪತ್ರಿಕೆಯಲ್ಲಿ ಜಾತಿಜನಗಣತಿ ವರದಿ ಲೀಕ್ ಆಗಿದೆ ಅಂತ ಸುದ್ದಿ ನೋಡಿದೆ. ಲಿಂಗಾಯತ ವಿಚಾರ ಬಂದಾಗ 55 ಲಕ್ಷ ಅಂತ ಪತ್ರಿಕೆಯಲ್ಲಿ ಹಾಕಿದ್ದಾರೆ.ಅನೇಕ ಲಿಂಗಾಯತ ಉಪಪಂಗಡಗಳು ಇವೆ. 108 ಲಿಂಗಾಯತ ಉಪ ಪಂಗಡಗಳಿವೆ. ಅವರನ್ನ ಗಣನೆಗೆ ತೆಗೆದುಕೊಳ್ಳದಿದ್ದರೆ ನಮ್ಮ ಜನಸಂಖ್ಯೆ ಕಡಿಮೆ ಆಗುತ್ತೆ.ನಮ್ಮ ಜನಸಂಖ್ಯೆ ರಾಜ್ಯದಲ್ಲಿ 17% ಗಿಂತ ಹೆಚ್ಚಾಗಿದೆ. ಎಲ್ಲ ಲಿಂಗಾಯತ ಉಪ ಪಂಗಡಗಳನ್ನ ಒಂದೇ ಅಡಿಗೆ ತೆಗದುಕೊಂಡು ಬರಬೇಕು. ವರದಿ ಬಂದು ಬಳಿಕ‌ ಸತ್ಯಾಂಶ ಗೊತ್ತಾಗುತ್ತದೆ.ಲಿಂಗಾಯತ ಗಾಣಿಗ, ಲಿಂಗಾಯತ ಬಣಜಿಗ, ಲಿಂಗಾಯತ ಸಾಧು ಏನೇ ಬರೆಸಿರಲಿ ಅವರನ್ನೆಲ್ಲ ಲಿಂಗಾಯತ ಅಂತ ಪರಿಗಣನೆ ಮಾಡ್ಬೇಕು. ಆಗ ನಮ್ಮ ಜನಸಂಖ್ಯೆ ಗೊತ್ತಾಗುತ್ತದೆ ಎಂದು ತಿಳಿಸಿದರು.

ಪಕ್ಷ ಸಂಘಟನೆ ಬಗ್ಗೆ ಸಚಿವ ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ‌ ಅಸಮಾಧಾನದ ಬಗ್ಗೆ ಮಾತನಾಡಿದ ಅವರು  ಕೆಪಿಸಿಸಿ ಅಧ್ಯಕ್ಷ ಸ್ಥಾನ ಮುಂದುವರಿಕೆ ಬಗ್ಗೆ ಹೈಕಮಾಂಡ್ ಚರ್ಚೆ ಮಾಡ್ತಾರೆ. ಯಾರನ್ನ ಮಾಡಬೇಕು ಅಂತಲೂ ಹೈಕಮಾಂಡ್ ಚರ್ಚೆ ಮಾಡುತ್ತೆ ಎಂದರು.

ಸಿದ್ಧರಾಮಯ್ಯ ಯಾವ ರೀತಿ ಸಿಎಂ ಸ್ಥಾನ ಬಿಡುತ್ತಿಲ್ಲವೋ ಹಾಗೆ ಡಿ.ಕೆ. ಶಿವಕುಮಾರ್ ಅಧ್ಯಕ್ಷ ಸ್ಥಾನ ಬಿಡುತ್ತಿಲ್ಲ : ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ

ಬೆಂಗಳೂರು; ಸಿದ್ಧರಾಮಯ್ಯ ಯಾವ ರೀತಿ ಸಿಎಂ ಸ್ಥಾನ ಬಿಡುತ್ತಿಲ್ಲವೋ ಹಾಗೆ ಡಿ.ಕೆ. ಶಿವಕುಮಾರ್ ಅಧ್ಯಕ್ಷ ಸ್ಥಾನ ಬಿಡುತ್ತಿಲ್ಲ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಸಿದ್ಧರಾಮಯ್ಯ ಯಾವ ರೀತಿ ಸಿಎಂ ಸ್ಥಾನ ಬಿಡುತ್ತಿಲ್ಲವೋ ಹಾಗೆ ಡಿ.ಕೆ. ಶಿವಕುಮಾರ್ ಅಧ್ಯಕ್ಷ ಸ್ಥಾನ ಬಿಡುತ್ತಿಲ್ಲ. ಸುರ್ಜೇವಾಲಾ ಮೊನ್ನೆ ಬಹಿರಂಗ ಮಾತಾಡಬೇಡಿ ಅಂದರು. ನಿನ್ನೆಯಿಂದಲೇ ಎಲ್ಲರೂ ಬಹಿರಂಗ ಮಾತಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಜನರ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇವರಿಗೆ ಯಾವುದನ್ನೂ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯ ಆರ್ಥಿಕ ದುಸ್ಥಿತಿಯತ್ತ ಹೋಗುತ್ತಿದೆ. ಕಾಂಗ್ರೆಸ್ ನವರು ಆಡಳಿತ ಮರೆತು ದೆಹಲಿಗೆ ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೆಹಲಿಗೆ ಹೋಗುವವರ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ಕಾಂಗ್ರೆಸ್ ಸರ್ಕಾರ ಬೀಳುವುದು ಬೆಳಗಾವಿಯಿಂದಲೇ ಎಂದ ಆರ್ ಅಶೋಕ್  ಒಂದು ಕಡೆ ಸತೀಶ್ ಜಾರಕಿಹೊಳಿ ವರ್ಸಸ್ ಲಕ್ಷ್ಮಿ ಹೆಬ್ಬಾಳ್ಕರ್ ನಡೆಯುತ್ತಿದೆ. ಇನ್ನೊಂದು ಕಡೆ ಸತೀಶ್ ಜಾರಕಿಹೊಳಿ ವರ್ಸಸ್ ಡಿ.ಕೆ. ಶಿವಕುಮಾರ್ ಮಧ್ಯೆ ವಾರ್ ನಡೆಯುತ್ತಿದೆ. ಎಲ್ಲದಕ್ಕೂ ಸಿದ್ದರಾಮಯ್ಯ ಸೂತ್ರಧಾರಿ. ಸಿದ್ದರಾಮಯ್ಯ ಪರ ಎಲ್ಲರೂ ಫೀಲ್ಡಿಗಿಳಿದು ಬ್ಯಾಟ್ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಒಬ್ಬಂಟಿ ಆಗಿದ್ದಾರೆ. ಹಾಗಾಗಿ ಹೈಕಮಾಂಡ್ ಪಾದವೇ ಗತಿ ಅಂತ ಡಿ.ಕೆ. ಶಿವಕುಮಾರ್ ಹೈಕಮಾಂಡ್ ಬಳಿ ಕೂತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಶಾಸಕ ರಮೇಶ್ ಜಾರಕಿಹೊಳಿ ಆಗ್ರಹ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಪಕ್ಷದ ಶಿಸ್ತಿನ ಸಿಪಾಯಿ. ಏನೇ ಇದ್ದರೂ ನಾನು ಪಕ್ಷದ ವೇದಿಕೆಯಲ್ಲೇ ಮಾತಾಡುತ್ತೇನೆ. ಪಕ್ಷದ ವೇದಿಕೆ ಬಿಟ್ಟು ಹೊರಗೆ ಮಾತಾಡುವುದಿಲ್ಲ. ಈಗಾಗಲೇ ನಾನು ಹೈಕಮಾಂಡ್ ಭೇಟಿ ಮಾಡಿ ಏನು ಹೇಳಬೇಕೋ ಹೇಳಿದ್ದೇನೆ. ನಮ್ಮ ಪಕ್ಷದಲ್ಲಿ ಬಹಿರಂಗ ಹೇಳಿಕೆಗಳನ್ನು ಕೊಡುತ್ತಿರುವ ಬಗ್ಗೆ ಹೈಕಮಾಂಡ್ ಗಮನಕ್ಕೆ ಬಂದಿದೆ. ಅವೆಲ್ಲವನ್ನೂ ಹೈಕಮಾಂಡ್ ನವರೇ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವಿಚಾರದ ಬಗ್ಗೆ ಮಾತನಾಡಿದ ಅವರು ವರದಿಗೆ ನಮ್ಮ ವಿರೋಧ ಇಲ್ಲ. ಜಾತಿ ಗಣತಿ ಎಲ್ಲರೂ ಒಪ್ಪುವಂತೆ ಆಗಬೇಕು.ಎಲ್ಲಾ ಮನೆಗಳ ಸಮೀಕ್ಷೆ ಆಗಬೇಕು. ಆದರೆ ಇವರು ಒಕ್ಕಲಿಗರನ್ನು, ಲಿಂಗಾಯತರನ್ನು ಒಡೆದಿದ್ದಾರೆ, ವಿಭಜಿಸಿದ್ದಾರೆ. ಇದೆಲ್ಲಾ ಸಿದ್ದರಾಮಯ್ಯ ಟ್ರಿಕ್ಸ್. ವೈಜ್ಞಾನಿಕವಾಗಿ ಜಾತಿ ಗಣತಿ ಆಗಬೇಕು. ಈಗ ಕೇಂದ್ರದಿಂದಲೂ ಜನಗಣತಿ ಆಗುತ್ತಿದೆ, ಇದರಲ್ಲೇ ಎಲ್ಲವೂ ಬರುತ್ತದೆ. ಹತ್ತು ವರ್ಷ ಸುಮ್ಮನಿದ್ದು ಈಗ ಜಾತಿ ಗಣತಿ ಜಾರಿಗೆ ತರುತ್ತೇವೆ ಅಂದರೆ ಹೇಗೆ?. ಕೇಂದ್ರದ ಜನಗಣತಿಗೂ ಇವರ ಗಣತಿಗೂ ಸಂಘರ್ಷ ಆಗುತ್ತದೆ. ಈಗಾಗಲೇ ಜಾತಿ ಜನಗಣತಿ ವರದಿಯಲ್ಲಿ ಏನಿದೆ ಅಂತ ಎಲ್ಲರಿಗೂ ಗೊತ್ತಾಗಿದೆ. ಸಿದ್ದರಾಮಯ್ಯ ಡಬಲ್ ಗೇಮ್ ಅಷ್ಟೇ ಅಲ್ಲ, ತ್ರಿಬಲ್ ಗೇಮ್ ಗೇಮ್ ಆಡುತ್ತಿದ್ದಾರೆ. ಮುಂದಿನ ಕ್ಯಾಬಿನೆಟ್ ನಲ್ಲಿ ತರುತ್ತೇವೆ ಅಂತಿರುವುದೂ ನಾಟಕವೇ ಎಂದು ತಿಳಿಸಿದ್ದಾರೆ.