ಮನೆ Latest News ಒಳ ಮೀಸಲಾತಿ ಬಗ್ಗೆ ಸರ್ಕಾರಕ್ಕೆ ಬದ್ದತೆ ಇದೆ: ವಿಧಾನಸೌಧದಲ್ಲಿ ಸಚಿವ ಆರ್.ಬಿ ತಿಮ್ಮಾಪುರ್ ಹೇಳಿಕೆ

ಒಳ ಮೀಸಲಾತಿ ಬಗ್ಗೆ ಸರ್ಕಾರಕ್ಕೆ ಬದ್ದತೆ ಇದೆ: ವಿಧಾನಸೌಧದಲ್ಲಿ ಸಚಿವ ಆರ್.ಬಿ ತಿಮ್ಮಾಪುರ್ ಹೇಳಿಕೆ

0

ಬೆಂಗಳೂರು; ಒಳ ಮೀಸಲಾತಿ ಬಗ್ಗೆ ಸರ್ಕಾರಕ್ಕೆ ಬದ್ದತೆ ಇದೆ ಎಂದು ವಿಧಾನಸೌಧದಲ್ಲಿ ಸಚಿವ ಆರ್.ಬಿ ತಿಮ್ಮಾಪುರ್ ಹೇಳಿಕೆ ನೀಡಿದ್ದಾರೆ.

ದಲಿತ ಒಳಮೀಸಲಾತಿ ಜಾರಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು  ಒಳ ಮೀಸಲಾತಿ ಬಗ್ಗೆ ಸರ್ಕಾರಕ್ಕೆ ಬದ್ದತೆ ಇದೆ. ಸರ್ಕಾರ ಜಾರಿ ಮಾಡುತ್ತೆ, ಒಳಪಂಗಡಗಳಲ್ಲಿ ಯಾವುದೇ ಬೇಸರ ಇಲ್ಲ. ನಮ್ಮ ಸಂಪೂರ್ಣ ಸಹಮತ ಇದೆ. ವೈಜ್ಞಾನಿಕವಾಗಿ ಪರಿಶೀಲನೆ ಮಾಡಲಾಗುತ್ತೆ. ಎಷ್ಟೋ ವರ್ಷಗಳಿಂದ ಸಮಾಜಕ್ಕೆ, ಸಮುದಾಯಕ್ಕೆ ಅನ್ಯಾಯ ಆಗ್ತಿದೆ. ಮೂರು ನಾಲ್ಕು ತಿಂಗಳು ತಡೆದುಕೊಂಡು ಇರಬೇಕು, ಸಮಸ್ಯೆ ಏನಿಲ್ಲ ಎಂದ್ರು. ಇನ್ನು  ಯತ್ನಾಳ್ ಉಚ್ಚಾಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ಆ ಪಕ್ಷದ ಕೆಲಸ ಎಂದಿದ್ದಾರೆ.

ಒಳ ಮೀಸಲಾತಿ ಮಾಡುವ ಅಧಿಕಾರ ಸರ್ಕಾರಕ್ಕೆ ಕೋರ್ಟ್ ಕೊಟ್ಟಿದೆ : ವಿಧಾನಸೌಧದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಹೇಳಿಕೆ

ಬೆಂಗಳೂರು: ಒಳ ಮೀಸಲಾತಿ ಮಾಡುವ ಅಧಿಕಾರ ಸರ್ಕಾರಕ್ಕೆ ಕೋರ್ಟ್ ಕೊಟ್ಟಿದೆ  ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.

ಒಳಮೀಸಲಾತಿ ಜಾರಿ ವಿಚಾರದ ಬಗ್ಗೆ ಮಾತನಾಡಿದ ಅವರು  ಒಳ ಮೀಸಲಾತಿ ಮಾಡುವ ಅಧಿಕಾರ ಸರ್ಕಾರಕ್ಕೆ ಕೋರ್ಟ್ ಕೊಟ್ಟಿದೆ. ಬೇರೆ ರಾಜ್ಯಗಳಲ್ಲಿ ಜನರ ದತ್ತಾಂಶದ ಆಧಾರದ ಮೇಲೆ ವರ್ಗೀಕರಣ ಮಾಡಿದ್ದಾರೆ. ಆದಿ ಕರ್ನಾಟಕ ಎಂಬ ಜಾತಿ ಇದೆ. ಎಡ, ಬಲ ಎಂಬ ಜಾತಿಯ ಪ್ರಮಾಣಪತ್ರ ಪಡೆದ್ದರಿಂದ ಗೊಂದಲ ನಿರ್ಮಾಣ ಆಗಿದೆ.  ಜಾತಿಯ ಜನಗಣಿಯೇ ನಡೆಸಿ ಪರಿಶಿಷ್ಟ ಜಾತಿ, ವರ್ಗದವರ ಜಾತಿಗಣತಿ ನಡೆಸಿ. ವರದಿಯಲ್ಲಿ ಏನಿದೆ ಅಂತ ಗೊತ್ತಿಲ್ಲ, ವರದಿ ಸರ್ಕಾರಕ್ಕೆ ಕೊಟ್ಟಿದ್ದಾರೆ ಎಂದು ತಿಳಿಸಿದ್ರು. ಒಳಮೀಸಲಾತಿ ಅನುಷ್ಠಾನ ಆಗುವರೆಗೂ ಬ್ಯಾಕ್ ಲಾಗ್ ಮಾಡುವಂತಿಲ್ಲ. ಒಂದು ವರ್ಷ ವಯೋಮಿತಿ ವಿಸ್ತರಣೆ ಮಾಡಿ ಎಂದ್ರು.

ಎಲ್ಲಾ ವಿಚಾರವೂ ಹೈಕಮಾಂಡ್ ನಾಯಕರಿಗೂ ಹೇಳಿದ್ದೇನೆ: ಸಚಿವ ಸತೀಶ್ ಜಾರಕಿಹೊಳಿ ನವದೆಹಲಿಯಲ್ಲಿ ಹೇಳಿಕೆ

ನವದೆಹಲಿ; ಎಲ್ಲಾ ವಿಚಾರವೂ ಹೈಕಮಾಂಡ್ ನಾಯಕರಿಗೂ ಹೇಳಿದ್ದೇನೆ ಎಂದು ನವದೆಹಲಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನಾಳೆ ಬೆಂಗಳೂರಿನಲ್ಲಿ ಎಲ್ಲವೂ ಹೇಳ್ತಿನಿ. ಎಚ್ ಡಿ ಕೆ ಭೇಟಿ ಕುರಿತು ಖರ್ಗೆ, ಸುಜೇರ್ವಾಲ ಸೇರಿ ಎಲ್ಲವೂ ಹೇಳಿದ್ದೇನೆ. ಖರ್ಗೆ ಅವರಿಗೆ ದೆಹಲಿ ಬೆಳವಣಿಗೆ ಬಗ್ಗೆ ಹೇಳಿದ್ದೇನೆ. ಸಿಎಂ ಬದಲಾವಣೆಯ ಇಲ್ಲ. ಕೆಪಿಸಿಸಿಗೆ ಅಧ್ಯಕ್ಷರೂ ಇದ್ದಾರೆ ಅಲ್ವಾ? ಎಂದಿದ್ದಾರೆ.

ಇನ್ನು  ಕಾಂಗ್ರೆಸ್ ಸಂಸದ ಜಿ.ಸಿ ಚಂದ್ರಶೇಖರ್ ಮಾತನಾಡಿ  ಹೆಚ್ಡಿಕೆ ಕೇಂದ್ರ ಮಂತ್ರಿಯಾಗಿ ಹೆಚ್ಡಿಕೆ ಇರದೆ ಇದ್ದರೆ  ಬೇರೆ ಅರ್ಥ ಬರುತ್ತಿತ್ತು. ಈಗ ಕೇಂದ್ರ ಮಂತ್ರಿಯಾಗಿದ್ದಾರೆ ಹಾಗಾಗಿ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ.  ಮೊಸರಲ್ಲಿ ಕಲ್ಲು ಹುಡುಕುವುದು ಬೇಡ . ಸತೀಶ್ ಜಾರಕಿಹೊಳಿ ನಮ್ಮ ಪಕ್ಷದ ಶಿಸ್ತಿನ ಸಿಪಾಯಿ. ಅಭಿವೃದ್ಧಿ ಬಗ್ಗೆ ಹೆಚ್ಡಿಕೆ ಬಳಿ ಸತೀಶ್ ಮಾತನಾಡಿರ್ತಾರೆ. ನಾವು ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತವೆ. ಎಲ್ಲದರಲ್ಲೂ ತಪ್ಪು ಹುಡುಕಬಾರದು ಎಂದರು.