ಬೆಂಗಳೂರು; ಸರ್ಕಾರವೂ ಕೂಡಾ ಮೈಕ್ರೋ ಫೈನಾನ್ಸ್ ದಂಧೆಯನ್ನೇ ಮಾಡುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು ಮೈಕ್ರೋ ಫೈನಾನ್ಸ್ ಕುರಿತು ಸುಗ್ರೀವಾಜ್ಞೆ ಹೊರಡಿಸಿದರೂ ಕೂಡಾ ಮನೆಗೆ ನುಗ್ಗಿ ವಸ್ತುಗಳನ್ನು ಎತ್ತಿಕೊಂಡು ಹೋಗುತ್ತಿದ್ದಾರೆ.ಸರ್ಕಾರವೂ ಕೂಡಾ ಮೈಕ್ರೋ ಫೈನಾನ್ಸ್ ದಂಧೆಯನ್ನೇ ಮಾಡುತ್ತಿದೆ.ಇಂದು ಗ್ಯಾರಂಟಿ ಕೊಡುವುದು, ನಾಲ್ಕು ವಸ್ತುಗಳ ಬೆಲೆ ಏರಿಸುವುದು ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಆರ್ ಎಸ್ ಎಸ್ ನವರು ಬುರ್ಖಾ ಧರಿಸಿ ಬಂದು ಕಲ್ಲು ತೂರಾಟ ಮಾಡಿದ್ದಾರೆ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ಇದನ್ನು ಮಾನ್ಯ ಹರಿಪ್ರಸಾದ್ ಸಾಬೀತು ಮಾಡಬೇಕು.ಹಿಂದೂಗಳು ಆ ರೀತಿ ಮಾಡಿದ್ದೇ ಆದರೆ ನಿಮ್ಮ ಸರ್ಕಾರ ಇದೆ ಅಲ್ವಾ ಬುರ್ಖಾ ನಿಷೇಧ ಮಾಡಿಬಿಡಿ.ಲಕ್ಷ್ಮಣ ಅಂತಾ ಕಾಂಗ್ರೆಸ್ ವಕ್ತಾರ ಅಸಂಬದ್ಧ ಹೇಳಿಕೆ ಕೊಡುತ್ತಾರೆ.300 ಜನ ಮುಸ್ಲಿಮರ ವೇಷ ಧರಿಸಿ ಬಂದಿದ್ದರು ಅಂತಾ ಹೇಳಿದ್ದಾರೆ.ಸರ್ಕಾರ ಇದಕ್ಕೆ ತಕ್ಷಣ ಉತ್ತರ ಕೊಡಬೇಕು.300 ಜನ ಬಂದವರು ಯಾರು, ಆರ್ ಎಸ್ ನವರಾ, ಹಿಂದೂಗಳಾ, ಬಿಜೆಪಿಯವರಾ ಅಂತಾ ಸರ್ಕಾರ ತನಿಖೆ ಮಾಡಿ ಹೇಳಬೇಕು. ಒಂದು ವೇಳೆ ಹೇಳಲಿಲ್ಲ ಅಂತಾದರೆ ಆ ಲಕ್ಷ್ಮಣ ನನ್ನು ತಕ್ಷಣ ಅರೆಸ್ಟ್ ಮಾಡಿ ಜೈಲಿನಲ್ಲಿ ಇಡಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಿದ್ದಾರ್ಥ ವಿಹಾರ ಟ್ರಸ್ಟ್ ಗೆ ನೋಟೀಸ್ ವಿಚಾರದ ಬಗ್ಗೆ ಮಾತನಾಡಿದ ಅವರು ಪಾರ್ಕ್ ಗೆ ಇಟ್ಟಿದ್ದ ಜಾಗವನ್ನು ಬೇರೆ ಉದ್ದೇಶಕ್ಕೆ ಪರಿವರ್ತನೆ ಮಾಡಿ ಕೊಡಿ ಎಂದು ಕೇಳಿರುವುದನ್ನು ಗಮನಿಸಿದ್ದೇನೆ.ಕಾನೂನಿನ ಪ್ರಕಾರ ಆ ರೀತಿ ಮಾಡಲು ಬರುವುದಿಲ್ಲ.ಸರ್ಕಾರ ಕೊಟ್ಟರೆ ತಪ್ಪುಅಗುತ್ತದೆ, ಕೋರ್ಟ್ ಗೆ ಎಳೆಯಬಹುದು ಎಂದ್ರು. ಸರ್ಕಾರ ನಮಗೆ ಗ್ಯಾರಂಟಿ ಹಣ ತಲುಪಿಸಿಲ್ಲ ಎಂಬ ಕಾರಣಕ್ಕೆ ಪ್ರಚಾರದಲ್ಲಿದೆ.ಅಧಿಕಾರಕ್ಕಾಗಿ ಕಚ್ಚಾಟ, ಗುಂಪುಗಾರಿಕೆಯಿಂದ ಸರ್ಕಾರ ಪ್ರಚಾರದಲ್ಲಿದೆ. ಬೆಟ್ಟಿಂಗ್ ನಿಂದ ಇಂದು ಮೂರು ಜನರ ಸಾವಾಗಿದೆ.ಆನ್ ಲೈನ್ ಬೆಟ್ಟಿಂಗ್ ದಂಧೆ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಸರ್ಕಾರಕ್ಕೆ ಈ ಬಗ್ಗೆ ಗಮನ ಹರಿಸಲು ಸಮಯವೇ ಇಲ್ಲ. ಸರ್ಕಾರ ನಡೆಸುವವರೇ ಈ ದಂಧೆಯಲ್ಲಿ ಪಾಲುದಾರರು ಎಂದು ಬಹಳ ಜನ ಮಾತಾಡುತ್ತಿದ್ದಾರೆ.
ಗುರುಮಿಠಕಲ್ ನಲ್ಲಿ ಅಲೆಮಾರಿ ಸಮುದಾಯದ ಇಬ್ಬರು ಹೆಣ್ಣು ಮಕ್ಕಳು ಅಸುನೀಗಿದ್ದಾರೆ.ಯಾವ ಕಾರಣಕ್ಕೆ ಅಂತಾ ಗೊತ್ತಿಲ್ಲ.ಅದು ಮರ್ಡರ್ ಅಂತಾ ಸುದ್ದಿ ಬರುತ್ತಿದೆ.ಸರ್ಕಾರ ಜನರ ಪ್ರಾಣ, ಮಾನದ ವಿಚಾರದಲ್ಲಿ ಆಟ ಆಡುತ್ತಿದೆ.ಇಬ್ಬರು ಹೆಣ್ಣು ಮಕ್ಕಳ ಪ್ರಾಣ ಯಾಕೆ ಹೋಯಿತು ಅಂತಾ ತನಿಖೆ ಆಗಬೇಕು.ಅದನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ.ಮುಸಲ್ಮಾನ ಹುಡುಗರು ಇವರ ಸಾವಿಗೆ ಕಾರಣ ಎಂಬ ಅನುಮಾನ ಕೂಡಾ ಬಂದಿದೆ.ಈ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಮದ್ಯದಂಗಡಿ ಹರಾಜಿಗೆ ಸರ್ಕಾರ ಮುಂದಾಗುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಹಣ ಇಲ್ಲ ಅಂದರೆ ಇಂತಹ ವಾಮಮಾರ್ಗಗಳನ್ನೇ ಹಿಡಿಯಬೇಕು.ಇಲ್ಲಾ ಅಂದರೆ ಇದೆಲ್ಲಾ ಮಾಡುವುದಕ್ಕಿಂತ ಸಿಎಂ ಅವರಿಂದ ಹಿಡಿದು ಮಂತ್ರಿಗಳು ಅವೆನ್ಯೂ ರಸ್ತೆಯಲ್ಲೋ, ಶಿವಾಜಿನಗರಕ್ಕೋ ಹೋಗಿ ಭಿಕ್ಷೆ ಬೇಡುವುದು ಒಳ್ಳೆಯದು ಎಂದರು.