ಬೆಂಗಳೂರು; ಸಂವಿಧಾನದಲ್ಲಿ ಧರ್ಮಾಧಾರಿತವಾಗಿ ಮೀಸಲಾತಿ ಕೊಡುವಂತಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಮುಸ್ಲಿಂಮರಿಗೆ ಮೀಸಲಾತಿ ಕೊಟ್ಟಿರೋ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಬಂದ್ಮೆಲೆ ಮುಸ್ಲಿಂಮರ ಒಲೈಕೆ ನಡಿತಿದೆ. ದಲಿತರ ಜೀವನ ಮಟ್ಟ ಸುಧಾರಿಸಬೇಕು ಎಂದು ಸಂವಿಧಾನದ ಮೂಲಕ ಶಕ್ತಿ ತುಂಬಲಾಯ್ತು. ಆದ್ರೆ ಈ ಸರ್ಕಾರ ಮುಸ್ಲಿಂಮರಿಗೆ 4% ಗುತ್ತಿಗೆ ಮೂಲಕ ಮೀಸಲು ನೀಡಿದೆ. ಸಂವಿಧಾನದಲ್ಲಿ ಧರ್ಮಾಧಾರಿತವಾಗಿ ಮೀಸಲಾತಿ ಕೊಡುವಂತಿಲ್ಲ. ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಮೀಸಲಾತಿ ತರಲಾಗಿದೆ. ಮುಸ್ಲಿಂಮರಿಗೆ ಎಲ್ಲಾ ಸೌಲಭ್ಯ ಕೊಡ್ತಿವಿ ಅಂತಿದೆ. ವಿಧಾನಸೌಧದ ಒಳಗೆ ಹೊರಗೆ ಹೋರಾಟ ಮಾಡ್ತಿವಿ ಎಂದು ಎಚ್ಚರಿಸಿದ್ದಾರೆ.
ಸಂವಿಧಾನ ವಿರೋಧಿ ನಡೆಯ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡ್ತಿದ್ದಾರೆ ಎಂದ ಅವರು ರನ್ಯಾ ರಾವ್ ಕೇಸನಲ್ಲಿನ ಸಚಿವರ ಹೆಸರು ಬಹಿರಂಗಗೊಳಿಸೋ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಮಂತ್ರಿಗಳು ಇದ್ದಾರಾ ಇಲ್ವೋ ಅಂತ ಉತ್ತರ ಕೊಡಬೇಕಿತ್ತು. ಸರ್ಕಾರ ಇನ್ನು ಉತ್ತರ ಕೊಟ್ಟಿಲ್ಲ. ಯತ್ನಾಳ್ ಘೋಷಣೆ ಮಾಡ್ತಿವಿ ಎಂದಿರೋ ವಿಚಾರ ಬೆಳಿಗ್ಗೆ ಗೊತ್ತಾಯ್ತು. ಅವರ ಜೊತೆ ನಾನು ಮಾತಾಡ್ತಿನಿ ಎಂದು ಆರ್ ಆಶೋಕ್ ಹೇಳಿದ್ದಾರೆ.
ಯತ್ನಾಳ್ ಅವರ ಬಾಯಲ್ಲಿ ಬರುವ ಮಾತು ಸರಿಯಿಲ್ಲ; ಸಚಿವ ಮಧುಬಂಗಾರಪ್ಪ ಹೇಳಿಕೆ
ಬೆಂಗಳೂರು; ಯತ್ನಾಳ್ ಅವರ ಬಾಯಲ್ಲಿ ಬರುವ ಮಾತು ಸರಿಯಿಲ್ಲ ಎಂದು ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ. ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವರನ್ನ ರಿವೀಲ್ ಮಾಡ್ತೇನೆಂಬ ಯತ್ನಾಳ್ ಹೇಳಿಕೆಗೆ ರಿಯ್ಯಾಕ್ಟ್ ಮಾಡಿ ಮೊದಲು ಯತ್ನಾಳ್ ಅವರ ಬಳಿ ಹೆಸರು ರಿವೀಲ್ ಮಾಡೋಕೆ ಹೇಳಿ ಎಂದಿದ್ದಾರೆ. ಯಾರಿದ್ದಾರೆ ಅನ್ನೋದು ಬರಲಿ. ಅದಕ್ಕೆ ನಾವೇನು ಹೆದರಬೇಕಿಲ್ಲ. ಯತ್ನಾಳ್ ಮಾತನಾಡೋದು ಸರಿಯಿಲ್ಲ. ಅವರ ಬಾಯಲ್ಲಿ ಬರುವ ಮಾತು ಸರಿ ಇರಲ್ಲ ಎಂದಿದ್ದಾರೆ.ಅದನ್ನ ನೀವು ಹಾಕ್ತೀರಲ್ಲ. ಬರಲಿ ನಾವು ಫೇಸ್ ಮಾಡ್ತೇವೆ.ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಬಿಜೆಪಿ ಮಾನಸಿಕ ಸಂತುಲನ ಕಳೆದುಕೊಂಡಿದೆ: ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
ಬೆಂಗಳೂರು; ರಾಜ್ಯ ಬಿಜೆಪಿ ಮಾನಸಿಕ ಸಂತುಲನ ಕಳೆದುಕೊಂಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಪಕ್ಷದಲ್ಲಿ ನಡಯುತ್ತಿರುವ ಆಂತರಿಕ ಜಿಹಾದ್ ನಿಂದ ಅದೇ ಮಾತು ಹೊರ ಹಾಕ್ತಿದ್ದಾರೆ.ಮೈ ಮೇಲೆ ದೆವ್ವ ಬಂದಂತೆ ಇವರಿಗೂ ದೆವ್ವ ಮೈಮೇಲೆ ಬಂದಿದೆ. ಪಾಕಿಸ್ತಾನ್ ಜಿಹಾದು ಅದೂ ಇದೂ ಅಂತ ಮಾತನಾಡ್ತಾರೆ. ಬಿಜೆಪಿಯವರು ಮಾತ್ರ ಇದನ್ನು ಹಲಾಲ್ ಬಜೆಟ್ ಅಂತಿದ್ದಾರೆ. ೪.೦೯ ಲಕ್ಷ ಕೋಟಿ ಬಜೆಟ್ ನಲ್ಲಿ ೪೫೦೦ ಕೋಟಿ ಮಾತ್ರ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದ್ದೇವೆ. ಅಲ್ಪಸಂಖ್ಯಾತರ ವರ್ಗದಲ್ಲಿ ಬುದ್ದಿಸ್ಟ್ ಜೈನ್ಸ್ ಕ್ರಿಶ್ಚಿಯನ್ ಎಲ್ಲರು ಬರ್ತಾರೆ. ಎಸ್ಸಿಪಿ ಟಿಎಸ್ಪಿ ನಾವು ೪೨ ಸಾವಿರ ಕೋಟಿ ಮೀಸಲಿಟ್ಡಿದ್ದು ಅವರಿಗೆ ಕಾಣ್ಸಿಲ್ಲ.ಉಳಿದ ಹಂಚಿಕೆ ಯಾವುದೂ ಕೂಡ ಅವರಿಗೆ ಕಾಣಿಸಿಲ್ಲ. ಹಲಾಲ್ ಬಜೆಟ್ ಅಂತ ರಾಜ್ಯದ ಜನರಿಗೆ ಅವಮಾನ ಮಾಡ್ತಿದ್ದಾರೆ ಎಂದಿದ್ದಾರೆ.
ಪಕ್ಕದ ರಾಜ್ಯದಲ್ಲಿ ಯಾರ ಸರ್ಕಾರ ಇರೋದು? ಡಬಲ್ ಇಂಜಿನ್ ಸರ್ಕಾರ ಅಲ್ವಾ ಮಹಾರಾಷ್ಟ್ರದಲ್ಲಿ.ಮಹಾರಾಷ್ಟ್ರ ಸರ್ಕಾರ ಮದರಸಾ ಸಂಬಳವನ್ನು ಮೂರು ಪಟ್ಟು ಹೆಚ್ಚಳ ಮಾಡಿದ್ದಾರೆ. ಹಾಗಾದ್ರೆ ಮೋದಿಯವರು ಕೂಡ ದೇಶದ್ರೋಹಿನಾ? ಎಂದು ಪ್ರಶ್ನೆ ಮಾಡಿದ್ದಾರೆ. ಕೇಂದ್ರದಲ್ಲಿ ಅಲ್ಪಸಂಖ್ಯಾತ ಸಚಿವಾಲಯ ಯಾಕೆ ಇರಬೇಕು?. ನಿನ್ನೆಯಿಂದ ಸರ್ಕಾರಿ ಜಿಹಾದ್ ಅಂತ ಶುರು ಮಾಡಿದ್ದಾರೆ. ಗುತ್ತಿಗೆಯಲ್ಲಿ ೨ಬಿ ಯವರಿಗೆ ಮೀಸಲಾತಿ ವಿಸ್ತರಣೆ ಮಾಡಲಾಗಿದೆ .ಕ್ಯಾಟಗರಿ ೧ ರಲ್ಲಿ ೯೫ ಜಾತಿಗಳು ಬರುತ್ತವೆ. ಕ್ಯಾಟಗರಿ ೨ಎ ಯಲ್ಲಿ ೧೦೨ ಜಾತಿಗಳಿಗೆ ಮೀಸಲಾತಿ ಸಿಗುತ್ತದೆ. ಈಗ ಕ್ಯಾಟಗರಿ ೨ಬಿ ಗೆ ಮೀಸಲಾತಿ ವಿಸ್ತರಣೆ ಮಾಡ್ತಿದ್ದೇವೆ. ಬಿಜೆಪಿಯವರಿಗೆ ಕಾನೂನಿನ ಅರಿವು ಏನಾದರೂ ಇದೆಯಾ? . ಜಮಾಲ್ ಸಿದ್ದಿಕ್ಕಿ ಬಿಜೆಪಿ ಮೈನಾರಿಟಿ ಮೋರ್ಚಾ ಅಧ್ಯಕ್ಷರು.ನೀವು ಹಾಗಾದ್ರೆ ಮೈನಾರಿಟಿ ಮೋರ್ಚಾ ಯಾಕೆ ಪ್ರಾರಂಭ ಮಾಡಿದ್ದೀರಿ? ಎಂದು ಮರುಪ್ರಶ್ನೆ ಹಾಕಿದ್ದಾರೆ.
ಪ್ರತಿ ದಿನ ರಂಜಾನ್ ಮಾಸದಲ್ಲಿ ಮೋದಿ ಕಡೆಯಿಂದ ೩೨ ಲಕ್ಷ ರಂಜಾನ್ ಕಿಟ್ ಕೊಡ್ತೀವಿ ಅಂದಿದ್ದಾರೆ.ಇದು ಬಿಜೆಪಿಯ ಓಲೈಕೆ ಅಲ್ವಾ?. ರೇಣುಕಾಚಾರ್ಯ ವಿಜಯೇಂದ್ರ ಯತ್ನಾಳ್ ಎಲ್ಲರೂ ಟೋಪಿ ಹಾಕಿಕೊಂಡು ಮಸೀದಿ ಮುಂದೆ ನಿಲ್ಲಬೇಕಾಗುತ್ತದೆ. ಹಿಂದೂಗಳು ಉಳಿಬೇಕು ಅಂತ ಮೊನ್ನೆ ಏನೇನೋ ಘೋಷಣೆ ಮಾಡಿದ್ದೀರಾ ಕುಂಭಮೇಳ ಮಾಡಿದ್ದೀರಾ. ಯುಪಿ ಬಿಹಾರದಲ್ಲಿ ೩೦ ಕ್ಕೂ ಹೆಚ್ಚಿ ಮುಸ್ಲಿಂ ಉಪಜಾತಿಗಳನ್ನು ಓಬಿಸಿ ಅಡಿ ತಂದಿದ್ದೀರಿ. ಬುಲ್ಡೋಜರ್ ಬಾಬಾನ ರಾಜ್ಯದಲ್ಲಿ ಏನಾಗ್ತಾ ಇದೆ? ಯುಪಿಯ ಬಜೆಟ್ ನ ಬಹುತೇಕ ಸ್ಕೀಂಗಳು ಮುಸ್ಲೀಮರಿಗೇ ಹೋಗ್ತಾ ಇದೆ. ನೀವು ಇದನ್ನೇ ಮಾಡಿದ್ರೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್. ನಾವು ಮಾಡಿದ್ರೆ ಪಾಕಿಸ್ತಾನ್ ಕಟ್ಟುತ್ತಾ ಇದೀವಾ? ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಶಾದಿ ಶಗುನ್ ಸ್ಕೀಂ ಮಾಡಿದ್ದು ಯುಪಿಯಲ್ಲಿ. ಮೋದಿಯವರು ಅಜ್ಮೇರ್ ದರ್ಗಾಗೆ ಛಾದರ್ ಕಳಿಸ್ತಾರೆ ಅದು ಸರಿಯಾ?.ದೊಡ್ಡ ದೊಡ್ಡ ಶೇಖ್ ಗಳನ್ನು ಮೋದಿ ತಮ್ಮ ಬ್ರದರ್ ಅಂತ ಕರಿತಾರೆ. ಇವರು ಮಾಡಿದ್ರೆ ಬ್ರದರ್ ಅಂತಾರೆ? ಇದೇ ಮೋದಿಯವರು ಆಹ್ವಾನ ಇಲ್ಲದೇ ಪಾಕಿಸ್ತಾನಕ್ಕೆ ಹೋಗಿದ್ರು. ನವಾಜ್ ಶರೀಫ್ ಬರ್ತ್ ಡೇಗೆ ಹೋಗಿ ವೆಜ್ ಬಿರಿಯಾನಿ ತಿಂದು ಬಂದಿದ್ರು. ಇದು ಮೋದಿಯವರ ಕಥೆ?. ನವಾಜ್ ಶರೀಫ್ ಕರೆದೇ ಇಲ್ಲ ಅಲ್ಲಿಗೆ ಹೋಗಿದ್ರು ಎಂದಿದ್ದಾರೆ.
ಕೇಂದ್ರ ಸರ್ಕಾರ ನಿಮ್ಮದೇ ನಡೆಯುತ್ತಿದೆ. ಮುಸ್ಲಿಂರು ದೇಶದ ನಾಗರೀಕರೇ ಅಲ್ಲ ಅಂತ ಡಿಕ್ಲೆರ್ ಮಾಡಿ ನೋಡೋಣ. ಆಗತ್ತಾ ನಿಮ್ಮ ಕೈಲಿ?. ಅವರು ಮನುಷ್ಯರಲ್ವಾ? .ಗಡಿಯಲ್ಲಿ ಯಾಕೆ ಸರಿಯಾದ ರಕ್ಷಣೆ ಮಾಡ್ತಿಲ್ಲ.ಅಕ್ರಮ ಬಾಂಗ್ಲಾದವರು ಬರೋದು ಬೇರೆ ಬೇರೆ ರಾಜ್ಯ ದಾಟಿಯೇ ತಾನೆ?. ಗಡಿಯನ್ನು ಕಾಯುವುದು ಪರಮೇಶ್ವರ್ ಅವರ ಕೆಲಸಾನಾ?. ಪಾಕಿಸ್ತಾನ ಅಪಘಾನಿಸ್ತಾನ ಬಾಂಗ್ಲಾ ದಿಂದ ಅಕ್ರಮ ವಲಸಿಗರು ಬರೋದನ್ನು ಕೇಂದ್ರ ಯಾಕೆ ತಡೆಯುತ್ತಿಲ್ಲ?. ಐಪಿಎಲ್ ಮ್ಯಾಚ್ ಬರ್ತಾ ಇದೆ, ಹಿಂದೆ ಐಪಿಎಲ್ ದುಬೈ ನಲ್ಲಿ ಆಡಿಸಿದ್ರಿ ಯಾಕೆ?.ಅಮಿತ್ ಶಾ ಮಗ ಇದ್ದ ಅಂತ ದುಬೈ ನಡೆಯುತ್ತದೆ ನಿಮಗೆ.ಯತ್ನಾಳ್ ಅವರು ದುಬೈನಲ್ಲಿ ವಿಜಯೇಂದ್ರದು ಬೇಕಾದಷ್ಟು ಅಕೌಂಟ್ ಇದೆ ಅಂತ ಹೇಳಿದ್ರು.ಪದೇ ಪದೇ ಬೌದ್ದಿಕ ದಿವಾಳಿತನ ಬಿಜೆಪಿ ಪ್ರದರ್ಶನ ಮಾಡ್ತಾ ಇದೆ ಎಂದ್ರು.
ಬಿಜೆಪಿಯ ಒಳಗೇ ಜಿಹಾದ್ ನಡೆಯುತ್ತಿದೆ. ಯತ್ನಾಳ್ ಝಟಕಾ ಕಟ್ ಕೊಟ್ಟರೆ ರೇಣುಕಾಚಾರ್ಯ ಹಲಾಲ್ ಕಟ್ ಕೊಡ್ತಾ ಇದಾರೆ.ಬಿಜೆಪಿಯವರಿಗೆ ಮೀಸಲಾತಿ ವಿಚಾರ ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತಾರೋ ಅಷ್ಟು ಒಳ್ಳೆಯದು. ಕೇವಲ ಕೆಂಪು ಕೋಟೆ ಮೇಲೆ ನಿಂತು ಮಾತನಾಡುವುದರಿಂದ ಸಬ್ ಕಾ ವಿಕಾಸ್ ಆಗುವುದಿಲ್ಲ.ಬರ ರೈತರು ಯೋಜನೆ ಗಳು ಈ ಬಗ್ಗೆ ಮಾತಾಡಿ ಬಿಜೆಪಿಯವರು. ಸುಮ್ಮನೆ ಸದನವನ್ನು ತಪ್ಪು ದಾರಿಗೆ ಎಳೆದು ಜನರನ್ನೂ ದಾರಿ ತಪ್ಪಿಸಬೇಡಿ. ಜಂಟಿಯಾಗಿ ಕೇಂದ್ರದ ವಿರುದ್ದ ಹೋರಾಟ ಮಾಡೋಣ ಎಂದಿದ್ದಾರೆ.