ಮನೆ Latest News ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಸೀಮಿತ ಅಲ್ಲ, ಆ ತರಹ ಯಾರು ಹೇಳಿಕೆ ನೀಡಿಲ್ಲ; ಸಚಿವ ಪ್ರಿಯಾಂಕ್...

ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಸೀಮಿತ ಅಲ್ಲ, ಆ ತರಹ ಯಾರು ಹೇಳಿಕೆ ನೀಡಿಲ್ಲ; ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

0

ಬೆಂಗಳೂರು; ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಸೀಮಿತ ಅಲ್ಲ, ಆ ತರಹ ಯಾರು ಹೇಳಿಕೆ ನೀಡಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸಿಎಂ, ಡಿಸಿಎಂ ನೇರ ಹೊಣೆ ಎಂಬ ಬಿಜೆಪಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಸೀಮಿತ ಅಲ್ಲ. ಆ ತರಹ ಯಾರು ಹೇಳಿಕೆ ನೀಡಿಲ್ಲ. ಖಾಸಗಿ ಕಾರ್ಯಕ್ರಮ ಆಗಿರೋದ್ರಿಂದ ಜವಾಬ್ದಾರಿ ತೆಗೆದುಕೊಳ್ಳಲು ಆಗಲ್ಲ ಎಂದಿದ್ದಾರೆ. ಆದ್ರೆ ಸಿಎಂ ಹೇಳಿಕೆ ತಪ್ಪಾಗಿ ಅರ್ಥೈಸಲಾಗುತ್ತದೆ. ಅದನ್ನು ಬೇರೆ ರೀತಿ ತಿರುಚುವದರಲ್ಲಿ ನಿಸ್ಸೀಮರು. ಸುಳ್ಳು ಸತ್ಯ ಮಾಡ್ತಾರೆ, ಸತ್ಯ ಸುಳ್ಳು ಮಾಡ್ತಾರೆ. ಬಿಜೆಪಿಯವರಿಗೆ ಅದು ಬಿಟ್ಟು ‌ಬೇರೆ ಕೆಲಸ ಅವರಿಗಿಲ್ಲ ಎಂದಿದ್ದಾರೆ.

ಸಿಎಂ, ಡಿಸಿಎಂ ದೆಹಲಿ ಪ್ರವಾಸ ವಿಚಾರದ ಬಗ್ಗೆ ಮಾತನಾಡಿ ಯಾಕೆ ಹೋಗಿದ್ದಾರೆ ಎನ್ನೋ ಮಾಹಿತಿ ನನಗೆ ಇಲ್ಲ. ಆರ್‌ಸಿಬಿ ವಿಚಾರದ ವಿವರಣೆ ನೀಡಲು ಭೇಟಿ ನೀಡಿರಬಹುದು. ಸಚಿವ ಸಂಪುಟ ಪುನರ್ ರಚನೆ ಬಗ್ಗೆಯೂ ಮಾಹಿತಿ ಇಲ್ಲ ಎಂದ್ರು. ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರ ಮನೆಗೆ ಅಶೋಕ್ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಹೋಗಲಿ, ಭೇಟಿ ನೀಡಲಿ, ಆದ್ರೆ ರಾಜಕೀಯ ಮಾಡಬೇಡಿ.ಇಷ್ಟು ದಿನ ಹೋಗದೇ ಈಗ ಹೋಗಿ ರಾಜಕೀಯ ಮಾಡೋಕೆ ಹೋಗಬೇಡಿ ಎಂದು ಹೇಳಿದ್ದಾರೆ.

ವಿಧಾನಸೌಧ ಮೆಟ್ಟಿಲುಗಳಿಗೆ ಸಿಎಂ ಸೀಮಿತ ಅಲ್ಲ. ನಾವ್ಯಾರು ಕೂಡ ಅದನ್ನು ಹೇಳಿಯೂ ಇಲ್ಲ.ಬಹಳ ಸ್ಪಷ್ಟವಾಗಿ ಮುಖ್ಯಮಂತ್ರಿಗಳು ಹೇಳಿದ್ದು ಖಾಸಗಿ ಕಾರ್ಯಕ್ರಮಗಳ ಆಯೋಜನೆ ಮಾಡುವಾಗ ಅವರು ಪತ್ರಗಳು ಕೊಟ್ಟರೆ ಭದ್ರತೆ ಕೊಡುವುದು ಸಿಬ್ಬಂದಿ ಜವಾಬ್ದಾರಿ ಅಷ್ಟೇ ಎಂದು ಹೇಳಿದ್ದಾರೆ. ಕಾನೂನು ವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಅಲ್ಲ ಎಂದು ಸಿಎಂ ಹೇಳಿಲ್ಲ . ಇದನ್ನು ತಿರುಚಿ ಬೇರೆ ರೀತಿಯಾಗಿ ಬಿಂಬಿಸುವುದು ತಪ್ಪಾಗುತ್ತದೆ. ಬಿಜೆಪಿಯವರು ಇದರಲ್ಲಿ ನಿಪುಣರು ಅಲ್ವಾ? . ಮಾತನ್ನು ತಿರುಚುವುದರಲ್ಲಿ ಸುಳ್ಳು ಹೇಳುವುದರಲ್ಲಿ ಸುಳ್ಳನ್ನು ಸತ್ಯ ಮಾಡುವುದರಲ್ಲಿ ಸತ್ಯವನ್ನು ಸುಳ್ಳು ಮಾಡುವುದರಲ್ಲಿ ಪಿಎಚ್ಡಿ ಪಡೆದಿದ್ದಾರೆ ಬಿಜೆಪಿಯವರು  ಅದನ್ನೇ ಈಗಲೂ ಪ್ರಯತ್ನ ಮಾಡುತ್ತಿದ್ದಾರೆ ಅಷ್ಟೇ ಎಂದಿದ್ದಾರೆ.

ಮೇಜೆಸ್ತ್ರಿಯಲ್ ಎನ್ಕ್ವೈರಿ ನಡೆದಿದೆ. ತನಿಖಾ ವರದಿ ನೋಡಿಕೊಂಡು ನಾವು ಕ್ರಮ ಕೈಗೊಳ್ಳುತ್ತೇವೆ.ಇದನ್ನು ಹೊರತು ಪಡಿಸಿ ಏನು ಮಾಡಬಹುದು ಹೇಳಿ?. ಪದೇ ಪದೇ ರಾಜೀನಾಮೆ ಕೊಡಬೇಕು ರಾಜೀನಾಮೆ ಕೊಡಬೇಕು ಅಂತ ಬಿಜೆಪಿಯವರು ಹೇಳಿದರೆ ಎಲ್ಲರಿಗೂ ಒಂದೇ ಮಾನದಂಡ ಇರಲಿ. ಮುಂಬೈನಲ್ಲಿ ಸಿಮಿಲರ್ ಸಿಚುಯೇಷನ್ ನಿಂದ ಐದು ಮಂದಿ ಸಾವನ್ನಪ್ಪಿದರು. ಅಲ್ಲಿ ಮಹಾರಾಷ್ಟ್ರ ಸಿಎಂ ಡಿಸಿಎಂ ರಾಜೀನಾಮೆ ಕೊಟ್ಟರಾ?.ಇವರು ಯಾರಾದರೂ ಮಹಾರಾಷ್ಟ್ರ ನಾಯಕರ ರಾಜೀನಾಮೆ ಕೇಳಿದರಾ?. ವಿಷಯ ಗೊತ್ತಾದ ತಕ್ಷಣವೇ ನಾವು ಎಲ್ಲವನ್ನೂ ಮಾಡಿದ್ದೇವೆ. ಯೋಗಿ ಅದಿತ್ಯನಾಥ್ ಸರ್ಕಾರಕ್ಕೆ ಕೋರ್ಟ್ ಛೀಮಾರಿ ಹಾಕಿಲ್ವಾ?. ಕುಂಭಮೇಳದಲ್ಲಿ ಮೃತಪಟ್ಟವರಿಗೆ ಇನ್ನೂ ಪರಿಹಾರವನ್ನೇ‌ ಕೊಟ್ಟಿಲ್ಲ. ಅವರಿಗೊಂದು ಮಾನದಂಡ ನಮಗೊಂದು ಮಾನದಂಡಾನಾ?.ಬಿಜೆಪಿ ಸರ್ಕಾರ ಇದ್ರೆ ಒಂದು ಮಾನದಂಡ ಕಾಂಗ್ರೆಸ್ ಸರ್ಕಾರ ಇದ್ರೆ ಒಂದು ಮಾನದಂಡ ನಾ? ಬಿಜೆಪಿ ಮುಖ್ಯಮಂತ್ರಿಗಳು ಯಾರಾದರೂ ರಾಜೀನಾಮೆ ಕೊಟ್ಟು ಕೇಳಿದರೆ ಅದಕ್ಕೊಂದು ನೈತಿಕತೆ ಇದೆ. ನಮಗಿಂತ ಘೋರ ಅಪರಾಧಗಳನ್ನು ಬಿಜೆಪಿ ಮಾಡಿದೆ. ಇವರು ನಮಗೆ ನೀತಿ ಪಾಠ ಹೇಳಕ್ಕೆ ಬರ್ತಾರೆ.ಲೋಪಗಳಾಗಿದಾವೆ ಎಂಬುದನ್ನ ಜವಾಬ್ದಾರಿಯಿಂದ ಒಪ್ಪಿಕೊಂಡಿದ್ದೇವೆ.ಅದನ್ನು ಸರಿಪಡಿಸುವುದು ಕೂಡ ನಮ್ಮ ಕೆಲಸ ಎಂದು ಹೇಳುತ್ತಿದ್ದೇವಲ್ಲ. ಮೈಗೆ ಎಣ್ಣೆ ಹಚ್ಚಿಕೊಂಡು ಯಾವುದೇ ಪ್ರಶ್ನೆಗೆ ಜಾರಿಕೊಂಡು ಹೋಗುತ್ತಿಲ್ಲ. ನಮ್ದು ಅತ್ಯಂತ ಪ್ರಭುದ್ದ ಸರ್ಕಾರ ಜವಾಬ್ದಾರಿಯುತ ಸರ್ಕಾರ. ಎಲ್ಲವನ್ನು ಜವಾಬ್ದಾರಿಯಿಂದಲೇ ನಿರ್ವಹಿಸುತ್ತಿದ್ದೇವೆ. ಬಿಜೆಪಿಯವರ ತರಹ ಹೇಡಿಗಳಂತೆ ಓಡಿ ಹೋಗಿ ಎಲ್ಲೆಲ್ಲೋ ಕುಳಿತುಕೊಳ್ಳುತ್ತಿಲ್ಲ ಎಂದಿದ್ದಾರೆ.

ಆರ್‌ಸಿಬಿ ಫ್ಯಾನ್ ಮೃತಪಟ್ಟವರ ಮನೆಗೆ ಅಶೋಕ್ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ನಿಜವಾಗಿ ಅವರ ಬಗ್ಗೆ ತಮ್ಮ ಮನಸ್ಸಲ್ಲಿ ಕಳಕಳಿ ಇದೆಯಾ?. ಅಥವಾ ಕೇವಲ ರಾಜಕೀಯ ಮಾಡಲು ಹೋಗ್ತಿದ್ದೀರಾ ಯೋಚನೆ ಮಾಡಿ. ಅವರು ವಿಪಕ್ಷ ನಾಯಕರು ಸ್ವತಂತ್ರು ಎಲ್ಲಿಗೆ ಬೇಕಾದರೂ ಹೋಗಲಿ. ಆದರೆ ಇದರಲ್ಲಿ ರಾಜಕೀಯ ಮಾಡುವುದು ಬೇಡ ಎಂದಿದ್ದಾರೆ.