ಬೆಂಗಳೂರು; ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಕೇಂದ್ರ ನಿರಾಕರಣೆ ಮಾಡಿದ್ದು ಒಳ್ಳೆಯ ಸುದ್ದಿ ಎಂದು ವಿಧಾನಸೌಧದಲ್ಲಿ ಶಾಸಕ ಡಾ.ಸಿ. ಎನ್ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಕೇಂದ್ರ ನಿರಾಕರಣೆ ವಿಚಾರದ ಬಗ್ಗೆ ಮಾತನಾಡಿದ ಅವರು ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಮಾಡಬೇಕೆಂಬ ಪ್ರಸ್ತಾಪ ತಿರಸ್ಕಾರ ಆಗಿದೆ. ಅದನ್ನ ಕೇಂದ್ರ ಸರ್ಕಾರ ತಿರಸ್ಕಾರ ಮಾಡಿರೋದು ಒಳ್ಳೆಯ ಸುದ್ದಿ.ರಾಮನಗರ ಜಿಲ್ಲೆಯಾಗಿ ಉಳಿಯಬೇಕು. ರಿಯಲ್ ಎಸ್ಟೇಟ್ ಹೆಸರಲ್ಲಿ ಮಾರಾಟ ಮಾಡಬೇಕು ಅನ್ನೋದು ದುರುದ್ದೇಶ. ಮೂಲಭುತ ಸೌಕರ್ಯ ಆದ್ಯತೆ ನೀಡದೆ ಹೆಸರು ಬದಲಾಯಿಸಿ . ವ್ಯಾಪಾರ ದೃಷ್ಟಿಯಿಂದ ಹೆಸರು ಬದಲಾವಣೆ ಮಾಡೋದಕ್ಕೆ ಹೊರಟಿದೆ.ಇದು ರಾಮನಗರ ಜಿಲ್ಲೆಗೆ ಮಾಡಿದ ಅವಮಾನ ಎಂದಿದ್ದಾರೆ.
ಇದೇ ವೇಳೆ ಶೋಷಿತ/ಅಹಿಂದ ವರ್ಗಕ್ಕೆ ಮೀಸಲಾತಿ ಹೆಚ್ಚಳ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಸರ್ಕಾರ ನಿಶ್ಚಯ ಮಾಡಲಿ, ಏನ್ ಮಾಡುತ್ತೆ ನೋಡೋಣ. ಗುತ್ತಿಗೆಯಲ್ಲಿ ಎಸ್ ಸಿ ಎಸ್ ಟಿ ಮೀಸಲಾತಿ ತರಲಾಯ್ತು. ಧರ್ಮಾಧಾರಿತ ಮೀಸಲಾತಿ ಕೊಡಬೇಕು ಅಂತ ಸರ್ಕಾರ ಹೊರಟಿದೆ. ಹಿಂದುಳಿದ ವರ್ಗದ ಮೀಸಲಾತಿಯಲ್ಲಿ ಸೇರಿಸಿದೆ. ಇದು ಹಿಂದುಳಿದ ವರ್ಗಕ್ಕೆ ಮಾಡಿದ ಅವಮಾನ. 4 ಮಂದಿಯಿಂದ ಜೀವಭಯ ಇದೆ ಎಂದು ಶಾಸಕ ಮುನಿರತ್ನ ಆರೋಪದ ಬಗ್ಗೆ ಮಾತನಾಡಿ ಎಲ್ಲಾ ಶಾಸಕರಿಗೆ ಗನ್ ಮ್ಯಾನ್ ಕೊಟ್ಟಿದ್ದಾರೆ. ಮುನಿರತ್ನ ಅವರಿಗೆ ಯಾಕೆ ಕೊಟ್ಟಿಲ್ಲ?.ಅವರಿಗೂ ಗನ್ ಮ್ಯಾನ್ ಕೊಡಲಿ. ಗೃಹಲಕ್ಷ್ಮಿ ವಿರೋಧಿಸಿದವರಿಗೆ ಶಾಪ ತಟ್ಟುತ್ತೆ ಎಂಬ ಶಾಸಕ ರಂಗನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿ ಗೃಹಲಕ್ಷ್ಮಿಯನ್ನ ಯಾರು ವಿರೋಧಿಸಿಲ್ಲ, ಎಲ್ಲರಿಗೂ ಕೊಡಿ. ಆದರೆ ತಿಂಗಳು ತಿಂಗಳು ಸರಿಯಾಗಿ ಕೊಡಲಿ. ಅದು ಸಂಬಳನಾ ಕೊಡೊದಕ್ಕೆ ಅಂದಿರೋದು ಆಡಳಿತ ಪಕ್ಷದ ಸಚಿವರು, ಶಾಸಕರು. ಅದು ಅವರ ಜೇಬಿನಿಂದ ಕೊಡ್ತಿದ್ದೀರಾ.ತಿಂಗಳು ತಿಂಗಳು ಕೊಟ್ಟು, ಅವರ ಅಕೌಂಟ್ ಗೆ ಹೋಗೊ ಹಾಗೆ ಮಾಡಿ. ಚುನಾವಣೆ ಮೊದಲು ಕೊಟ್ಟು ಓಟ್ ಹಾಕಿಸಿಕೊಳ್ಳೋದು ಅಲ್ಲ ಎಂದಿದ್ದಾರೆ.
ವಿರೋಧ ಪಕ್ಷದ ಕಣ್ಣು ತಪ್ಪಿಸಿ ಮುಸ್ಲಿಂ ಮೀಸಲಾತಿ ಬಿಲ್ ತಂದಿದ್ದಾರೆ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ
ಬೆಂಗಳೂರು; ವಿರೋಧ ಪಕ್ಷದ ಕಣ್ಣು ತಪ್ಪಿಸಿ ಮುಸ್ಲಿಂ ಮೀಸಲಾತಿ ಬಿಲ್ ತಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ನಿನ್ನೆ ಸದನದಲ್ಲಿ ಕದ್ದುಮುಚ್ಚಿ ಮುಸ್ಲಿಂ ಮೀಸಲಾತಿ ಬಿಲ್ ಮಂಡನೆ ಮಾಡಿದ್ದಾರೆ. ವಿರೋಧ ಪಕ್ಷದ ಕಣ್ಣು ತಪ್ಪಿಸಿ ಬಿಲ್ ತಂದಿದ್ದಾರೆ. ಬಿಜೆಪಿ ನಿಲುವು ಸ್ಪಷ್ಟವಾಗಿದೆ. ತುಘಲಕ್ ದರ್ಬಾರ್ ಅನ್ನ ನಾವು ವಿರೋಧಿಸುತ್ತೇವೆ ಎಂದಿದ್ದಾರೆ.
ಸದನದ ಒಳಗೆ ಮತ್ತು ಹೊರಗೆ ವಿರೋಧಿಸುತ್ತೇವೆ. ಉಚ್ಚ ನ್ಯಾಯಾಲಯ ದಲ್ಲೂ ಪ್ರಶ್ನೆ ಮಾಡುತ್ತೇವೆ. ಕಾಂಗ್ರೆಸ್ ನವರಿಗೆ ನಾವು ಕೇಳುತ್ತೇವೆ. ಅಲ್ಪಸಂಖ್ಯಾತ ರ ಬಗ್ಗೆ ಕಳಕಳಿ ಯಾಗಿದ್ರೆ ಯಾಕೆ ಅವರಿಗೆ ಶಿಕ್ಷಣ ಕ್ಕೆ ಒತ್ತು ಕೊಟ್ಟಿಲ್ಲ. ಅವರಿಗೆ ಸಮಾಜದ ಮುಂಚೂಣಿ ಗೆ ತರಬೇಕಿತ್ತು. ಅವರಿಗೆ ಮುಂದೆ ತರಬೇಕಿತ್ತು. ಬಿಜೆಪಿ ಮುಸ್ಲಿಂ ವಿರೋಧಿ ಅಲ್ಲ. ತ್ರಿಬಲ್ ತಲಾಕ್ ತೆಗೆದುಹಾಕಿದೆ. ಜನಧನ ಅಕೌಂಟ್ ಓಪನ್ ಮಾಡಿದ್ದೇವೆ, ಕೇವಲ ಹಿಂದೂಗಳಿಗೆ ಕೊಟ್ಟಿಲ್ಲ. ಕಾಂಗ್ರೆಸ್ ರೀತಿ ಮುಸ್ಲಿಂ ಅವರಿಗೆ ವೋಟ್ ಬ್ಯಾಂಕ್ ಗೆ ಸೀಮಿತ ಮಾಡಿದ್ದಾರೆ. ನಾನು ಸಿಎಂ ಅವರಿಗೆ ಎಚ್ಚರಿಕೆ ನೀಡುತ್ತೇವೆ. ತುಘಲಕ್ ದರ್ಬಾರ್ ಗೆ ಇತಿಮಿತಿಗಳಿಗೆ ೪% ಮೀಸಲಾತಿ ಕೋಡೋಕೆ ಹೊರಟಿದ್ದೀರಿ ಅದನ್ನು ವಿರೋಧ ಮಾಡುತ್ತೇವೆ.ನಾವು ಪಕ್ಷದಲ್ಲಿ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
ಸಚಿವರಿಗೆ ಹನಿಟ್ರ್ಯಾಪ್ ಯತ್ನ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರು ಮಾಡೋಕೆ ಹೋಗಿದ್ದಾರೆ, ಅವರನ್ನ ಕೇಳಿ ಎಂದಷ್ಟೇ ಹೇಳಿದೆ ಎಂದ್ರು.