ಬೆಂಗಳೂರು; ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರೇ ಪ್ರತಿಕ್ರಿಸಿದ್ದು ಅದು ನಾನು ಮಾತನಾಡಿದ ಆಡಿಯೋ. ಎಲ್ಲ ಸರ್ಕಾರಗಳಲ್ಲೂ ಭ್ರಷ್ಟಾಚಾರ ನಡೆದಿತ್ತು. ನಾವೂ ಜನಪರ ಆಡಳಿತ ಕೊಡ್ತೇವಿ ಅಂತಾ ಹೇಳಿ ಅಧಿಕಾರಕ್ಕೆ ಬಂದಿದ್ದು. ಆದ್ರೆ ಹೀಗೆ ಆಗಬಾರದಿತ್ತು. ಒಂದು 5-6 ಪಂಚಾಯತಿಗಳಲ್ಲಿ ದುಡ್ಡು ಕೊಟ್ಟು ಮನೆಗಳನ್ನ ತಗೆದುಕೊಂಡಿದ್ದಾರೆ. ನಾನು ಕೊಟ್ಟ ಪತ್ರಕ್ಕೆ ಮನೆಗಳು ಆಗಿಲ್ಲ. ನಾನು 4 ಪತ್ರಗಳನ್ನ ಕೊಟ್ಟಿದ್ದೆ. ನನ್ನ ಕ್ಷೇತ್ರಕ್ಕೆ ಮನೆಗಳ ಕೊಡಿ ಅಂತಾ ಪತ್ರ ಕೊಟ್ರು ಮನೆಗಳನ್ನ ಕೊಟ್ಟಿರಲಿಲ್ಲ. ಪಂಚಾಯತಿ ಅಧ್ಯಕ್ಷರು ಮನೆಗಳನ್ನು ತಂದಿದ್ದಾರೆ. ಸಿಎಂ ಕರೆದು ಮಾಹಿತಿ ಕೇಳಿದ್ರೆ. ಹೋಗಿ ಮಾಹಿತಿ ಕೊಡುವೆ ಎಂದರು.
ಎಐಸಿಸಿ ನಾಯಕರು ವರದಿ ಕೇಳಿದ ವಿಚಾರ. ನಾನು ಇನ್ನೂ ಆ ಮಟ್ಟಕ್ಕೆ ಬೆಳದಿಲ್ಲ. ನಾನು ಸತ್ಯ ಹೇಳಿದ್ದೇನೆ ಅದ್ರಲ್ಲಿ ತಪ್ಪೇನಿದೆ. ನಾನೇನ್ ಹೇಳ್ಬೇಕು ಹೇಳಿದ್ದೇನೆ. ಮುಖ್ಯಮಂತ್ರಿಗಳು ಏನ್ ಮಾಡ್ತಾರೆ ಗೊತ್ತಿಲ್ಲ. ಕರೆದರೆ ಹೋಗ್ತೇನೆ .ಎಲ್ಲಾ ಸರ್ಕಾರಗಳಲ್ಲೂ ಭ್ರಷ್ಟಾಚಾರ ನಡೆದಿದೆ .ನಾವು ಜನಪರವಾಗಿ ಆಡಳಿತ ಕೊಡ್ತೀವಿ ಅಂತ ಹೇಳಿ ಬಂದಿದ್ದೇವೆ ಆದರೆ ಇದು ಆಗಬಾರದಿತ್ತು. ಐದಾರು ಪಂಚಾಯಿತಿಗಳಲ್ಲಿ ದುಡ್ಡು ಕೊಟ್ಟು ಮಾಡಿಸಿಕೊಂಡು ಹೋಗುತ್ತಿದ್ದಾರೆ. ನಾನು ಪತ್ರ ಕೊಟ್ಟಿದ್ದು ಆಗಿಲ್ಲ, ನಾಲ್ಕು ಪತ್ರ ಕೊಟ್ಟಿದ್ದೇನೆ. ನನ್ನ ಕ್ಷೇತ್ರಗಳಿಗೆ ಮನೆ ಕೊಡಿ ಅಂತ ಆದರೆ ಆಗಿಲ್ಲ. ಪಂಚಾಯಿತಿ ಚೇರ್ಮನ್ ಗಳು ಹೋಗಿ ಮಾಡಿಸಿಕೊಂಡು ಬಂದಿದ್ದಾರೆ. ಸಿಎಂ ಕರೆದ್ರೆ ಖಂಡಿತ ಹೋಗ್ತೇನೆ ಎಂದರು.
ಎಐಸಿಸಿ ವರದಿ ತರಿಸಿಕೊಂಡ ವಿಚಾರದ ಬಗ್ಗೆ ಮಾತನಾಡಿದ ಅವರು ಆ ಮಟ್ಟಕ್ಕೆ ನಾನು ಬೆಳೆದಿಲ್ಲ.ಸತ್ಯ ಹೇಳಿದ್ದೇನೆ ಎಂದರು. ನಾನು ಏನ್ ಹೇಳಿದ್ದಿನಿ ಸತ್ಯ ಹೇಳಿದ್ದಿನಿ, ನಾನೆ ಮಾತಾಡಿದ್ದು, ನನ್ನ ಧ್ವನಿ ಅದು. ನನ್ನ ಶಿಫಾರಸ್ಸು ಪತ್ರಗಳನ್ನ ಪರಿಗಣನೆಗೆ ತೆಗೆದುಕೊಂಡಿಲ್ಲ. ಶಿಫಾರಸು ಪತ್ರಗಳನ್ನ ಪಂಚಾಯಿತಿ ಚೇರ್ಮನ್ ತೆಗೆದುಕೊಂಡು ಹೋಗಿದ್ದಾರೆ. ನನಗಿಂತ ಪಂಚಾಯತ್ ಚೇರ್ಮನ್ ಬಹಳ ಬಲಿಷ್ಟರು. ನಾನು ೨ ಸಾವಿರ ಮನೆ ಕೇಳಿದ್ದೇನೆ. ಅವರಿಗೆ ೧೯೫೦ ಮನೆ ಆಗಿದೆ ಎಂದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಗಿದೆ ಎಂಬ ಸಚಿವ ಜಮೀರ್ ಹೇಳಿಕೆಗೆ ರಿಯಾಕ್ಟ್ ಮಾಡಿದ ಅವರು ತನಿಖೆ ಮಾಡಿಸಲಿ.ಸಿಎಂ ನಾನಗಿ ಹೋಗಿ ಭೇಟಿ ಮಾಡೊಲ್ಲ. ಅವರಾಗೆ ಕರೆದ್ರೆ ಹೋಗ್ತಿನಿ. ನನ್ನ ಕ್ಷೇತ್ರದಲ್ಲೇ ಅಲ್ಲಾ ಬಹುತೇಕ ಕ್ಷೇತ್ರಗಳಲ್ಲಿ ಆಗಿದೆ ಎಂದರು. ಹೈಕಮಾಂಡ್ ವರದಿ ಕೇಳಿರುವ ವಿಚಾರದ ಬಗ್ಗೆ ಮಾತನಾಡಿ ನಾನ್ಯಾಕೆ ಹೈಕಮಾಂಡ್ ಗಮನಕ್ಕೆ ತರಲಿ. ನನ್ನ ಹೊಟ್ಟೆ ಕಡಿತು ನಾನು ಔಷಧಿ ತಗೊಂಡಿದ್ದೇನೆ ಎಂದ ಅವರು ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ ಬಿಜೆಪಿಯವರು ಏನ್ ಸಾಚ ಅಲ್ಲಾ, ಎಲ್ಲಾ ಹೊಲಸು ಮಾಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಒಳ್ಳೆ ಆಢಳಿತ ಕೊಡುವ ಪ್ರಯತ್ನ ನಡೆದಿದೆ ಎಂದರು.