ಬೆಂಗಳೂರು: ಭಯೋತ್ಪಾದನೆ, ಜನೋತ್ಪಾನೆ ಮಾಡೋದು ಮುಸ್ಲಿಂಮರ ಕೆಲಸ; ಭಯೋತ್ಪಾದನೆ, ಜನೋತ್ಪಾನೆ ಮಾಡೋದು ಮುಸ್ಲಿಂಮರ ಕೆಲಸ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಗಳನ್ನು ಗುರುತಿಸಿ ವಾಪಸ್ ಕಳುಹಿಸುವ ಬಗ್ಗೆ ಜನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹದೇವಪುರ ವಿಧಾನಸಭೆ ಕ್ಷೇತ್ರದ ರಾಮಗೊಂಡನಹಳ್ಳಿ ಸರ್ಕಾರಿ ಶಾಲೆಯ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಕ್ರಮ ಬಾಂಗ್ಲಾದೇಶಿ ತೊಲಗಿಸೋಣ, ಭಾರತವನ್ನು ಉಳಿಸೋಣ ಎಂಬ ಶೀರ್ಷಿಕೆಯಡಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿಯ ರೆಬಲ್ಸ್ ಟೀಂ ನಿಂದ ಅಭಿಯಾನ ಆಯೋಜನೆ ಮಾಡಲಾಗಿತ್ತು. ಮಾಜಿ ಸಚಿವರಾದ ಅರವಿಂದ್ ಲಿಂಬಾವಳಿ, ಕುಮಾರ ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಜಿ.ಎಂ ಸಿದ್ದೇಶ್ವರ, ಬಿ.ಪಿ ಹರೀಶ್ ಅಭಿಯಾನದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಏನೇ ಕೆಲಸ ಮಾಡಿದ್ರೂ ಸ್ಪಷ್ಟವಾಗಿ ಮಾಡುವ ಬಿಜೆಪಿಯಲ್ಲಿರುವ ವ್ಯಕ್ತಿ ಅಂದ್ರೆ ಅರವಿಂದ ಲಿಂಬಾವಳಿ ಅವರು. ವಕ್ಫ್ ಹೋರಾಟ, ವಾಲ್ಮೀಕ ಹೋರಾಟ, ಅಕ್ರಮ ಬಾಂಗ್ಲಾದೇಶ ವಲಸಿಗರ ವಿರುದ್ಧದ ಹೋರಾಟದ ಪ್ಲಾನ್ ಮಾಡಿದ್ದೇ ಅರವಿಂದ ಲಿಂಬಾವಳಿ . ನಮ್ಮದೆಲ್ಲ ಸಪೋರ್ಟಿಂಗ್ ರೋಲ್ ಅಷ್ಟೇ, ಲಿಂಬಾವಳಿದು ಮೇನ್ ರೋಲ್. ಬಿಜೆಪಿ ಸೈದ್ದಾಂತಿಕ ತಳಹದಿಯನ್ನ ಇಟ್ಟಿಕೊಂಡುಚುನಾವಣೆ ಎದುರಿಸುತ್ತೆ. ಅದೇ ರೀತಿ ದೇಶ, ಧರ್ಮ ಕಾಪಾಡುವ ದೃಷ್ಟಿಯಿಂದ ಕಾರ್ಯಕ್ರಮ ಆಯೋಜಿಸಿದ್ದಾರೆ. ರಾಜಕೀಯ ವಾಸನೇ ಇರದೇ ಹೋರಾಟ ಮಾಡೋರು ಅರವಿಂದ ಲಿಂಬಾವಳಿ. ವಕ್ಫ್ ಹೋರಾಟವನ್ನ ತೋರ್ಪಡಿಕೆಗಾಗಿ ಮಾಡಿಲ್ಲ. ಪೂರ್ವ ತಯಾರಿ ಮಾಡಿಕೊಂಡೇ ಲಿಂಬಾವಳಿ ಹೋರಾಟ ಮಾಡ್ತಿದ್ದರು. ಡ್ರಾಫ್ಟಿಂಗ್ ಮಾಡುವ ಕೆಲಸ ಕುಮಾರ ಬಂಗಾರಪ್ಪ ಮಾಡ್ತಿದ್ದರು ಎಂದರು.
ವಕ್ಫ್ 1968ರಲ್ಲಿ ಗೆಜೆಟ್ ನೋಟಿಫಿಕೇಷನ್ ಮಾಡ್ತಾರೆ. ಇವರಿಗೆ ಯಾವುದೇ ಅಧಿಕಾರ ಇಲ್ಲ. ಜೆಪಿಸಿಗೆ ನಾವು ಸ್ಪಷ್ಟವಾದ ಚಿತ್ರಣ ಕೊಟ್ಟು ಮನವರಿಕೆ ಮಾಡಿದ್ದೆವು. ವಕ್ಫ್ ಆಸ್ತಿ ದುರ್ಬಳಕೆ ಬಗ್ಗೆ ನಾವು ಮಾಹಿತಿ ನೀಡಿದ್ವಿ. ಫೋಟೋ, ರೆವೆನ್ಯೂ, ಫೈನಾನ್ಸ್ ಆಡಿಟ್ ಮಾಡಿ ಅಂತ ಹೇಳಿದ್ವಿ. ವಕ್ಫ್ ನ ಸಿಇಓ, ಚೀಫ್ ಸೆಕ್ರೆಟರಿ ನ ಸಮನ್ ಮಾಡಬೇಕು. ವಕ್ಫ್ ರಾಜಕೀಯ ಉದ್ದೇಶದ ಹೋರಾಟ ಅಲ್ಲ. ದೇಶದ ಆಸ್ತಿ, ಸಂಪತ್ತಿನ ರಕ್ಷಣೆಗಾಗಿ ವಕ್ಫ್ ಹೋರಾಟ ಮಾಡಿದ್ವಿ. ನಾವು ಪಾದಯಾತ್ರೆ ಮಾಡೋಕೆ ಆಗಲಿಲ್ಲ. ಹಾಗಂತ ಸುಮ್ಮನೆ ಕೂರಲು ಆಗಲ್ಲ. 187 ಕೋಟಿ ವಾಲ್ಮೀಕಿ ನಿಗಮದಲ್ಲಿ ಹಗರಣ ಆಯ್ತು. ಬಳ್ಳಾರಿ, ರಾಯಚೂರು ಲೋಕಸಭೆ ಚುನಾವಣೆಯಲ್ಲಿ ಯಂಡ ಖರೀದಿಗಾಗಿ ವಾಲ್ಮೀಕಿ ನಿಗಮದ ಹಣ ಬಳಸಿಕೊಂಡ್ರು. ಸಿಬಿಐ ತನಿಖೆಗೆ ಆದೇಶ ಮಾಡಲಾಗಿದೆ. 24 ಸಾವಿರ ಕೋಟಿ SCPTST ಹಣ ಗ್ಯಾರೆಂಟಿ ಯೋಜನೆಗಾಗಿ ದುರ್ಬಳಕೆ ಮಾಡಿಕೊಂಡ್ರು ಎಂದು ತಿಳಿಸಿದು.
ಅಕ್ರಮ ಬಾಂಗ್ಲಾ, ಪಾಕಿಸ್ತಾನಿಗಳ ವಿರುದ್ಧ ಹೋರಾಟ ಮಾಡಬೇಕಿದೆ. ಬುದ್ದಿಸ್ಟ್ ಮೇಲೆ ಮುಸ್ಲಿಂಮರು ದಾಳಿ ಮಾಡ್ತಿದ್ದರು. ಪಾಕಿಸ್ತಾನದ ಮುಸ್ಲಿಂ ಭಾರತಕ್ಕೆ ಬರಲು ಅವಕಾಶ ಮಾಡಿ ಅಂತ ಕಾಂಗ್ರೆಸ್ ಮನವಿ ಮಾಡಿಕೊಂಡ್ರು. ಅವರು ಹೊಟ್ಟೆ ಪಾಡಿಗೆ ಬರಲ್ಲ. ಒಂದೊಂದೆ ಕಬಳಿಸಲು ಬರ್ತಾರೆ. ಪಾಕಿಸ್ತಾನದಲ್ಲಿ ಎಷ್ಟು ಹಿಂದುಗಳು ಇದ್ದಾರೆ?. 21% ಹಿಂದುಗಳು ಇದ್ರು, ಈಗ 5% ಹಿಂದುಗಳು ಇದ್ದಾರೆ. ಯಾವ ಹಿಂದುಗಳಿಗೂ ಬದುಕಲು ಅವಕಾಶ ಇಲ್ಲ. ಯೂರೋಪ್ ನ ಐಫೇಲ್ ಟವರ್ ಕೆಳಗೆ ದನದ ಮಾಂಸ ಕಡಿದು ತಿನ್ನುತ್ತಿದ್ದಾರೆ.ಅಮೇರಿಕಾದಲ್ಲಿ ಪರಿಸ್ಥಿತಿ ಹೇಗಾಗಿದೆ?. ಜಗತ್ತಿನಲ್ಲಿ ಒಟ್ಟು 57 ಮುಸಲ್ಮಾನ ರಾಷ್ಟ್ರಗಳಿವೆ. ಬೇರೆ ದೇಶಗಳಲ್ಲಿ ಇವರಿಗೆ ಯಾಕೆ ಆಶ್ರಯ ಕೊಡಲ್ಲ. ಭಯೋತ್ಪಾದನೆ, ಜನೋತ್ಪಾನೆ ಮಾಡೋದು ಮುಸ್ಲಿಂಮರ ಕೆಲಸ. 22 ಮುಸ್ಲಿಮರು 91 ಮಕ್ಕಳು ಹುಟ್ಟಿದ್ದಾರೆ, ಪುರುಸೊತ್ತು ಇಲ್ಲದೆ ಮಕ್ಕಳ ಹುಟ್ಟಿಸುತ್ತಿರುತ್ತಾರೆ. ನಮ್ಮ ಜನರಿಗೆ ಬೆನ್ನು ಗಟ್ಟಿ ಇರಲ್ಲ. ಭಾರತ ಭಾರತವಾಗಿ ಉಳಿಯಬೇಕು, ಹಿಂದುಗಳು ಹೆಚ್ಚಾಗಿ ಇರಬೇಕು ಎಂದು ಹೇಳಿದರು.
2024ರ ಲೋಕಸಭೆಯಲ್ಲಿ 240ಕ್ಕೆ ಇಳಿಸಿದ್ದೀರಿ. ನಿಮ್ಮ ಭವಿಷ್ಯಕ್ಕೆ ಮುಂದೆ ಕಂಟಕ ಆಗಬಹುದು, ಎಚ್ಚೆತ್ತುಕೊಳ್ಳಿ. 21ರಂದು ಲೋಕಸಭೆ ಅಧಿವೇಶನ ಆರಂಭ ಆಗ್ತಿದೆ. ನಿಮ್ಮ ಮಕ್ಕಳ ಭವಿಷ್ಯಕ್ಕೋಸ್ಕರ, ಹಿಂದೂರಾಷ್ಟ್ರಕೋಸ್ಕರ ಅಭಿಯಾನಕ್ಕೆ ಬೆಂಬಲ ಕೊಡಿ. ರಾಜಕೀಯ ಉದ್ದೇಶಕೋಸ್ಕರ ಇಲ್ಲಿ ಬಂದಿಲ್ಲ. ಸೈದ್ಧಾಂತಿಕ ತಳಹದಿ ಇಟ್ಟಿಕೊಂಡಿರುವ ಪಕ್ಷ ಬಿಜೆಪಿ. ಜುಲೈ 28 ಕ್ಕೆ ದೆಹಲಿಗೆ ಹೋಗ್ತೇವೆ. ಕೇಂದ್ರದ ನಾಯಕರಿಗೆ ಅಕ್ರಮ ಬಾಂಗ್ಲಾ ವಲಸಿಗರ ಕುರಿತು ವರದಿ ಸಲ್ಲಿಕೆ ಮಾಡ್ತೇವೆ. ಈಗ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಹೋರಾಟ. ಯಾವುದೇ ಹೋರಾಟ ನಡೆಸಿದರೂ ತಾರ್ಕಿಕ ಅಂತ್ಯ ಮುಟ್ಟುತ್ತೇವೆ. ರೋಹಿಂಗ್ಯಾ ಮುಸ್ಲಿಮರು, ಪಾಕ್ ಮುಸ್ಲಿಮರು ಭಾರತಕ್ಕೆ ಬರಲಿ ಅನ್ನೋ ಮನಸ್ಥಿತಿ ಕಾಂಗ್ರೆಸ್ ನದ್ದು. ಬಾಂಗ್ಲಾದಲ್ಲಿ ಸ್ವಾತಂತ್ರ್ಯ ಬಂದಾಗ 24% ಮುಸ್ಲಿಮರು ಇದ್ರು, ಇವತ್ತು 5% ಇದ್ದಾರೆ. ಪಾಕ್ ನಲ್ಲಿ ಹಿಂದೂಗಳು ಮೊದಲು 15% ಇದ್ರು ಈಗ 2% ಇದ್ದಾರೆ. ಅಲ್ಲಿ ಹಿಂದೂಗಳನ್ನು ಓಡಿಸಿ ಈಗ ಆ ಮುಸ್ಲಿಮರು ನಮ್ಮಲ್ಲಿ ಬಂದಿದ್ದಾರೆ. ಇಂಥವರು ನಮ್ಮ ದೇಶ, ರಾಜ್ಯದಲ್ಲಿ ಇರಬಾರದು.ಪಕ್ಕದಲ್ಲಿ ಇರೋ ದೇಶಗಳ ಮುಸ್ಲಿಮರು ಭಾರತಕ್ಕೆ ಬಂದ್ರೆ ನಾವೆಲ್ಲಿ ಹೋಗಬೇಕು?. ಈ ಮುಸ್ಲಿಂ ವಲಸಿಗರಿಗೆ ಜಗತ್ತಿನ 57 ಮುಸ್ಲಿಂ ದೇಶಗಳು ಯಾಕೆ ಆಶ್ರಯ ಕೊಡ್ತಿಲ್ಲ? ಯಾಕೆ ಇವರಿಗೆ ಭಾರತವೇ ಆಶ್ರಯ ಕೊಡಬೇಕು?. ಈ ವಲಸಿಗರು ಭಾರತದಲ್ಲಿದ್ರೆ ನಮ್ಮ ಜಾಗ ಕಬಳಿಸ್ತಾರೆ. ಪುರುಸೊತ್ತಿಲ್ಲದೇ ಜನೋತ್ಪಾದನೆ ಮಾಡ್ತಾರೆ. ಹಿಂದೂಗಳಿಗೆ ಇರೋದು ಒಂದೇ ದೇಶ, ನಮಗೆ ಯಾರೂ ಆಶ್ರಯ ಕೊಡಲ್ಲ. ಭಾರತವನ್ನು ಭಾರತವಾಗಿ ಉಳಿಸಿಕೊಳ್ಳಬೇಕು ಎಂದು ನುಡಿದರು.