ಮನೆ Latest News ರೈತರನ್ನು ಯಾಕೆ ಬಲಿ ಕೊಡ್ತಿದೀರಿ ಎಂದು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಾಗೂ ಮಾಧ್ಯಮದವರ ಮೇಲೆ ಎಫ್...

ರೈತರನ್ನು ಯಾಕೆ ಬಲಿ ಕೊಡ್ತಿದೀರಿ ಎಂದು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಾಗೂ ಮಾಧ್ಯಮದವರ ಮೇಲೆ ಎಫ್ ಐ ಆರ್ ಹಾಕಿಸಿದ್ದಾರೆ; ಶಿಗ್ಗಾವಿ ತಾಲೂಕು ತಡಸ ಗ್ರಾಮದಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ

0

ಹಾವೇರಿ ; ರೈತರನ್ನು ಯಾಕೆ ಬಲಿ ಕೊಡ್ತಿದೀರಿ ಎಂದು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಾಗೂ ಮಾಧ್ಯಮದವರ ಮೇಲೆ ಎಫ್ ಐ ಆರ್ ಹಾಕಿಸಿದ್ದಾರೆ ಎಂದು ಶಿಗ್ಗಾವಿ ತಾಲೂಕು ತಡಸ ಗ್ರಾಮದಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ.

ಕೃಪಾ ಪೋಷಿತ ವಕ್ಫ್ ಆಟೋಟೋಪ ಇಂದು ಚರಮ ಸ್ಥಿತಿಗಿದೆ. ಹಾವೇರಿಯ ರೈತರು ಜಂಟಿ ಸಮಿತಿ ಅದ್ಯಕ್ಷರ ಎದುರಿಗೆ ಮಾತಾಡಿದ್ರು. ನಮ್ಮ ಮನೆ ಮಗನ ಹೆಸರಿಗೆ ಇದ್ದ 4 ಎಕರೆ ಜಮೀನಿಗೆ ವಕ್ಫ್ ಅಂತಾ ಎಂಟ್ರಿ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದಾನೆ ಅಂತ ಮನವಿ ಮಾಡಿದ್ರು. ಆ ವರದಿ ಮಾಧ್ಯಮದವರು ಬಿತ್ತಿರಿಸಿದ್ರಿ. ಇದನ್ನ ನಾನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದೆ. ರೈತರನ್ನು ಯಾಕೆ ಬಲಿ ಕೊಡ್ತಿದೀರಿ ಎಂದು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಾಗೂ ಮಾಧ್ಯಮದವರ ಮೇಲೆ ಎಫ್ ಐ ಆರ್ ಹಾಕಿಸಿದಾರೆ. ರೈತ ಆತ್ಮಹತ್ಯೆ ಮಾಡಿಕೊಂಡಿದ್ದು ವಕ್ಫ್ ನಿಂದ ‌ಅಲ್ಲ, ಬೇರೆ ಯಾವುದೋ ಕಾರಣಕ್ಕೆ ಅಂತ ಬಲವಂತವಾಗಿ ಪೊಲೀಸರ ಕೈಲಿ ಹೇಳಿಸಿದಾರೆ ಎಂದರು.

ಏನು‌ ಸಾಧಿಸಲು ಹೊರಟಿದ್ದೀರಿ ಸರ್ಕಾರದವರು?  ವಾಕ್ ಸ್ವಾತಂತ್ರ್ಯ ಅಂತ ಮಾತಾಡೋರು? ಸುದ್ದಿ ಬಿತ್ತರಿಸಿದ್ದಕ್ಕೆ ಎಫ್ ಐ ಆರ್ ಹಾಕಿದಿರಿ. ಆತ್ಮಹತ್ಯೆ ಮಾಡಿಕೊಂಡ ರೈತನ ತಂದೆ ಎಲ್ಲಾ ಟಿವಿಗೂ ಮಾತಾಡಿದಾರೆ.ನಮ್ ಮಗ ವಕ್ಫ್ ಅಂತ ಸೇರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಅಂತ ಅವರ ತಂದೆ ಹೇಳಿದರು. ಯಾಕೆ ಆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ ಅಂತ ಅವರ ತಂದೆಗೂ ಹೆಚ್ಚು ಸಚಿವ ಪ್ರಿಯಾಂಕ ಖರ್ಗೆಗೆ ಗೊತ್ತಿದೆ. ಶಿಗ್ಗಾವಿಗೆ ಪ್ರಚಾರಕ್ಕೆ ಬಂದಿದ್ದೀನಿ. ಸಂತೋಷ್ ಶಿವಪ್ಪ ಕೌದಿ ಎನ್ನುವರ ಪಹಣಿಯಲ್ಲಿ ಮುಸ್ಲಿಂ ಸಮಾಜದವರು ಶವ ಸಂಸ್ಕಾರಕ್ಕೆ ಹಾಗೂ ಪ್ರಾರ್ಥನೆ ಸಲ್ಲಿಸಲು ಅಂತ ಕಾಲಂ ನಂಬರ್ 11 ರಲ್ಲಿ ಸೇರಿಸಿದಾರೆ. ಇದೇನು ನಡೆದಿದೆ? ಯಾವ ಊರಿಗೆ ಹೋದರೂ ಇದೇ ಆಗಿದೆ. ನೂರಾರು ವರ್ಷ ಉಳುಮೆ ಮಾಡಿಕೊಂಡು ಇದ್ದ ಜಾಗಕ್ಕೆ ವಕ್ಪ್ ಅಂತ ಮಾಡಿದಾರೆ. ಇವರ ಜಮೀನು ಎನ್ ಎ ಕೆಜೆಪಿ ಕೂಡಾ ಆಗಿದೆ.ಒಂದೊಂದು ತಾಲೂಕಿನಲ್ಲಿ 250- 300 ಎಕರೆ ಜಮೀನು ವಕ್ಪ್ ಅಂತ ಕ್ಲೇಮ್ ಮಾಡ್ತಿದಾರೆ. ಬಂದು ಭೇಟಿ ಆಗ್ತೀವಿ ಅಂತ‌ ಕೋಲಾರದಿಂದ ರೈತರು ಫೋನ್ ಮಾಡಿದ್ರು. ಇದನ್ನು ಪ್ರಶ್ನೆ ಮಾಡಿದರೆ ಎಫ್ ಐ ಆರ್ ಹಾಕ್ತೀರಿ. ಸ್ವಂತ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು ವಕ್ಪ್ ಅಂತ ಎಂಟ್ರಿ ಆದ ಕಾರಣಕ್ಕೆ ಅಂತಾರೆ. ಆದರೆ ಪೊಲೀಸರ ಕಡೆಯಿಂದ ಕೇಸ್ ಹಾಕಿಸ್ತೀರಿ, ಯಾವ ಮಟ್ಟಕ್ಕೆ ಹೋದ್ರಿ ನೀವು?. ಅವರಿಗೆ ಈ ಉಪಚುನಾವಣೆಗಳಲ್ಲಿ ಮಸಲ್ಮಾನರ ಓಟ್ ಕ್ರೂಡಿಕರಣ ಮಾಡಬೇಕು. ಈ‌ ಉಪ ಚುನಾವಣೆಗಳಲ್ಲಿ ಗೆಲ್ಲಬೇಕು ಅನ್ನೋ ಕಾರಣಕ್ಕೆ ಮಾಡ್ತಿದಾರೆ. ಮೋದಿ ಸರ್ಕಾರ ವಕ್ಫ್ ಕಾಯಿದೆಗೆ ತಿದ್ದುಪಡಿ ತಂದು ವಕ್ಪ್ ಪರಮಾಧಿಕಾರ ಮೊಟಕುಗೊಳಿಸುತ್ತೆ ಎಂದರು.

ಅದಕ್ಕಿಂತ ಮುಂಚೆ ಪ್ರತಿ ಹಳ್ಳಿ, ತಾಲೂಕುಗಳಲ್ಲಿ ನೂರಾರು ಎಕರೆ ಜಮೀನು ಮುಸಲ್ಮಾನರಿಗೆ ಕೊಟ್ಟಬಿಡಬೇಕು ಅಂತ ಹೇಳಿ ಹೀಗೆ ಮಾಡ್ತಿದಾರೆ. ವಕ್ಪ್ ಅಂತ ಎಫ್ ಐ ಆರ್ ನಲ್ಲಿ ಇವರು ಉಲ್ಲೇಖಿಸಿರಲ್ಲ. ಆದರೆ ಪಹಣಿಯಲ್ಲಿ ವಕ್ಪ್ ಅಂತ ಬಂದಿದೆ ಅಲ್ವಾ? ವಕ್ಫ್ ಅಂತ ಎಂಟ್ರಿ ಆದರೆ ಕೃಷಿ ಸಾಲ ಸಿಗಲ್ಲ, ಸಬ್ಸಿಡಿ ನಿಂತು ಹೋಗುತ್ವೆ. ಅವನ ಜಮೀನು ಮಾರಾಟ ಮಾಡಲು ಆಗಲ್ಲ. ಜಮೀನು ಇದ್ದರೂ ಸತ್ತಂತೆ. ಯಾರಿಗೆ ಏನು ಕೇಳದೇ ವಕ್ಪ್ ಅಂತ ಸೇರಿಸಿದರೆ ಹೇಗೆ? ಇದರಿಂದ ನೊಂದು ರೈತ ಆತ್ಮಹತ್ಯೆ ಮಾಡಿಕೊಂಡೆ. ಇದು ವಕ್ಪ್ ಅಂತ ಗೊತ್ತಾದರೆ ಸಮಾಜ ಎಚ್ಚೆತ್ತುಕೊಳ್ಳುತ್ತೆ ಎಂಬ ಕಾರಣಕ್ಕೆ ಮಾದ್ಯಮದವರ ಬಾಯಿ ಮುಚ್ಚಿಸಿಲು ಹೊರಟಿದ್ದಾರೆ. ಇಲ್ಲಿನ ರೈತ ಜಂಟಿ ಸದನ ಸಮಿತಿ ನಾಟಕ ಅಂದರಲ್ಲವಾ?. ರೈತರು ಹಾಗಾದರೆ ನಾಟಕ ಮಾಡ್ತಿದಾರಾ?. ಸಮಿತಿ ಚೇರ್ಮನ್ ಮುಂದೆ ಸಾವಿರಾರು ರೈತರು ಬಂದಿದ್ದರು. ಆ ರೈತರೆಲ್ಲಾ ಡ್ರಾಮಾ ಕಂಪನಿ ಆರ್ಟಿಸ್ಟ್ ಗಳಾ? ಸಮಿತಿಯವರು ನಾಟಕದವರು ಪರವಾಗಿಲ್ಲ, ರೈತರು ನಾಟಕ ಮಾಡ್ತಿದಾರಾ?. ಸಮಸ್ಯೆ ಇರೋದು ವಕ್ಫ್ ಕಾನೂನಿನಲ್ಲಿ. ವಕ್ಪ್ ಬೋರ್ಡ್ ಕಾನೂನು ತಿದ್ದುಪಡಿ ಮಾಡ್ತೀವಿ. ವಕ್ಪ್ ಬೋರ್ಡ್ ಪರಮಾಧಿಕಾರ ಮೊಟಕುಗೊಳಿಸ್ತೀವಿ.  ರಾಜ್ಯ, ದೇಶದ ರೈತರ ಹಿತಾಸಕ್ತಿ ಕಾಪಾಡ್ತೀವಿ ಎಂದರು.