ಮನೆ Latest News ಪಾರ್ಲಿಮೆಂಟ್ ಸೀಟು ಕಡಿಮೆ ಮಾಡೋದಕ್ಕೆ ದೊಡ್ಡ ಷಡ್ಯಂತ್ರ ನಡೀತಿದೆ; ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

ಪಾರ್ಲಿಮೆಂಟ್ ಸೀಟು ಕಡಿಮೆ ಮಾಡೋದಕ್ಕೆ ದೊಡ್ಡ ಷಡ್ಯಂತ್ರ ನಡೀತಿದೆ; ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು; ವಿಧಾನಸೌಧಕ್ಕೆ ತಮಿಳುನಾಡು ಸಚಿವರ ನಿಯೋಗ ಡಿಸಿಎಂ ಜೊತೆಗೆ ಚರ್ಚೆ ನಡೆಸಿತು. ತಮಿಳುನಾಡಿನ ಅರಣ್ಯ ಸಚಿವ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ನಿಯೋಗ ಭೇಟಿ ಮಾಡಿ ಕೆಲ ಹೊತ್ತು ಮಾತುಕತೆ ನಡೆಸಿತು.

ಬಳಿಕ ಮಾತನಾಡಿದ ಡಿಸಿಎ ಡಿ ಕೆ ಶಿವಕುಮಾರ್ ತಮಿಳುನಾಡು ಮಂತ್ರಿ ಪೊನ್ನ ಮುಡಿ ಮತ್ತು ಅಬ್ದುಲ್ಲಾ ಸಿಎಂ ಮತ್ತು ನನ್ನ ಭೇಟಿಯಾದರು.ಹಿಂದೆಯಿಂದ ತುಂಬಾ ಚರ್ಚೆ ಆಗ್ತಿದೆ. ಪಾರ್ಲಿಮೆಂಟ್ ಸೀಟು ಕಡಿಮೆ ಮಾಡೋದಕ್ಕೆ ದೊಡ್ಡ ಷಡ್ಯಂತ್ರ ನಡೀತಿದೆ. ಇದಕ್ಕೆ ವಿರೋಧನೆ ಮಾಡೋಕೆ ೫೪ ಪಕ್ಷಗಳನ್ನ ಕರೆದು ಮೀಟಿಂಗ್ ಮಾಡಿ ಚರ್ಚೆ ಮಾಡಿದ್ದಾರೆ. ಒಗ್ಗಟ್ಟಾಗಿ ಬಂದು ಚರ್ಚೆ ನಡೆಸಿದ್ದಾರೆ. ನಮಗೆ , ಸಿಎಂ ಅವರಿಗೆ ಬರುವಂತೆ ಹೇಳಿದ್ದಾರೆ. ೨೨ ರಂದು ಸಭೆ ಇದೆ, ಅಲ್ಲಿ ಗೆ ಬರುವಂತೆ ಹೇಳಿದ್ದಾರೆ. ನಮ್ಮ ಪಕ್ಷದ ವರಿಷ್ಠರ ಜೊತೆ ಮಾತಾಡಿ ಎಂದು ಹೇಳಿದ್ದೇನೆ. ಹೈಕಮಾಂಡ್ ಗಮನಕ್ಕೆ ತರುತ್ತೇನೆ ಎಂದರು.

 ಸಿಎಂ ಸಿದ್ದರಾಮಯ್ಯ ಭೇಟಿಯಾದ ತಮಿಳುನಾಡಿನ ಅರಣ್ಯ ಸಚಿವ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್

ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರನ್ನು ತಮಿಳುನಾಡಿನ ಅರಣ್ಯ ಸಚಿವ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಚರ್ಚೆ ಮಾಡಿದ್ದಾರೆ.ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮತ್ತು ದಕ್ಷಿಣ ರಾಜ್ಯಗಳ ವಿರೋಧಿ ನಿಲುವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ. ಡಿಲಿಮಿಟೇಷನ್ ಮತ್ತಿತರ ಸಂಗತಿಗಳ ವಿಚಾರದಲ್ಲಿ ಧ್ವನಿ ಎತ್ತುವಂತೆ, ಪ್ರತಿಭಟನೆ ಜೊತೆಗೆ ನಿಲ್ಲುವಂತೆ ಮನವಿ ಮಾಡಿದ್ದಾರೆ. ಇದಕ್ಕೂ ಮೊದಲು ತಮಿಳುನಾಡು ಸಿಎಂ ಸ್ಟಾಲಿನ್ ಜೊತೆ ಸಿದ್ದರಾಮಯ್ಯ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.

ದೂರವಾಣಿ ಮೂಲಕ ಸಿಎಂ ಸಿದ್ದರಾಮಯ್ಯ ಜೊತೆ ಸ್ಟಾಲಿನ್  ಇದೇ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಈ ಹೋರಾಟಕ್ಕೆ ತಮ್ಮದೂ ಬೆಂಬಲ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾದ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ. ಸಂವಿಧಾನದ ಒಕ್ಕೂಟ ತತ್ವಕ್ಕೆ ವಿರುದ್ಧವಾದ ಕೇಂದ್ರ ಸರ್ಕಾರದ ಎಲ್ಲಾ ನಡೆಗಳನ್ನೂ ತಾವು ಮುಲಾಜಿಲ್ಲದೆ ಖಂಡಿಸುತ್ತೇವೆ.  ಈ ವಿಚಾರದಲ್ಲಿ ಹೋರಾಟಕ್ಕೂ ಬೆಂಬಲ ನೀಡುತ್ತೇವೆ ಎಂದು ತಮ್ಮ ನಿಲುವನ್ನು ಸಿಎಂ ಸ್ಪಷ್ಟಪಡಿಸಿದ್ದಾರೆ.

ಇನ್ನು ವಿಧಾನಸೌಧಕ್ಕೆ ಆಗಮಿಸಿದ ತಮಿಳುನಾಡು ಸಚಿವರ ನಿಯೋಗ ಡಿಸಿಎಂ ಜೊತೆಗೆ ಚರ್ಚೆ ನಡೆಸಿದೆ. ತಮಿಳುನಾಡಿನ ಅರಣ್ಯ ಸಚಿವ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ನಿಯೋಗದಲ್ಲಿದ್ದರು.ಇನ್ನು ಸಿಎಂ ಸಿದ್ದರಾಮಯ್ಯ ಗೆ ತಮಿಳುನಾಡು ಸಿಎಂ ಸ್ಟಾಲಿನ್ ಪತ್ರ ಬರೆದಿದ್ದಾರೆ. ಇದೇ ಮಾರ್ಚ್ ೨೨ ರಂದು ನಡೆಯಲಿರೋ ಸಭೆಗೆ ಬರುವಂತೆ ಪತ್ರ ಬರೆದಿದ್ದಾರೆ. ದಕ್ಷಿಣ ಭಾರತದ ರಾಜ್ಯ ಗಳೂ ಸೇರಿ ಸುಮಾರು ೭ ರಾಜ್ಯಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಡಿಲಿಮಿಟೇಷನ್, ಹಿಂದಿ ಹೇರಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಧ್ವನಿ ಎತ್ತುವಂತೆ ಸಭೆ ಮನವಿ ಮಾಡಲಿದ್ದಾರೆ. ತಮಿಳುನಾಡು, ಕೇರಳ, ಕರ್ನಾಟಕ, ಪುದುಚೇರಿ, ತೆಲಂಗಾಣ, ಆಂಧ್ರ, ಪಂಜಾಬ್, ಪಶ್ಚಿಮ ಬಂಗಾಳ ರಾಜ್ಯದ ಪ್ರತಿನಿಧಿಗಳು ಸಭೆ ಭಾಗಿ ಸಾಧ್ಯತೆಯಿದೆ. ಕರ್ನಾಟಕದ ಪರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮಾರ್ಚ್ ೨೨ ರಂದು ತಮಿಳುನಾಡಲ್ಲಿ‌ ಮೀಟಿಂಗ್ ನಡೆಯಲಿದೆ. ಸಭೆಗೆ ಬರುವಂತೆ ಆಹ್ವಾನ ನೀಡಲು ಸಚಿವರ ನಿಯೋಗ ಆಗಮಿಸಿದೆ.

ಇದೇ ವೇಳೆ ಮಾತನಾಡಿದ ತಮಿಳುನಾಡು ಅರಣ್ಯ ಸಚಿವ ಡಾ ಕೆ ಪೊನ್ನುಮುಡಿ ನಾವು ಸಿಎಂ ಮತ್ತು ಡಿಸಿಎಂ ಅವರನ್ನ ಭೇಟಿ ಮಾಡಿದ್ದೇವೆ. ಅವರೊಂದಿಗೆ ಮಾತುಕತೆ ನಡೆಸಿ ಸಭೆಗೆ ಬರುವಂತೆ ತಿಳಿಸಿದ್ದೇವೆ. ಅವರು ಬರುತ್ತೇವೆ ಎಂದು ಎಂದು ಹೇಳಿದ್ದಾರೆ. ನಮಗೆ ಪಾಸಿಟಿವ್ ರೆಸ್ಪಾನ್ಸ್ ನೀಡಿದ್ದಾರೆ ಎಂದರು,