ಮನೆ Latest News ನಾನು ಸಿಎಂಗೆ ಸವಾಲ್ ಹಾಕುತ್ತೇನೆ, 150 ಕೋಟಿ ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ; ಸದನದಲ್ಲಿ ಸಿಎಂಗೆ...

ನಾನು ಸಿಎಂಗೆ ಸವಾಲ್ ಹಾಕುತ್ತೇನೆ, 150 ಕೋಟಿ ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ; ಸದನದಲ್ಲಿ ಸಿಎಂಗೆ ಸವಾಲು ಹಾಕಿದ ಶಾಸಕ ವಿಜಯೇಂದ್ರ

0

ಬೆಳಗಾವಿ; ವಿಜಯೇಂದ್ರ ವಿರುದ್ಧ ಸಚಿವ ಪ್ರಿಯಾಂಕ ಖರ್ಗೆ ಮಾಡಿದ ಆರೋಪಕ್ಕೆ ಶಾಸಕ ವಿಜಯೇಂದ್ರ ಸ್ಪಷ್ಟನೆ ನೀಡಿದ್ರು. ಪ್ರಿಯಾಂಕ್ ಖರ್ಗೆಯವರು ನನ್ನ ಮೇಲೆ ಮೊನ್ನೆ ಗುರುತರ ಆರೋಪ ಮಾಡಿದ್ದಾರೆ. ಹಿಂದಿನ ಮೈನಾರಿಟಿ ಕಮೀಷನ್ ಹೆಸರು ಹೇಳಿ ನನ್ನ ಮೇಲೆ ಆರೋಪ‌ ಮಾಡಿದ್ದಾರೆ. ಕಾಂಗ್ರೆಸ್ ಧುರೀಣರು ವಕ್ಫ್ ಆಸ್ತಿ ದುರುಪಯೋಗ ಕುರಿತು ಅನ್ವರ್ ಮಾಣಿಪ್ಪಾಡಿ ವರದಿ ಕೊಟ್ಟಿದ್ದರು. ನಂತರ ಉಪಲೋಕಾಯುಕ್ತ ನ್ಯಾ‌.ಆನಂದ್ ಅವರೂ ವಕ್ಫ್ ಕಬಳಿಕೆ ಬಗ್ಗೆ 2016 ರಲ್ಲಿ ವರದಿ ಕೊಟ್ಟಿದ್ದರು. ಆದರೆ ಅಂದಿನ ಸಿಎಂ ಉಪಲೋಕಾಯುಕ್ತರ ವರದಿಯನ್ನೇ ಮುಚ್ಚಿ ಹಾಕಿದೆ. ಸರ್ಕಾರಕ್ಕೆ ಸಲ್ಲಿಸಿರುವ ಅಲ್ಪಸಂಖ್ಯಾತರ ಆಯೋಗದ ಹಿಂದಿನ‌ ಅಧ್ಯಕ್ಷರು ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದ್ದನ್ನು ಸಿದ್ದರಾಮಯ್ಯ ಸಂಪುಟ ಸಚಿವ ತಿರಸ್ಕರಿಸಿತು ಎಂದರು.

ಸಿಎಂ ಅವರಿಗೆ ಸಿಬಿಐ ಬಗ್ಗೆ ಬಹಳ ವಿಶ್ವಾಸ ಇದೆ. ನಾನು ಸಿಎಂಗೆ ಸವಾಲ್ ಹಾಕುತ್ತೇನೆ, 150 ಕೋಟಿ ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ. ಜತೆಗೆ ಅನ್ವರ್ ಮಾಣಿಪ್ಪಾಡಿ ವರದಿಯ ತನಿಖೆಯನ್ನೂ ಸಿಬಿಐಗೆ ಕೊಡಲಿ ಸಿಎಂ. ಸಿಎಂ ಸಹ ನನ್ನ ಮೇಲೆ ಆರೋಪ ಮಾಡಿದ್ದಾರೆ. ಸಿಎಂ ಹಗರಣಗಳ ಸುಳಿಗೆ ಸಿಕ್ಕಿದ್ದಾರೆ, ಅದರಿಂದ ಬಚಾವಾಗಲು ನಮ್ಮ ವಿರುದ್ಧ ಆರೋಪ ಮಾಡ್ತಿದ್ದಾರೆ ಎಂದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಕೃಷ್ಟೇ ಬೈರೇಗೌಡ ಸ್ಪಷ್ಟೀಕರಣ ಮಾತ್ರ ಕೊಡಿ, ರಾಜಕೀಯ ಭಾಷಣ ಬೇಡ ಅಂತ ಆಕ್ಷೇಪ ವ್ಯಕ್ತಪಡಿಸಿದ್ರು. ಆಗ ವಿಜಯೇಂದ್ರ ಸಿಎಂ ಹಿಟ್ ಅಂಡ್ ರನ್ ಮಾಡೋದು ಬೇಡ. ಸಿಎಂ ಜವಾಬ್ದಾರಿಯಿಂದ ಮಾತಾಡಲಿ. ಮಾಣಿಪ್ಪಾಡಿ ವರದಿ, 150 ಕೋಟಿ ಆಮಿಷ ಆರೋಪ, ಮುಡಾ, ವಾಲ್ಮೀಕಿ ಹಾಗೂ ಬಾಣಂತಿಯರ ಸಾವು ಪ್ರಕರಣಗಳನ್ನು ಸಿಬಿಐ ತನಿಖೆಗೆ ಕೊಡಲಿ ಎಂದು ಸದನದಲ್ಲಿ ಶಾಸಕ ವಿಜಯೇಂದ್ರ‌ ಒತ್ತಾಯಿಸಿದ್ದಾರೆ.

ಇದಕ್ಕೆ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ಕೊಟ್ಟಿದ್ದಾರೆ. ಮಾಣಿಪ್ಪಾಡಿ ಅವರು ನಿಮ್ಮ ಮುಖಂಡರೇ, ಬಿಜೆಪಿ ವಕ್ತಾರರು. ನಿಮ್ಮ ವಿರುದ್ಧ ಪಿಎಂಗೆ, ಅಮಿತ್ ಷಾಗೆ ಪತ್ರ ಬರೆದಿದ್ದಾರೆ. ನಾನಲ್ಲ ಆರೋಪ ಮಾಡುತ್ತಿರೋದು, ನಿಮ್ಮವರೇ ನಿಮ್ಮ ವಿರುದ್ಧ ಮಾಡಿದ ಆರೋಪ ಎಂದಿದ್ದಾರೆ.

ವಕ್ಫ್ ಆಸ್ತಿ ವಿಚಾರವಾಗಿ ಶಾಸಕ ವಿಜಯೇಂದ್ರ‌ ವಿರುದ್ಧ ಪ್ರಿಯಾಂಕ್ ಖರ್ಗೆ ಆರೋಪ ವಿಚಾರ: ವಿಜಯೇಂದ್ರ ಸ್ಪಷ್ಟನೆಗೆ ಅವಕಾಶ ಕೊಡುವಂತೆ ವಿಪಕ್ಷ ಶಾಸಕರ ಆಗ್ರಹ

ಬೆಳಗಾವಿ; ವಕ್ಫ್ ಆಸ್ತಿ ವಿಚಾರವಾಗಿ ಶಾಸಕ ವಿಜಯೇಂದ್ರ‌ ವಿರುದ್ಧ ಪ್ರಿಯಾಂಕ್ ಖರ್ಗೆ ಆರೋಪ ವಿಚಾರಕ್ಕೆ ಶಾಸಕ ವಿಜಯೇಂದ್ರ ಸ್ಪಷ್ಟನೆಗೆ ಅವಕಾಶ ಕೊಡುವಂತೆ ವಿಪಕ್ಷ ಶಾಸಕರು ಆಗ್ರಹಿಸಿದ್ರು.

ಬಳಿಕ ಸದನದಲ್ಲಿ ಶಾಸಕ ವಿಜಯೇಂದ್ರ‌ ಸ್ಪಷ್ಟನೆ ನೀಡಿದ್ರು. ತಮ್ಮ ಆರೋಪದ ಬಗ್ಗೆ ಇಂದು ಮತ್ತೆ ಸದನದಲ್ಲಿ ಸಚಿವ ಖರ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ನಾನು‌ ಆರೋಪ ಮಾಡಿಲ್ಲ, ಪತ್ರಿಕಾ ವರದಿ ಉಲ್ಲೇಖ ಮಾಡಿದ್ದೇನೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಬಳಿರ ತಮ್ಮ ಅನುಪಸ್ಥಿತಿಯಲ್ಲಿ ಮಾಡಿದ್ದ ಆರೋಪದ ಬಗ್ಗೆ ಸದನದಲ್ಲಿ ಶಾಸಕ ವಿಜಯೇಂದ್ರ‌ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಸದನದಲ್ಲಿ ಆಡಳಿತ ಪಕ್ಷದ ಶಾಸಕರಿಂದ ವಿರೋಧ ವ್ಯಕ್ತವಾಯಿತು. ಸದನದಲ್ಲಿ ಗದ್ದಲದ ವಾತಾವರಣ. ನಿರ್ಮಾಣವಾಯ್ತು.150 ಕೋಟಿ ಆರೋಪದ ವಿಚಾರದಲ್ಲಿ ಸದನದಲ್ಲಿ ತೀವ್ರ ಗದ್ದಲ ಉಂಟಾಯಿತು. ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯಿತು.

ಈ ವೇಳೆ ಶಾಸಕ ವಿಪಕ್ಷ ನಾಯಕ ಅಶೋಕ್ ಮತ್ತು ಬಿಜೆಪಿ ಶಾಸಕರು ವಿಜಯೇಂದ್ರ‌ ಬೆನ್ನಿಗೆ ನಿಂತಿದ್ದಾರೆ. ಒಂದು ಹಂತದಲ್ಲಿ ಶಾಸಕ ಡಾ. ಅಶ್ವಥ್ ನಾರಾಯಣ ಮತ್ತು ಸಚಿವ ಪ್ರಿಯಾಂಕ ಖರ್ಗೆ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕತ್ತೆ ಕಾಯುತ್ತಿದ್ರಾ ಎಂದು ಪದ ಪ್ರಯೋಗಿಸಿದ್ದಾರೆ  ಸಚಿವ ಪ್ರಿಯಾಂಕ ಖರ್ಗೆ.

150 ಕೋಟಿ ಆರೋಪ, ಮಾಣಿಪ್ಪಾಡಿ ವರದಿ ಮತ್ತು ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸದನದಲ್ಲಿ ಶಾಸಕ ವಿಜಯೇಂದ್ರ ಒತ್ತಾಯಿಸಿದ್ದಾರೆ. ೧೫೦ ಕೋಟಿ ಆರೋಪದ ವಗ್ಗೆ ಸಚಿವ ಖರ್ಗೆ ಕ್ಷಮೆಗೆ ಸದನದಲ್ಲಿ ಶಾಸಕ ವಿಜಯೇಂದ್ರ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸದನದಲ್ಲಿ ತೀವ್ರ ಗದ್ದಲದ ವಾತಾವರಣ ನಿರ್ಮಾಣವಾಯ್ತು.