ಬೆಂಗಳೂರು: ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಹಿನ್ನೆಲೆ ಬೆಂಗಳೂರಿನಲ್ಲಿ ನಮ: ಶಿವಾಯ ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮ ನಡೆಯಿತು.
ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್, ಸುದೇಶ್ ಧನಕರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ, ಶೃಂಗೇರಿ ಮಠದ ವಿಧುಶೇಖರ ಭಾರತೀ ಸ್ವಾಮೀಜಿ, ಯಡತೊರೆ ಮಠದ ಶಂಕರ ಭಾರತೀ ಸ್ವಾಮೀಜಿ, ಬ್ರಹ್ಮಾನಂದ ಭಾರತೀ ಸ್ವಾಮೀಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಧರ್ಮ ಮಾರ್ಗದಲ್ಲಿ ನಡೆಯಬಹುದು ಎಂದು ತೋರಿಸಿಕೊಟ್ಟ ಧರ್ಮ ಹಿಂದೂ ಧರ್ಮ, ಸನಾತನ ಧರ್ಮ.ಹಿಂದೂ ಧರ್ಮ ಸಂಕಷ್ಟದಲ್ಲಿದ್ದಾಗ ಅವತರಿಸಿದವರೇ ಶಂಕರ ಭಗತ್ಪಾದರು.ನ್ಯಾಸಿ ಪಂಥಕ್ಕೆ ಮೇಲ್ಪಂಕ್ತಿಯಾಗಿರುವವರು ಭಾರತೀ ತೀರ್ಥ ಮಹಾ ಸ್ವಾಮಿಗಳುಮಾತು ಮತ್ತು ಕೃತಿಗಳಲ್ಲಿ ವ್ಯತ್ಯಾಸ ಇಲ್ಲದಂತೆ ನಮ್ಮ ಕಣ್ಣು ಮುಂದೆ ಇರುವಂತಹವರು ಭಾರತೀ ತೀರ್ಥ ಮಹಾಸ್ವಾಮಿಗಳು ಎಂದರು,ಇನ್ನು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದೇಶ ಕಳುಹಿಸಿದ್ದರು. ವೇದಾಂತ ಭಾರತಿಯ ಟ್ರಸ್ಟಿ ಅಶೋಕ ಹಾರನಹಳ್ಳಿ.ಪ್ರಧಾನಿ ಸಂದೇಶ ಓದಿದರು.
ಇನ್ನು ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮಾತನಾಡಿ ಸೋತ್ರಮಹಾಸಮರ್ಪಣೆ ಅವಿಸ್ಮರಣೀಯ ಕಾರ್ಯಕ್ರಮ.ನಾನು ಇಲ್ಲಿ ಕಳೆದು ಹೋಗಿದ್ದೇನೆ.ಮಂತ್ರ ಪಠಣೆ ನಮ್ಮ ಹೃದಯವನ್ನು ಶುದ್ಧಿಕರಿಸಿದೆ.ವಸುದೈವ ಕುಟುಂಬಕಂ ನಮ್ಮ ಸಂಸ್ಕೃತಿಯ ತಳಪಾಯ.ವೇದ ಮಂತ್ರ ಪಠಣೆ ಆಧ್ಯಾತ್ಮಿಕ ಸೇತುವೆ ಇದ್ದಂತೆ.ಮಂತ್ರ ಪಠಣೆ ನಮ್ಮ ಪರಿಸರದ ಮೇಲೆ ವಿಭಿನ್ನ ಪ್ರಭಾವ ಉಂಟು ಮಾಡುತ್ತದೆ.ಚಾಣಕ್ಯನ ನೀತಿಯನ್ನು ನಾವು ನಂಬಿದ್ದೇವೆ.ನೀವು ಸತ್ಯದ ಮಾರ್ಗದಲ್ಲಿ ನಡೆದರೆ ಖುಷಿಯ ಮಾರ್ಗದಲ್ಲಿ ಇರುತ್ತೀರಿ ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ನಾವೆಲ್ಲರೂ ಭಕ್ತಿ ಸಾಗರದಲ್ಲಿ ಭಾಗಿಯಾಗಿದ್ದೇವೆ. ಭಾರತೀ ತೀರ್ಥರು ಧರ್ಮ ಉಳಿಸುವ ಕೆಲಸ ಮಾಡಿದ್ದಾರೆ.ನನಗೂ ಮಠಕ್ಕೂ ಗುರು-ಭಕ್ತನ ಸಂಬಂಧ.ಶೃಂಗೇರಿ ಮಠ ಧರ್ಮಕ್ಕಾಗಿ ಕೆಲಸ ಮಾಡುತ್ತಿದೆ.ನಮ್ಮ ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ.ಇಡೀ ಸರ್ಕಾರ ಮಠದ ಜೊತೆಗೆ ಇರಲಿದೆ.ನಮಗೆ ಎಲ್ಲಾ ನಂಬಿಕೆ ಶಿವನೇ ಎಂದರು.