ಮನೆ Latest News ಜಾತಿ ವ್ಯವಸ್ಥೆ ಬಗ್ಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ

ಜಾತಿ ವ್ಯವಸ್ಥೆ ಬಗ್ಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ

0

ಗದಗ: ಜಾತಿ ವ್ಯವಸ್ಥೆ ಬಗ್ಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಗದಗದ ಲಕ್ಷ್ಮೇಶ್ವರ ಪಟ್ಟಣದ ಖಾಸಗಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಾತಿ ವ್ಯವಸ್ಥೆ ಹೋದಾಗ ಮಾತ್ರ ಮಾನವ ಸಮಾಜ ನಿರ್ಮಾಣಕ್ಕೆ ಸಾಧ್ಯ.ಜಾತ್ಯಾತೀತ ದೇಶವನ್ನು ನಿರ್ಮಾಣ ಮಾಡ್ಬೇಕು. ನಮ್ಮ ದೇಶದಲ್ಲಿ ಜಾತಿಯತೆ, ಅಸಮಾನತೆ ಇದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ, ವೈಚಾರಿಕ ಮನೋಭಾವ ಬೆಳೆಯಬೇಕು.ಬಸವಣ್ಣನವರು 800 ವರ್ಷಗಳ ಹಿಂದೆ ಹೇಳಿದ್ದಾರೆ.

ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಾವಾದ್ರು ಕಂದಾಚಾರ, ಜಾತೀಯತೆ ಹೋಗಿಲ್ಲ.ದುರ್ದೈವ ಎಂದ್ರೆ ಶಿಕ್ಷಿತರಲ್ಲಿ ಸಾಕಷ್ಟು ಜಾತೀಯತೆ ಇದೆ. ಉದ್ಯೋಗಕ್ಕಾಗಿ ಶಿಕ್ಷಣ ಪಡೆಯೋದಲ್ಲ, ಮನುಷ್ಯತ್ವಕ್ಕಾಗಿ ಶಿಕ್ಷಣ ಪಡೆಯಬೇಕು. ಸಿದ್ದ ಎಂದ್ರೆ ಈಶ್ವರ, ರಾಮ ವಿಷ್ಣು ಅಂತಾ ಉಲ್ಲೇಖ ಇದೆ. ‘ಸಿದ್ದ.. ರಾಮ’ ದ್ವಂದ್ವ ನಾಮದಲ್ಲಿ ಸಿದ್ದರಾಮಯ್ಯ ಇದೆ.ದೇವರು ಬಯಸೋದೆ ಅದನ್ನೇ.. ದೇವರನ್ನ ನಮ್ಗೆ ಇಷ್ಟಾ ಬಂದಗೆ ಉಪಯೋಗಿಸಿಕೊಳ್ಳಲು ಆಗೋಲ್ಲ ಎಂದು ತಿಳಿಸಿದ್ದಾರೆ.

ದೇವರು ಎಂದಿಗೂ ನೀವು ಮನುಷ್ಯರಾಗಿರೀ ಎಂದು ಹೇಳುತ್ತಾರೆ. ಅಸಮಾನತೆ ಇರೀ ಅಂತಾ ಹೇಳಿಲ್ಲ. ನಮ್ಮ ದೇಶದಲ್ಲಿ ಅನೇಕ ಧರ್ಮಗಳಿವೆ. ಹಿಂದೂ-ಮುಸ್ಲಿಂ ಕ್ರೈಸ್ತ, ಜೈನ್,ಬೌದ್ಧ ಸೇರಿದಂತೆ ಸಿಖ್ ಧರ್ಮ ಗಳಿವೆ.ದ್ವೇಷವನ್ನು ಬಿತ್ತುವಂತಹ ಕೆಲಸ ಮಾಡೋಲ್ಲ. ಯಾವುದಾದರೂ ಧರ್ಮ ದ್ವೇಷ ಹುಟ್ಟು ಹಾಕುವಂತ ಕೆಲಸ ಮಾಡುತ್ತಾ..? ಎಲ್ಲಾ ಧರ್ಮಗಳು ಪ್ರೀತಿಯನ್ನ ಬಯಸುತ್ತವೆ ಎಂದಿದ್ದಾರೆ.