ಬೆಂಗಳೂರು: ಕುರ್ಚಿ ತೊರೆಯಲು ಸಿದ್ಧರಾದ್ರ ಸಿಎಂ ಅನುಮಾನ ಜನರನ್ನು ಕಾಡುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಇಂದು ಕೆಪಿಸಿಸಿ ಸಭೆಯಲ್ಲಿ ಸಿದ್ದರಾಮಯ್ಯ ತ್ಯಾಗದ ಮಾತುಗಳನ್ನು ಆಡಿದ್ದಾರೆ.
ರಾಹುಲ್ ಗಾಂಧಿ, ಸೋನಿಯಾ ಗಾಂಧಿ ತ್ಯಾಗ ಮಾಡಿದ್ದಾರೆ. ನಾವು ಅದೇ ದಾರಿಯಲ್ಲಿ ನಡೆಯಬೇಕು. ಜೆಡಿಎಸ್ ನವರು ಯಾರ ಜೊತೆಗೆ ಬೇಕಾದರೂ ಸೇರಿಕೊಳ್ಳುತ್ತಾರೆ. ಜೆಡಿಎಸ್ ಜಾತ್ಯತೀತ ಆಗಲು ಸಾಧ್ಯವಿಲ್ಲ. ಜಾತ್ಯಾತೀತ ಎನ್ನುವ ಪದ ತೆಗೆದು ಹಾಕಿ ಎಂದು ಅನೇಕ ಬಾರಿ ಹೇಳಿದ್ದೇನೆ. ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಆಗಿದ್ದಾರೆ.ಕಾಂಗ್ರೆಸ್ ಸಿದ್ದಾಂತ ಎಲ್ಲ ಕಾಲಕ್ಕೂ ದೇಶದಲ್ಲಿ ಪ್ರಸ್ತುತವಾಗಿದೆ. ಬಿಜೆಪಿಯವರು ಬದಲಾವಣೆಗೆ ವಿರುದ್ಧ ಇದ್ದಾರೆ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ಕಾಂಗ್ರೆಸ್ ನ ಸಾಕಷ್ಟು ನಾಯಕರು ತ್ಯಾಗ ಮಾಡಿದ್ದಾರೆ…!. ಸೋನಿಯ ಗಾಂಧಿ ಅವರು ಅಧಿಕಾರವನ್ನೆ ತ್ಯಾಗ ಮಾಡಿದ್ದಾರೆ..!. ರಾಹುಲ್ ಗಾಂಧಿ ಅವರು ಪಕ್ಷಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ…!. ನಾವು ಕೂಡ ಕೆಲವೊಮ್ಮೆ ತ್ಯಾಗ ಮಾಡ ಬೇಕಾಗುತ್ತದೆ…..!. ಸರ್ವ ಸದಸ್ಯರ ಸಭೆಯಲ್ಲಿ ಸಿದ್ದರಾಮಯ್ಯ ತ್ಯಾಗದ ಮಾತುಗಳನ್ನು ಹೇಳಿದ್ದಾರೆ.
ಕಾಂಗ್ರೆಸಿಗರು ಮಾತ್ರ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರು. ಬೇರೆಯವರು ಯಾರಾದರೂ ಹೋರಾಟ ತ್ಯಾಗ ಮಾಡಿದ್ರಾ?. ಬೇರೆ ಯಾರೂ ಮಾಡಿಲ್ಲ. ಆರ್ ಎಸ್ ಎಸ್ ನವರು ಯಾರೂ ತ್ಯಾಗ ಬಲಿದಾನ ಮಾಡಿಲ್ಲ. ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ತ್ಯಾಗ ಬಲಿದಾನ ಮಾಡಿದೆ. ನಮ್ಮಲ್ಲೂ ಕೂಡ ಸಾಕಷ್ಟು ನಾಯಕರು ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿ ಯವರು ತ್ಯಾಗ ಮಾಡಿದ್ದಾರೆ. ನಾವೂ ಕೂಡ ಅದೇ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು