ಬೆಂಗಳೂರು; ಕಾಶ್ಮೀರದ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿಕೆ ಬಾಲಿಶವಾಗಿದೆ ಎಂದು ಬೆಂಗಳೂರಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಯುದ್ಧದ ಕುರಿತು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಇಡೀ ದೇಶ ಒಗ್ಗಟ್ಟಿನಲ್ಲಿ ನಿಲ್ಲುವ ಸಂದರ್ಭದಲ್ಲಿ, ಕಾಶ್ಮೀರದ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿಕೆ ಬಾಲಿಶವಾಗಿದೆ. ಅವರ ಹೇಳಿಕೆಯನ್ನು ಖಂಡಿಸುತ್ತೇನೆ.ವಾಸ್ತವದ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಇಡೀ ದೇಶವೇ ಒಂದಾಗಿದೆ.ಈ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ಶೋಭೆ ತರಲ್ಲ.ಇದನ್ನು ಖಂಡಿಸುತ್ತೇನೆ, ದೇಶದ ಜನರ ಕ್ಷಮೆಯನ್ನು ಕೇಳಿ.ಇನ್ನಾದರು ಅವರ ನಡವಳಿಕೆ ತಿದ್ದುಕೊಳ್ಳುವಂತೆ ಒತ್ತಾಯ ಮಾಡುತ್ತೇನೆ ಎಂದಿದ್ದಾರೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪಾಕಿಸ್ತಾನ ಟಿವಿಯಲ್ಲಿ ಸಿದ್ದರಾಮಯ್ಯ ಯುದ್ಧ ಪ್ರಸ್ತಾಪ ವಿಚಾರದ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ಅವರ ಅಲ್ಪಸಂಖ್ಯಾತರ ಮೇಲೆ ಎಷ್ಟು ಪ್ರೀತಿ ಇದೆ ಅಂತ ರಾಜ್ಯದ ಜನರಿಗೆ ಗೊತ್ತಿದೆ.ಯಾವ ಮಟ್ಟಕ್ಕೆ ಬೇಕಾದರೂ ಇಳಿತಾರೆ ಅಂತ ಸತ್ಯ ರಾಜ್ಯದ ಜನರಿಗೆ ಗೊತ್ತಿದೆ. ದೇಶದ ವಿಚಾರ ಬಂದಾಗ ಕಾಶ್ಮೀರದ ಘಟನೆ ಪ್ರತಿಯೊಬ್ಬ ಸ್ವಾಭಿಮಾನಿ ಭಾರತೀಯರು ಖಂಡಿಸಿದ್ದಾರೆ. ಭಾರತ ಯಾವತ್ತೂ ಯುದ್ಧ ಸಾರಿರುವ ಇತಿಹಾಸ ಇಲ್ಲ. ಆದರೆ ಭಾರತೀಯರ ರಕ್ಷಣೆ ಮಾಡುವ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದರೆ ಎಲ್ಲಾ ಸಿಎಂ ಜೊತೆಗೆ ಚರ್ಚೆ ಮಾಡಿ ಪ್ರಧಾನಿ ಮೋದಿ ಒಂದು ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದರ ನಡುವೆ ಸಿದ್ದರಾಮಯ್ಯ ಅವರು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬಾರದು. ಈ ಸಿದ್ದರಾಮಯ್ಯ ಅವರ ದೃಷ್ಟಿಕೋನ ಖಂಡಿತ ಸರಿಯಲ್ಲ. ಅಕ್ಷಮ್ಯ ಅಪರಾಧ.ಯಡಿಯೂರಪ್ಪ ಹೇಳಿದಂತೆ, ಇಡೀ ದೇಶದ ಜನರ ಕ್ಷಮೆ ಕೇಳಬೇಕು.ಯಾರು ಸಹ ಸಿದ್ದರಾಮಯ್ಯ ಅವರು ಈ ರೀತಿಯ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.
ಮುಂದಿನ ಕ್ಯಾಬಿನೆಟ್ ನಲ್ಲಿ ಜಾತಿ ಜನಗಣತಿ ಪುನಃ ಚರ್ಚೆ ವಿಚಾರದ ಬಗ್ಗೆ ಮಾತನಾಡಿ ಇದು ಎರಡನೇ ಸುತ್ತಿನ ಸಭೆ ಅಲ್ಲ ರೀ.ಸಿದ್ದರಾಮಯ್ಯ ಹಲವು ಸುತ್ತಿನ ಸಭೆ ಮಾಡಿದ್ದಾರೆ.ಸಿಎಂ ಸ್ಪೆಷಲ್ ಕ್ಯಾಬಿನೆಟ್ ಕರೆದಿದ್ದರು.ಕ್ಯಾಬಿನೆಟ್ ನಲ್ಲಿ ಏನ್ ತೀರ್ಮಾನ ಮಾಡಬೇಕು ಅಂತ ರೆಸ್ಯೂಲೇಷನ್ ಸಹ ರೆಡಿ ಇತ್ತು.ಆದರೆ ಕ್ಯಾಬಿನೆಟ್ ನಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯ ಆಗಿಲ್ಲ ಅಂದರೆ ಅದಕ್ಕೆ ಸಿಎಂ ಉತ್ತರ ಕೊಡಬೇಕು.ಬಿಜೆಪಿಯವರು ಬಿಡಿ ಟೀಕೆ ಮಾಡ್ತಾರೆ ಅಂತ ಹೇಳ್ತಾರೆ.ಆದರೆ ಸ್ವತಃ ಕಾಂಗ್ರೆಸ್ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ಏನ್ ಹೇಳಿದ್ದಾರೆ. ಜಾತಿ ಜನಗಣತಿ ಔಟ್ ಡೇಟೇಡ್ ಹತ್ತು ವರ್ಷಗಳು ಆಗಿದೆ, ಇದು ವೈಜ್ಞಾನಿಕವಾಗಿಲ್ಲ. ಈಡಿಗರು, ಮಡಿವಾಳ ಸಮುದಾಯ ಸೇರಿದಂತೆ ಅನೇಕ ಹಿಂದುಳಿದ ಸಮುದಾಯದವರು ಪ್ರಶ್ನೆ ಮಾಡ್ತಿದ್ದಾರೆ. ಆದರೆ ಯಾಕಿಷ್ಟು ಆತುರ ಸಿದ್ದರಾಮಯ್ಯ ಅವರು ಮಾಡ್ತಿದ್ದಾರೆ?. ನೀವು ಹಿಂದೆ ಸಿಎಂ ಆಗಿದ್ದಾಗ ಅನುಷ್ಠಾನ ಮಾಡಲು ಆಗಿಲ್ಲ. ಈಗ ಹತ್ತು ವರ್ಷಗಳು ಕಳೆದಿದೆ. ಆತುರಾತುರವಾಗಿ ಸಿದ್ದರಾಮಯ್ಯ ಗೊಂದಲ ಉಂಟುಮಾಡಲು ಹೊರಟಿದ್ದಾರೆ, ಇದು ಶೋಭೆ ತರಲ್ಲ. ಬಿಜೆಪಿ ಆಗ್ರಹಿಸುತ್ತೆ, ಹಿಂದುಳಿದ ಸಮುದಾಯದ ಆರ್ಥಿಕ ಸಾಮಾಜಿಕ ಸಮೀಕ್ಷೆ ಮತ್ತೊಮ್ಮೆ ಆಗಲಿ ಎಂದಿದ್ದಾರೆ.
ನಾನು ಪಾಕಿಸ್ತಾನದ ಜೊತೆ ಯುದ್ಧ ಮಾಡೋದೇ ಬೇಡ ಅಂತ ಹೇಳಿಲ್ಲ; ಸಿಎಂ ಸಿದ್ದರಾಮಯ್ಯ ಹೇಳಿಕೆ
ಬೆಂಗಳೂರು; ನಾನು ಪಾಕಿಸ್ತಾನದ ಜೊತೆ ಯುದ್ಧ ಮಾಡೋದೇ ಬೇಡ ಅಂತ ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಯುದ್ಧ ಅನಿವಾರ್ಯ ಆದ್ರೆ ಮಾತ್ರ ಮಾಡಬೇಕು. ಯುದ್ಧದಿಂದ ಪರಿಹಾರ ಅಂತ ಅಲ್ಲ ಯುದ್ಧ ಬೇಡವೇ ಬೇಡ ಅಂತ ಹೇಳಿಲ್ಲ.ನಾನು ಪಾಕಿಸ್ತಾನದ ಜೊತೆ ಯುದ್ಧ ಮಾಡೋದೇ ಬೇಡ ಅಂತ ಹೇಳಿಲ್ಲ. ಯುದ್ಧ ಪರಿಹಾರ ವಲ್ಲ.ಭದ್ರತೆ ಕೊಡಬೇಕು ಅಲ್ಲವೇ, ಯಾರ ಜವಾಬ್ದಾರಿ. ಅದರ ವೈಫಲ್ಯ ಇದೆ ಅಂತ ಹೇಳಿದ್ದೀನಿ.೪೦ ಜನ ಸೈನಿಕರು ಸತ್ತಿದ್ದರು, ಈಗ ೨೭ ಜನ ಸತ್ತಿದ್ದಾರೆ.ಯುದ್ಧ ಅನಿವಾರ್ಯ ಆದ್ರೆ ಮಾಡಬೇಕು. ತಕ್ಷಣಕ್ಕೆ ಯುದ್ದ ಬೇಡ ಅಂತ ಹೇಳಿದ್ದೀನಿ.ಬಿಜೆಪಿಯವರು ಉತ್ತರ ಕೋಡೋದೇ ಸರಿಯಲ್ಲ ಎಂದಿದ್ದಾರೆ.
ಇನ್ನು ಕಸ್ತೂರಿರಂಗನ್ ಬಗ್ಗೆ ಮಾತನಾಡಿದ ಅವರು ಅವರು ಪಶ್ಚಿಮ ಘಟ್ಟಗಳ ಪರಿಸರ ಅಧ್ಯಯನ ದಲ್ಲಿ ವರದಿ ಕೊಟ್ಟಿದ್ದರು. ಕರ್ನಾಟಕಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರನ್ನ ಸ್ಮರಿಸಬೇಕು.ಅವರ ಕೊಡುಗೆಯನ್ನು ದೇಶ ಸ್ಮರಿಸಬೇಕು. ಅವರು ಅಸ್ವಸ್ಥರಾಗಿದ್ದರು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವಿಜ್ಞಾನ ಕ್ಷೇತ್ರಕ್ಕೆ ನಷ್ಟ, ದೇಶ ಕಂಡಂತಹ ಹೆಸರಾಂತ ವಿಜ್ಞಾನಿ. ಬಾಹ್ಯಾಕ್ಷೇತ್ರ ದಲ್ಲಿ ಅಪಾರವಾದ ಕೊಡುಗೆ ದೇಶಕ್ಕೆ ಕೊಟ್ಟಿದ್ದಾರೆ.ಬಹಳ ದೀರ್ಘ ಕಾಲ ಇಸ್ರೋ ಅಧ್ಯಕ್ಷ ರಾಗಿದ್ದರು. ಅವರ ಕೊಡುಗೆ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದದ್ದು. ರಾಷ್ಟ್ರದಿಂದ ಕೊಡುವ ಪ್ರಶಸ್ತಿ ಕೊಟ್ಟಿದ್ದಾರೆ. ನಾವು ಕೊಡುವ ರಾಜ್ಯಪ್ರಶಸ್ತಿ ಕೂಡ ಕೊಟ್ಟಿದ್ದೇವೆ.ಕರ್ನಾಕಟಕ್ಕೆ ಬಹಳ ಕೊಡುಗೆ ಕೊಟ್ಟಿದ್ದಾರೆ. ಅವರನ್ನು ನಾವು ಸ್ಮರಿಸುತ್ತೇವೆ. ಅವರನ್ನು ನೆನಸಿಕೊಳ್ಳುವುದು ರಾಜ್ಯ ಸರಕಾರದ ಕರ್ತವ್ಯ ಎಂದು ತಿಳಿಸಿದ್ರು.