ಮನೆ Latest News ಸಿದ್ದರಾಮಯ್ಯ ಹೇಳಿಕೆ ಹಾಸ್ಯಾಸ್ಪದ : ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಹೇಳಿಕೆ

ಸಿದ್ದರಾಮಯ್ಯ ಹೇಳಿಕೆ ಹಾಸ್ಯಾಸ್ಪದ : ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಹೇಳಿಕೆ

0

ಬೆಂಗಳೂರು; ಪಾಕಿಸ್ತಾನದ ವಿರುದ್ಧ ಯುದ್ದ ಅವಶ್ಯಕತೆ ಇಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ  ಹಾಸ್ಯಾಸ್ಪದ ಎಂದು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜಕೀಯದಲ್ಲಿ ಮತ್ತು ಆಡಳಿತದಲ್ಲಿ 50 ವರ್ಷಕ್ಕಿಂತ ಹೆಚ್ಚು ಅನುಭವ ಇರೋರು ಸಿದ್ದರಾಮಯ್ಯ ಅವರು. ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಅವರು ಮೈ ಮರೆತು ಹೇಳಿದ್ದಾರಾ ಗೊತ್ತಿಲ್ಲ. ಯುದ್ಧ ಮಾಡಬಾರದು ಅಂತ ಸಾರ್ವಜನಿಕವಾಗಿ ಹೇಳಬೇಕಾ?. ಬಿಗಿ ಭದ್ರತೆಯನ್ನ ಮಾಡಿ ಅಂತ ಹೇಳಿದ್ದಾರೆ ಸಂತೋಷ. ಬಿಗಿ ಮಾಡಿ ಅಂತ‌ ಹೇಳಿ ಸತ್ತವರು ವಾಪಾಸ್ ಬರ್ತಾರಾ ಅಂತ ಹೇಳ್ತಾರೆ .ಕುಮ್ಮಕ್ಕು ಕೊಟ್ಟವರಿಗೆ ಪಾಠ ಕಲಿಸೋದು ಬೇಡವಾ?. ನಮ್ಮವರಿಗೆ ಬಂದು ಹೊಡೆದ್ರೂ ಪರವಾಗಿಲ್ಲ. ಪಾಕಿಸ್ತಾನಕ್ಕೆ ಮಾತ್ರ ಏನು ಮಾಡಬೇಡಿ ಅನ್ನೋದು ಇವರ ಅರ್ಥ. ದೇಶ ವಿಭಜನೆ ಆದ ಬಳಿಕವೂ ಮೂರು ಯುದ್ಧ ಮಾಡಿದ್ದಾರೆ. ಆದ್ರೂ ಪಾಠ ಕಲಿತಿಲ್ಲ, ಕೆಣಕಿ ಕೆಣಕಿ ಯುದ್ಧಕ್ಕೆ ಕರೀತಾರೆ.ತಿನ್ನೋಕೆ ಅನ್ನ‌ ಇಲ್ಲ, ದೇಶ ಸಂಪೂರ್ಣ ಕಂಗೆಟ್ಟಿದೆ. ಸಾರ್ವಜನಿಕವಾಗಿ ಹೇಳಿಕೆ ನೀಡೀರೋದು ಸರಿಯಲ್ಲ. ಬನ್ನಿ ನಮ್ಮ ಜನರನ್ನ ಕೊಲ್ಲಿ ಅಂತ ತುಷ್ಟೀಕರಣ ಮಾಡುವಂತೆ ಮಾಡಿದ್ದಾರೆ. ಪಾಕಿಸ್ತಾನವನ್ನ ಓಲೈಕೆ ಮಾಡುವ ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ.

ಮೋದಿ ಸಭೆಗೆ ಹಾಜರಾಗಿಲ್ಲ ಅನ್ನೋ ಟೀಕೆ ವಿಚಾರದ ಬಗ್ಗೆ ಮಾತನಾಡಿ ಗೃಹ ಸಚಿವರು ಸಭೆ ಕರೆದಿದ್ದಾರೆ, ಸಭೆ ಮಾಡಿದ್ದಾರೆ. ಎಲ್ಲಾ ಪಕ್ಷದ ನಾಯಕರನ್ನ ಕರೆದು ಚರ್ಚೆ ಮಾಡಿದ್ದಾರೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದವರ ಮನೆ ಕೆಡವಲಾಗಿದೆ. ನೀರನ್ನ ತಡೆಯುವ ಕೆಲಸ ಮಾಡಲಾಗಿದೆ. ಪಾಕಿಸ್ತಾನ ಆತಂಕವಾದಿ ದೇಶ, ಆತಂಕವಾದಿಗಳಿಗೆ ಬೆಂಬಲ ಕೊಡುವ ಕೆಲಸ ಮಾಡ್ತಿದೆ ಅಂತ ವಿಶ್ವಕ್ಕೆ ತೋರಿಸಲಾಗಿದೆ. ಪಾಕಿಸ್ತಾನದ ಕುಕ್ಕರ್ ಕೂಗಿಸಿದ್ರೆ, ಇವರಿಗೆ ಆತಂಕ ಆಗಿದೆ. ಸಿದ್ದರಾಮಯ್ಯ ಅವರ ಹೇಳಿಕೆಗೆ ಉಗಿಯುತ್ತಿದ್ದಾರೆ. ಇವರು ನಮ್ಮ ಮುಖ್ಯಮಂತ್ರಿನಾ ಅಂತ ಎಲ್ಲರೂ ಉಗಿತಿದ್ದಾರೆ‌. ಮತ್ತೊಬ್ಬ ಸಚಿವ ತಿಮ್ಮಾಪುರ ಧರ್ಮ ಕೇಳಿ ಹೊಡೆದ್ರಾ ಅಂತ ಭಯೋತ್ಪಾದಕರ ವಕ್ತಾರನ ರೀತಿ ಮಾತಾಡ್ತಿದ್ದಾರೆ. ಪ್ಯಾಂಟ್ ಬಿಚ್ಚಿಸಿ ನೋಡಿ ಕೊಂದಿದ್ದಾರೆ. ತಿಮ್ಮಾಪುರ್‌ಗೆ ನೈತಿಕತೆ ಇದೆಯಾ.?. ಸಿದ್ದರಾಮಯ್ಯ, ತಿಮ್ಮಾಪುರ ಇಬ್ಬರಿಗೂ ನೈತಿಕತೆ ಇಲ್ಲ. ಇವರು ಪ್ರಜ್ಞೆ ಇಟ್ಟುಕೊಂಡು ಮಾತಾಡ್ತಾರಾ? ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇಡೀ ದೇಶ ಶೋಕದಲ್ಲಿ ಇರುವಾಗ, ಇವರ ರಾಜಕೀಯ ಹೇಳಿಕೆ ಸರಿಯಲ್ಲ. ಯುಪಿಎ ಇದ್ದಾಗ ಪಾಕಿಸ್ತಾನ, ಇಂಡಿಯಾ ಚರ್ಚೆ ಇತ್ತು. ಎನ್‌ಡಿಎ ಬಂದ ಮೇಲೆ ಯಾವುದಾದ್ರೂ ಚರ್ಚೆ ಇದೆಯಾ.?. ಭಾರತದ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ. ಭಾರತದ ಬಳಿ ಅನೇಕ ದೇಶ ಕೇಳಿಕೊಂಡು ಬರ್ತಿದೆ ಎಂದ್ರು. ಕರ್ನಾಟಕದಲ್ಲಿ ಪಾಕಿಸ್ತಾನದವರನ್ನ ಹೊರಗೆ ಹಾಕುವ ವಿಚಾರದ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ಅವರಿಗೆ ಪುಲ್ವಾಮಾದಲ್ಲಿ ತೀರಿ ಹೋದವರ ಬಗ್ಗೆ ಗೊತ್ತಾಗುತ್ತೆ. ಪೆಹಲ್ಗಾಮ್ ನಲ್ಲಿ ತೀರೋದವರ ಬಗ್ಗೆ ಗೊತ್ತಿರುತ್ತೆ. ಆದ್ರೆ ಕರ್ನಾಟಕದಲ್ಲಿ ಎಷ್ಟು ಜನ ಇದ್ದಾರೆ ಅವರಿಗೆ ಗೊತ್ತಿಲ್ಲ. ಕೇಂದ್ರದ ಸೂಚನೆಯಂತೆ ಪಾಕಿಸ್ತಾನದವರನ್ನ ಹೊರಗೆ ಹಾಕಬೇಕು.ಎಲ್ಲಾ ನಿಯಮಗಳನ್ನ ಪಾಲಿಸಬೇಕು ಎಂದರು.

ಜಾತಿ ಜನಗಣತಿ ವಿಚಾರದ ಬಗ್ಗೆ ಮಾತನಾಡಿ ಇದು ಬಹಳ ಜಟಿಲವಾದ ವಿಚಾರ. ಈ ಸರ್ವೆ ಅಥವಾ ಜಾತಿಗಣತಿ. ಸರ್ವೆ ಹೆಸರಲ್ಲಿ ನಡೆದಿರೋ ಜಾತಿಗಣತಿ ಸರಿಯಾಗಿ ನಡೆದಿಲ್ಲ. ಪರಿಶಿಷ್ಟ ಜಾತಿ ಒಳ ಮೀಸಲಾತಿ ಯಾಕೆ ಒಪ್ಪಲಿಲ್ಲ. ಇದೇ ಕಾಂಗ್ರೆಸ್ ಸರ್ಕಾರ ಯಾಕೆ ಒಪ್ಪಲಿಲ್ಲ. ಇದೇ ಕಾಂಗ್ರೆಸ್ ಸರ್ಕಾರ ದ್ವಂದ್ವ ನೀತಿ ಯಾಕೆ? .ಸರ್ಕಾರ, ಸಮಾಜ ಎಲ್ಲರಿಗೂ ಸೇರಿದ್ದು. ಎಲ್ಲರಿಗೂ ನ್ಯಾಯ ಸಿಗಬೇಕು. ಯಾರಿಗೂ ಅನ್ಯಾಯ ಆಗಬಾರದು. ಈ ವಿಚಾರದಲ್ಲಿ ಸೂಕ್ಮತೆ ಬೇಕು. ಈ ಬಗ್ಗೆ ಜಯಪ್ರಕಾಶ್ ಹೆಗ್ಡೆ ಕೂಡ ಹೇಳಿದ್ದಾರೆ. ಸಂವಿಧಾನ ಎಲ್ಲಾ ವಿಚಾರದಲ್ಲೂ ಸ್ಪಷ್ಟವಾಗಿದೆ.ಅಶ್ವಥ್ ನಾರಾಯಣ್ ಎಲ್ಲಾ ಜಾತಿಗಳನ್ನೂ ಪ್ರತಿನಿಧಿಸುವವನು. ಎಲ್ಲಾ ಜಾತಿಗಳಿಗೂ ನ್ಯಾಯ ಸಿಗುವ ನಿಟ್ಟಿನಲ್ಲಿ ಅನ್ಯಾಯ ಆಗಿದ್ರೆ ಅರಿಪಡಿಸುವ ಗುರಿ ಇದೆ. ಕಾಂಗ್ರೆಸ್ ನವರು ಹಿಂದೂ ಸಮಾಜ ಒಡೆಯುವ ಕೆಲಸಮಾಡ್ತಿದ್ದಾರೆ. ಇವರ ಆಡಳಿತ ನೋಡಿದ್ದೇವೆ‌. ಬಾಣಂತಿಯರ ಸಾವಾಗಿದೆ, ಔಷಧಿ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ರು.