ಬೆಂಗಳೂರು; ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ಎಲ್ಲಾ 14 ಸೈಟುಗಳನ್ನು ವಾಪಾಸ್ ನೀಡುತ್ತೇನೆ ಎಂದು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಅವರು ನನ್ನ ಹಿಟ್ ಅಂಡ್ ರನ್ ಅಂತಾರೆ. ಅವರನ್ನು ,ಯುಟರ್ನ್ ಸಿದ್ದರಾಮಯ್ಯ ಎಂದು ಕರೆಯಬಹುದಾ? ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ರಾಜಕೀಯ ಒಂದೊಂದು ರೀತಿಯ ತಿರುವು ಪಡೆಯುತ್ತಿದೆ.ಈ ಸರಕಾರದಲ್ಲಿ ರಾಜ್ಯಪಾಲರ ಮುಂದೆ ಸಿಎಂ ತನಿಖೆಗೆ ಅನುಮತಿ ಗೆ ಹೋಯ್ತು.ಹಲವಾರು ಕ್ಯಾಬಿನೆಟ್ ಸಭೆಗಳನ್ನು ಕರೆದಿದ್ದಾರೆ. ಸಿಎಂ ಅನೇಕ ಹೇಳಿಕೆಗಳನ್ನು ನೀಡಿದ್ದಾರೆ.ಎಲ್ಲವನ್ನು ಪರಾಮರ್ಶೆ ಮಾಡಬೇಕಿದೆ.ಮುಡಾದಿಂದ ಆದ ತಪ್ಪು ಎಂದು ಸಿಎಂ ಆಗಿದೆ ಹೇಳಿದ್ದರು.ತಮ್ಮ ಗಮನಕ್ಕೆ ಬಾರದೆ ತಮ್ಮ ಆಸ್ತಿ ಒತ್ತುವರಿ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಅದರ ಆಸ್ತಿ ಮೊತ್ತ 62 ಕೋಟಿ ಎಂದು ಸಿಎಂ ಹೇಳಿದ್ದರು.ಇಷ್ಟೆಲ್ಲಾ ಆದಮೇಲೆ ವಕೀಲರು ಜುಜುಬಿ ಸೈಟು ಎಂದು ಹೇಳಿದ್ದರು.ನಿನ್ನೆ ಸಚಿವರೊಂದಿಗೆ ಸಿಎಂ ಮಾತನಾಡಿದ್ದಾರೆ.ಕಾವೇರಿಗೆ ಕಾರು ಬರ್ ಅಂತಾ ಬರ್ತಾವೆ ಬರ್ ಅಂತಾ ಹೋಗ್ತವೆ.ನ್ಯಾಯಕ್ಕೆ ಹುಟ್ಟಿರೋ ಹೆಚ್.ಕೆ ಪಾಟೀಲ್ ಹೇಳಿಕೆ ಗಮನಿಸಿದ್ದೇನೆ.ಪತ್ರವನ್ನು ಕೂಡ ನೋಡಿದ್ದೇನೆ.ನಾನು ಹೆಣ್ಣು ಮಗಳ ಬಗ್ಗೆ ಮಾತನಾಡಲ್ಲ.ಸೈಟ್ ವಾಪಾಸ್ ಕೊಟ್ಟಿರುವುದು ಆಶ್ಚರ್ಯ ಎಂದು ಸಿಎಂ ಹೇಳಿದ್ದಾರೆ.ಸಿಎಂ ಗಮನಕ್ಕೆ ಬಾರದೆ ವಾಪಾಸ್ ಕೊಟ್ರಾ..? ಎಂದಿದ್ದಾರೆ.
ನನ್ನ ಹಿಟ್ ಅಂಡ್ ರನ್ ಅಂತಾರೆ.ಯುಟರ್ನ್ ಸಿದ್ದರಾಮಯ್ಯ ಎಂದು ಕರೆಯಬಹುದಾ..?ಈಗ ಏಕಾಏಕಿ ಸೈಟು ವಾಪಾಸ್ ಪಡೆಯಲು ಹೇಳಿಕೊಟ್ಟವರು ಯಾರು..? ಎಂದು ಪ್ರಶ್ನೆ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಆಕ್ರೋಶ
ಬೆಂಗಳೂರು; ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಆಕ್ರೋಶ ಹೊರ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಆಕ್ರೋಶ ಹೊರ ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಪತ್ರ ಬರೆಯೋದನ್ನ ಬಿಟ್ಟು, ಸೈಟ್ ಮರುಳಿಸುವ ಕುರಿತು ಪತ್ರ ಬರೆಯಲಾಗಿದೆ. ನಿಮ್ಮ ಪತ್ನಿ ಬರೆದಿರೋ ಪತ್ರ ತನಿಖೆಯನ್ನ ನಿಲ್ಲಿಸೋದಿಲ್ಲ.ಈ ಮೂಲಕ ನೀವು ಭ್ರಷ್ಟಾಚಾರ ಮಾಡಿದ್ದು ಬಹಿರಂಗಗೊಂಡಿದೆ ಎಂದಿದ್ದಾರೆ.ನೀವು ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಸೈಟ್ ವಾಪಸ್ ನೀಡುತ್ತಿದ್ದೀರಿ? ಅದು ಕೂಡ ಹೈಕೋರ್ಟ್, ಸ್ಪೇಷಲ್ ಕೋರ್ಟ್ ಹಾಗೂ ಇಡಿ ಕೇಸ್ ದಾಖಲಿಸಿದ ಮೇಲೆ ಪತ್ರ ಬರೆಯುತ್ತೀರಿ.ಈಗ ರಾಜೀನಾಮೆ ನೀಡುವ ಕಾಲ ಬಂದಿದೆ, ಪತ್ರ ಬರೆದಿರೋದು ಈಗ ಉಪಯೋಗ ಇಲ್ಲ ಎಂದಿದ್ದಾರೆ.
ಇದು ನಿಮ್ಮ ತಪ್ಪಿನ ಪರೀಕ್ಷೆ ಯಾಗಿದೆ.ಕರ್ನಾಟಕದಲ್ಲಿ ಹಲವಾರು ಹಗರಣ ನಡೆದರೂ ಕಾಂಗ್ರೆಸ್ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.ರಾಹುಲ್ ಗಾಂಧಿ ಇದಕ್ಕೆ ಉತ್ತರ ನೀಡಬೇಕಾಗಿದೆ.ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯೋದಕ್ಕೆ ಯಾವುದೇ ನೈತಿಕತೆ ಇಲ್ಲ ಇಲ್ಲ ಎಂದು ಅವರು ಹೇಳಿದ್ದಾರೆ.