ಮನೆ Latest News ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕೈಗೆ ರಕ್ತ ಅಂಟಿಕೊಂಡಿದೆ; ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ...

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕೈಗೆ ರಕ್ತ ಅಂಟಿಕೊಂಡಿದೆ; ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

0

ಬೆಂಗಳೂರು; ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕೈಗೆ ರಕ್ತ ಅಂಟಿಕೊಂಡಿದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  ಹೇಳಿದ್ದಾರೆ.

ಕರ್ನಾಟಕ ರಾಜ್ಯ ಶೋಕಾಚರಣೆಯಲ್ಲಿದೆ. ಇರುವ ಒಂದೊಂದೇ ಮಕ್ಕಳನ್ನು ತಂದೆ ತಾಯಿಯರು ಕಳೆದುಕೊಂಡಿದ್ದಾರೆ.ನನ್ನ ಕ್ಷೇತ್ರದಲ್ಲಿ ಕೂಡಾ ಒಬ್ಬ ಮೃತಪಟ್ಟಿದ್ದಾನೆ. ಅವರ ತಂದೆ ಎಷ್ಟು ಡಿಪ್ರೆಶನ್ ಗೆ ಒಳಗಾಗಿದ್ದಾರೆ ಎಂದರೆ ಬೆಂಗಳೂರಿನ ಅವರ ಮನೆಗೂ ಮಗನ ಶವ ತರಲಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕೈಗೆ ರಕ್ತ ಅಂಟಿಕೊಂಡಿದೆ. ತಮ್ಮ ಕೈಯಲ್ಲಿರುವ ರಕ್ತವನ್ನು ತೊಳೆದುಕೊಳ್ಳಲು ನೋಡುತ್ತಿದ್ದಾರೆ, ಅದನ್ನು ಅಧಿಕಾರಿಗಳಿಗೆ ಅಂಟಿಸಲು ನೋಡುತ್ತಿದ್ದಾರೆ. ಸಾಮಾನ್ಯ ಹಿಂದುಳಿದ ಕುಟುಂಬದಿಂದ ಬಂದ ಟಫ್ ಕಾಪ್ ಅನ್ನು ಸಸ್ಪೆಂಡ್ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಇದು ಕಪ್ಪು ಚುಕ್ಕೆ ಎಂದಿದ್ದಾರೆ.

ಸಿಎಂ, ಡಿಸಿಎಂ ತಪ್ಪು ಮಾಡಿ  ಕಮಿಷನರ್ ಅವರನ್ನು ಸಸ್ಪೆಂಡ್ ಮಾಡಿದ್ದು ನಾವು ನೋಡಿಲ್ಲ. ಸಂಭ್ರಮಾಚರಣೆ ಮಾಡಬೇಕು ಅಂತಾ ನಿಮ್ಮ ತಲೆಗೆ ಯಾಕೆ ಬಂತು? ನೀವು ಅದರಲ್ಲಿ ಪಾಲುದಾರರಾ?. ವಿಧಾನಸೌಧದ ಮೆಟ್ಟಿಲು ಇದ್ದಿದ್ದು ಪ್ರಮಾಣ ವಚನಕ್ಕೆ. ಅಲ್ಲಿಗೆ ನೀವು ಖಾಸಗಿ ತಂಡವನ್ನು ಕರೆದುಕೊಂಡು ಬಂದ್ರಿ. ನಿಮ್ಮ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು ಸೇರಿ 350 ಕ್ಕಿಂತ  ಹೆಚ್ಚು ಜನ ಇದ್ದರು. ಹೈಕೋರ್ಟ್ ಮೇಲೆ ಜನ ನಿಂತಿದ್ದರು. ಇಷ್ಟೊಂದು ಅಸುರಕ್ಷತೆ ಇದ್ದಾಗ ಹೇಗೆ ಅನುಮತಿ‌ ಕೊಟ್ರಿ? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯನವರೇ ಆರ್ ಸಿಬಿ ಸೆಲೆಬ್ರೇಷನ್ ಅನ್ನು ಹೆಣದ ಮೇಲೆ, ಅವರ ಎದೆಯ ಮೇಲೆ ನಿಂತು ಮಾಡಿದ್ದೀರಿ‌ ನೀವು. ಅವರು ಸತ್ತಿದ್ದಾರೆ ಅಂತಾ ಗೊತ್ತಾದ ಮೇಲೂ ನೀವು ರೆಸ್ಟೋರೆಂಟ್ ಗೆ ಹೋಗಿ ಮಸಾಲೆ ದೋಸೆ ತಿಂದಿದ್ದೀರಿ. ಸತ್ತಿದ್ದಾರೆ ಅಂತಾ ಗೊತ್ತಾದ ಮೇಲೂ ಸ್ಟೇಡಿಯಂ ಗೆ  ಹೋಗಿ ಕಪ್ ಗೆ ಮುತ್ತು ಕೊಟ್ಟಿದ್ದೀರಿ. ಇದೆಲ್ಲವೂ ಹೆಣದ ಮೇಲೆ ನಡೆದಿದೆ. ನೀವು ಅನುಮತಿ ಕೊಡದೇ ಎರಡೂ ಸೆಲೆಬ್ರೇಷನ್ ಹೇಗಾಯ್ತು?. ನೀವು ಅನುಮತಿ ಕೊಟ್ಟಿದ್ದರೆ ಪೊಲೀಸರನ್ನು ಯಾಕೆ ಸಸ್ಪೆಂಡ್ ಮಾಡಿದ್ರಿ?. ಇದಕ್ಕೆ ರಾಜ್ಯ ಸರ್ಕಾರ ಉತ್ತರ ಕೊಡಬೇಕು.  ಕೆಎಸ್ ಸಿಎ ಒಂದು ಸಲ ಪಾಸ್ ಕೊಡುತ್ತೇವೆ ಅಂತಾ ಹೇಳುತ್ತದೆ, ಮತ್ತೊಮ್ಮೆ ಫ್ರೀ ಅಂತಾ ಹೇಳುತ್ತದೆ. ಮಾತು ಎತ್ತಿದರೆ ನೀವು ಪ್ರಯಾಗ್ ರಾಜ್ ನಲ್ಲಿ ಆಗಿಲ್ವಾ ಅಂತಾ ಹೇಳುತ್ತೀರಿ. ಪ್ರಯಾಗ್ ರಾಜ್ ನಲ್ಲಿ ಅನುಮತಿ ಇತ್ತು, ಒಂದು ವರ್ಷದಿಂದ ತಯಾರಿ ಆಗಿತ್ತು. ಎರಡು ಲಕ್ಷ ಜನರನ್ನು ನಿಮಗೆ ಮ್ಯಾನೇಜ್ ಮಾಡಲು ಆಗಲಿಲ್ಲ.ನಿಮ್ಮ ಪ್ರಚಾರದ ಹುಚ್ಚಿಗೆ ಹನ್ನೊಂದು ಮಕ್ಕಳು ಬಲಿಯಾಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರೇ ಅಭಿಮಾನಿಗಳನ್ನು ಕರೆದಿರುವ ಟ್ವೀಟ್ ಇದೆ.ಕೆಎಸ್ ಸಿಎ ಡಿಪಿಎಆರ್ ಕಾರ್ಯದರ್ಶಿಗೆ ಬರೆದ ಪತ್ರ ಇದೆ. ನಿಮ್ಮ ಜವಾಬ್ದಾರಿಯುತ ಸಿಎಸ್ ಅಲ್ಲೇ ವೇದಿಕೆ ಮೇಲೆ ಓಡಾಡುತ್ತಿದ್ದರಲ್ಲಾ?. ಮೈಕೆಲ್ ಡಿಕುನ್ಹಾ ಈಗಾಗಲೇ ಕೋವಿಡ್ ತನಿಖೆಗೆ ಜವಾಬ್ದಾರಿ ಕೊಟ್ಟಿದ್ದೀರಿ, ಅವರು‌ ಇನ್ನೂ ಅದರ ವರದಿಯನ್ನೇ ಕೊಟ್ಟಿಲ್ಲ. ಮತ್ತೆ ಅವರಿಗೇ ಯಾಕೆ ಕೊಟ್ಟಿದ್ದೀರಿ?. ಬೇರೆ ಯಾರೂ ನಿಮಗೆ ಸಿಗಲಿಲ್ವಾ?. ಮ್ಯಾಜಿಸ್ಟ್ರೇಟ್ ಮತ್ತು ಕುನ್ಹಾ ತನಿಖೆ ಎರಡೂ ಮುಚ್ಚಿ ಹಾಕಲೆಂದೇ ಕೊಟ್ಟಿದ್ದಾರೆ ಎಂದಿದ್ದಾರೆ.

ಕೆಎಸ್ ಸಿಎ, ಆರ್ ಸಿಬಿ, ಡಿಎನ್ಎ ಪ್ರತಿನಿಧಿಗಳನ್ನು ಬಂಧಿಸಿದ್ದೀರಿ. ನಿಮ್ಮನ್ನು ಯಾಕೆ ಬಂಧಿಸಬಾರದು?. ಸತ್ತವರು ಸತ್ತಿದ್ದಾರೆ, ನೀವು ಕೊಂದು ಆಯಿತು. ಗಾಯ ಆಗಿರುವವರಿಗೆ ಒಳ್ಳೆಯ ಚಿಕಿತ್ಸೆ ಕೊಡಿಸಿ. ಗಾಯಗೊಂಡವರ ಸಂಖ್ಯೆಯನ್ನು ಸರ್ಕಾರ ಮುಚ್ಚಿ ಹಾಕಿದೆ. ತುಳಿದ ಕಾರಣ ಹೆಣ್ಣು ಮಗುವಿನ ಗರ್ಭಕೋಶಕ್ಕೆ ಹಾನಿಯಾಗಿದೆ. ವೈದೇಹಿ ಆಸ್ಪತ್ರೆಯಲ್ಲಿ ನಾನು ವಿಚಾರಿಸಿದಾಗ ಕುಟುಂಬವೇ ಬಿಲ್ ಕಟ್ಟಿತ್ತು. ಆದರೆ ಸರ್ಕಾರ ನಾವೇ ಚಿಕಿತ್ಸಾ ವೆಚ್ಚ ಭರಿಸಿದ್ದೇವೆ ಅಂತಾ ಹೇಳುತ್ತಿದೆ. ನಿಮ್ಮ ಕೈಗೆ ರಕ್ತ ಅಂಟಿಕೊಂಡಿದೆ, ನೀವು ತೊಳೆದುಕೊಳ್ಳಲು ಆಗಲ್ಲ. ದೇವರು ನೋಡುತ್ತಿದ್ದಾರೆ.ನೀವು ಮುಂದೆ ಫ್ರಾಂಚೈಸಿ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದೀರೋ ಏನೋ ಗೊತ್ತಿಲ್ಲ. ಎಲ್ಲಿದ್ದೀರಪ್ಪಾ ಸುರ್ಜೇವಾಲಾ, ವೇಣುಗೋಪಾಲ್?.ಎಲ್ಲಿ ಅಡಗಿಕೊಂಡಿದ್ದೀರಿ?. ಕಾಂಗ್ರೆಸ್ ಹೈಕಮಾಂಡ್ ಗೆ ಶಕ್ತಿ, ಧಮ್ ಇದ್ದರೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ರನ್ನು ಬದಲಿಸಿ. ನಿಮಗೆ ಕರ್ನಾಟಕದಲ್ಲಿ ಬೇರೆ ನಾಯಕರಿಲ್ವಾ?. ಕಾಂಗ್ರೆಸ್ ಪಕ್ಷ ದಿವಾಳಿ ಆಗಿದ್ಯಾ?. ಬೇರೆಯವರನ್ನು‌ ನೇಮಿಸಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ವಿರುದ್ಧ ತನಿಖೆ ಮಾಡಿಸಿ ಎಂದಿದ್ದಾರೆ.

ವಿದೇಶಕ್ಕೆ ಹೋಗಿ ದೇಶದ ವಿರುದ್ಧ ಮಾತಾಡುವ ರಾಹುಲ್ ಗಾಂಧಿ ಎಲ್ಲಿದ್ದಾರೆ?. ಕೆಎಸ್ ಸಿಎಯನ್ನು ಯಾಕೆ ರಕ್ಷಣೆ ಮಾಡುತ್ತಿದ್ದೀರಾ?. ಅವರ ಜೊತೆ ನಿಮ್ಮ ಸಂಬಂಧ ಏನು?. ಆರ್ ಸಿಬಿ ಜೊತೆ ಏನು ಸಂಬಂಧ?. ಅವಸರದಲ್ಲಿ ಸನ್ಮಾನ ಆಯೋಜಿಸಿದ್ದು ಯಾಕೆ?. ಖಾಸಗಿ ಫ್ರಾಂಚೈಸಿಗಾಗಿ ಸಿಎಂ ಟ್ವೀಟ್ ಮಾಡುತ್ತಾರೆ.ಕಬಡ್ಡಿಗೆ ಯಾವತ್ತೂ ಇಂತಹ ಸನ್ಮಾನ ಮಾಡಿಲ್ಲ ಎಂದಿದ್ದಾರೆ.