ಮನೆ ಪ್ರಸ್ತುತ ವಿದ್ಯಮಾನ ಪ್ರಿಯಾಂಕ ಖರ್ಗೆ ರಾಜೀನಾಮೆ ಪಡೆಯಲು ಏನಾದ್ರು ಎವಿಡೆನ್ಸ್ ಇರಬೇಕಲ್ವಾ? ಏನು ಎವಿಡೆನ್ಸ್ ಇಲ್ಲಗೇ ಹೇಗೆ ?:...

ಪ್ರಿಯಾಂಕ ಖರ್ಗೆ ರಾಜೀನಾಮೆ ಪಡೆಯಲು ಏನಾದ್ರು ಎವಿಡೆನ್ಸ್ ಇರಬೇಕಲ್ವಾ? ಏನು ಎವಿಡೆನ್ಸ್ ಇಲ್ಲಗೇ ಹೇಗೆ ?: ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

0

ಬೆಂಗಳೂರು; ಪ್ರಿಯಾಂಕ ಖರ್ಗೆ ರಾಜೀನಾಮೆ ಪಡೆಯಲು ಏನಾದ್ರು ಎವಿಡೆನ್ಸ್ ಇರಬೇಕಲ್ವಾ? ಏನು ಎವಿಡೆನ್ಸ್ ಇಲ್ಲದೆ ಹೇಗೆ ?: ಎಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೊದಲಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಅವರು 2025ಕ್ಕೆ ನಾವು ಕಾಲಿಟ್ಟಿದ್ದೇವೆ.ಇಡೀ ರಾಜ್ಯ, ದೇಶದ ಜನತೆಗೆ ಹೊಸ ವರ್ಷದ ಶುಭಾಶಯಗಳು ಎಂದರು. ಇನ್ನು ಬಜೆಟ್ ಯಾವಾಗ ಮಂಡನೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮಾರ್ಚ್ ನಲ್ಲಿ ಮಂಡನೆ ಮಾಡ್ತೀವಿ, ಇನ್ನು ದಿನಾಂಕ ನಿಗದಿಯಾಗಿಲ್ಲ ಎಂದರು.

ಸಚಿವ ಪ್ರಿಯಾಂಕ್ ‌ಖರ್ಗೆ ರಾಜೀನಾಮೆಗೆ ಬಿಜೆಪಿ ಒತ್ತಾಯದ ಬಗ್ಗೆ ಮಾತನಾಡಿದ ಅವರು ಬಿಜೆಪಿಯವರು ದಾಖಲಾತಿ ಇಟ್ಟು ಹೋರಾಟ ಮಾಡಬೇಕಲ್ವಾ. ಡೆತ್ ನೋಟ್ ಬರ್ದಿದ್ದಾನೆ, ಅದರಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದ್ಯಾ?. ಮತ್ತೆ ಏನಂತ ರಾಜೀನಾಮೆ ಕೊಡಬೇಕು? ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅವರ ಹೆಸರು ಇಲ್ಲ, ಅವರದ್ದೇನು ಪಾತ್ರ ಇಲ್ಲ.ಯಾವುದೇ ಸಾಕ್ಷಿ ಇಲ್ಲ, ರಾಜೀನಾಮೆ ಯಾಕೆ ಕೊಡಬೇಕು?. ಈಶ್ವರಪ್ಪ ಕೇಸಿನಲ್ಲಿ ಡೆತ್ ನೋಟನಲ್ಲಿ ಹೆಸರು ಬರ್ದಿದ್ರು.ಡೆತ್ ನೋಟ್ ನಲ್ಲಿ ಇವನ ಹೆಸರು ಇದ್ಯಾ?. ಪ್ರಿಯಾಂಕ್ ಖರ್ಗೆ ಹೆಸರು ಎಲ್ಲೂ ಇಲ್ಲ. ಅವರು ಯಾವುದೇ ತನಿಖೆಗೆ ತಯಾರಿದ್ದೀನಿ ಅಂತ ಹೇಳಿದ್ದಾರೆ. ನಾವೀಗ ದೂರಿನ್ನ ದಾಖಲಿಸಿಕೊಂಡು ಸಿಐಡಿ ತನಿಖೆಗೆ ಕೊಟ್ಟಿದ್ದೇವೆ, ಸಿಐಡಿ ವರದಿ ಕೊಡಲಿ. ವರದಿ ಕೊಟ್ಟ ಮೇಲೆ ತಪ್ಪು ಮಾಡಿದ್ದಾನೆಂದು ಗೊತ್ತಾಗಬೇಕು ಅಲ್ವಾ ಎಂದ ಅವರು, ಸಚಿವ ಪ‌್ರಯಾಂಕ್ ಖರ್ಗೆ ಪ್ರಕರಣ ಸಿಬಿಐಗೆ ಕೊಡುವ ಬಗ್ಗೆ ಮಾತಾನಾಡಿದ ಅವರು ಯಾವಾಗ ಸಿಬಿಐಗೆ ಕೊಟ್ಟಿದ್ರು?. ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ವಾ?. ಅವರು ಅಧಿಕಾರದಲ್ಲಿ ಇರೋವಾಗ ಒಂದೇ‌ ಒಂದು ಮ್ಯಾಟರ್ ನ ಸಿಬಿಐಗೆ ಕೊಟ್ಟಿದ್ರಾ? ಕೊಟ್ಟಿಲ್ಲ. ಅವರಿಗೆ ಯಾವ ನೈತಿಕತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಿ.ಟಿ ರವಿ ರಾಜ್ಯಪಾಲರಿಗೆ ದೂರು ನೀಡಿದ ಬಗ್ಗೆ ರಿಯ್ಯಾಕ್ಟ್ ಮಾಡಿದ ಅವರು ಕೊಡಲಿ, ಸಿ.ಟಿ. ರವಿ ಕೇಸ್ ಸಿಐಡಿಗೆ ಕೊಟ್ಟಿದ್ದೇವೆ. ಇವರು ಹೇಳಿದ್ದಾರಾ ಇಲ್ವಾ ಅಂತ ಎಫ್ಎಸ್ಎಲ್ ರಿಪೋರ್ಟ್ ಬರಬೇಕು. ಮಹಿಳೆಗೆ ಅವಮಾನ ಆಗೋ ರೀತಿಯಲ್ಲಿ ಮಾತಾಡಿದ್ದಾರೆ ಅಂತ ಆರೋಪ. ಈ ಆರೋಪ ಆಧಾರದಲ್ಲಿ ಎಫ್ಐಆರ್ ಆಗಿದೆ. ಅದೂ ಕೂಡ ಸಿಐಡಿಗೆ ರೆಫರ್ ಆಗಿದೆ ಕೊಡಲಿ ಎಂದರು. ಇದೇ ವೇಳೆ ಬಿಜೆಪಿ ರಾಜ್ಯ ಸರ್ಕಾರವನ್ನ ಟಾರ್ಗೆಟ್ ಮಾಡ್ತಿದೆ ವಿರೋಧ ಪಕ್ಷಗಳಿಗೆ ಏನು ಸಲಹೆ ನೀಡ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ವಿರೋಧ ಪಕ್ಷದವರಿಗೆ ಸದ್ಬುದ್ದಿ ಕೊಡಲಿ .ಅಷ್ಟೆ ಹೇಳ್ತೀನಿ ಎಂದಿದ್ದಾರೆ.

ಬಿಜೆಪಿಯವರು ಪ್ರಿಯಾಂಕ್ ಖರ್ಗೆಯವರನ್ನು ಪರ್ಸನಲ್ ಟಾರ್ಗೆಟ್ ಮಾಡ್ತಿದ್ದಾರೆ; ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ

ಬೆಂಗಳೂರು; ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಯವರು ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಪರ್ಸನಲ್ ಟಾರ್ಗೆಟ್ ಮಾಡ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಪ್ರಿಯಾಂಕ ಖರ್ಗೆ ಅವರ ಬಗ್ಗೆ ಮಾತನಾಡೋದಕ್ಕೆ ವಿಜಯೇಂದ್ರ ಅವರಿಗೆ ಅರ್ಹತೆಯೇ ಇಲ್ಲ. ಬಿಜೆಪಿಯವರು ಪ್ರಿಯಾಂಕ್ ಖರ್ಗೆಯವರನ್ನು ಪರ್ಸನಲ್ ಟಾರ್ಗೆಟ್ ಮಾಡ್ತಿದ್ದಾರೆ ಎಂದಿದ್ದಾರೆ.ವಿಜಯೇಂದ್ರ ಮೇಲೆ ಮನಿ ಲಾಂಡ್ರಿಂಗ್ ಕೇಸ್ ಇದೆ. ಹಾಗಾದರೆ ಅವರು ಹೇಗೆ ರಾಜ್ಯಾಧ್ಯಕ್ಷರಾದರು?. ವಿಜಯೇಂದ್ರಗೆ ನೈತಿಕತೆಯೇ ಇಲ್ಲ. ನೈತಿಕತೆ ಇದ್ದರೆ ವಿಜಯೇಂದ್ರ ರಾಜ್ಯದ ಜನರಿಗೆ ಮುಖವೇ ತೋರಿಸಬಾರದು ಎಂದಿದ್ದಾರೆ.

ನೈತಿಕತೆ ಅನ್ನುವ ಪದ ಬಿಜೆಪಿಯವರು ಅಳಿಸಿ ಹಾಕಿ ಎಷ್ಟೋ ವರ್ಷಗಳಾಯಿತು. ಮನಿ ಲಾಂಡ್ರಿಂಗ್ ಕೇಸ್ ಕೂಡ ಸಿಬಿಐಗೆ ಕೊಡಲಿ. ವಿಜಯೇಂದ್ರ ಪ್ರಾಮಾಣಿಕರಾದರೆ ಅವರ ಮೇಲಿರುವ ಕೇಸ್ ಸಿಬಿಐಗೆ ಕೊಡಲಿ. ಈಶ್ವರಪ್ಪ ಕೇಸ್ ನಲ್ಲಿ ಅವರಿಗೆ ಗೊತ್ತಿತ್ತು ಸಾವಿಗೆ ಕಾರಣ ಅವರೇ ಅಂತ ಹಾಗಾಗಿ ರಾಜೀನಾಮೆ‌ ಕೊಟ್ಟರು. ಬಿಜೆಪಿಯವರನ್ನು ಎಕ್ಸಪೋಸ್ ಮಾಡುವುದರಲ್ಲಿ ಪ್ರಿಯಾಂಕ್ ಖರ್ಗೆ ಮುಂಚೂಣಿಯಲ್ಲಿದ್ದರು. ಹೀಗಾಗಿ ಪ್ರಿಯಾಂಕ್ ಖರ್ಗೆಯನ್ನು ಟಾರ್ಗೆಟ್ ಮಾಡಿದ್ದಾರೆ. ಬಿಜೆಪಿಯಲ್ಲಿಯೇ ವಿಜಯೇಂದ್ರ ಮಾತಿಗೆ ಬೆಲೆಯಿಲ್ಲ. ಅವರ ಪಾರ್ಟಿ ಕೇಡರ್ ಲೀಡರ್ ಗಳೇ ಅವರ ಮಾತು ಕೇಳಲ್ಲ. ನಾನೇನಾದರೂ ಬಿಜೆಪಿ ರಾಜ್ಯಾಧ್ಯಕ್ಷ ಆಗಿದ್ದರೆ ಯತ್ನಾಳ್ ಅವರನ್ನು ಕ್ಷಣದಲ್ಲಿ ಸಸ್ಪೆಂಡ್ ಮಾಡುತ್ತಿದ್ದೆ.ವಿಜಯೇಂದ್ರ ಮೊದಲು ಯತ್ನಾಳ್ ಬಾಯಿ ಮುಚ್ಚಿಸಲಿ. ವಿಜಯೇಂದ್ರಗೆ ಧಂ ಇದ್ದರೆ ಅದನ್ನು ಮೊದಲು ಮಾಡಲಿ ಎಂದು ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.