ಮನೆ Latest News ಕಾಂಗ್ರೆಸ್ ನಲ್ಲಿರುವ ಗೊಂದಲ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸತೀಶ್ ಜಾರಕಿಹೊಳಿ ಫುಲ್ ಗರಂ

ಕಾಂಗ್ರೆಸ್ ನಲ್ಲಿರುವ ಗೊಂದಲ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸತೀಶ್ ಜಾರಕಿಹೊಳಿ ಫುಲ್ ಗರಂ

0

ಬೆಂಗಳೂರು: ಕಾಂಗ್ರೆಸ್ ನಲ್ಲಿರುವ ಗೊಂದಲ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸತೀಶ್ ಜಾರಕಿಹೊಳಿ ಫುಲ್ ಗರಂ ಆಗಿದ್ದಾರೆ. ಸುತ್ತಿ ಬಳಸಿ ಸುತ್ತಿ ಬಳಸಿ ಅದೇ ವಿಚಾರಕ್ಕೆ ಬರಬೇಡಿ. ನಮಗೂ ಸಹನೆ ಇದೆ, ನಮಗೂ ಒಂದು ಲಿಮಿಟ್ ಇದೆ. ಎಲ್ಲಾ ಗೊಂದಲಗಳನ್ನು ಯಾರು ಶುರು ಮಾಡಿದ್ದಾರೋ ಅವರೇ ಮುಗಿಸಬೇಕು. ಸಂಬಂಧಪಟ್ಟವರನ್ನೇ ನೀವು ಕೇಳಬೇಕು ಎಂದು ರೈಸ್ ಆಗಿದ್ದಾರೆ.

ಎಲ್ಲ ಕಡೆಯೂ ನಮಗೆ ಇದೇ ಪ್ರಶ್ನೆ ಕೇಳ್ತಾ ಇದ್ದೀರಿ. ಉಡುಪಿ ಹೋದ್ರೂ ಅದೇ ಪ್ರಶ್ನೆ, ಪುತ್ತೂರಲ್ಲೂ ಅದೇ ಪ್ರಶ್ನೆ, ಸುಳ್ಯದಲ್ಲೂ ಅದೇ ಪ್ರಶ್ನೆ.ಎಲ್ಲ ವಿಷಯಕ್ಕೂ ಸುತ್ತಿ ಬಳಸಿ, ಅದೇ ಕೇಳಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ. ಅದು‌ ನನಗೆ ಸಂಬಂಧಪಟ್ಟ ವಿಷಯ‌ ಅಲ್ಲ. ನೀವು ಸುತ್ತಾಕಿ‌ ಸುತ್ತಾಕಿ‌ ಅದ್ನೇ ಕೇಳ್ತೀರಾ. ಎಲ್ಲಾ ‌ಕಡೆಯೂ ಇದನ್ನೇ ಕೇಳ್ತಾರೆ. ಮತ್ತೆ ಮತ್ತೆ ಸುತ್ತಾಕಿ ಅದನ್ನ ಹೇಳಿದ್ರೆ ಹೇಗೆ? ಪದೇ ಪದೇ ಒಂದನ್ನೇ ಹತ್ತು ಬಾರಿ ಕೇಳಿದ್ರೆ ಹೇಗೆ?. ಅಧಿಕೃತ ಸ್ಥಾನದಲ್ಲಿ ಯಾರಿದ್ದಾರೆ ಅವರನ್ನ ಕೇಳಿ. ನಾನಾಗಿಯೇ ಎಲ್ಲೂ ಸಿದ್ದರಾಮಯ್ಯ ವಿಚಾರ ಎತ್ತಿಲ್ಲ. ನೀವು ಕೇಳಿದ್ರೆ ನಾನೇನು ಮಾಡಬೇಕು? ಎಂದು ಸತೀಶ್ ಜಾರಕಿಹೊಳಿ ಗರಂ ಆಗಿದ್ದಾರೆ.