ಬೆಂಗಳೂರು; ಒಳ ಮೀಸಲಾತಿ ಜಾರಿ ಕುರಿತು ದಲಿತ ಸಚಿವರ ಸಭೆ ವಿಚಾರದ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಅವರ ಮನೆಯಲ್ಲಿ ಸಭೆ ನಡೆಯುತ್ತಿದೆ. ಹೆಚ್ ಸಿ ಮಹದೇವಪ್ಪ ನೇತೃತ್ವದಲ್ಲಿ ಸಭೆ ಮಾಡ್ತಿದ್ದಾರೆ. ಅವರೊಬ್ಬರೆ ತೀರ್ಮಾನ ಮಾಡೊದಕ್ಕೆ ಆಗೊಲ್ಲ. ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಬೇಕು ಎಂದರು.
೬೦% ಸರ್ಕಾರ ಎಂದು ಬಿಜೆಪಿ ನಾಯಕರ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ಆರೋಪ ಮಾಡೊದಕ್ಕೆ ಆಧಾರ ಇತ್ತು. ಯಾರೋ ಅಧಿಕೃತವಾಗಿ ಹೇಳಿದ್ರು ಆಧಾರ ಇತ್ತು. ಅವರ ಖುಷಿಗಾಗಿ ಮಾಡ್ತಿದ್ದಾರೆ ಅವರಿಗೆ ಯಾವುದೇ ಆಧಾರ ಇಲ್ಲ ಎಂದಿದ್ದಾರೆ. ರನ್ಯಾ ರಾವ್ ಪ್ರಕರಣದ ಬಗ್ಗೆ ಮಾತನಾಡಿದ ಅವರು ಸಚಿವರಿದ್ದಾರೆ ಅದಕ್ಕೆ ಉತ್ತರ ಕೊಡ್ತಾರೆ. ರನ್ಯಾ ರಾವ್ ಪ್ರಕರಣದಲ್ಲಿ ಸಚಿವರಿದ್ದಾರೆ ಎಂಬ ಬಿಜೆಪಿ ಆರೋಪ ವಿಚಾರದ ಬಗ್ಗೆ ರಿಯಾಕ್ಟ್ ಮಾಡಿದ ಅವರು ಯಾರಿದ್ದಾರೆ ಎಂದು ಹೇಳಲಿ. ಸಿಬಿಐ ತಬಿಖೆ ಮಾಡ್ತಿದ್ದಾಗ ನಮ್ಮ ಕಡೆ ತೊರಿಸೋದು ಸರಿ ಅಲ್ಲ. ಏರ್ ಪೊರ್ಟ್ ಇರೋದು ಕೇಂದ್ರದ ಅಧೀನದಲ್ಲಿ. ಬಿಜೆಪಿಯವರು ಜವಾಬ್ದಾರಿಯಿಂದ ಮಾತಾಡಬೇಕು. ಸಿಬಿಐ ತನಿಖೆಯಲ್ಲಿ ಏನ್ ಬರುತ್ತೆ ಕಾದು ನೋಡಣ ಎಂದಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ರಿಂದ ೪೦% ಆರೋಪದ ವರದಿ ಸಲ್ಲಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನಿನ್ನೆ ವರದಿ ಕೊಟ್ಟಿದ್ದಾರೆ ಏನಿದೆ ಅಂತಾ ಗೊತ್ತಿಲ್ಲ. ಕ್ಯಾಬಿನೆಟ್ ಗೆ ಚರ್ಚೆ ಬರಬೇಕಿದೆ.೧೯೭೨ ರಿಂದಲೂ ಸರ್ಕಾರಕ್ಕೆ ಸಲ್ಲಿಸಿರುವ ಅನೇಕ ವರದಿಗಳು ಇನ್ನು ಬಾಕಿ ಉಳಿದಿವೆ. ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡ್ತಿವಿ ಎಂದ್ರು. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸಿದ ವಿಚಾರದ ಬಗ್ಗೆ ಮಾತನಾಡಿದ ಅವರು ಇವತ್ತು ಡಿನ್ನರ್ ಗೆ ಕರೆದಿದ್ದಾರೆ, ನಾನು ಹೋಗ್ತೀನಿ. ಅಧ್ಯಕ್ಷರು ಕರೆದ ಮೇಲೆ ಹೋಗಲೇಬೇಕಲ್ವಾ ಎಂದ್ರು. ಬೇರೆ ಡಿನ್ನರ್ ಗೆ ಆಕ್ಷೇಪ ವ್ಯಕ್ತವಾಗಿತ್ತು, ಈಗ ಅಧ್ಯಕ್ಷರೆ ಡಿನ್ನರ್ ಕೊಡ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪಾರ್ಟಿ ಹೆಸರಲ್ಲಿ ಕೊಡ್ತಿದ್ದಾರೆ ನಾವೆಲ್ಲಾ ಹೋಗ್ತೀವಿ ಎಂದಿದ್ದಾರೆ.
ರನ್ಯಾ ಕೇಸ್ ವಿಚಾರ ಹೋಮ್ ಮಿನಿಸ್ಟರ್ ಮತ್ತು ಸಿಎಂ ಸಾಹೇಬ್ರಿಗೆ ಗೊತ್ತು: ವಿಧಾನಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ
ಬೆಂಗಳೂರು; ರನ್ಯಾ ಕೇಸ್ ವಿಚಾರ ಹೋಮ್ ಮಿನಿಸ್ಟರ್ ಮತ್ತು ಸಿಎಂ ಸಾಹೇಬ್ರಿಗೆ ಗೊತ್ತು ಎಂದು ವಿಧಾನಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ನಟಿ ರನ್ಯಾ ರಾವ್ ಕೇಸ್ ನಲ್ಲಿ ಸಿಐಡಿ ವಾಪಾಸ್ ಪಡೆದ ವಿಚಾರದ ಬಗ್ಗೆ ಮಾತನಾಡಿದ ಅವರು ಮಾಧ್ಯಮದಲ್ಲಿ ಏನು ಬರ್ತಿದೆಯೋ ಅದಷ್ಟೇ ನನಗೆ ಗೊತ್ತು. ನನ್ನ ಹತ್ತಿರ ಇಂಟೆಲಿಜೆನ್ಸ್ ಇಲ್ಲ. ಹೋಮ್ ಮಿನಿಸ್ಟರ್ ಮತ್ತು ಸಿಎಂ ಸಾಹೇಬ್ರಿಗೆ ಗೊತ್ತು. ಸರ್ಕಾರದ ಯಾರೇ ಇನ್ವಾಲ್ ಇದ್ರೂ ತನಿಖೆಯಿಂದ ಹೊರ ಬರುತ್ತೆ. ತನಿಖೆಯ ಬಳಿಕೆ ಕ್ರಮವಾಗುತ್ತೆ ಎಂದಿದ್ದಾರೆ.
5 ವರ್ಷ ನಾನೇ ಮುಖ್ಯಮಂತ್ರಿ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿದ ಅವರು ನೋಡಿ ಸಿದ್ದರಾಮಯ್ಯ ಸಾಹೇಬ್ರು ಸಿನೀಯರ್ ನಾಯಕರು. ಅವರು ಮಾಸ್ ಲೀಡರ್, ಸರ್ಕಾರವನ್ನ ಚೆನ್ನಾಗಿ ನಡೆಸುತ್ತಿದ್ದಾರೆ. ಅವರು ಏನ್ ಹೇಳಿದ್ರು ನಮಗೆ ಆಶೀರ್ವಾದ ಎಂದಿದ್ದಾರೆ. ಮುಸ್ಲಿಂ ಮೀಸಲಾತಿ ಹೆಚ್ಚಿಸಿ ಎನ್ನುವ ಬೇಡಿಕೆ ವಿಚಾರದ ಬಗ್ಗೆ ಮಾತನಾಡಿ ನೋಡಿ ನಾವು ಪಂಚಮಶಾಲಿ ಮೀಸಲಾತಿ ಕೇಳ್ತೇವೆ. ಜನಾಂಗ ಬೆಳೆದಿದೆ ಬೆಳೆದಿರೋದು . ಯಾವ ಯಾವರೀತಿ ಮೀಸಲಾತಿ ಬೇಕೋ ಅವರು ಕೇಳೊ ಹಕ್ಕು ಅವರಿಗಿದೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯರಿಗೆ ನ್ಯಾ. ನಾಗಮೋಹನ್ ದಾಸ್ ವರದಿ ಸಲ್ಲಿಕೆ ವಿಚಾರದ ಬಗ್ಗೆ ಮಾತನಾಡಿ ನಮ್ಮ ಸರ್ಕಾರ ಬಂದ ಮೇಲೆ ನಾವು ಭರವಸೆ ಕೊಟ್ಟಿದ್ದೆವು. 40% ಕಮೀಷನ್ ವಿಚಾರ ಇರಬಹುದು. ಪಿಎಸ್ಐ ಹಗರಣ, ಲೆಕ್ಚರರ್ ಹಗರಣ ಇರಬಹುದು.ಇದರ ತನಿಖೆ ಮಾಡೋದಾಗಿ ನಾವು ಜನರಿಗೆ ಭರವಸೆ ಕೊಟ್ಟಿದ್ದೆವು. ಆ ಆಯೋಗದ ಮುಖ್ಯಸ್ಥರು ಬಂದು ನಿನ್ನೆ ವರದಿ ಕೊಟ್ಟಿದ್ದಾರೆ.ಇವತ್ತು ಕ್ಯಾಬಿನೆಟ್ ಇದೆ, ಕ್ಯಾಬಿನೆಟ್ ನಲ್ಲಿ ಇಂದು ಚರ್ಚೆ ಯಾಗುತ್ತೆ. ಸಿಎಂ ಮತ್ತು ಕ್ಯಾಬಿನೆಟ್ ಏನು ನಿರ್ಧಾರ ತೆಗೆದುಕೊಳ್ತಾರೆ ಅದರ ಮೇಲೆ ಕ್ರಮವಾಗುತ್ತೆ ಎಂದಿದ್ದಾರೆ.