ಮನೆ Latest News ನಾವು ಯಾರನ್ನ ಡಿಫೆಂಡ್ ಮಾಡಲ್ಲ; ರನ್ಯಾ ಪ್ರಕರಣದ ಬಗ್ಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ

ನಾವು ಯಾರನ್ನ ಡಿಫೆಂಡ್ ಮಾಡಲ್ಲ; ರನ್ಯಾ ಪ್ರಕರಣದ ಬಗ್ಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ

0

ಬೆಂಗಳೂರು: ನಾವು ಯಾರನ್ನ ಡಿಫೆಂಡ್ ಮಾಡಲ್ಲ ಎಂದು ರನ್ಯಾ ಪ್ರಕರಣದ ಬಗ್ಗೆ  ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಪ್ರೋಟೋಕಾಲ್ ಬೈಪಾಸ್ ಸಂಬಡಿ. ಆದರೆ ಕೇಂದ್ರದ ಡಿಪ್ಲಮೋಟ್ ಅದರಲ್ಲಿರುತ್ತೆ. ನಾವು ಯಾರನ್ನ ಡಿಫೆಂಡ್ ಮಾಡಲ್ಲ. ಗೋಲ್ಡ್ ಈ ರೀತಿ ಬರೋದು ವೈಯಲೇಶನ್. ಡಿಆರ್ ಪಾಸ್ ಆಗಿ ಹೇಗೆ ಹೊರ ಬರೋಕೆ ಸಾಧ್ಯ?. ಎಂದಿದ್ದಾರೆ.

ರನ್ಯಾ ಕೇಸ್ ವಿಚಾರ ಹೋಮ್ ಮಿನಿಸ್ಟರ್ ಮತ್ತು ಸಿಎಂ ಸಾಹೇಬ್ರಿಗೆ ಗೊತ್ತು: ವಿಧಾನಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ

ಬೆಂಗಳೂರು;  ರನ್ಯಾ ಕೇಸ್ ವಿಚಾರ ಹೋಮ್ ಮಿನಿಸ್ಟರ್ ಮತ್ತು ಸಿಎಂ ಸಾಹೇಬ್ರಿಗೆ ಗೊತ್ತು ಎಂದು ವಿಧಾನಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ನಟಿ ರನ್ಯಾ ರಾವ್ ಕೇಸ್ ನಲ್ಲಿ‌ ಸಿಐಡಿ ವಾಪಾಸ್ ಪಡೆದ ವಿಚಾರದ ಬಗ್ಗೆ ಮಾತನಾಡಿದ ಅವರು ಮಾಧ್ಯಮದಲ್ಲಿ ಏನು ಬರ್ತಿದೆಯೋ ಅದಷ್ಟೇ ನನಗೆ ಗೊತ್ತು. ನನ್ನ ಹತ್ತಿರ ಇಂಟೆಲಿಜೆನ್ಸ್ ಇಲ್ಲ. ಹೋಮ್ ಮಿನಿಸ್ಟರ್ ಮತ್ತು ಸಿಎಂ ಸಾಹೇಬ್ರಿಗೆ ಗೊತ್ತು. ಸರ್ಕಾರದ ಯಾರೇ ಇನ್ವಾಲ್ ಇದ್ರೂ ತನಿಖೆಯಿಂದ ಹೊರ ಬರುತ್ತೆ. ತನಿಖೆಯ ಬಳಿಕೆ ಕ್ರಮವಾಗುತ್ತೆ ಎಂದಿದ್ದಾರೆ.

5 ವರ್ಷ ನಾನೇ ಮುಖ್ಯಮಂತ್ರಿ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿದ ಅವರು ನೋಡಿ ಸಿದ್ದರಾಮಯ್ಯ ಸಾಹೇಬ್ರು ಸಿನೀಯರ್ ನಾಯಕರು. ಅವರು ಮಾಸ್ ಲೀಡರ್, ಸರ್ಕಾರವನ್ನ ಚೆನ್ನಾಗಿ ನಡೆಸುತ್ತಿದ್ದಾರೆ. ಅವರು ಏನ್ ಹೇಳಿದ್ರು ನಮಗೆ ಆಶೀರ್ವಾದ ಎಂದಿದ್ದಾರೆ. ಮುಸ್ಲಿಂ ಮೀಸಲಾತಿ ಹೆಚ್ಚಿಸಿ ಎನ್ನುವ ಬೇಡಿಕೆ ವಿಚಾರದ ಬಗ್ಗೆ ಮಾತನಾಡಿ ನೋಡಿ ನಾವು ಪಂಚಮಶಾಲಿ ಮೀಸಲಾತಿ ಕೇಳ್ತೇವೆ. ಜನಾಂಗ ಬೆಳೆದಿದೆ ಬೆಳೆದಿರೋದು . ಯಾವ ಯಾವರೀತಿ ಮೀಸಲಾತಿ ಬೇಕೋ ಅವರು ಕೇಳೊ ಹಕ್ಕು ಅವರಿಗಿದೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯರಿಗೆ ನ್ಯಾ. ನಾಗಮೋಹನ್ ದಾಸ್ ವರದಿ ಸಲ್ಲಿಕೆ ವಿಚಾರದ ಬಗ್ಗೆ ಮಾತನಾಡಿ ನಮ್ಮ ಸರ್ಕಾರ ಬಂದ ಮೇಲೆ ನಾವು ಭರವಸೆ ಕೊಟ್ಟಿದ್ದೆವು. 40% ಕಮೀಷನ್ ವಿಚಾರ ಇರಬಹುದು. ಪಿಎಸ್‌ಐ ಹಗರಣ, ಲೆಕ್ಚರರ್ ಹಗರಣ ಇರಬಹುದು.ಇದರ ತನಿಖೆ ಮಾಡೋದಾಗಿ ನಾವು ಜನರಿಗೆ ಭರವಸೆ ಕೊಟ್ಟಿದ್ದೆವು. ಆ ಆಯೋಗದ ಮುಖ್ಯಸ್ಥರು ಬಂದು ನಿನ್ನೆ ವರದಿ ಕೊಟ್ಟಿದ್ದಾರೆ.ಇವತ್ತು ಕ್ಯಾಬಿನೆಟ್ ಇದೆ, ಕ್ಯಾಬಿನೆಟ್ ನಲ್ಲಿ ಇಂದು ಚರ್ಚೆ ಯಾಗುತ್ತೆ. ಸಿಎಂ ಮತ್ತು ಕ್ಯಾಬಿನೆಟ್ ಏನು ನಿರ್ಧಾರ ತೆಗೆದುಕೊಳ್ತಾರೆ ಅದರ ಮೇಲೆ ಕ್ರಮವಾಗುತ್ತೆ  ಎಂದಿದ್ದಾರೆ.