ಬೆಂಗಳೂರು; ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಸಿಎಂ ಸಿದ್ದರಾಮ್ಯ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸುತ್ತಿವೆ. ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಿಜೆಪಿ ವಿರುದ್ಧ ಸಚಿವ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದ 29 ಸಚಿವರಿಗೆ ಅಪರಾಧ ಹಿನ್ನೆಲೆ ಇದೆ.ಶೇ.40 ರಷ್ಟು ಸಚಿವರ ವಿರುದ್ಧ ಅಪರಾಧ ಆರೋಪಗಳಿವೆ.ಕೇಂದ್ರದ ಸಂಪುಟ ಸಚಿವರ ಮೇಲೆ ರೇಪ್, ಮರ್ಡರ್ ಮಾಡಿದ ಆರೋಪಗಳಿವೆ.ಇಂಥ ಬಿಜೆಪಿಯವರರು ಯಾವ ಬಾಯಿಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೇಳ್ತಾರೆ? ಬಿಜೆಪಿಯವರು ಮುಡಾ ಪ್ರಕರಣ ಹಿಡಿದುಕೊಂಡಿದ್ದಾರೆ, ಯಾಕೆ ಅವರಿಗೆ ಚುನಾವಣಾ ಬಾಂಡ್ ಹಗರಣ ಕಾಣಲ್ಲ.ಸುಪ್ರೀಂಕೋರ್ಟ್ ಸಹ ಚುನಾವಣಾ ಬಾಂಡ್ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.ಅವರು ಚುನಾವಣಾ ಬಾಂಡ್ ಹಗರಣದಲ್ಲೂ ತನಿಖೆ ಆಗಲಿ ಅಂತ ಆಗ್ರಹಿಸಲಿ ಎಂದಿದ್ದಾರೆ.
ಚುನಾವಣಾ ಬಾಂಡ್ ಅಕ್ರಮ 8,500 ಕೋಟಿ ಆಗಿದೆ, ಇದಕ್ಕೆ ಮೋದಿಯವರು ರಾಜೀನಾಮೆ ಕೊಡಬೇಕಲ್ವಾ?ಮುಡಾ ಬಿಟ್ಟರೆ ಅವರಿಗೆ ಮಾತಾಡಲು ಬೇರೇನೂ ಇಲ್ಲ.ಬೆಳಗ್ಗೆ ರಾತ್ರಿ ಎಲ್ಲ ಮುಡಾ ಮುಡಾ ಅಂತಿದ್ದಾರೆ.ನಾವೇನೇ ಮಾಡಿದರೂ ಮುಡಾ ಪ್ರಕರಣ ಡೈವರ್ಟ್ ಮಾಡಲು ಮಾಡ್ತಿದ್ದಾರೆ ಅಂತಾರೆ. ನಮ್ಮಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ.ಏನೇ ಇದ್ರೂ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಇನ್ನು ಸತೀಶ್ ಜಾರಕಿಹೊಳಿ – ಮಲ್ಲಿಕಾರ್ಜುನ ಖರ್ಗೆ ಭೇಟಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಆ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.ಅವರು ಬೇರೆ ವಿಚಾರಕ್ಕೆ ಭೇಟಿ ಆಗಿರಬಹುದು ಎಂದಿದ್ದಾರೆ.
ಎಐಸಿಸಿ ನಾಯಕರು ರಾಜ್ಯಕ್ಕೆ ಬರುವ ವಿಚಾರದ ಬಗ್ಗೆ ಮಾತನಾಡಿದ ಅವರು ಬರಲಿ ಅವರು, ಬಂದು ರಿವೀವ್ ಮಾಡಲಿ.ರೀವೀವ್ ಮಾಡಿದರೆ ನಮಗೂ ಒಳ್ಳೆಯದೇ.ದಸರಾ ಉದ್ಘಾಟನೆ ವೇಳೆ ಸಿಎಂ ಅವರಿಂದ ಒಂದು ವರ್ಷದ ಹೇಳಿಕೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಇದರ ಬಗ್ಗೆ ಗೊತ್ತಿಲ್ಲ, ಬಾಯಿ ತಪ್ಪಿ ಹೇಳಿದ್ದಾರೋ ಏನೋ ಗೊತ್ತಿಲ್ಲ.ಹೆಚ್ಡಿಕೆ ಅವರ ಮೇಲೆ ಎಫ್ಐಆರ್ ಹಾಕಿದರೆ ಅದು ರಾಜಕೀಯ ದುರುದ್ದೇಶ. ಅದೇ ಬೇರೆಯವರಿಗೆ ಆದರೆ ಅದು ರಾಜಕೀಯ ದುರುದ್ದೇಶ ಅಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.
ಸಿಎಂಗೆ ಗೊತ್ತಿಲ್ಲದೇ ಸಿಎಂ ಪತ್ನಿಗೆ ಸೈಟ್ ಸಿಕ್ಕಿದೆ ಅಂತಾ ಹೇಳಲೂ ಸಾಧ್ಯವಿಲ್ಲ: ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿಕೆ
ಬೆಂಗಳೂರು; ಸಿಎಂಗೆ ಗೊತ್ತಿಲ್ಲದೇ ಸಿಎಂ ಪತ್ನಿಗೆ ಸೈಟ್ ಸಿಕ್ಕಿದೆ ಅಂತಾ ಹೇಳಲೂ ಸಾಧ್ಯವಿಲ್ಲ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಪತ್ನಿ ಸೈಟ್ ವಾಪಸ್ ಕೊಟ್ಟ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನಿನ್ನೆ ಸಿದ್ದರಾಮಯ್ಯ ಹೇಳಿಕೆಯನ್ನು ಗಮನಿಸಿದ್ದೇನೆ.ನಾನು ಡಿನೋಟಿಫೈ ಮಾಡಿದ್ನಾ? ನಾನೇನು ಸಹಿ ಮಾಡಿದ್ನಾ? ನಂದು ಮತ್ತು ಯಡಿಯೂರಪ್ಪ ಪ್ರಕರಣ ಬೇರೆ ಬೇರೆ ಎಂದಿದ್ದಾರೆ.ನಿಮ್ಮ ಬಗ್ಗೆ ಕೋರ್ಟ್ ಏನು ಹೇಳಿದೆ ಅನ್ನೋದನ್ನು ಮೊದಲು ನೋಡಿ.ನೀವು 2004 ರಿಂದ ಈಚೆಗೆ ಸತತವಾಗಿ ಒಂದು ಸ್ಥಾನದಲ್ಲಿ ಇರಲಿಲ್ಲ ಅಂದರೆ ಸೈಟ್ ಇನ್ನು ಯಾರಿಗೂ ಸಾಮಾನ್ಯ ಮನುಷ್ಯನಿಗೆ ಮುಟ್ಟಲೂ ಸಾಧ್ಯವಿರಲಿಲ್ಲ.ಸಿಎಂಗೆ ಗೊತ್ತಿಲ್ಲದೇ ಸಿಎಂ ಪತ್ನಿಗೆ ಸೈಟ್ ಸಿಕ್ಕಿದೆ ಅಂತಾ ಹೇಳಲೂ ಸಾಧ್ಯವಿಲ್ಲ ಎಂದಿದ್ದಾರೆ.
ಕೋರ್ಟ್ ಬಹಳ ಸ್ಪಷ್ಟವಾಗಿ ನೀವು ಏನೇನು ಕರಾಮತ್ತು ಮಾಡಿದ್ದೀರಿ ಅಂತಾ ದಾಖಲಿಸಿದೆ.ಸಂವಿಧಾನಕ್ಕೆ ಎಂದೂ ಗೌರವ ಕೊಡದವರು ಸಂವಿಧಾನ ಪ್ರತಿ ಇಟ್ಟುಕೊಂಡು ಓಡಾಡಿದ್ರಿ.ಸಂವಿಧಾನದ ಪ್ರಕಾರವಾಗಿ ಕೋರ್ಟ್ ಸ್ಪಷ್ಟವಾಗಿ ಸಿಎಂ ಪಾತ್ರ ಅಲ್ಲಗಳೆಯಲು ಸಾಧ್ಯವಿಲ್ಲ, ತನಿಖೆಯಾಗಬೇಕು ಅಂತಾ ಹೇಳಿದೆ.ರಾಜೀನಾಮೆ ಕೊಡಲ್ಲ ಅಂದರೆ ನೀವು ಭಂಡತನ ಪ್ರದರ್ಶಿಸುತ್ತಿದ್ದೀರಿ.ಕಾಂಗ್ರೆಸ್ ಹೈಕಮಾಂಡ್ ಲೋ ಕಮಾಂಡ್ ಆಗಿದೆ.ಯಾಕೆಂದರೆ ಅವರೂ ಬೇಲ್ ಮೇಲೆಯೇ ಇದ್ದಾರೆ.ಅವರೇ ಅರ್ಥಿಕ ಅಪರಾಧದಲ್ಲಿ ಬೇಲ್ ಮೇಲೆ ಇರುವುದರಿಂದ ಅವರಿಗೆ ಸಿದ್ದರಾಮಯ್ಯನವರಿಗೆ ರಾಜೀನಾಮೆ ಕೊಡಿ ಅಂತಾ ಹೇಳಲು ಆಗುತ್ತಿಲ್ಲ. ಯಾಕೆಂದರೆ ರಾಹುಲ್ ಗಾಂಧಿಯವರೇ ನೀವು ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಕೊಡಿ ಅಂತಾ ಸಿದ್ದರಾಮಯ್ಯ ಕೇಳುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷ ನೈತಿಕತೆ ಕಳೆದುಕೊಂಡಿರುವುದರಿಂದ ಬಾಲವೇ ಅಲ್ಲಾಡಿಸುವ ಸ್ಥಿತಿ ಆಗಿದೆ.ಸಿದ್ದರಾಮಯ್ಯನವರಿಗೆ ಏನಾದರೂ ಮರ್ಯಾದೆ ಇದ್ರೆ ಕೋರ್ಟ್ ಆದೇಶ ಗಮನಿಸಿ ರಾಜೀನಾಮೆ ಕೊಡಿ.ಪಕ್ಷದಲ್ಲಿ ನಿಮ್ಮ ನಾಯಕತ್ವಕ್ಕೆ ಅಷ್ಟು ಬೆಲೆ ಇದ್ದರೆ ನೀವು ಪರಿಶುದ್ಧರಾಗಿ ಬಂದ ಮೇಲೆ ಮತ್ತೆ ಸಿಎಂ ಮಾಡಲಿ.ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಕೆಡವಲು ನಾವು ಹೊರಟಿಲ್ಲ, ನಮ್ಮ ಉದ್ದೇಶವೂ ಅದಲ್ಲ.ತಪ್ಪು ಮಾಡಿದವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ.ಎಲ್ಲಾ ಹಿಂದುಳಿದ ವರ್ಗದವರಿಗೂ ಹೀಗೆಯೇ ತೊಂದರೆ ಆಗಿದೆ.ದೇವರಾಜ ಅರಸುಗೆ ತೊಂದರೆ ಕೊಟ್ಟವರು ಬಿಜೆಪಿಯವರಲ್ಲ, ಅಂದು ಮೋದಿ ರಾಜಕಾರಣದಲ್ಲೇ ಇರಲಿಲ್ಲ.ಅರಸುಗೆ ತೊಂದರೆ ಕೊಟ್ಟವರು ಕಾಂಗ್ರೆಸ್ ನವರು.ಸಿದ್ದರಾಮಯ್ಯ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದೀರಿ, ರಾಜೀನಾಮೆ ಕೊಡಿ ಎಂದು ಆಗ್ರಹಿಸಿದ್ದಾರೆ.