ಬೆಂಗಳೂರು: 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗಿಯಾದರು.ಬೆಂಗಳೂರಿನ ಕಾಂಗ್ರೆಸ್ ಕಛೇರಿಯಲ್ಲಿ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಧ್ವಜಾರೋಹಣ ನೆರವೇರಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್,ಸಿಎಂ ಸಿದ್ದರಾಮಯ್ಯ,ಸೇರಿ ಎಂಎಲ್ಸಿಗಳು,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 76ನೇ ಗಣರಾಜ್ಯೋತ್ಸವ ಆಚರಿಸ್ತಿದ್ದೇವೆ. ಸಂವಿಧಾನ ರಕ್ಷಣೆ, ಸಂವಿಧಾನದ ಪ್ರಕಾರ ನಡೆದುಕೊಳ್ಳುವುದು ಮುಖ್ಯ.ಇತ್ತೀಚೆಗೆ ಸಂವಿಧಾನದ ಎಲ್ಲಾ ಆಶಯಗಳನ್ನ ಕೇಂದ್ರ ಸರ್ಕಾರದ ಮೂಲೆ ಗುಂಪು ಮಾಡಿದೆ. ಹೆಣ್ಣು ಮಕ್ಕಳ ಸ್ವಾತಂತ್ರ್ಯ ಮೊಟಕುಗೊಳ್ತಿದೆ. ಸಂವಿಧಾನ ಆಚರಣೆಗೆ ಬಂದ್ಮೇಲೆ ನಮಗೆಲ್ಲಾ ಸ್ಥಾನ ಮಾನ ಸಿಗ್ತಿದೆ. ಜನ ಮನೆ ಬಾಗಿಲಿಗೆ ಬಂದು ಮತ ಕೇಳ್ತಾರೆ. ಇದು ಕಾಂಗ್ರೆಸ್ ಪಕ್ಷದ, ಅಂಬೇಡ್ಕರ್, ನೆಹರು ಅವರ ಕೊಡುಗೆ. ಈ ಕೊಡುಗೆಯಿಂದಲೇ ದೇಶವನ್ನ ಸ್ವತಂತ್ರವಾಗಿ ಉಳಿಸಿದ್ದೇವೆ.ನಮ್ಮ ದೇಶದ ಪ್ರಮುಖ ನಾಯಕರು ಅಮಿತ್ ಶಾ ಸಂವಿಧಾನಕ್ಕೆ ಅಪಮಾನ ಮಾಡ್ತಾರೆ. ಸಂವಿಧಾನ ತಂದವರನ್ಮ ಅಪಮಾನ ಮಾಡ್ತಿದ್ದಾರೆ.ನಾನು ರಾಜ್ಯಸಭೆಯಲ್ಲಿ ಇದ್ದೆ. ಎಲ್ಲದಕ್ಕೂ ಅಂಬೇಡ್ಕರ್ ಅಂತ ಹೇಳ್ತಿರಾ.ಇಷ್ಟು ದೇವರ ಹೆಸರು ಹೇಳಿದ್ದರೆ ಸ್ವರ್ಗ ಸಿಕ್ತಿತ್ತು ಅಂತ ಹೇಳಿದ್ರು.ಇವರು ದೇಶಕ್ಕಾಗಿ ಯಾವ ಕೊಡುಗೆ ಕೊಟ್ಟಿಲ್ಲ.ಮೋದಿ ಆರ್ಥಿಕವಾಗಿ ದೇಶವನ್ನ ಬಲಗೊಳಿಸ್ತೇವೆ ಎಂದು ಹೇಳಿದ್ದಾರೆ.
ಆರ್ಥಿಕ ಪರಿಸ್ಥಿತಿಯಲ್ಲಿ ಮೂರನೇ ಸ್ಥಾನಕ್ಕೆ ತರ್ತೇವೆ ಅಂದಿದ್ರು. ಆದರೆ ಈಗ ಐದನೇ ಸ್ಥಾನದಲ್ಲಿದೆ. ಯುಪಿಎ ಸರ್ಕಾರ ಇದ್ದಾಗ ನಾಲ್ಕನೇ ಸ್ಥಾನದಲ್ಲಿತ್ತು.ಅಲ್ಲಿಗೂ ಆರ್ಥಿಕ ಪರಿಸ್ಥಿತಿ ತರಲು ಇವರಿಗೆ ಸಾಧ್ಯವಿಲ್ಲ. ನಾಳೆ ನಾನು ಇಂಧೋರ್ ಗೆ ಹೋಗ್ತಿದ್ದೇನೆ. ಅಂಬೇಡ್ಕರ್ ಜನ್ಮತಾಳಿದ ಊರಿನಲ್ಲೇ ದೊಡ್ಡ ಸಭೆ ಮಾಡ್ತಿದ್ದೇವೆ. ಮೋದಿ ಅಮಿತ್ ಶಾ ಈ ದೇಶಕ್ಕೆ ಹೇಗೆ ತೊಂದರೆ ಕೊಡ್ತಿದ್ದಾರೆ. ನಮ್ಮ ನಾಯಕರನ್ನ ಅಪಮಾನ ಮಾಡ್ತಿದ್ದಾರೋ, ಎಲ್ಲವನ್ನೂ ನಾಳೆ ಆ ಸಭೆಯಲ್ಲಿ ಪ್ರಸ್ತಾಪ ಮಾಡ್ತೇವೆ .ಎಲ್ಲರೂ ಸಂವಿಧಾನ ರಕ್ಷಣೆಗೆ ಕೆಲಸ ಮಾಡಬೇಕು .ಜೈ ಬಾಪು.. ಜೈ ಭೀಮ್.. ಜೈ ಸಂವಿಧಾನ್ ಘೋಷಣೆ ಅಡಿ ಎಲ್ಲರೂ ಕೆಲಸ ಮಾಡಿ ಎಂದು ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ರು.
ಇನ್ನು ಕೆಪಿಸಿಸಿ ಕಚೇರಿಯಿಂದ ಸಿಎಂ ಸಿದ್ದರಾಮಯ್ಯ ಮಾಣಿಕ್ ಶಾ ಪೆರೆಡ್ ಗ್ರೌಂಡ್ ಗೆ ಹೋಗಲು ಹೊರಟಾಗ ಕಾಂಗ್ರೆಸ್ ಸೇವಾದಳ ಕಾರ್ಯಕರ್ತರು ರಾಷ್ಟ್ರಗೀತೆ ಹಾಡಲು ಮುಂದಾಗಿದ್ದಾರೆ. ಸಿಎಂ ಹೊರಟಿದ್ದು ನೋಡಿ ಸೇವಾದಳ ಕಾರ್ಯಕರ್ತ ರಾಷ್ಟ್ರ ಗಾನ್ ಶುರು ಕರೇಂಗೆ ಎಂದು ಹೇಳಿ ತಬ್ಬಿಬ್ಬಾಗಿದ್ದಾರೆ. ಆಗ ಹೇಳು ಎಂದು ಸಿಟ್ಟಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗದರಿದ್ದಾರೆ. ಅಧ್ಯಕ್ಷರ ಕೋಪ ಕಂಡು ಸೇವಾದಳ ಕಾರ್ಯಕರ್ತರು ರಾಷ್ಟ್ರಗೀತೆ ಆರಂಭಿಸಿದ್ದಾರೆ. ಕಾರಿನತ್ತ ನಡೆದು ಹೋಗುತ್ತಿದ್ದ ಸಿಎಂ ರಾಷ್ಟ್ರ ಗೀತೆ ಆರಂಭವಾಗುತ್ತಿದ್ದಂತೆ ಅಲ್ಲೇ ನಿಂತು ಬಳಿಕ ತೆರಳಿದ್ದಾರೆ.