ಮನೆ Latest News ಚಿತ್ರದುರ್ಗ: ನಾನು ದರ್ಶನ್ ಅವರ ಕೈಯಿಂದ ನಾವು ಒಂದು ರೂಪಾಯಿನೂ ಪಡೆದಿಲ್ಲ; ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿದ್ದ...

ಚಿತ್ರದುರ್ಗ: ನಾನು ದರ್ಶನ್ ಅವರ ಕೈಯಿಂದ ನಾವು ಒಂದು ರೂಪಾಯಿನೂ ಪಡೆದಿಲ್ಲ; ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿದ್ದ ಸುಳ್ಳು ಸುದ್ದಿಗೆ ಸ್ಪಷ್ಟನೆ ಕೊಟ್ಟ ರೇಣುಕಾಸ್ವಾಮಿ ತಂದೆ

0

 

ಚಿತ್ರದುರ್ಗ: ನಾನು ದರ್ಶನ್ ಅವರ ಕೈಯಿಂದ ನಾವು ಒಂದು ರೂಪಾಯಿನೂ ಪಡೆದಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿದ್ದ ಸುಳ್ಳು ಸುದ್ದಿಗೆ  ರೇಣುಕಾಸ್ವಾಮಿ ತಂದೆ ಸ್ಪಷ್ಟನೆ ಕೊಟ್ಟಿದ್ದಾರೆ.

ರೇಣುಕಾಸ್ವಾಮಿ ಕುಟುಂಬಕ್ಕೆ ದರ್ಶನ್ ಸಹಾಯ ಮಾಡಿದ್ದಾರೆ ಎಂಬ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ಇದಕ್ಕೆ ಸಂಬಂಧಪಟ್ಟಂತೆ ಇವತ್ತು ರೇಣುಕಾಸ್ವಾಮಿ ತಂದೆ ಶಿವನಗೌಡ್ರು ಅವರು ಚಿತ್ರದುರ್ಗ ನಗರದ VRS ಬಡಾವಣೆಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದರು.

ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಕೊಲೆ ಆರೋಪಿ ದರ್ಶನ್ ಕಡೆಯಿಂದ ಹಣ ಪಡೆದ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗೆ ಕಣ್ಣೀರು ಇಟ್ಟರು. ಹಲವು ದಿನಗಳಿಂದ ಫೇಸ್ಬುಕ್ ನಲ್ಲಿ ದರ್ಶನ್ ಅವರಿಂದ ನಾವು ಹಣ ಪಡೆದಿದ್ದೇವೆ ಅಂತಾ ಕೆಲವು ಫೇಕ್ ಸುದ್ದಿಗಳು ಹರಿದಾಡುತ್ತಿವೆ. ನಾವು ದರ್ಶನ್ ಬಳಿ ಹೋಗಿದ್ದೇವೆ. ಅವ್ರು‌ ಬಳಿ ಬಂದಿದ್ದಾರೆ. ನಾವು ಅದ್ಯಾವುದೋ ಶೆಡ್ ಗೆ ಹೋಗಿದ್ವಿ. ಅವ್ರೇನೋ ಹಣ ಕೊಟ್ಟಿದ್ದಾರೆ, ನಾವೇನೋ ಇಸ್ಕೊಂಡ್ವಿ ಅಂತೆಲ್ಲಾ ಸುಳ್ಳು ಸುದ್ದಿ ಬರುತ್ತಿವೆ‌. ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬಿಟ್ಟು ಬಿಟ್ಟಿದ್ದೇವೆ ಎಂದರು.

ನಮಗೆ ಬಹಳಷ್ಟು ಜನ ಫೋನ್ ಮಾಡಿ ಕೇಳುತ್ತಿದ್ದಾರೆ. ನಾವು ಯಾರೂ ಅವ್ರನ್ನ ಭೇಟಿ ಮಾಡಿಲ್ಲ, ಅವ್ರು ಯಾರೂ ನಮ್ಮನ್ನ ಬೇಟಿ ಮಾಡಲು ಬಂದಿಲ್ಲ. ನಾವು ಯಾರತ್ರನೂ ಹತ್ತು ಪೈಸೆ ಹಣ ಇಸ್ಕೊಂಡಿಲ್ಲ. ಅದೇನೋ ಕಾರು‌ ಬುಕ್‌ ಮಾಡಿದ್ದೇವೆ ಎಂದು ಹಾಕಿದ್ದಾರೆ.  ನಮ್ಮ ಬಳಿ ಹಳೇ ಸ್ಕೂಟರ್ ರಿಪೇರಿ ಮಾಡಿಸಲು ಆಗಿಲ್ಲ. ಹೀಗೆ ಅದನ್ನ ಫೇಸ್ಬುಕ್ನಲ್ಲಿ ಹಾಕಿ ಅದು ನಿಜ ಎಂಬಂತೆ ಆಗಿದೆ. ಫೇಸ್ ಬುಕ್ ನಲ್ಲಿ ಸುಳ್ಳು ಪೋಸ್ಟ್ ಹಾಕಿರೊದರಿಂದ ನೋವು ತಂದಿದೆ. ಕರ್ನಾಟಕದ ಜನತೆಗೆ ನಾವು ಈ ಮೂಲಕ ಸ್ಪಷ್ಟನೆ ನೀಡುತ್ತಿದ್ದೇವೆ ಎಂದರು.

ಇದೇ ವೇಳೆ ಸರ್ಕಾರ ದರ್ಶನ್ ಅವರಿಗೆ ಜಾಮೀನು ನೀಡಿರೋದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅಪೀಲ್ ಹಾಕಿದ್ದನ್ನ ನಾವು ಸ್ವಾಗತಿಸುತ್ತೇವೆ.ಸರ್ಕಾರಕ್ಕೆ ನಾವು ಧನ್ಯವಾದಗಳನ್ನ ತಿಳಿಸುತ್ತೇವೆ. ಸೊಸೆಗೆ ಸರ್ಕಾರಿ ನೌಕರಿ ಕೇಳಿದ್ದೆವು. ಆದರೇ ಸರ್ಕಾರ ಅದನ್ನ ಕೊಡಲು ಆಗಲ್ಲ ಎಂದು ಹಿಂಬರಹ ಕೊಟ್ಟಿದೆ. ಸರ್ಕಾರ ನೀಡಿದ ಹಿಂಬರಹದಿಂದ ನಮಗೆ ದೊಡ್ಡ ಆಘಾತವಾಗಿದೆ. ಮುಂದೆ ನನ್ನ ಸೊಸೆ,ಮೊಮ್ಮಗು ಎಲ್ಲಿ ಬೀದಿ ಪಾಲಾಗುತ್ತಾನೆ ಎಂಬ ಆತಂಕ ಇದೆ ಎಂದಿದ್ದಾರೆ.