ಬೆಂಗಳೂರು; ಅನಿವಾರ್ಯ ಕಾರಣಗಳಿಂದ ಬಸ್ ದರ ಏರಿಕೆ ಮಾಡಬೇಕಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ ಅವರು ನಾಲ್ಕೂ ಸಾರಿಗೆ ನಿಗಮಗಳು ದರ ಪರಿಷ್ಕರಣೆ ಕೇಳ್ತಾ ಇದ್ರು. ನಿರ್ಣಯ ಮಾಡಿ ಅವರು ಕಳಿಸಿದ್ರು ಸಮಯ ಕೂಡಿ ಬಂದಿರಲಿಲ್ಲ. ಬಿ ಎಂಟಿಸಿಯಲ್ಲಿ 2014 ರಲ್ಲಿ ದರ ಪರಿಷ್ಕರಣೆ ಮಾಡಿದ್ವಿ. ಡೀಸೆಲ್ ದರ ಕಡಿಮೆಯಾದಾಗ ಟಿಕೇಟ್ ದರ ಕಡಿಮೆ ಮಾಡಿದ್ದೆವು. ೧೦ ವರ್ಷಕ್ಕಿಂತ ಹೆಚ್ಚು ಕಾಲದಿಂದ ದರ ಪರಿಷ್ಕರಣೆ ಆಗಿರಲಿಲ್ಲ. ಇಂಧನ ದರ ಉಪಕರಣ ದರ ಈಗಿನಷ್ಟು ಇರಲಿಲ್ಲ. ಶೇ೧೨ ರಷ್ಟು ದರ ಕೆಎಸ್ಆರ್ಟಿಸಿಯವರು ೨೦೨೦ ರಲ್ಲಿ ಹೆಚ್ಚಳ ಮಾಡಿದ್ರು. ಡಿಸೆಲ್ ದರ ಆಗ ೯.೧೬ ಕೋಟಿ ಖರ್ಚಾಗುತ್ತಿತ್ತು. ಈಗ ಪ್ರತಿದಿನ 13.21 ಕೋಟಿ ಡೀಸೆಲ್ ದರ ವೆಚ್ಚವಿದೆ. ಡೀಸೆಲ್ ಗೆ ಪ್ರತಿದಿನ ೪.೦೫ ಕೋಟಿ ಖರ್ಚು ಹೆಚ್ಚಾಗಿದೆ. ಸಿಬ್ಬಂದಿ ವೆಚ್ಚ ಪ್ರತಿದಿನ ೫.೫೧ ಕೋಟಿ ಹೆಚ್ಚಳವಾಗಿದೆ. ಪ್ರತಿದಿನ ಒಟ್ಟೂ ೯.೫೬ ಕೋಟಿ ವೆಚ್ಚ ಹೆಚ್ಚಾಗಿದೆ. ಸರ್ಕಾರ ನಮಗೆ ೮೮೦೦ ಕೋಟಿ ನಮಗೆ ಶಕ್ತಿ ಯೋಜನೆಯಡಿ ಕೊಟ್ಟಿದ್ದಾರೆ ಎಂದರು.
ಬಿಜೆಪಿಯವರು ಮಹಿಳಾ ವಿರೋಧಿಗಳು, ಮನುವಾದಿಗಳು. ಇವತ್ತು ಪ್ರತಿಭಟನೆ ಮಾಡುತ್ತಿರುವವರು ಅವತ್ತು ದರ ಏರಿಕೆ ಮಾಡಿದ್ರು.ವ್ಯಾಪಕವಾಗಿ ಬಿಜೆಪಿ ಅಪಪ್ರಚಾರ ಮಾಡುತ್ತಲೇ ಇರುತ್ತದೆ.ಮೆಜೆಸ್ಟಿಕ್ ನಲ್ಲಿ ಪ್ರತಿಭಟನೆ ಮಾಡುವವರು ೨೦೨೦ ರಲ್ಲಿ ಯಾಕೆ ದರ ಏರಿಕೆ ಮಾಡಿದ್ರು?.ಬಿಜೆಪಿಯವರಿಗೆ ಆದಾಯ #ಯಾವುದು ಅಂತ ಗೊತ್ತಿಲ್ಲ ಲಾಭ ಯಾವುದು ಗೊತ್ತಿಲ್ಲ. ಲಾಭಕ್ಕೂ ಆದಾಯಕ್ಕೂ ವ್ಯತ್ಯಾಸ ಗೊತ್ತಿಲ್ಲದವರು ಬಿಜೆಪಿಯವರು. ಬಿಜೆಪಿಗೆ ಹೋಲಿಸಿದರೆ ನಾವು ಟ್ರಿಪ್ ಸಂಖ್ಯೆ ಹೆಚ್ಚಳ ಮಾಡಿದ್ದೇವೆ. ಅನಿವಾರ್ಯ ಕಾರಣಗಳಿಂದ ದರ ಏರಿಸಬೇಕಾಗಿದೆ ಎಂದು ತಿಳಿಸಿದ್ರು.
೫೦೩೯ ಕೋಟಿ ನಮಗೆ ಸಾಲದ ಹೊರೆ ಇಟ್ಟಿದ್ದಾರೆ. ಪುರುಷರು ಸ್ವಲ್ಪ ಮಟ್ಟಿಗೆ ಬೇಸರಗೊಂಡಿದ್ದಾರೆ ಆದರೆ ಅನಿವಾರ್ಯ. ೨೦೨೩ ರಲ್ಲಿ ವೇತನ ಪರಿಷ್ಕರಣೆ ಮಾಡಿದ್ದಾರೆ. ಎಲ್ಲ ಯೂನಿಯನ್ ಲೀಡರ್ ್ಳನ್ನು ಕರೆದು ಒಂದು ತೀರ್ಮಾನ ಮಾಡ್ತೇವೆ. ೨೦೦೦ ಕೋಟಿ ಸಾಲ ಪಡೆಯಲು ಸರ್ಕಾರ ಅನುಮತಿ ನೀಡಿದೆ. ೨೦೧೬ ರಲ್ಲಿ ಸಾರಿಗೆ ಇಲಾಖೆ ಸಂಸ್ಥೆ ಲಾಭದಲ್ಲಿಯೇ ಇತ್ತು. ಆಮೇಲೆ ಅಶೋಕ್ ಸರ್ಕಾರ ಬಂತು ಈಗ ೫೦೩೯ ಕೋಟಿ ಸಾಲ ಯಾಕೆ ಹೆಚ್ಚಾಯ್ತು? ಎಂದು ಪ್ರಶ್ನೆ ಮಾಡಿದ್ರು.
ನಿಗಮಗಳು ನಮಗೆ ಹೆಚ್ಚಿನ ದರ ಏರಿಕೆಗೆ ಕೇಳಿದ್ರು.ದರ ಏರಿಕೆ ಆಗಿರುವುದು ನಮಗೂ ಸಮಾಧಾನ ಇಲ್ಲ. ಈಗಲೂ ೧೫% ದರ ಏರಿಕೆ ಮಾಡಿದ್ದು ಸಮಾಧಾನ ಇಲ್ಲ. ಮಾಡಲೇಬಾರದಿತ್ತು ಅನ್ನುವ ಭಾವನೆ ಈಗಲೂ ಇದೆ.ಆದರೆ ನಮಗೆ ಅನಿವಾರ್ಯ ಮಾಡಲೇಬೇಕಾಗಿದೆ.ಬಿಜೆಪಿ ಮಾಡಿ ಹೋದ ಸಾಲ ತೀರಿಸಬೇಕು ಎಂದರೆ ದರ ಏರಿಕೆ ಮಾಡಲೇಬೇಕಾಗಿದೆ ಎಂದ ಅವರು ಖಾಸಗಿ ಬಸ್ಸುಗಳು ಕೂಡ ದರ ಏರಿಕೆ ಮಾಡುವ ಯೋಜನೆ ಇದ್ಯಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಅವ್ರು ಪ್ರಸ್ತಾವನೆ ಕೊಡಲಿ ಆ ನಂತರ ಅದರ ಬಗ್ಗೆ ನೋಡೋಣ ಎಂದಿದ್ದಾರೆ.