ಮನೆ Latest News ಸಿ ಪಿ ಯೋಗೇಶ್ವರ್ ಕಾಂಗ್ರೆಸ್ ಗೆ ಹೋಗಿರೋದು ಬಿಜೆಪಿ ಮೇಲೆ ಪರಿಣಾಮ ಬೀರಲ್ಲ ; ವಿಧಾನಪರಿಷತ್...

ಸಿ ಪಿ ಯೋಗೇಶ್ವರ್ ಕಾಂಗ್ರೆಸ್ ಗೆ ಹೋಗಿರೋದು ಬಿಜೆಪಿ ಮೇಲೆ ಪರಿಣಾಮ ಬೀರಲ್ಲ ; ವಿಧಾನಪರಿಷತ್ ವಿಪಕ್ಷ ನಾಯಕ ಆರ್.ಅಶೋಕ್‌ ಹೇಳಿಕೆ

0

ಬೆಂಗಳೂರು: ಸಿ ಪಿ ಯೋಗೇಶ್ವರ್ ಕಾಂಗ್ರೆಸ್ ಗೆ ಹೋಗಿರೋದು ಬಿಜೆಪಿ ಮೇಲೆ ಪರಿಣಾಮ ಬೀರಲ್ಲ  ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಆರ್.ಅಶೋಕ್‌ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಸಿ ಪಿ ಯೋಗೇಶ್ವರ್ ಕಾಂಗ್ರೆಸ್ ಗೆ ಹೋಗಿರೋದರಿಂದ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲ್ಲ.ಬಹಳಷ್ಟು ಜನ ಹೋಗಿದ್ದಾರೆ.19 ಸ್ಥಾನ ಲೋಕಸಭೆಯಲ್ಲಿ ಗೆದ್ದಿದ್ದೇವೆ.ಕಾಂಗ್ರೆಸ್ ನ 9 ಸ್ಥಾನಕ್ಕೆ ಸೀಮಿತ ಮಾಡಿದ್ದೇವೆ.ಬಿಜೆಪಿಗೆ ಸೈದ್ದಾಂತಿಕವಾದ ಪಕ್ಷ ಎಂದಿದ್ದಾರೆ.

ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿ ಪಿ ಯೋಗೇಶ್ವರನ್ನು ಕಡೆಗಣಿಸಲಾಗಿದೆ ಎಂಬ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಮೊದಲು‌ ಹಳೆ ಕಾರ್ಯಕರ್ತರಿಗೆ ಮನ್ನಣೆ. ನಂತರ ಬಂದವರಿಗೆ ಆದ್ಯತೆ ಕೊಟ್ಟಿದ್ದೇವೆ. ಯಾರಿಗೂ ನಮ್ಮ‌ ಪಕ್ಷ ಅನ್ಯಾಯ ಮಾಡಿಲ್ಲ.ಹೊಸ ಅಧ್ಯಾಯನ್ನ ಸೃಷ್ಟಿ ಮಾಡಲು ಹೊರಟಿದ್ದಾರೆ ಎಂದಿದ್ದಾರೆ.ಟಿಕೆಟ್ ಗೋಸ್ಕರ ಪಕ್ಷದಲ್ಲಿ ಇರುತ್ತೇನೆ.ಕೊಡದಿದ್ದರೆ ಬೇರೆ ಪಕ್ಷಕ್ಕೆ ಹೋಗುತ್ತೇನೆ ಅನ್ನೋದು ನಿಷ್ಠೆ ಅಲ್ಲ.ಮೊದಲಿಂದಲೂ ಟಿಕೆಟ್ ಸಿಗದಿದ್ದರೆ ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದಿದ್ದರೆ ನಾವು ಪ್ರಯತ್ನ ಮಾಡುತ್ತಿರಲಿಲ್ಲ ಎಂದಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಮಾಜಿ ಎಂಎಲ್ಸಿ ಸಿ ಪಿ ಯೋಗೇಶ್ವರ್

ಬೆಂಗಳೂರು: ನಿನ್ನೆ ಮೊನ್ನೆ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿ ಪಿ ಯೋಗೇಶ್ವರ್  ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ. ಆದರೆ ನಿನ್ನೆ ಬೆಳಗ್ಗೆ ಅದಕ್ಕಿಂತ ದೊಡ್ಡ ಶಾಕ್ ಕೊಟ್ಟಿದ್ದಾರೆ. ನಿನ್ನೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಯೋಗೇಶ್ವರ್ ರಾಜೀನಾಮೆ ನೀಡಿದ್ದಾರೆ.ಅದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗೇ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ಸೇರಿದ್ರು. ಇನ್ನು ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಮಾತನಾಡಿ ಅವರು ನಾನು ಕೆಪಿಸಿಸಿ ಸದಸ್ಯತ್ವ ಪಡೆದಿದ್ದೇನೆ.ನಾನು ೩೨ ವರ್ಷಗಳಿಂದ ಕಾರ್ಯಕರ್ತನಾಗೆ ಕೆಲಸ ಮಾಡಿದ್ದೇನೆ. ಮಧ್ಯ ಕೆಲವು ಕಾರಣಾಂತರದಿಂದ ಪಕ್ಷ ಬಿಟ್ಟಿದ್ದೆ. ಜೆಡಿಎಸ್ ಪ್ರಾದೇಶಿಕ ಪಕ್ಷ . ಎನ್ ಡಿ ಎ ಜೊತೆ ಅವರು ಅವರ ವಿಚಾರದಲ್ಲಿ ಹೋರಾಟ ಮಾಡ್ತಾರೆ.ನಾವು ನಮ್ಮ ವಿಚಾರದಲ್ಲಿ ಹೋರಾಟ ಮಾಡ್ತೀವಿ. ಯಾರೆ ಅಭ್ಯರ್ಥಿಯಾದ್ರು ಕೆಲಸ ಮಾಡ್ತೀವಿ. ನಾನು ಬಿಜೆಪಿಯಿಂದ ಟಿಕೆಟ್ ಕೇಳಿದ್ದು. ಬೇರೆ ಬೆರೆ ಕಾರಣಗಳಿಂದ ಸಿಗಲಿಲ್ಲ.ಜನ್ಮ ಕೊಟ್ಟಂತಹ ತಾಲ್ಲೂಕು. ಸ್ಪರ್ಧೆ ಮಾಡಬೇಕಂತ ಪ್ರಯತ್ನ ಪಟ್ಟೆ. ತಾಂತ್ರಿಕ ಕಾರಣದಿಂದ ಟಿಕೆಟ್ ಸಿಗಲಿಲ್ಲ.ಒಳ್ಳೆ ಕೆಲಸ ಮಾಡಬೇಕೆಂದು ಕಾಂಗ್ರೆಸ್ ಬಂದೆ.ಯಾವುದೇ ಷರತ್ತು ಹಾಕಿಲ್ಲ.ನಾನು ಜೆಡಿಎಸ್ ೩೦ ವರ್ಷದಿಂದ ಎದುರಾಳಿಯಾಗಿದ್ದು. ಅದರ ಪಕ್ಷದಿಂದ ನಿಲ್ಲಲು ಮನಸಾಕ್ಷಿ ಒಪ್ಪಲಿಲ್ಲ.ಬಿಜೆಪಿಯಿಂದ ಅವಕಾಶ ಕೇಳಿದ್ದೆ ಕೊಡಲಿಲ್ಲ.ಯಾರನ್ನೂ ನಾನು ವೈಯಕ್ತಿಕವಾಗಿ ದೂರಲ್ಲ. ತಾಂತ್ರಿಕ ಕಾರಣದಿಂದ ಟಿಕೆಟ್ ಸಿಗಲಿಲ್ಲ ಎಂದಿದ್ದಾರೆ.

ಇನ್ನು ಮುಂದುವರೆದು ಮಾತನಾಡಿದ ಅವರು : ಆಯ್ಕೆ ನನ್ನದು ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕು ಅಂತಿದ್ದೆ.ಕಾಂಗ್ರೆಸ್ ನಲ್ಲಿ ಅವಕಾಶ ಸಿಕ್ತು. ವಿಜಯೇಂದ್ರ ಅವರು ನನ್ನ ಪರ ಮಾತಾಡಿದ್ರು. ಜಂಪಿಂಗ್ ಸ್ಟಾರ್ ಅಂತ ನನಗೆ ನಾನೆ ಹೇಳಿಕೊಂಡಿದ್ದೇನೆ. ನನಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದರೆ ಇಲ್ಲಿಗೆ ಯಾಕೆ ಬರ್ತಿದ್ದೆ.ರಾಜಕೀಯ ಸ್ನೇಹಿತರು ಮಾಡಿದ ಟೀಕೆಗೆ ಉತ್ತರ ಕೊಡೊಲ್ಲ.ಗೆದ್ದು ನಮ್ಮ ಸಾಮರ್ಥ್ಯ ತೋರಿಸುತ್ತೇವೆ ಎಂದು ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.