ಆರ್. ಅಶೋಕ್ ಹೇಳಿಕೆ
ಬೆಂಗಳೂರು; ಚಾಮರಾಜಪೇಟೆಯಲ್ಲಿ ರಸ್ತೆ ಬದಿ ಶೆಡ್ ನಲ್ಲಿ ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ; ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಅವರು ಜಿಹಾದಿಗಳು ಹೀನ ಕೃತ್ಯ ಮಾಡಿದ್ದಾರೆ.ಸಂಕ್ರಾಂತಿ ಹಬ್ಬದ ಸಮಯದಲ್ಲಿ ಹಿಂದೂಗಳ ಮನಸ್ಸಿಗೆ ಘಾಸಿಯಾಗುವ ಕೃತ್ಯ. ಕೃತ್ಯ ಯಾರೂ ಕ್ಷಮಿಸಲು ಸಾಧ್ಯವಿಲ್ಲ.ಇಂದು ಕಾಟಾಚಾರಕ್ಕೆ ಪೊಲೀಸರು ಸೈಯದ್ ಎಂಬವನನ್ನು ಬಂಧಿಸಿದ್ದಾರೆ.ಹತ್ತು ವರ್ಷದ ಹಿಂದೆ ಬಿಹಾರದಿಂದ ಬಂದವನು ಈಗ ಬಿಹಾರದವನು ಹೇಗಾಗುತ್ತಾನೆ. ಬಂಧಿಸಿ ನೇರವಾಗಿ ಜೈಲಿಗೆ ಕಳಿಸಿದರೆ ಏನು ಸಂದೇಶ ಕೊಡುತ್ತೀರಿ?.ಬೇರೆ ಎಲ್ಲಾ ಪ್ರಕರಣಗಳಲ್ಲೂ ಹೀಗೆ ನೇರವಾಗಿ ಜೈಲಿಗೆ ಕಳಿಸುತ್ತೀರಾ?.ಸರ್ಕಾರ ಏನೋ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ.ಸರ್ಕಾರ ಓಲೈಕೆ ಬಿಡುವವರೆಗೂ ಹೀಗೆ ಇರುತ್ತದೆ. ಇದು ಒಬ್ಬನಿಂದ ನಡೆದಿರುವ ಕೃತ್ಯ ಅಲ್ಲ. ಇದರ ಹಿಂದೆ ಒಂದು ಗ್ಯಾಂಗ್ ಇದೆ. ಪಶು ಆಸ್ಪತ್ರೆ ಬಿಲ್ಡಿಂಗ್ ಪರ ಹೋರಾಟ ಮಾಡಿದ್ದಕ್ಕೆ ಹೀಗೆ ಮಾಡಿದ್ದಾರೆ. ಆಸ್ತಿಯನ್ನು ವಕ್ಪ್ ಆಸ್ತಿಗೆ ಸೇರಿಸಲು ಪ್ರಯತ್ನ ನಡೆದಿದೆ. ಜಮೀರ್ ಅಹಮದ್ ಹಸು ಕೊಡುತ್ತೇನೆ ಅಂದಾಕ್ಷಣ ಏನೂ ಉಪಯೋಗ ಆಗಲ್ಲ.ಹಸು ನಾವೇ ಕೊಡಿಸುತ್ತೇವೆ, ಅಷ್ಟು ದರಿದ್ರ ಅಲ್ಲ ಈ ಸಮಾಜ.ಕಾಂಗ್ರೆಸ್ ಮುಸ್ಲಿಂ ಓಲೈಕೆ ಬಿಡುವವರೆಗೂ ಈ ಸಮಾಜಕ್ಕೆ ನೆಮ್ಮದಿ ಇಲ್ಲ ಎಂದಿದ್ದಾರೆ.
ಇನ್ನು ಬಳ್ಳಾರಿಯಲ್ಲಿ ಸಾಮೂಹಿಕ ವಿವಾಹದಲ್ಲಿ ಹಿಂದೂಗಳು ಎರಡೇ ಮಕ್ಕಳು ಮಾಡಿಕೊಳ್ಳಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ಇದನ್ನು ಹೋಗಿ ಸಾಬರಿಗೆ ಹೇಳುತ್ತಾರಾ?.ಹಿಂದೂಗಳ ಸಂಖ್ಯೆ ಕಡಿಮೆ ಆಗಲಿ, ಮುಸ್ಲಿಮರ ಸಂಖ್ಯೆ ಹೆಚ್ಚಾಗಲಿ ಎಂದು ಸಿದ್ದರಾಮಯ್ಯ ಕುತಂತ್ರ ಮಾಡಿದ್ದಾರೆ.ಸಿದ್ದರಾಮಯ್ಯ ಓಲೈಕೆ ಮಾಡುವುದು ಬಿಡಬೇಕು .ಇದರಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ.ಮೊನ್ನೆ ಸ್ವಾಮೀಜಿಗಳು ಹಿಂದೂಗಳು ಜಾಸ್ತಿ ಮಕ್ಕಳು ಮಾಡಿಕೊಳ್ಳಿ ಎಂದು ಹೇಳಿದ್ದಕ್ಕೆ ಕೌಂಟರ್ ಅಗಿ ಸಿದ್ದರಾಮಯ್ಯ ಹೇಳಿದ್ದಾರೆ.ಯಾವ ಕಾರ್ಯಕ್ರಮಕ್ಕೆ ಹೋದರೂ ನಾನೇ ಸಿಎಂ, ಸಿಎಂ ಕುರ್ಚಿ ಖಾಲಿ ಇಲ್ಲ ಅಂತಾ ಸಿದ್ದರಾಮಯ್ಯ ಹೇಳುತ್ತಿದ್ದಾರೆ.ನನಗೇ ಕನಿಕರ ಬರುತ್ತಿದೆ ಸಿದ್ದರಾಮಯ್ಯ ನೋಡಿ.ರಾಜ್ಯದಲ್ಲಿ ಕುರ್ಚಿ ಕಾದಾಟ ನಡೆಯುತ್ತಿದೆ.ಒಮ್ಮೆ ನನಗೊಂದು ಪೆನ್ನು ಕೊಡಿ ಅಂತಾ ಡಿಸಿಎಂ ಹೇಳಿದ್ದರು.ಈಗ ಶಾಸಕರ ಮುಂದೆ ಹೋಗಿ ನನಗೊಂದು ಪೆನ್ ಕೊಡಿ ಅಂತಾ ಕೇಳುವ ದುಸ್ಥಿತಿ ಡಿ.ಕೆ. ಶಿವಕುಮಾರ್ ಅವರಿಗೆ ಬಂದಿದೆ ಎಂದಿದ್ದಾರೆ.
ಡಿ.ಕೆ. ಶಿವಕುಮಾರ್ ಗೆ ಧೈರ್ಯ ಇದ್ದರೆ ಸಂಧಾನದ ವೇಳೆ ಯಾರ್ಯಾರು ಇದ್ದರು ಅಂತಾ ಹೇಳಲಿ. ಕಾಂಗ್ರೆಸ್ ಪ್ರಲಾಪನೆ ನೋಡಿದರೆ ಕತ್ತಲಲ್ಲಿ ಕರಡಿ ಹುಡುಕಿದಂತೆ ಆಗಿದೆ. ಅವರ ಏರಿಯಾ ಕನಕಪುರದಲ್ಲಿ ಕರಡಿಗಳೇ ಇರುವುದು. ಕಾಂಗ್ರೆಸ್ ಪಕ್ಷದ ಸ್ಥಿತಿ ನೋಡಿದರೆ ತಿಥಿ ವಡೆಯೇ ನೆನಪಾಗುತ್ತದೆ.ಡಿ.ಕೆ. ಶಿವಕುಮಾರ್ ಗೆ ಬೆಳೆಯೂ ಇಲ್ಲ, ಬೆಳೆ ಪರಿಹಾರವೂ ಇಲ್ಲ ಎಂದು ತಿಳಿಸಿದ್ರು.
ಬಜೆಟ್ನಲ್ಲಿ ಇನ್ನೇನು ದರ ಏರಿಕೆ ಕಾದಿದೆಯೋ ಗೊತ್ತಿಲ್ಲ. ಹೀಗೆ ಆದರೆ ರಾಜ್ಯದಿಂದಲೂ ಕಾಂಗ್ರೆಸ್ ಅನ್ನು ಒದ್ದೋಡಿಸುತ್ತಾರೆ. ಕಾಂಗ್ರೆಸ್ ಪಕ್ಷ ಜೆಡಿಎಸ್ ಶಾಸಕರನ್ನು ಸೆಳೆಯುವುದು ಇರಲಿ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ರೀತಿ ಏನಾದರೂ ಆಗಿ ಬಿಟ್ಟೀತು. ಬೇರೆಯವರ ಮನೆಗೆ ಬೆಂಕಿ ಹಚ್ಚುವುದು ಹೋಗಲಿ, ನಿಮ್ಮ ಮನೆಗೆ ಬೆಂಕಿ ಅಂಟಿಕೊಂಡೀತು ಹುಷಾರ್. ಹಿಂದೆ ಕಾಂಗ್ರೆಸ್ ನಿಂದಲೇ ಬಿಜೆಪಿಗೆ 17 ಜನ ಬಂದಿದ್ದರು. ಕಾಂಗ್ರೆಸ್ ಹೈಕಮಾಂಡ್ ಇಂದು ಸಿಎಲ್ಪಿ ಸಭೆಗೆ ಬಂದಿದ್ದಾರೆ. ತೇಪೆ ಹಚ್ಚಲು ಬಂದಿದ್ದಾರೆ. ಸುರ್ಜೇವಾಲಾ ಬಂದು ಹೋದರೂ ಏನೂ ಬದಲಾವಣೆ ಆಗಲ್ಲ.ಎಲ್ಲಿಯವರೆಗೆ ಪವರ್ ಶೇರಿಂಗ್ ಬಗ್ಗೆ ಶಾಸಕರಿಗೆ ಸ್ಪಷ್ಟ ಅಗುವುದಿಲ್ಲವೋ ಅಲ್ಲಿಯವರೆಗೆ ಕುರ್ಚಿ ಕಾದಾಟ ನಿಲ್ಲಲ್ಲ. ಪವರ್ ಶೇರಿಂಗ್ ಬಗ್ಗೆ ಹೇಳಬೇಕಾಗಿರುವುದು ಡಿ.ಕೆ. ಶಿವಕುಮಾರ್. ಎಲ್ಲವೂ ಗೂಡಾರ್ಥದ ರೀತಿ ಇದೆ.ಸುರ್ಜೇವಾಲಾ ಅಲ್ಲ ಯಾರು ಬಂದರೂ ಪರಿಸ್ಥಿತಿ ಇಷ್ಟೇ. ಮತ್ತೆ ಎರಡು ದಿನಕ್ಕೆ ಅದೇ ಪರಿಸ್ಥಿತಿ ಆಗುತ್ತದೆ.ಬಜೆಟ್ ಬಳಿಕ ಕಾಂಗ್ರೆಸ್ ನಲ್ಲಿ ಪರಸ್ಥಿತಿ ಮತ್ತಷ್ಟು ಬದಲಾಗುತ್ತದೆ ಎಂದರು