ಬೆಂಗಳೂರು; ಮೈಸೂರಿನ ಹಿಂದೂಗಳ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ.ಮೈಸೂರಿನಲ್ಲಿ ಮತಾಂಧ ಮುಸ್ಲಿಮರು ಯಾರೋ ಪೋಸ್ಟ್ ಹಾಕಿದ್ದಾನೆ ಅಂತಾ ಐದಾರು ಚೀಲ ಕಲ್ಲು ತುಂಬಿಕೊಂಡು ಬಂದು ಪೊಲೀಸ್ ಠಾಣೆ ಮೇಲೆ ಹಲ್ಲೆ ಮಾಡಿದ್ದಾರೆ.. ಸುತ್ತ ಮುತ್ತಲಿನ ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ. ಇಡೀ ಮೈಸೂರು ಉದ್ವಿಗ್ನಗೊಂಡಿದೆ.ಡಿ.ಕೆ. ಶಿವಕುಮಾರ್ ಸೇರಿ ಬೇರೆ ನಾಯಕರು ಇದು ಮುಸ್ಲಿಮರಿಂದ ಗೆದ್ದ ಸರ್ಕಾರ ಅಂತಾ ಹೇಳಿದ್ದಾರೆ. ಹಾಗಾಗಿ ಪೊಲೀಸ್ ಸ್ಟೇಷನ್ ಒಡೆಯೋಣ ಎಂದು ಅವರಿಗೂ ಧೈರ್ಯ ಬಂದಿದೆ. ಭದ್ರಾವತಿಯಲ್ಲಿ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ಕಾಂಗ್ರೆಸ್ ನಾಯಕರು ನಿಂದಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಕೇಸ್ ಹಾಕಿದರೂ ಅದಕ್ಕೆ ಮೂರು ಕಾಸಿನ ಬೆಲೆ ಇಲ್ಲ ಅಂತಾ ಪೊಲೀಸರಿಗೂ ಅನ್ನಿಸಿದೆ. ಪಾಪಿ ಸರ್ಕಾರ ಅಂತಾ ಜನ ಟೀಕೆ ಮಾಡುತ್ತಿದ್ದಾರೆ ಎಂದರು.
ಸರ್ಕಾರ ಸತ್ತೋಗಿದೆ, ಕೋಮಾ ಸ್ಟೇಜ್ ಗೆ ಹೋಗಿದೆ.ದರಿದ್ರ ಸರ್ಕಾರ ಕರ್ನಾಟಕದಲ್ಲಿ ಯಾವತ್ತೂ ನೋಡಲು ಸಾಧ್ಯವಿಲ್ಲ.ವೋಟ್ ಬ್ಯಾಂಕ್ ಗಾಗಿ ಸರ್ಕಾರವನ್ನು ಹಾಳು ಮಾಡುತ್ತಿದ್ದಾರೆ. ಮೈಸೂರಿನ ಹಿಂದೂಗಳ ರಕ್ಷಣೆ ನಮ್ಮ ಜವಾಬ್ದಾರಿ. ನಾನೂ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ನಾನೂ ಕೂಡಾ ಸ್ಥಳಕ್ಕೆ ಭೇಟಿ ನೀಡುವ ಕೆಲಸ ಮಾಡುತ್ತೇನೆ.ಹಿಂದೆ ಕೇರಳದಿಂದ ಬಂದು ಕೊಲೆಗಳನ್ನು ಮಾಡಿ ಓಡಿ ಹೋಗಿರುವುದನ್ನೂ ನಾನು ನೋಡಿದ್ದೇನೆ.ಮೈಸೂರಿಗೆ ಕೇರಳ ಬಹಳ ಹತ್ತಿರ ಇದೆ ಎಂದರು.
ಭದ್ರಾವತಿ ಶಾಸಕರ ಮಗನಿಂದ ಮಹಿಳಾ ಅಧಿಕಾರಿಗೆ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಇದು ಕೇವಲ ಭದ್ರಾವತಿ ಪ್ರಕರಣ ಮಾತ್ರ ಅಲ್ಲ.ಇಡೀ ರಾಜ್ಯದಲ್ಲೇ ಇದೇ ಸ್ಥಿತಿ ಎಂದ್ರು.ಕುಂಭ ಮೇಳದಲ್ಲಿ ಡಿ.ಕೆ. ಶಿವಕುಮಾರ್ ಭಾಗಿ ವಿಚಾರದ ಬಗ್ಗೆ ಮಾತನಾಡಿದ ಧೈರ್ಯ ಮಾಡಿ, ಖರ್ಗೆಯವರ ಆದೇಶ ಉಲ್ಲಂಘನೆ ಮಾಡಿ ಕುಂಭ ಮೇಳಕ್ಕೆ ಹೋಗಿರುವುದಕ್ಕೆ ಡಿ.ಕೆ. ಶಿವಕುಮಾರ್ ಅವರನ್ನು ಅಭಿನಂದಿಸುತ್ತೇನೆ.ಕೇವಲ ಸ್ನಾನ ಮಾಡಿರುವುದಲ್ಲ, ಅಲ್ಲಿನ ವ್ಯವಸ್ಥೆಗೆ ಡಿ.ಕೆ. ಶಿವಕುಮಾರ್ ಶ್ಲಾಘಿಸಿದ್ದಾರೆ.ಮಲ್ಲಿಕಾರ್ಜುನ ಖರ್ಗೆಯವರು ಇದಕ್ಕೆ ಉತ್ತರ ಕೊಡಬೇಕು, ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುವುದಲ್ಲ.ಪಾಪ ಹೋಗಿದೆ ಅಂತಾ ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆ.ಇಲ್ಲಿಂದಲೇ ಸ್ವಾಮೀಜಿಯನ್ನೂ ಕರೆದುಕೊಂಡು ಹೋಗಿ ತೀರ್ಥ ಹಾಕಿಸಿಕೊಂಡು ಪವಿತ್ರ ಆಗಿ ಬರುತ್ತಿದ್ದಾರೆ.ಈಗ ಯಾವುದು ಒರಿಜಿನಲ್ ಕಾಂಗ್ರೆಸ್ ಅಂತಾ ಖರ್ಗೆ ಸ್ಪಷ್ಟಪಡಿಸಬೇಕು.ಕರ್ನಾಟಕದ ಕಾಂಗ್ರೆಸ್ ನವರು ಹೀಗೂ ಉಂಟೇ ಅಂತಾ ನೋಡುತ್ತಿದ್ದಾರೆ ಎಂದರು.
ಭದ್ರಾವತಿ ಶಾಸಕರ ಪುತ್ರನ ಪ್ರಕರಣದ ಬಗ್ಗೆ ನಾನೂ ವರದಿ ತರಿಸಿಕೊಳ್ಳುತ್ತಿದ್ದೇನೆ. ಕಾಂಗ್ರೆಸ್ ಶಾಸಕರ ಪರಿಸ್ಥಿತಿ ಶೋಚನೀಯ ಆಗಿದೆ. ಅಭಿವೃದ್ಧಿ ಕಾರ್ಯ ಇಲ್ಲ, ಅದಕ್ಕೆ ಮರಳು ಮಾಫಿಯಾ ಇದರಲ್ಲೆಲ್ಲಾ ತೊಡಗಿಸಿಕೊಂಡಿದ್ದಾರೆ.ಈ ಅಧಿಕಾರಿ ಧೈರ್ಯ ಮಾಡಿ ಹೇಳಿದ್ದಾರೆ, ಉಳಿದವರು ವರ್ಗಾವಣೆ ಭಯದಿಂದ ಸುಮ್ಮನೆ ಇದ್ದಾರೆ ಎಂದು ತಿಳಿಸಿದ್ರು.
ಪಕ್ಷದಲ್ಲಿನ ಸಮಸ್ಯೆ ಪರಿಹಾರಕ್ಕೆ ವಿಪಕ್ಷ ನಾಯಕ ಅಶೋಕ್ ನೇತೃತ್ವ ವಹಿಸಲು ಶಾಸಕರ ಒತ್ತಾಯ ವಿಚಾರದ ಬಗ್ಗೆ ಮಾತನಾಡಿದ ಆರ್ ಅಶೋಕ್ ದೆಹಲಿ ನಾಯಕರು ಏನೂ ಮಾತನಾಡದಂತೆ ಸೂಚಿಸಿದ್ದಾರೆ.ಹಾಗಾಗಿ ನಾನು ಸುಮ್ಮನೆ ಇದ್ದೇನೆ. ವರಿಷ್ಠರು ಸೂಚಿಸಿದರೆ ನಾನು ಮಾತಾಡುತ್ತೇನೆ .ಈಗ ರಾಜ್ಯದಲ್ಲಿ ನಡೆಯುವಂತಹದ್ದೇನೂ ಉಳಿದಿಲ್ಲ.ಎಲ್ಲವೂ ವರಿಷ್ಠರ ಮಟ್ಟದಲ್ಲೇ ಬಗೆಹರಿಸಬೇಕು.ವರಿಷ್ಠರು ಈಗಾಗಲೇ ವರದಿ ಪಡೆದಿದ್ದಾರೆ, ಗೊಂದಲ ಬಗೆಹರಿಸುತ್ತಾರೆ.ನಾನೇ ಸಭೆ ಮಾಡಬೇಕು ಅಂದರೆ ವರಿಷ್ಠರು ಹೇಳಿದ್ರೆ ಸಭೆ ಮಾಡುತ್ತೇನೆ.ಆದರೆ ಈ ಹಂತದಲ್ಲಿ ಎಲ್ಲವೂ ಹೈಕಮಾಂಡ್ ಮಟ್ಟದಲ್ಲೇ ಬಗೆಹರಿಯಬೇಕಿದೆ.ಎಲ್ಲವೂ ಸುಖಾಂತ್ಯವಾಗಿ ಬಗೆಹರಿಯುವ ವಿಶ್ವಾಸ ಇದೆ ಎಂದರು.