ಬೆಂಗಳೂರು; ರನ್ಯಾ ರಾವ್ ಪ್ರಕರಣದಲ್ಲಿ ಸಚಿವರ ಕೈವಾಡ ಆರೋಪ ವಿಚಾರದ ಬಗ್ಗೆ ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಹೆಸರು ಇದ್ರೆ ಹೇಳಲಿ.ಡಿಆರ್ ಐ ಇದೆ, ಸಿಬಿಐ ಇದೆ. ಬಿಜೆಪಿ ರಾಜ್ಯಾಧ್ಯಕ್ಷರು ಇಬ್ಬರು ಸಚಿವರು ಎಂದಿದ್ದಾರೆ, ಹೆಸರು ಹೇಳಲಿ. ದುಬೈನಲ್ಲಿ ವಿಜಯೇಂದ್ರರದ್ದು ಸಾಕಷ್ಟು ದುಡ್ಡಿದೆ ಅಂತ ಯತ್ನಾಳ್ ಹೇಳ್ತಾರೆ. ವಿಜಯೇಂದ್ರ ದುಬೈಗೆ ಹೋಗೋದು ಬರೋದು ಮಾಡ್ತಾರೆ ಎಂದು ಹೇಳ್ತಾರೆ.ಸಚಿವರ ವಿಚಾರವಾಗಿ ಸುಮ್ಮನೆ ಗಾಳಿಯಲ್ಲಿ ಗುಂಡು ಹೋಡಿಯೋದು ಬೇಡ.ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಅನುದಾನಕ್ಕೆ ಆಗ್ರಹ ವಿಚಾರದ ಬಗ್ಗೆ ಮಾತನಾಡಿದ ಅವರು ನೂರು ಕೋಟಿ, ಸಾವಿರ ಕೋಟಿ ಅನುದಾನ ಕೊಟ್ರೂ ಸಾಲಲ್ಲ.ಅವರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳ್ತಾರೆ. ವೈಯಕ್ತಿಕವಾಗಿ ಶಾಸಕರು ಅನುದಾನ ಕೇಳಲ್ಲ ಎಂದಿದ್ದಾರೆ.
ತನಿಖೆಯಿಂದ ಯಾರು ತಪ್ಪು ಮಾಡಿದ್ದಾರೆ ಅನ್ನೋದು ಹೊರಗೆ ಬರಲಿ: ವಿಧಾನಸೌಧದಲ್ಲಿ ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆ
ಬೆಂಗಳೂರು; ತನಿಖೆಯಿಂದ ಯಾರು ತಪ್ಪು ಮಾಡಿದ್ದಾರೆ ಅನ್ನೋದು ಹೊರಗೆ ಬರಲಿ ಎಂದು ವಿಧಾನಸೌಧದಲ್ಲಿ ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ನಟಿ ರನ್ಯಾ ರಾವ್ ಸ್ಮಗ್ಲಿಂಗ್ ಗೆ ಪ್ರೋಟೋಕಾಲ್ ಬಳಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಪ್ರಕರಣದಲ್ಲಿ ಪ್ರೋಟೋಕಾಲ್ ಸಹಾಯ ಆಗಿದೆ. ಸಹಾಯ ಮಾಡಿದ್ರೆ ಅದು ನಿಯಮದ ಉಲ್ಲಂಘನೆ. ಸರ್ಕಾರದ ಹುದ್ದೆಯಲ್ಲಿರೋರಿಗೆ ಪ್ರೋಟೋಕಾಲ್ ಕೊಡಲಾಗುತ್ತದೆ. ಆದರೆ ಯಾರದ್ದೋ ಪ್ರಭಾವಿಗಳ ಮಗಳು ಅನ್ನೋ ಕಾರಣಕ್ಕೆ ಕೊಟ್ಟರೆ ತಪ್ಪು. ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ ಮಾಡಿದ್ದಾರೆ. ತನಿಖೆಯಿಂದ ಯಾರು ತಪ್ಪು ಮಾಡಿದ್ದಾರೆ ಅನ್ನೋದು ಹೊರಗೆ ಬರಲಿ ಎಂದಿದ್ದಾರೆ.
ಸಚಿವರ ಪ್ರಭಾವ ಆರೋಪ ವಿಚಾರದ ಬಗ್ಗೆ ಮಾತಾನಾಡಿದ ಅವರು ಸಚಿವರ ಪ್ರಭಾವ ಆಗಿರೋ ಬಗ್ಗೆ ಸುಮ್ಮನೆ ಆರೋಪ ಮಾಡೋದು ಬೇಡ. ಈಗಾಗಲೇ ಡಿಐಆರ್ ತನಿಖೆ ನಡೆಸುತ್ತಿದೆ. ಸಿಬಿಐಗೆ ಬಿಜೆಪಿಯವರು ತಮ್ಮ ಬಳಿ ಇರೋ ಮಾಹಿತಿ ಕೊಡಲಿ. ಸಿಬಿಐ ವರದಿ ಬಂದ ಮೇಲೆ ಯಾರ ತಪ್ಪಿದೆ ಅನ್ನೋದು ಗೊತ್ತಾಗುತ್ತದೆ ಎಂದಿದ್ದಾರೆ.
ಗ್ರೇಟರ್ ಬೆಂಗಳೂರಿಗೆ ಬಿಜೆಪಿ ವಿರೋಧ ವಿಚಾರದ ಬಗ್ಗೆ ಮಾತನಾಡಿ ಬೆಂಗಳೂರಿನ ಸಂಪೂರ್ಣ ಅಭಿವೃದ್ಧಿಗಾಗಿ ವಿಧೇಯಕ ಮಂಡನೆ ಆಗಿದೆ. ಇವರ ಆಡಳಿತದಲ್ಲಿ ಮಳೆ ನೀರಿನಲ್ಲಿ ತೆರಳಿ ಜನರ ರಕ್ಷಣೆ ಮಾಡಿದ್ದೇವೆ. ಆದರೆ ಇವರು ಬೆಂಗಳೂರು ಅಭಿವೃದ್ಧಿಗೆ ಏನು ಮಾಡಿದ್ದಾರೆ. ಗ್ರೇಟರ್ ಬೆಂಗಳೂರು ವಿಚಾರಕ್ಕೆ 20 ಸಭೆ ಮಾಡಿದ್ವಿ. ಅದರಲ್ಲಿ ಬಿಜೆಪಿ, ಜೆಡಿಎಸ್ ನ ಜನಪ್ರತಿನಿಧಿಗಳು ಭಾಗಿಯಾಗಿದ್ದರು. ಅವರೆಲ್ಲರ ಸಲಹೆಯನ್ನು ನಾವು ಪಡೆದುಕೊಂಡಿದ್ದೇವೆ. ರಾಜಕೀಯಕ್ಕಾಗಿ ಈಗ ವಿರೋಧ ಮಾಡ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.