ಮನೆ Latest News ಪರಮೇಶ್ವರ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ ಸಚಿವ ಕೆ ಎನ್ ರಾಜಣ್ಣ; ಸಚಿವರಿಂದ ಜಂಟಿ ಸುದ್ದಿಗೋಷ್ಟಿ

ಪರಮೇಶ್ವರ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ ಸಚಿವ ಕೆ ಎನ್ ರಾಜಣ್ಣ; ಸಚಿವರಿಂದ ಜಂಟಿ ಸುದ್ದಿಗೋಷ್ಟಿ

0

ಬೆಂಗಳೂರು;  ಸಚಿವ ಕೆ ಎನ್ ರಾಜಣ್ಣ  ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಸದಾಶಿವನಗರದ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

ಬಳಿಕ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮತ್ತು ಸಚಿವ ಕೆ.ಎನ್.ರಾಜಣ್ಣ ಜಂಟಿ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಪರಮೇಶ್ವರ್ ಸಹಕಾರಿ ಸಚಿವ ರಾಜಣ್ಣನವರು ಸದನದಲ್ಲಿ ಹನಿಟ್ರ್ಯಾಪ್ ಆಗಿದೆ ಅಂತ ಚರ್ಚೆಗೆ ಬಂದಾಗ ನನ್ನ ಮೇಲೂ ಪ್ರಯತ್ನ ಆಗಿದೆ ಅಂತ ಸರ್ಕಾರ, ಗೃಹ ಸಚಿವರಿಗೆ ಮನವಿ ಕೊಡ್ತೀನಿ ಅಂತ ಹೇಳಿದ್ರು. ಕ್ರಮ ತೆಗೆದುಕೊಳ್ಳಬೇಕು ಅಂತ ಪ್ರಸ್ತಾಪ ಮಾಡಿದ್ರು. ಇದು ನಿಜಾ ಆಗಿದ್ರೆ ಉನ್ನತ ಮಟ್ಟದ ತನಿಖೆ ಮಾಡುವುದಾಗಿ ಹೇಳಿದ್ದೆ. ರಾಜಣ್ಣ ದೂರು ಕೊಡಲು ಆಗಲಿಲ್ಲ. ಪೂರ್ವ ನಿಯೋಜಿತ ಕೆಲಸದ ನಡುವೆ ದೂರು ಕೊಡಲು‌ ಆಗಲಿಲ್ಲ. ಇಂದು ನನಗೆ ಮನವಿ ಕೊಟ್ಟಿದ್ದಾರೆ. ವಿಧಾನಸಭೆಯಲ್ಲಿ ಪ್ರಸ್ತಾಪಿಸಿದಂತೆ ಮನವಿ ಕೊಟ್ಟಿದ್ದಾರೆ.ಮುಂದಿನ ಕ್ರಮದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡ್ತೀನಿ ಎಂದು ಹೇಳಿದ್ರು.

ಯಾವ ಹಂತದಲ್ಲಿ ತನಿಖೆ ಆಗ್ಬೇಕು. ಯಾರಿಂದ ತನಿಖೆ ಆಗ್ಬೇಕು ಅಂತ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ದೂರನ್ನ ನಾನು ಸ್ವೀಕಾರ ಮಾಡೋಕೆ ಆಗೊಲ್ಲ. ಈಗ ನನಗೆ ಕೊಟ್ಟಿರುವುದನ್ನ ಮನವಿ ಅಂತ ಪರಿಗಣಿಸಬಹುದು. ಕಾನೂನು ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಸದನದಲ್ಲಿ ನಡೆದ ಘಟನೆ ಮತ್ತು ಮುಂದುವರಿದ ಭಾಗವಾಗಿ ನನಗೆ ಮನವಿ ಕೊಟ್ಟಿದ್ದಾರೆ. ಕಾನೂನು ತಜ್ಞರ ಜೊತೆ ಚರ್ಚಿಸಿ ಸಿಎಂ ಜೊತೆ ಚರ್ಚಿಸಿ ತನಿಖೆ ಮಾಡುವುದಾದರೆ ಯಾವ ಹಂತದ ತನಿಖೆ ಅಂತ ನಿರ್ಧಾರ ಮಾಡುತ್ತೇವೆ.ಮನವಿ ಜೊತೆ ದಾಖಲೆ ಕೊಟ್ಟಿರುವುದನ್ನ ಬಿಡುಗಡೆ ಮಾಡೋಕೆ ಆಗೊಲ್ಲ ಎಂದ್ರು.

ಪೂರ್ವ ನಿಯೋಜಿತ ಕಾರ್ಯಕ್ರಮ ಹಿನ್ನೆಲೆ ತಡವಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಇಂದು ವಿಚಾರ ಬರಬೇಕಿತ್ತು.ಅಲ್ಲಿ ಏನು ತೀರ್ಮಾನ ಬರುತ್ತೊ ಗೊತ್ತಿಲ್ಲ. ಒಂದೊಂದು ಕೇಸ್ ಒಂದೊಂದು ಕೇಸದ ರೀತಿ ಇರುತ್ತೆ. ಸುಮೊಟೊ ಕೇಸ್ ದಾಖಲಿಸಲು ಬರುವುದಿಲ್ಲ. ಸ್ಪೀಕರ್ ಅವರು ಸುಮೊಟೊ ಕೇಸ್ ಬಗ್ಗೆ ತಿಳಿಸಬೇಕು.ನಾವು ಕಾಯುತ್ತಿದ್ದೇವೆ ಎಂದ್ರು.

ಕೆ ಎನ್ ರಾಜಣ್ಣ ಮಾತನಾಡಿ ನ್ಯಾಯಾಧೀಶರಿದ್ದಾರೆ ಅಂತ ನಾನು ಹೇಳಿಲ್ಲ.ನಮ್ಮ ಪಾರ್ಟಿ, ಬೇರೆ ಪಾರ್ಟಿಯಲ್ಲಿ ಮಾಡಿದವರಿದ್ದಾರೆ ಅಂತ ಹೇಳಿದ್ದೇನೆ. ನಾನು ಹೇಳದೆ ಇದ್ದಿದ್ದು ಹೇಳಿದ್ದೇನೆ ಅಂದ್ರೆ ಹೇಗೆ?. ನನ್ನ ಅನುಭವ ಆಗಿರೋದರ ವಿರುದ್ಧ ಮಾಹಿತಿ ನೀಡಿದ್ದೇನೆ. ಇಂತಹ ಪ್ರಕರಣ ಇದೇ ಮೊದಲೇನಲ್ಲ. ಎಷ್ಟೋ ಜನ ಸ್ಟೇ ತೆಗೆದುಕೊಂಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಈ ಚಾಳಿ ಮುಂದುವರಿಯಬಾರದು. ಮಾಧ್ಯಮದಲ್ಲಿ ತುಮಕೂರಿನ ಪ್ರಭಾವಿ ಸಚಿವರ ಹನಿಟ್ರ್ಯಾಪ್ ಅಂತ ತೋರಿಸ್ತಾ ಇದ್ರಿ. ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಬಗ್ಗೆ ಸುನೀಲ್ ಪ್ರಸ್ತಾಪ ಮಾಡಿದ್ರು. ಮಾರನೇ ದಿನ‌ ಯತ್ನಾಳ್ ನನ್ನ ಹೆಸರು ಹೇಳಿದ್ರು.ನನ್ನ‌ ಹೆಸರು ಹೇಳಿದ್ದಕ್ಕೆ ನಾನು ಉತ್ತರ ಕೊಟ್ಟೆ ಎಂದಿದ್ದಾರೆ.

ಅಧಿವೇಶನದ ಕೊನೆ ದಿನದ ಮಧ್ಯಾಹ್ನ 3 ಗಂಟೆಯ ನಂತರ ಜಿಲ್ಲಾ ಬ್ಯಾಂಕ್‌ ಆಡಳಿತ ಸಭೆ, ನಾಬಾರ್ಡ್ ಕಾರ್ಯಕ್ರಮ ಇತ್ತು. ಅನೇಕ ಪೂರ್ವ ನಿಯೋಜಿತ ಕಾರ್ಯಕ್ರಮಗಳಲ್ಲಿ ನಾನು ಬ್ಯುಸಿಯಾದೆ. 3-4 ದಿನಗಳು ನನಗೆ ನಿರಂತರ ಕಾರ್ಯಕ್ರಗಳು ಇದ್ದವು. ಬ್ಯುಸಿ ಇದ್ದ ಕಾರಣ ದೂರು ನೀಡಲು ತಡವಾಯ್ತು. ನಾನು ವಿಧಾನಸಭೆಯಲ್ಲಿ ಚರ್ಚೆ ನಡೆದ ವಿಚಾರಕ್ಕೆ ಪೂರಕವಾದದ್ದು ಕೊಟ್ಟಿದ್ದೀನಿ. ಸುನೀಲ್ ಹೇಳಿದ್ದು ಬೇರೆ, ಯತ್ನಾಳ್ ನಿರ್ದಿಷ್ಟವಾಗಿ ಹೇಳಿದ್ದಕ್ಕೆ ನಾನು ಉತ್ತರ ಕೊಟ್ಟೆ. ನಾನು ಸಿಎಂ ಭೇಟಿ ಮಾಡಿದ್ದೇನೆ ಎಂದು ತಿಳಿಸಿದ್ರು.