ಮನೆ Latest News ಬೆಂಗಳೂರಿನಲ್ಲಿ ವೀರಶೈವ ಮಹಾಸಭಾ ಮುಖಂಡರ ಸುದ್ದಿಗೋಷ್ಠಿ

ಬೆಂಗಳೂರಿನಲ್ಲಿ ವೀರಶೈವ ಮಹಾಸಭಾ ಮುಖಂಡರ ಸುದ್ದಿಗೋಷ್ಠಿ

0

 

ಬೆಂಗಳೂರು: ಬೆಂಗಳೂರಿನಲ್ಲಿ ವೀರಶೈವ ಮಹಾಸಭಾ ಮುಖಂಡರ ಸುದ್ದಿಗೋಷ್ಟಿ ನಡೆಯಿತು. ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಜಾತಿ ಗಣತಿ ವರದಿ ಬಗ್ಗೆ ಪ್ರಸ್ತಾಪ ಮಾಡಿ ಒಬಿಸಿ ಆಯೋಗ ಗಣತಿ ವರದಿ ಕೊಟ್ಟಿದೆ. ಅದನ್ನ ಸಂಪುಟ ಸಭೆಯಲ್ಲಿ ಮಂಡಿಸಲಾಗಿದೆ. 12 ನೇ ಶತಮಾನದಲ್ಲಿ ಬಸವಣ್ಣ ಕ್ರಾಂತಿ ಮಾಡಿದ್ರು. ಸಾಮಾಜಿಕ,ಧಾರ್ಮಿಕ ಕ್ರಾಂತಿ ಮಾಡಿದ್ರು.ಎಲ್ಲರೂ ಸಮಾನರೆಂದು ಅವರು ಸಾರಿದ್ದರು. ಹೆಣ್ಣುಮಕ್ಕಳಿಗೂ ಪುರುಷರಷ್ಟೇ ಸ್ಥಾನಮಾನ ಕೊಟ್ರು. ಅಸ್ಪೃಷ್ಯತೆ ಆಚರಣೆ ಬಗ್ಗೆಯೂ ಧ್ವನಿ ಎತ್ತಿದ್ದರು.ಎಲ್ಲಾ ವರ್ಣಗಳ ಜನ ಬಸವಣ್ಣನವರನ್ನ ಒಪ್ಪಿದ್ರು. ಲಿಂಗಾಯತ,ವೀರಶೈವ ಎರಡೂ ಒಂದೇ. ಲಿಂಗಾಯತ ಸ್ವತಂತ್ರ್ಯ ಧರ್ಮ ಅಂತ ಮಾಡಬೇಕು ಎಂದರು.

ಮಹಾಸಭಾ ೨೦ ವರ್ಷದಿಂದ ಹೋರಾಡುತ್ತಿದೆ. ಕೇಂದ್ರ ಸರ್ಕಾರಕ್ಕೂ ಮನವಿಯನ್ನ ಕೊಟ್ಟಿತ್ತು. ೧೯೫೫ ಹಿಂದೂ ಕೋಡ್ ಬಿಲ್ ಇದೆ.ನಾಲ್ಕು ಕಾನೂನುಗಳಲ್ಲಿ ಹಿಂದು ಎಂದು ಪರಿಗಣಿಸಲಾಗಿದೆ. ೨೦೧೧ರ ಜನಗಣತಿಯಲ್ಲೂ ಹಿಂದೂ ಎನ್ನಲಾಗಿದೆ. ಲಿಂಗಾಯತ ಹಿಂದೂ ಧರ್ಮದ ಪಂಥ ಎಂದಿದೆ.ಆದರೆ ಲಿಂಗಾಯತ ಎನ್ನುವುದು ಒಂದು ಪಂಥ.ಲಿಂಗಾಯತ ಅನ್ನುವುದು ಒಂದು ಧರ್ಮವಲ್ಲ.ಸದ್ಯಕ್ಕೆ ಅದು ಒಂದು ಪಂಥ ಅಂತ ಹೇಳ್ತೇನೆ ಎಂದರು.

ವೃತ್ತಿ ಆಧಾರಿತವಾಗಿ ೯೯ ಜಾತಿಗಳಿವೆ. ಲಿಂಗಾಯತ ಪಂಥದಲ್ಲಿ ೯೯ ಪಂಗಡಗಳಿವೆ. ಹಿಂದೂವಿನ ಬಹಳಷ್ಟು ಜಾತಿ ಲಿಂಗಾಯತದಲ್ಲಿವೆ. ಲಿಂಗಾಯತರನ್ನ ಜಾತಿ ಅಂತ ಪರಿಗಣಿಸಲು ಸಾಧ್ಯವಿಲ್ಲ. ಇದೊಂದು ಪ್ರತ್ಯೇಕವಾದ ಪಂಥ. ಒಬಿಸಿ ಜಾತಿಗಳನ್ನ ೩ ಭಾಗವಾಗಿ ವಿಂಗಡಿಸಿದೆ. ಜಯಪ್ರಕಾಶ್ ಹೆಗ್ಡೆ ಆಯೋಗ ವಿಂಗಡಿಸಿದೆ. ಪ್ರವರ್ಗ ೧ ರಲ್ಲಿ ಅತ್ಯಂತ ಹಿಂದುಳಿದ ವರ್ಗ ಸೇರಿಸಿದ್ದಾರೆ. ಇದರಲ್ಲಿ ಪ್ರವರ್ಗ ೧-ಎ ಪ್ರವರ್ಗ ೧ಬಿ ಮಾಡಿದ್ದಾರೆ.೨ಎ ನಲ್ಲಿ ಮುಸ್ಲಿಂ ಸಮುದಾಯ ಬರಲಿದೆ.೩-ಬಿಯಲ್ಲಿ ಲಿಂಗಾಯತ ಬರಲಿದೆ. ೨೦೦ ಅಂಕಗಳನ್ನ ಕೊಟ್ಟಿದ್ದಾರೆ. ೧೦೦ ಅಂಕಗಳಿರುವುದನ್ನ ಹಿಂದುಳಿದಕ್ಕೆ ಸೇರಿಸಿದ್ದಾರೆ. ೯೯ ಅಂಕದ ಜಾತಿಗಳನ್ನ ಅತ್ಯಂತ ಹಿಂದುಳಿದಕ್ಕೆ ಸೇರಿಸಿದ್ದಾರೆ. ೩-ಬಿ ನಲ್ಲಿರುವ ೨೯ ರಿಂದ ೧೪೦ ಅಂಕದ ಜಾತಿಗಳನ್ನ ಸೇರಿಸಿದ್ದಾರೆ. ಕ್ಯಾಬಿನೆಟ್ ನೋಟ್ ನಲ್ಲಿ ೧೪೯ ಅಂತ ಹಾಕಿದ್ದಾರೆ. ಇವೆರಡರಲ್ಲಿ ಯಾವುದು ಸರಿ ಸ್ಪಷ್ಟನೆ ಬೇಕಿದೆ ಎಂದಿದ್ದಾರೆ.

ಹೆಳವ,ಉಪ್ಪಾರ,ಹಾವಾಡಿಗ ಪ್ರವರ್ಗ೧ಎ ನಲ್ಲಿ ಹಾಕಿದ್ದಾರೆ.ಸುಣಗಾರಲಿಂಗಾಯತ,ಬೇಡ ಜಂಗಮ,ಉಪ್ಪಾರ ಲಿಂಗಾಯತರನ್ನ ೩ಬಿಗೆ ಸೇರಿಸಿದ್ದಾರೆ. ಹಿಂದೂ ಬೋವಿ,ಲಿಂಗಾಯತ ಬೋವಿಗಳಿದ್ದಾರೆ. ಇಲ್ಲೂ ಬೇರೆ ಬೇರೆ ಪ್ರವರ್ಗಕ್ಕೆ ಸೇರಿಸಿದ್ದಾರೆ. ಹಿಂದೂಬೋವಿ,ಲಿಂಗಾಯತ ಬೋವಿ ಪರಿಸ್ಥಿತಿ ಬೇರೆ ಇದ್ಯಾ. ಸುಣಗಾರ್ ೧೨೯ ಮಾರ್ಕ್,ಹಿಂದೂ ಸುಣಗಾರದ ಗೆ ೨೯ ಅಂಕ ಕೊಟ್ಟಿದ್ದಾರೆ ಉಪ್ಪಾರಗೆ ೧೨೫ ಕೊಡ್ತಾರೆ,ಲಿಂಗಾಯತ ಉಪ್ಪಾರ್ ಗೆ ೪೫,೪೯ ಕೊಟ್ಟಿದ್ದಾರೆ. ಈ ರೀತಿ ಮಾಡಿರುವುದು ಸಂಪೂರ್ಣ ತಪ್ಪು. ಪ್ರವರ್ಗ ೧ ಕ್ಕೆ ಕೆಲವರನ್ನ ಸೇರಿಸಬೇಕು. ಸುಪ್ರೀಂ ತೀರ್ಮಾನವೂ ಇದೆ. ಹಿಂದೂ ಗಾಣಿಗ,ಲಿಂಗಾಯತ ಗಾಣಿಗ ಒಂದೇ ಎಂದಿದೆ. ಈ ತಾರತಮ್ಯವನ್ನ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಾವನೂರು,ಚಿನ್ನಪ್ಪ ರೆಡ್ಡಿ ಆಯೋಗಳಿಂದ ಲಿಂಗಾಯತ ಸಮುದಾಯಕ್ಕೆ ಅನ್ಯಾಯ ಆಗಿದೆ. ಹಾವನೂರು ಆಯೋಗ ಜಾತಿ ಅಂತ ಪರಿಗಣಿಸಿದೆ.ಲಿಂಗಾಯತ ಅನ್ನುವುದು ಜಾತಿಯಲ್ಲ.ಲಿಂಗಾಯತ ಅನ್ನುವುದು ಒಂದು ಪಂಥ. ಹೆಗ್ಡೆ ಆಯೋಗ ಜಾತಿ ಎಂದು ಪರಿಗಣಿಸಿದ್ದು ಸರಿಯಲ್ಲ. ಇದನ್ನ ನಾವ್ಯಾರು ಒಪ್ಪುವುದಿಲ್ಲ. ಕಾಂತರಾಜು ವರದಿ ಆಗಿ ೧೦ ವರ್ಷ ಆಗಿದೆ.೯೯೫ಸೆಕ್ಷನ್ ೧೧ ರಂತೆ ತಪ್ಪಾಗುತ್ತದೆ. ಜಾರಿಗೆ ತಂದರೆ ಕಾನೂನು ಉಲ್ಲಂಘನೆಯಾಗುತ್ತದೆ. ಜಾತಿ ಗಣತಿ ವರದಿ ತಂದರೆ ಉಲ್ಲಂಘನೆಯಾಗುತ್ತದೆ ಎಂದರು.

ಜನವರಿ ೨೬ ರಿಂದ ಡಿಸೆಂಬರ್ ೨೬ ರವರೆಗೆ ಜನಗಣತಿ ಮಾಡ್ತೇವೆ. ನಮ್ಮ ಸಮಾಜದ ಗಣತಿಯನ್ನ ಮಾಡ್ತೇವೆ. ಆಧಾರದ ಕಾರ್ಡ್,ವೋಟರ್ ಐಡಿಯನ್ನ ಹಾಕ್ತೇವೆ. ಇದನ್ನ ಸರ್ಕಾರ ಬೇಕಾದ್ರೆ ಉಪಯೋಗಿಸಲಿ. ಇದನ್ನ ನಾವು ಪಬ್ಲಿಕ್ ಆಗಿಯೇ ಮಾಡ್ತೇವೆ. ಸರ್ಕಾರದಲ್ಲಿ ೩೪ ಜನ ಸಚಿವರಿದ್ದಾರೆ. ಅವರ್ಯಾರು ಹಿಂದುಳಿದ ವರ್ಗದ ಮಿನಿಸ್ಟರ್ ಅಲ್ಲ. ಬ್ಯಾಕ್ ವರ್ಡ್ ಕ್ಲಾಸ್ ಆಗೋಕೆ ೮ ಲಕ್ಷ ಮಿತಿ ಇದೆ. ಹಾಗಾಗಿ ಎಲ್ಲರೂ ಇದರಡಿ ಬರುವುದಿಲ್ಲ.ವರದಿಯ ಮಾಹಿತಿಯನ್ನ ಪುಸ್ತಕದಲ್ಲಿ ಕೊಡಿ. ಇಲ್ಲವೇ ವೆಬ್ ಸೈಟ್ ನಲ್ಲಾದ್ರೂ ಹಾಕಿ.ಆಮೇಲೆ ಫೀಡ್ ಬ್ಯಾಕ್ ಸಿಗುತ್ತೆ.ಆನಂತರ ಸರ್ಕಾರ ನಿರ್ಧಾರ ಮಾಡಲಿ.ಇದೇನು ಟಾಪ್ ಸೀಕ್ರೇಟ್ ಇಡುವ ವಿಷ್ಯವೇ. ಇದ್ರಿಂದ ದೇಶದ ಭದ್ರತೆಗೆ ಧಕ್ಕೆ ಬರುತ್ತಾ?. ಫೀಡ್ ಬ್ಯಾಕ್ ಮಾಡೋಕೆ ಬಿಡಿ. ಜನ ರಿಪೋರ್ಟ್ ನೋಡಿ ಫೀಡ್ ಬ್ಯಾಕ್ ಮಾಡ್ತಾರೆ. ಎಲ್ಲಾ ದತ್ತಾಂಶ ಮುದ್ರಿಸಿ ಬಿಡುಗಡೆ ಮಾಡಿ. ಏಳು ಕೋಟಿ ಜನರ ಗಮನಕ್ಕೆ ತನ್ನಿ. ಹೊಸ ಸಮೀಕ್ಷೆಯನ್ನ ಸರ್ಕಾರ ಮಾಡಿಸಬೇಕು.ಇಷ್ಟು ಲೋಪದೋಷಗಳಿರುವ ವರದಿ ಸರಿಪಡಿಸಬೇಕು. ಸರ್ಕಾರಕ್ಕೂ ವಿವೇಚನೆ ಇದೆ ಮಾಡುತ್ತೆ.ಒಂದು ವೇಳೆ ವರದಿ ಜಾರಿಯಾದ್ರೆ ನಂತರ ತೀರ್ಮಾನ. ನಮ್ಮ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಇದ್ದಾರೆ.ಅವರು ಇದರ ಬಗ್ಗೆ ತೀರ್ಮಾನ ಮಾಡ್ತಾರೆ ಎಂದಿದ್ದಾರೆ.