ಮನೆ Latest News ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರ ಬರೆದು ಕೊಟ್ಟಿಲ್ಲ : ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ...

ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರ ಬರೆದು ಕೊಟ್ಟಿಲ್ಲ : ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಹೇಳಿಕೆ

0

ಬೆಂಗಳೂರು; ಸುಧಾಕರ್ ಅವರು ಚಿಕ್ಕಬಳ್ಳಾಪುರ ಸಂಸದರು ಅಂತಾ ಅವರಿಗೆ ಚಿಕ್ಕಬಳ್ಳಾಪುರ ಬರೆದು ಕೊಟ್ಟಿಲ್ಲ  ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಆಯ್ಕೆಗೆ ಸಂಸದ ಡಾ. ಸುಧಾಕರ್ ತೀವ್ರ ವಿರೋಧ ವ್ಯಕ್ತಪಡಿಸಿದ ಬಗ್ಗೆ ಮಾತನಾಡಿದ ಅವರು ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ ಅಂತ ಬಿಜೆಪಿ ಕಾರ್ಯಕರ್ತರಿಗೆಲ್ಲಾ ಗೊತ್ತಿದೆ. ನಾಲ್ಕೈದು ವರ್ಷಗಳ ಹಿಂದೆ ಪಕ್ಷ  ಸೇರಿರುವವರಿಗೆ ಚುನಾವಣಾ ಪ್ರಕ್ರಿಯೆ ಗೊತ್ತಿರಲ್ಲ.ನಿನ್ನೆ ಸುಧಾಕರ್ ಅವರು ಮಾತಾಡಿದ್ದನ್ನು ನೋಡಿದರೆ ಇದು ನನಗೆ ಅರ್ಥ ಆಯಿತು. ಬಿಜೆಪಿಯಲ್ಲಿ ಜಿಪಿಎ ವ್ಯವಸ್ಥೆ ಇಲ್ಲ.ಸುಧಾಕರ್ ಅವರು ಚಿಕ್ಕಬಳ್ಳಾಪುರ ಸಂಸದರು ಆಗಿದ್ದಾರೆ ಅಂತ ಅವರಿಗೆ ಚಿಕ್ಕಬಳ್ಳಾಪುರ ಬರೆದು ಕೊಟ್ಟಿಲ್ಲ ಎಂದು ಗುಡುಗಿದ್ದಾರೆ.

ಅವರು ಪಕ್ಷಕ್ಕೆ ಬಂದು ಐದು ವರ್ಷ ಅಷ್ಟೇ ಆಗಿದೆ. ಇಡೀ ಪಕ್ಷ ತಾವು ಹೇಳಿದಂತೆ ಕೇಳಬೇಕು ಎಂಬ ಮನಸ್ಥಿತಿಯಿಂದ ಸುಧಾಕರ್ ಹೊರಗೆ ಬರಬೇಕು.ಸುಧಾಕರ್ ಗೆ ಪಕ್ಷ ಈ ಐದು ವರ್ಷದಲ್ಲಿ ಮೂರು ಸಲ ಬಿ ಫಾರಂ ಕೊಟ್ಟಿದೆ, ನಾಲ್ಕು ವರ್ಷ ಮಂತ್ರಿ ಮಾಡಲಾಗಿದೆ.ಸುಧಾಕರ್ ಪಿಕ್ಚರ್ ಲೈನ್ ನಲ್ಲಿ ಇರುವವರು, ಎಲ್ಲವೂ ಫಾಸ್ಟಾಗಿ ಆಗಬೇಕು ಅಂತ ಬಯಸುತ್ತಾರೆ. ಅವರು ಶಾಸಕ ಆಗಿ, ಮಂತ್ರಿ ಆಗಿ, ಸಂಸದರಾಗಿದ್ದಾರೆ. ರಾಜ್ಯಾಧ್ಯಕ್ಷ ಆಗಿ, ಸಿಎಂ ಆಗುವ ಲೆಕ್ಕಾಚಾರ ಇರಬಹುದು ಅವರಿಗೆ, ನನಗೆ ಗೊತ್ತಿಲ್ಲ. ಸುಧಾಕರ್ ವಿಜಯೇಂದ್ರ ಶಕ್ತಿ ಬಗ್ಗೆ ಮಾತಾಡುವುದು ಬೇಡ.ಸುಧಾಕರ್ ತಮ್ಮ ಮಾತಿನ ರೀತಿ ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ರಾಜ್ಯದ ಪ್ರಮುಖರು ಸುಧಾಕರ್ ರನ್ನು ಕರೆಸಿ‌ ಮಾತಾಡುವ ಅಗತ್ಯವಿದೆ. ಸೋತಿದ್ದ ಸುಧಾಕರ್ ಗೆ ಪಕ್ಷ ಮತ್ತೆ ಕೈ ಹಿಡಿದು ಎಂಪಿ ಸೀಟ್ ಕೊಡಲಾಯಿತು. ಸರ್ವಾಧಿಕಾರಿ ಧೋರಣೆ ನಮ್ಮ ಪಕ್ಷದಲ್ಲಿ ನಡೆಯಲ್ಲ. ಸುಧಾಕರ್ ಪಕ್ಷದ ವ್ಯವಸ್ಥೆ ಅರ್ಥ‌ ಮಾಡಿಕೊಳ್ಳಬೇಕು. ಅವರು ದೊಡ್ಡ ದೊಡ್ಡ ಮಾತಾಡುವುದು ಸರಿಯಲ್ಲ. ಅರ್ಜೆಂಟ್ ಗೆ ಎಲ್ಲಾ ಆಗಬೇಕು ಅಂದರೆ ಪ್ರಜಾಪ್ರಭುತ್ವ ಇರುವ ನಮ್ಮ ಪಕ್ಷದಲ್ಲಿ ಆಗಲ್ಲ. ಸುಧಾಕರ್ ಆಗಲಿ, ನಾನಾಗಲಿ ಎಲ್ಲರೂ ಕಾರ್ಯಕರ್ತರು. ಕಾರ್ಯಕರ್ತರು ಕಾರ್ಯಕರ್ತರ ತರಹ ಇರಬೇಕು. ಸುಧಾಕರ್ ದುರಹಂಕಾರದ ಮಾತಾಡಬಾರದು.ಯಡಿಯೂರಪ್ಪ ಬಗ್ಗೆ ಮಾತಾಡಿದ್ದು ಸರಿಯಲ್ಲ.ಬೇರೆಯವರ ಬಗ್ಗೆ ಸುಧಾಕರ್ ಏನೂ ಬಿಚ್ಚಿಡುವುದು ಬೇಡ. ನೀವು ಮಾತಿನ ಶೈಲಿ ಬದಲಾಯಿಸಿಕೊಳ್ಳಬೇಕು ಮಿಸ್ಟರ್ ಸುಧಾಕರ್ ಎಂದು ಗುಡುಗಿದ್ದಾರೆ.

ವಿಜಯೇಂದ್ರ ಅವರ ಒರಿಜಿನಲ್ ಬಣ್ಣ ಬಯಲಾಗ್ತಾ ಇದೆ; ವಿಧಾನಸೌಧದಲ್ಲಿ ಯತ್ನಾಳ್ ಹೇಳಿಕೆ

ಬೆಂಗಳೂರು: ವಿಜಯೇಂದ್ರ ಅವರ ಒರಿಜಿನಲ್ ಬಣ್ಣ ಬಯಲಾಗ್ತಾ ಇದೆ ಎಂದು ವಿಧಾನಸೌಧದಲ್ಲಿ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಜಿಲ್ಲಾದ್ಯಕ್ಷರ ನೇಮಕ ಹೇಗೆ ಆಗಿದೆ ಎಲ್ಲಾ ವಿಚಾರಗಳೂ ಗೊತ್ತಾಗ್ತಾ ಇವೆ. ವಿಜಯೇಂದ್ರ ಅವರಿಗೆ ಸಲಹೆ ಕೊಡ್ತೀನಿ ಯಾಕೆ ಸುಮ್ನೆ ಸರ್ಕಸ್ ಮಾಡ್ತೀರಿ.ನೇರವಾಗಿ ರಾಧಾ ಮೋಹನ್ ದಾಸ್ ಅವರ ಬಳಿ ಮಾತಾಡಿ.ಯಾವ ನಿಟ್ಟಿನಲ್ಲಿ ಪಕ್ಷ ಹೋಗ್ತಾ ಇದೆ ನೋಡಿ.ಅಪ್ಪ, ಮಗ ಮತ್ತೊಬ್ಬ ಮಗ ನೀವೆರ ಎಲ್ಲಾ ಇದ್ದು ಬಿಡಿ.ವಿಜಯೇಂದ್ರ ಚಡ್ಡಿ ಹಾಕೋ ಮುಂಚೆಯಿಂದ ನಾವು ಪಕ್ಷದಲ್ಲಿ ಇದ್ದವರು. ಈ ಬಚ್ಚಾಯಿಂದ ನಾವು ಕಲೀಬೇಕಾ. ಏನು ಮಾಡ್ತೀರಾ,ಪಾರ್ಟಿ ಯಿಂದ ಹೊರಗೆ ಹಾಕ್ತೀರಾ.?ನಾವೂ ರೆಡಿ ಇದ್ದೇವೆ ಎಂದಪ ತಿರುಗೇಟು ಕೊಟ್ಟಿದ್ದಾರೆ.

ನಿಮ್ಮ ಮನೆಯಲ್ಲಿ ಭಯದ ವಾತಾವರಣ ಇರಬಹುದು.ನಿಮ್ಮ ಅಪ್ಪ ಮನೆಯಲ್ಲಿ ಭಯ ಇಟ್ಟಿರಬಹುದು.ಆದ್ರೆ ನಮಗೆ ಯಾವ ಭಯ ಇಲ್ಲ ಎಂದು ಯತ್ನಾಳ್ ನಾಳೆ ಸಭೆಯಲ್ಲಿ ಏನು ಚರ್ಚೆ ಮಾಡಬೇಕೋ ಮಾಡ್ತೀವಿ.ಈ ಅಧ್ಯಕ್ಷನನ್ನ ಅಂತೂ ಒಪ್ಪಲು ಸಾಧ್ಯವಿಲ್ಲ. ಸುತಾರಾಂ ಒಪ್ಪಲ್ಲ.ಯಾರನ್ನು ಅಭ್ಯರ್ಥಿ ಮಾಡಬೇಕು ಅಂತ ಇನ್ನೂ ನಿರ್ಧಾರ ಮಾಡಿಲ್ಲ.ಸರ್ವಾಧಿಕಾರ ಪತನ ಆಗಲೇ ಬೇಕು. ವಿಜಯೇಂದ್ರ ಗೆ ದುರಹಂಕಾರ ಇದೆ. ದುಡ್ಡು ಮಾತಾಡಿಸ್ತಾ ಇದೆ ಎಂದ ಅವರು ಸಿದ್ದರಾಮಯ್ಯ ಮಾತು ಕೇಳಬೇಕಿತ್ತು ಎಂಬ ಸುಧಾಕರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಮನಸ್ಸಿಗೆ ಬೇಸರ ಆದಾಗ ಇವೆಲ್ಲಾ ಹೊರಗೆ ಬರ್ತಾವೆ.ಅವರು ಹದಿನೇಳು ಜನ ಬರದೇ ಇದ್ದಿದ್ರೆ, ಯಡಿಯೂರಪ್ಪ ಸಿಎಂ ಆಗ್ತಾ ಇರಲಿಲ್ಲ. ವಿಜಯೇಂದ್ರ ಗೆ ಇಷ್ಟು ಹಣದ ದುರಹಂಕಾರ ಬರ್ತಾ ಇರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.