ಬೆಂಗಳೂರು; ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಚಿವ ಡಾ.ಜಿ ಪರಮೇಶ್ವರ್ ಅವರು ಪರಪ್ಪರ ಭೇಟಿಯಾಗಿ ರಹಸ್ಯ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಶಿವಾನಂದ ಸರ್ಕಲ್ ಬಳಿ ಇರುವ ಸಚಿವ ಸತೀಶ್ ಜಾರಕಿಹೊಳಿ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ ಗೃಹ ಸಚಿವ ಪರಮೇಶ್ವರ್ ಕೆಲ ಹೊತ್ತು ಮಾತನಾಡಿದ್ದಾರೆ.ಇಬ್ಬರು ಸಚಿವರು ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದಾರೆ ಎನ್ನಲಾಗಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಇಬ್ಬರು ನಾಯಕರು ಚರ್ಚಿಸಿದ್ದಾರೆ.
ಇನ್ನು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ವಿಶೇಷ ಏನಿಲ್ಲ, ಕಚೇರಿಗೆ ಹೋಗ್ತಾ ಇರ್ತೀವಿ.ಒಂದು ಗಂಟೆ ಕೂತಿದ್ದರು.ಪಕ್ಷ, ಸಂಘಟನೆ, ಚುನಾವಣೆ ಬಗ್ಗೆ ಚರ್ಚೆ ಮಾಡಿದ್ವಿ ಅಷ್ಟೆ. ಪ್ರಸಕ್ತದ ಬಗ್ಗೆ ಚರ್ಚೆ ಆಗಿಲ್ಲ.ನಾನೇ ಹೋಗುವವನಿದ್ದೆ ಅವರೇ ಬಂದರು.ಕೇಂದ್ರ ಬಿಂದು ಅಂತೇನಿಲ್ಲ.ಹಿಂದೆ ಸಾಕಷ್ಟು ಬಾರಿ ಬಂದಿದ್ದಾರೆ.ಅವರ ಮನೆಗೆ ನಾನು ಹೋಗಿದ್ದೇನೆ.ಮನೆಗೆ ಹೋಗಿ ಬರೋದು ಏನು ಹೊಸದಲ್ಲ.ಇದು ಒಂದು ಪಕ್ಷದಲ್ಲಿ ಆಗ್ತಾವೆ.ಹಿಂದೆಯೂ ಸಾಕಷ್ಟು ಬಾರಿ ಆಗುಹೋಗುಗಳ ಬಗ್ಗೆ ಚರ್ಚೆ ಮಾಡಿದ್ದೆವು.ಈಗಲೂ ಅದನ್ನೇ ಚರ್ಚೆ ಮಾಡಿದ್ದೇವೆ ಅಷ್ಟೆ.ಒಳ್ಳೆದಾಗಲಿ ಅಂತ ಎಲ್ಲಾ ಚರ್ಚೆ ಮಾಡಿದ್ದು ಅಷ್ಟೆ.ಇಲ್ಲಿ ಸಿಎಂ ಬದಲಾವಣೆ ಇಲ್ಲ.ಆ ರೀತಿ ಯಾರು ಬಯಸಿಲ್ಲ.ಒಂದು ವೇಳೆ ಅಂತ ಬರಲ್ಲ.ಊಹೆನೂ ನಾವು ಮಾಡಿಲ್ಲ.ಸಿಎಂ ಬದಲಾವಣೆ ಒಂದು ಅಪ್ರಸ್ತುತ ಅಷ್ಟೆ ಎಂದಿದ್ದಾರೆ.
ಇನ್ನು ಮುಡಾ ಆಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಈಗಾಗಲೇ ತನಿಖೆ ನಡೆಸಲಾಗುತ್ತಿದೆ.ಸಿಎಂ ದೇಸಾಯಿ ಆಯೋಗ ರಚಿಸಿದ್ದಾರೆ ಅಷ್ಟೆ.ವರದಿ ಬಳಿಕ ಮಾತಾಡೋಣ ಎಂದಿದ್ದಾರೆ.