ಮನೆ Latest News ಬೆಳಗಾವಿಗೆ ಡಾ. ಅಂಬೇಡ್ಕರ್ ಭೇಟಿ ನೀಡಿ ನೂರು ವರ್ಷವಾಗಿದ್ದನ್ನು ನೀವ್ಯಾಕೆ ಕಾರ್ಯಕ್ರಮ ಮಾಡಿಲ್ಲ: ಬೆಂಗಳೂರಿನಲ್ಲಿ ಕೇಂದ್ರ...

ಬೆಳಗಾವಿಗೆ ಡಾ. ಅಂಬೇಡ್ಕರ್ ಭೇಟಿ ನೀಡಿ ನೂರು ವರ್ಷವಾಗಿದ್ದನ್ನು ನೀವ್ಯಾಕೆ ಕಾರ್ಯಕ್ರಮ ಮಾಡಿಲ್ಲ: ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪ್ರಶ್ನೆ

0

ಬೆಂಗಳೂರು; ಬೆಳಗಾವಿಗೆ ಡಾ. ಅಂಬೇಡ್ಕರ್ ಭೇಟಿ ನೀಡಿ ನೂರು ವರ್ಷವಾಗಿರ ಬಗ್ಗೆ  ನೀವ್ಯಾಕೆ ಕಾರ್ಯಕ್ರಮ ಮಾಡಿಲ್ಲ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪ್ರಶ್ನೆ ಮಾಡಿದ್ದಾರೆ.

ನಿಪ್ಪಾಣಿಗೆ ಭೀಮ ಹೆಜ್ಜೆ ರ್ಯಾಲಿ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್ ಗೆ ಕೌಂಟರ್ ಮಾಡಬೇಕು ಅಂತಾ ನಮಗೆ ಇರಲಿಲ್ಲ. ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಸರ್ಕಾರದ ಗಮನ ಸೆಳೆದಿದ್ದಾರೆ. ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಬಂದಿದ್ದನ್ನು ಕಾಂಗ್ರೆಸ್ ನವರು ತಮ್ಮ ಪಕ್ಷದ ಅಧಿವೇಶನ ಮಾಡಿದರು. ಆದರೆ ಅಂಬೇಡ್ಕರ್ ಬಂದಿದ್ದನ್ನು ನೀವು ಯಾಕೆ ಮಾಡಿಲ್ಲ?. ನಾವು ಸರ್ಕಾರಕ್ಕೆ ಕೌಂಟರ್ ‌ಮಾಡುವ ಪ್ರಶ್ನೆಯೇ ಇಲ್ಲ. ಸರ್ಕಾರ ಮಾಡಿದ್ದರೆ ನಾವ್ಯಾಕೆ ಕೌಂಟರ್ ‌ಮಾಡುತ್ತಿದ್ದೆವು. ನಮ್ಮ ಬದ್ಧತೆಯ ಕಾರಣಕ್ಕೆ ಮಾಡುತ್ತಿದ್ದೇವೆ ಎಂದಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಮಂತ್ರಿಗಳಲ್ಲಿ ಮೊದಲು ಒಮ್ಮತ ಮೂಡಿಸಲಿ. ಆಮೇಲೆ ಮುಂದಿನ ಸಂಗಾತಿಯನ್ನು ನಾವು ಮಾತಾಡುತ್ತೇವೆ ಎಂದ್ರು.ಜೆಪಿ ವಿರುದ್ಧ ಕಾಂಗ್ರೆಸ್ ಜನಾಕ್ರೋಶ ಪ್ರತಿಭಟನೆಗೆ ನಿರ್ಧಾರ ವಿಚಾರದ ಬಗ್ಗೆ ಮಾತನಾಡಿದ ಅವರು  ಅವರು ಜನಾಕ್ರೋಶ ಯಾತ್ರೆ ಯಾತ್ರೆ ಮಾಡುತ್ತಿದ್ದಾರೆ? ಕಾಂಗ್ರೆಸ್ ಪಕ್ಷದವರು ಜನನ-ಮರಣದ ಸರ್ಟಿಫಿಕೇಟ್ ಸಹಿತ ಎಲ್ಲವನ್ನೂ ಜಾಸ್ತಿ ಮಾಡಿದ್ದಾರೆ. ಉಜ್ವಲಾ ಯೋಜನೆಯ ಸಬ್ಸಿಡಿ ಇನ್ನೂ ಭಾರತ ಸರ್ಕಾರ ಕೊಡುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಬೆಲೆ ಏರಿಕೆ ಜಾಸ್ತಿಯಾಗಿದೆ ಎಂದ್ರು.

ಏಪ್ರಿಲ್ ೧೭ ರಂದು ವಿಶೇಷ ಸಚಿವ ಸಂಪುಟ ಸಭೆ : ಜಾತಿ ಗಣತಿ ವಿಚಾರವಾಗಿಯೇ ಚರ್ಚಿಸಲು ವಿಶೇಷ ಸಭೆ

ಬೆಂಗಳೂರು; ಜಾತಿ ಜನಗಣತಿ ಅನುಷ್ಠಾನ ವಿಚಾರಕ್ಕೆ  ಸಂಬಂಧಿಸಿ ಮುಂದಿನ ಕ್ಯಾಬಿನೆಟ್ ನಲ್ಲಿ ತೀರ್ಮಾನಿಸಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರಂತೆ ಏಪ್ರಿಲ್ ೧೭ ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಜಾತಿ ಗಣತಿ ವಿಚಾರವಾಗಿಯೇ ಚರ್ಚಿಸಲು ವಿಶೇಷ ಸಭೆ ಕರೆಯಲಾಗಿದೆ.

ಇಂದು ಸಂಪುಟ ಸಭೆಯಲ್ಲಿ ವರದಿಯ ಸಾರಾಂಶ ಮಂಡನೆ ಮಾಡಲಾಗಿದೆ. ಏಪ್ರಿಲ್ 17 ರಂದು ಚರ್ಚೆಗೆ ತಯಾರಿ ನಡೆಸಿ ಬರುವಂತೆ ಸಚಿವರಿಗೆ ಸೂಚನೆ ನೀಡಲಾಗಿದ. ಜಾತಿ ಗಣತಿ ಚರ್ಚಿಸಲೆಂದೇ ಎಪ್ರಿಲ್ 17 ರ ಸಂಜೆ 4 ಗಂಟೆಗೆ ಸಿಎಂ ಸಭೆ ಕರೆದಿದ್ದಾರೆ. ಸಂಪುಟ ಸಭೆಯಲ್ಲಿ ಸಚಿವರು ಯಾವ ಅಭಿಪ್ರಾಯ ಮಂಡಿಸಿಲ್ಲ, ಪರ ವಿರೋಧ ಚರ್ಚೆಯನ್ನು ಸಚಿವರು ಮಾಡಿಲ್ಲ. ಕೇವಲ ವರದಿ ಮಂಡಿಸಿ ಅಧಿಕಾರಿಗಳಿಂದ ಸಚಿವರು ಸಾರಾಂಶ ಕೇಳಿದ್ದಾರೆ.

ಇನ್ನು ಸಭೆ ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ‌ ಜಾತಿ ಜನಗಣತಿ ವಿಚಾರದ ಬಗ್ಗೆ ಮಾತನಾಡಿ ಕ್ಯಾಬಿನೆಟ್ ನಲ್ಲಿ ಮಂಡಿಸಿದ್ದಾರೆ.. ಆದ್ರೆ ಏ. ೧೭ಕ್ಕೆ ಅದಕ್ಕಾಗಿ ಸಂಪುಟ ಸಭೆ ನಡೆಯಲಿದೆ. ಏ. ೧೭ಕ್ಕೆ ಒಂದೇ ವಿಷ್ಯಕ್ಕೆ ಚರ್ಚೆ ಮಾಡಬೇಕು. ಹೀಗಾಗಿ ಅಂದೇ ಎಲ್ಲಾ ನಿರ್ಧಾರ ಆಗಬಹುದು. ಯಾರೂ ಕೂಡ ವಿರೋಧ ಮಾಡಿಲ್ಲ, ನೋಡಿಯೇ ಇಲ್ಲ. ಸಮರ್ಗವಾಗಿ ಚರ್ಚೆ ಮಾಡೋಕೆ ಸಿಎಂ ಸೂಚನೆ ನೀಡಿದ್ದಾರೆ.ನಾವೇ ಏಪ್ರಿಲ್ ೧೭ ಕ್ಕೆ ಸಮಗ್ರ ಚರ್ಚೆ ಮಾಡುತ್ತೇವೆ. ಕ್ಯಾಬಿನೆಟ್ ನಲ್ಲಿ ಮಂಡಿಸಿದ್ದಾರೆ. ೧೭ಕ್ಕೆ ಚರ್ಚೆ ಮಾಡಬೇಕು ಎಂದಿದ್ದಾರೆ. ಅಂದು ಒಂದೇ ದಿನ ಚರ್ಚೆ ಮಾಡಬೇಕು, ಒಂದೇ ವಿಷ್ಯ ಇದೆ. ಅಧ್ಯಯನ ಕುರಿತು ಸಮರ್ಥವಾಗಿ ಚರ್ಚೆ ಮಾಡಬೇಕು ಎಂದು ತಿಳಿಸಿದ್ರು.

ಗುತ್ತಿಗೆದಾರರ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಸಾಬೀತು ಮಾಡಬೇಕು, ಪ್ರೂ ಮಾಡಬೇಕು ಅನ್ನೋದು ಅದು ನಮ್ಮ ಕೈಯಲ್ಲಿ ಇಲ್ಲ, ನಾವು ಅಥಾರಟಿ ಅಲ್ಲ. ನ್ಯಾಯ ಸಿಗಬೇಕಾದ್ರೆ ಬಹಳ ಅಥಾರಿಟಿ ಇದೆ. ಗುತ್ತಿಗೆದಾರರಿಗೆ ನ್ಯಾಯ ಸಿಗಬೇಕು ಅಂದ್ರೆ ಅದಕ್ಕೆ ಹಲವು ಪ್ಲಾಟ್ ಫಾರ್ಮ್ ಇದೆ. ಅದು ಅಲ್ಲಿಯೇ ಹೇಳಬೇಕು, ನಮ್ಮ ಮುಂದೆ ಹೇಳಿದ್ರೆ ಹೇಗೆ? ಆಲ್ ಇಸ್ ವೆಲ್ ಅಂತ ಹೇಳುವವರು ಎಂದ್ರು.