ಬೆಂಗಳೂರು: ಸಿಎಂ, ಪರಮೇಶ್ವರ್ ಬಗ್ಗೆ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಕ್ಕೆ ಶಾಸಕ ಪ್ರದೀಪ್ ಈಶ್ವರ್ ಆಕ್ರೋಶ ಹೊರ ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಪ್ರತಾಪ್ ಸಿಂಹ ಲಜ್ಜೆಗೆಟ್ಟ ಮಾಜಿ ಸಂಸದ. ಪ್ರತಾಪ್ ಸಿಂಹ, ಪೊಲೀಸರು ಜೀಪ್ ನುಗ್ಗಿಸೋಕೆ ಆಗುತ್ತಾ?.ಪಾಸ್ ಕೊಡೋಕೆ ನಿಮ್ಮಂತ ಆಯೋಗ್ಯನೇ?. ಪರಮೇಶ್ವರ್ ಬಗ್ಗೆ ಮಾತನಾಡುವಾಗ ಮಿತಿ ಇರಲಿ.ನನ್ನ ಧರ್ಮದ ಬಗ್ಗೆ ಮಾತನಾಡಿದ್ರೆ ಬ್ಲಡ್ ಬಾಯಿಲ್ ಆಗುತ್ತೆರಿ.ಹಾಗೆಯೇ ಅವರ ಧರ್ಮ ಬೈಯ್ದರೆ ಸುಮ್ಮನೆ ಇರ್ತಾರಾ?.ನಮ್ಮ ಸಿಎಂ ಬಗ್ಗೆ ಲಜ್ಜೆಗೆಟ್ಟವನು ಅಂತೀರಾ. ಪರಮೇಶ್ವರ್ ಬಗ್ಗೆ ಧಮ್ ತಾಕತ್ ಇದ್ಯಾ ಅಂತೀರಾ.ನಿಮ್ಮನ್ನ ಯಾಕೆ ಒದ್ದು ಒಳಗೆ ಹಾಕಿಲ್ಲ ಇನ್ನೂ?. ನಮ್ಮ ಸಾಹೇಬ್ರು ಯಾಕೆ ಸುಮ್ಮನೆ ಬಿಟ್ಟಿದ್ದಾರೆ?. ಪರಮೇಶ್ವರ್ ಸಾಹೇಬ್ರು ಸೈಲೆಂಟ್ ಇದ್ದಾರೆ. ನಿನ್ನೆ ಪ್ರತಾಪ್ ಸಿಂಹಮೇಲೆ ಎಫ್ ಐಆರ್ ಆಗಿದೆ. ಅಬ್ದುಲ್ ಕಲಾಂರನ್ನ ಮಿಸೈಲ್ ಮ್ಯಾನ್ ಅಂತೇವೆ. ರಾಷ್ಟ್ರಪತಿ ಇದ್ದಾಗ ಬಹಳಷ್ಟು ಸಹಿ ಹಾಕಿದ್ರು.ಅಬ್ದುಲ್ ಕಲಾಂ ಅವರು ಮುಸ್ಲಿರಲ್ಲವೇ?. ಮುಂದೆ ಜನರೇ ನಿಮಗೆ ಬುದ್ಧಿ ಕಲಿಸ್ತಾರೆ ಎಂದು ಎಚ್ಚರಿಸಿದ್ದಾರೆ.
ಅಶೋಕಣ್ಣ, ರವಿಯಣ್ಣ ದೊಡ್ಡ ಹಿಂದೂ ಅಂತಾರೆ.ಅವರೆಲ್ಲ ದೊಡ್ಡ ಡೋಂಗಿ ಹಿಂದೂಗಳು.ನೀವು ಧರ್ಮ ಏನಾದ್ರೂ ಓದಿಕೊಂಡಿದ್ದೀರಾ. ಭಗವದ್ಗೀತೆ ಮೇಲೆ ಡಿಬೇಟ್ ಮಾಡೋಣ ಬನ್ನಿ. ಮೂರು ಜನಕ್ಕೆ ಧಮ್ ತಾಕತ್ ಇದ್ರೆ ಬನ್ನಿ. ಡಿಬೇಟ್ ಮಾಡೋಣ.ನಮ್ಮ ಧರ್ಮವನ್ನ ಪ್ರೀತಿಸಬೇಕು. ಅನ್ಯ ಧರ್ಮಗಳನ್ನೂ ಗೌರವಿಸಬೇಕು.ನಿಮ್ಮಲ್ಲೇ ದೊಡ್ಡ ಕಂದಕ ಶುರುವಾಗಿದೆ. ಯತ್ನಾಳ್ ನಿಮ್ಮಲ್ಲೇ ಗೊಂದಲಗಳಿವೆ.ಬಿಜೆಪಿಯವರ ಬಗ್ಗೆ ನನಗೆ ಅರ್ಥ ಆಗ್ತಿಲ್ಲ. ಸಿಎಂ,ಪರಮೇಶ್ವರ್ ಬೈಯ್ದರೆ ಸುಮ್ಮನಿರಲ್ಲ. ಪ್ರತಾಪ್ ಸಿಂಹರನ್ನ ಯಾಕೆ ಒದ್ದು ಒಳಗೆ ಹಾಕ್ತಿಲ್ಲ?.ಸರ್ಕಾರ ನಡೆಸೋಕೆ ಬ್ಲಡ್ ಬಾಯ್ಲ್ ಆಗುವುದಲ್ಲ, ಮೈಂಡ್ ಕೂಲ್ ಆಗಿರಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.
ನಾನು ಸಿಎಂ ಡಿಸಿಎಂ ಗೆ ದತ್ತುಪುತ್ರ ಇದ್ದಂತೆ. ಇನ್ನು ಸುಧಾಕರ್ ಕಾಂಗ್ರೆಸ್ ಗೆ ಬರುವ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ಹಿರಿಯರಿಗೆ ಬಿಟ್ಟಿದ್ದು. ಸ್ವಾಗತ ಮಾಡೋಕೆ ನಾನ್ಯಾರು. ಬೇಡ ಎನ್ನುವುದಕ್ಕೆ ನಾನ್ಯಾರು?.ನಾನೊಬ್ಬ ಸಾಮಾನ್ಯ ಮನುಷ್ಯ.ಅವರಿಗೆ ರೆಡ್ ಕಾರ್ಪೆಟ್ ಹಾಕೋಕೆ ನಾನ್ಯಾರು? ಬೇಡ ಎನ್ನೋಕೆ ನಾನ್ಯಾರು?.ಅದನ್ನ ನಮ್ಮ ನಾಯಕರು ತೀರ್ಮಾನಿಸ್ತಾರೆ.ನಾನು ಸಿಎಂ,ಡಿಸಿಎಂಗೆ ದತ್ತು ಪುತ್ರ ಇದ್ದಂತೆ.ಅವರು ನನ್ನನ್ನ ಕೈ ಬಿಡ್ತಾರಾ?.ಅವರು ನನಗೆ ಅನ್ಯಾಯ ಆಗೋಕೆ ಬಿಡಲ್ಲ. ಟಚ್ ಮಾಡೋಕೆ ಯಾರು ಬಿಡಲ್ಲ.ನಾನು ಅವರಿಗೆ ದತ್ತು ಪುತ್ರ.ದತ್ತು ಪುತ್ರ, ಪಕ್ಕದ ಮನೆ ಪುತ್ರನಿಗೆ ಡಿಫರೆನ್ಸ್ ಇಲ್ವೇ? ಎಂದು ಡಾ.ಸುಧಾಕರ್ ಬಗ್ಗೆ ಪ್ರದೀಪ್ ಈಶ್ವರ್ ಲೇವಡಿ ಮಾಡಿದ್ದಾರೆ.
ಗೃಹ ಸಚಿವರು ರಾಜ್ಯದಲ್ಲಿಲ್ಲ ಅನ್ನೋ ಅಶೋಕ್ ಆರೋಪದ ಬಗ್ಗೆ ಮಾತನಾಡಿದ ಅವರು ನಿಮ್ಮ ಸರ್ಕಾರದಲ್ಲಿ ಎಷ್ಟೆಲ್ಲ ಅವ್ಯವಹಾರ ಆಗಿಲ್ಲ.ಲಾ ಆಂಡ್ ಆರ್ಡರ್ ಕಾಪಾಡೋದು ಕಷ್ಟ.ಅದನ್ನ ಪರಮೇಶ್ವರ್ ಚೆನ್ನಾಗಿ ಮಾಡ್ತಿದ್ದಾರೆ.ಅಶೋಕ್ ಅಧ್ಯಕ್ಷರೇನೋ ಆಗ್ತಾರಂತೆ. ಮತ್ತೊಬ್ಬರು ಪ್ರತಿಪಕ್ಷ ನಾಯಕರಾಗ್ತಾರಂತೆ.ಮತ್ತೆ ಇವರೆಲ್ಲರನ್ನ ಜನರೇ ಸೋಲಿಸ್ತಾರೆ.ಇನ್ ಡಿಸಿಪ್ಲೀನ್ ಪಾರ್ಟಿ ಬಿಜೆಪಿ. ಡಿಸಿಪ್ಲೀನ್ಪಾರ್ಟಿ ನಮ್ಮದು.ಮಿಸುಕಿದ್ರೆ ಸ್ಟೇಷನ್ ಅಂತಾರೆ.ಜಾತಿ ಜಾತಿಗಳ ನಡುವೆ ಧ್ವೇಷ ಅಸೂಯೆ ತರ್ತಾರೆ.ಇವರ ಮಕ್ಕಳು ವಿದೇಶದಲ್ಲಿ ಓದಬೇಕು.ಬಡವರ ಮಕ್ಕಳು ಧರ್ಮ ಧರ್ಮ ಅಂತ ಹಾಳಾಗಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಆಕ್ರೋಶ ಹೊರ ಹಾಕಿದ್ದಾರೆ.