ಬೆಂಗಳೂರು; ಯಾರೇ ಒತ್ತುವರಿ ಮಾಡಿದ್ರೂ ಒತ್ತುವರಿನೇ ಎಂದು ವಿಧಾನಸೌಧದಲ್ಲಿ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿರಿಂದ ಜಮೀನು ಒತ್ತುವರಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಮಾನ್ಯ ಕೇಂದ್ರ ಸಚಿವರು ಕುಮಾರಸ್ವಾಮಿ ಕೆರೆ ಒತ್ತುವರಿ ಮಾಡಿದ್ದಾರೆ.ಹೈಕೋರ್ಟ್ ಕೂಡ ತೆರವಿಗೆ ನಿರ್ದೇಶನ ಕೊಟ್ಟಿದೆ. ಕಂದಾಯ ಇಲಾಖೆ, ಸರ್ವೇ ಇಲಾಖೆ ಜಂಟಿ ಸರ್ವೇ ಮಾಡಿದೆ. ಯಾರೇ ಒತ್ತುವರಿ ಮಾಡಿದ್ರೂ ಒತ್ತುವರಿನೇ ಎಂದಿದ್ದಾರೆ.
ಎರಡು ಜೆಸಿಬಿಗಳು ಅವರ ತೋಟದ ಬಳಿ ನಿಂತಿದೆಯಂತೆ. ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವು ಮಾಡ್ತಾರೆ ಅನ್ಸುತ್ತೆ. ಬಿಜೆಪಿಯವರು ಕುಮಾರಸ್ವಾಮಿಗೆ ಮಂತ್ರಿಗಿರಿ ಅನ್ನೋ ಚಾಕ್ಲೆಟ್ ಕೊಟ್ಟಿದ್ದಾರೆ. ಅವರು ಯಾವಾಗ ಯಾರ ಕಡೆ ವಾಲ್ತಾರೆ ಗೊತ್ತಿಲ್ಲ . ನಾಳೆ ಅವರು ನಮ್ಮ ಪಾರ್ಟಿಗೂ ಬರಬಹುದು. ಅವರು ಅಲ್ಲಿದ್ದಾರೆ ಅದಿಕ್ಕೆ ನಾವು ಮಾತಾಡ್ತೀವಿ.ಕುಮಾರಣ್ಣ ಮೇಲೆ ನನಗೆ ಲವ್ ಇದೆ . ಸಂಸದ ಸುಧಾಕರ್ ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅವರು ನನ್ನ ಲೇವಲ್ ಅಲ್ಲ, ನನ್ನ ಲೇವಲ್ ಇದ್ರೆ ಮಾತ್ರ ನಾನು ಮಾತಾಡೋದು. ನನ್ನ ಲೇವಲ್ ಕುಮಾರಸ್ವಾಮಿ, ವಿಜಯೇಂದ್ರ, ಪ್ರಹ್ಲಾದ್ ಜೋಷಿ, ಆರ್.ಅಶೋಕ್ ಮಾತ್ರ ಎಂದಿದ್ದಾರೆ.
ನನಗೆ ನನ್ನ ರಿಪೋರ್ಟ್ ಕಾರ್ಡ್ ಪಬ್ಲಿಷ್ ಮಾಡೋ ತಾಕತ್ತು ಗಟ್ಸು ಇದೆ, ಬಿಜೆಪಿಯವರಿಗ್ಯಾದಾ? ಶಾಸಕ ಪ್ರದೀಪ್ ಈಶ್ವರ್ ಪ್ರಶ್ನೆ
ಬೆಂಗಳೂರು; ನನಗೆ ನನ್ನ ರಿಪೋರ್ಟ್ ಕಾರ್ಡ್ ಪಬ್ಲಿಷ್ ಮಾಡೋ ತಾಕತ್ತು ಗಟ್ಸು ಇದೆ. ಬಿಜೆಪಿಯವರಿಗ್ಯಾದಾ? ಎಂದು ಶಾಸಕ ಪ್ರದೀಪ್ ಈಶ್ವರ್ ಪ್ರಶ್ನೆ ಮಾಡಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರ 299ನೇ ಜಯಂತಿ ಕಾರ್ಯಕ್ರಮದಲ್ಲಿ ಪಿ ಸಿ ಮೋಹನ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ವಿಚಾರದ ಬಗ್ಗೆ ಮಾತನಾಡಿದ ಪ್ರದೀಪ್ ಈಶ್ವರ್ , ಸಮುದಾಯದ ಚುನಾವಣೆಯಲ್ಲಿ ಪಿ ಸಿ ಮೋಹನ್ ಅವರಿಗೆ ಹಿನ್ನಡೆ ಆಗಿದೆ.ನಾವು ಕಾರ್ಯಕ್ರಮ ಕ್ಕೆ ಹೋಗಿರ್ತೇವೆ. ಕಾರ್ಯಕ್ರಮ ದಲ್ಲಿ ಡಿಸ್ಟರ್ಬ್ ಮಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮ, ಇದೊಂದು ಭಜನಾ ಕಾರ್ಯಕ್ರಮ ಅಲ್ಲ. ೧೦-೧೨ ನಿಮಿಷ ಭಾಷಣ ಮಾಡಿದ್ದಾರೆ. ಬೊಮ್ಮಾಯಿ, ಯಡಿಯೂರಪ್ಪ ಅವರ ಬಗ್ಗೆ ಗುಣಗಾನ ಮಾಡುತ್ತಿದ್ದರು.ಆಗ ನಾನೂ ಕೂಡ ಸುಮ್ಮನಿದ್ದೆ. ಆದ್ರೆ ನಂತರ ನಾನು ಭಾಷಣ ಮಾಡೋಕೆ ಶುರು ಮಾಡಿದ್ದೆ. ನಮ್ಮ ಭವಿಷ್ಯ ಪ್ರಶ್ನೆ ಸರ್, ೨ಎ ತರೋಕೆ ನಾವು ಮುಂದಾಗ್ತೀವಿ ಎಂದು ಹೇಳಿದ್ದೆ.ನಾನು ಸಾರಿ ಸಾರಿ ಮನವಿ ಮಾಡಿದ್ದೆ. ಆಗ ನಿಮ್ಮ ಅಪ್ಪಂದು ಅಲ್ಲ ಸರ್ ಕಾರ್ಯಕ್ರಮ ಅಂದೆ ಎಂದಿದ್ದಾರೆ.
ಇದು ನಾನು ಬಳಸಿದ ಪದ ಅಸಂವಿಧಾನಿಕ ಪದ ಅಲ್ಲ ಸರ್. ಸಿ ಟಿ ರವಿ ಅವರು ಹಲವು ಬಾರಿ ಪದ ಪ್ರಯೋಗ ಮಾಡಿದ್ದಾರೆ. ಆದ್ರೆ ಪ್ರಹ್ಲಾದ್ ಜೋಶಿ ಅವರು, ನಿಮ್ಮದೇ ಬಿಜೆಪಿ ನಾಯಕರಿಗೆ ಸಭ್ಯತೆ ಕಲಿಸಿ. ನಾನು ಸಭ್ಯತೆ ಒದ ಗೂಗಲ್ ಮಾಡಿದ್ದೇನೆ. ಜೋಶಿ, ಪಿಸಿ ಮೋಹನ್ ಅವರಿಗೆ ಪ್ರಶ್ನೆ ಕೇಳುತ್ತೇವೆ. ನೀವು ಜನರಿಗೆ ಏನ್ ಮಾಡಿದ್ದೀರಿ ಎಂದು ರಿಪೋರ್ಟ್ ಕಾರ್ಡ್ ನೀಡಿ ಎಂದು ಹೇಳುತ್ತೇನೆ.ನೀವು ಏನ್ ಮಾಡಿದ್ದೀರಿ ಎಂದು ಮಾಧ್ಯಮದ ಮುಂದೆ ದಾಖಲೆ ಇಡಿ. ನಾವೂ ನಾಲ್ಕೈದು ದಿನ ಟೈಮ್ ಕೊಡುತ್ತೇನೆ. ಮುಂದಿನ ವಾರ ನಾನು ನನ್ನ ರಿಪೋರ್ಟ್ ಕಾರ್ಡ್ ಪಬ್ಲಿಷ್ ಮಾಡೋ ತಾಕತ್ತು ಗಟ್ಸು ಇದೆ. ಆದ್ರೆ ಬಿಜೆಪಿಯವರಿಗೆ ತಾಕತ್ತು ಧಮ್ಮು ಇದ್ಯಾ? ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಸಂಸದರು ಏನ್ ಮಾಡಿದ್ದಾರೆ ಅನ್ನೋದನ್ನ ಹೇಳಲಿ. ಜೋಶಿ ಅವರೇ, ಮೋಹನ್ ಅಣ್ಣ.. ನಿಮ್ಮ ರಿಪೋರ್ಟ್ ಕಾರ್ಡ್ ಇದೆ. ಖಾಲಿ ಇದ್ರೆ ಖಾಲಿ ಪೇಪರ್ ತಂದು ಕೊಡಿ ಮೀಡಿಯಾ ಮುಂದೆ. ನನಗೆ ಗಟ್ಸ್ ಇದೆ, ನಾನು ರಿಪೋರ್ಟ್ ತಂದು. ಯುದ್ಧ ಮುಂದುವರಿಯಲಿದೆ, ನಿಮ್ಮ ಪೇಡ್ ಕಾಮೆಂಟ್ಸ್ ತಡಿದುಕೊಳ್ಳಲು ಧಮ್ಮು ಇದೆ. ನಾನು ಆ್ಯಕ್ಸಿಡೆಂಟ್ ಶಾಸಕ ಅಲ್ಲ. ನನಗೆ ಧೈರ್ಯವೇ ಬಂಡವಾಳ. ಬಿಜೆಪಿಯ ಐಟಿ ಸೆಲ್ ಅವರಿಗೆ ಟ್ವೀಟ್ ಮಾಡಿದಕ್ಕೂ ಬರಲ್ಲ ಎಂದಿದ್ದಾರೆ.
ಬಲಿಜ ಸಮುದಾಯ ದಕ್ಷಿಣ ಭಾರತದ ಓಬಿಸಿ ಸಮುದಾಯದ ಅತಿ ದೊಡ್ಡ ಸಮುದಾಯ. ದಕ್ಷಿಣ ಭಾರತದಲ್ಲೆ ಬಲಿಜ ಅಮುದಾಯದ ಏಕೈಕ ಶಾಸಕ . ನಮ್ಮ ರಾಜ್ಯದಲ್ಲೇ ೪೦ ಲಕ್ಷ ಬಲಿಜ ಸಮುದಾಯದವರಿದ್ದಾರೆ . ನನ್ನ ಕ್ಷೇತ್ರದಲ್ಲೇ ೪೫ ಸಾವಿರ ಬಲಿಜ ಸಮುದಾಯದವರಿದ್ದಾರೆ.ಮೊದಲು ಸಮುದಾಯದ ಬಗ್ಗೆ ಮಾತನಾಡಿ ಆ ಮೇಲೆ ಮೊನ್ನೆಯ ಘಟನೆ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ, ಬಿಜೆಪಿ ಪೆಯಿಡ್ ಆರ್ಟಿಸ್ಟ್ ಗಳು ಬಿಜೆಪಿ ಗಾನ ಭಜನ ಮಂಡಳಿಗೆ ನನ್ನ ಸವಾಲು .ನಾನು ನನ್ನ ಇಷ್ಟು ವರ್ಷದ ಸಾಧನೆಯ ರಿಪೋರ್ಟ್ ಜನರ ಮುಂದೆ ಇಡುತ್ತೇನೆ. ಪಿಸಿ ಮೋಹನ್ ಅವರು ಪ್ರಹ್ಲಾದ್ ಜೋಷಿ ಅವರು ಏನೇನು ಮಾಡಿದ್ದಾರೆ ಜನರ ಮುಂದೆ ಇಡಲಿ. ಪ್ರದೀಪ್ ಈಶ್ವರ್ ಹಾಗೂ ಬಿಜೆಪಿ ನಡುವಿನ ಯುದ್ದ ಮುಂದುವರಿಯಲಿದೆ. ನಾನು ಅಂಜಲ್ಲ ಅಳುಕಲ್ಲ .ನಾನು ಆಕ್ಸಿಡೆಂಟಲ್ ಶಾಸಕ ಅಲ್ಲ ಎಂದು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.