ಮನೆ Latest News ಇಸ್ರೋ ಮಾಜಿ ಅಧ್ಯಕ್ಷ ಕೆ ಕಸ್ತೂರಿ ರಂಗನ್ ಅಂತಿಮ ದರ್ಶನ ಪಡೆದ ರಾಜಕೀಯ ಗಣ್ಯರು

ಇಸ್ರೋ ಮಾಜಿ ಅಧ್ಯಕ್ಷ ಕೆ ಕಸ್ತೂರಿ ರಂಗನ್ ಅಂತಿಮ ದರ್ಶನ ಪಡೆದ ರಾಜಕೀಯ ಗಣ್ಯರು

0

ಬೆಂಗಳೂರು: ಮೊನ್ನೆ ನಿಧನರಾದ ಇಸ್ರೋ ಮಾಜಿ ಅಧ್ಯಕ್ಷ ಕೆ ಕಸ್ತೂರಿ ರಂಗನ್ ಅಂತ್ಯಕ್ರಿಯೆ ಇಂದು ನಡೆಯಿತು.ಅದಕ್ಕೂ ಮುನ್ನ ಧರ್ಮೇಂದ್ರ ಪ್ರಧಾನ್ ಜೊತೆ ಗೃಹ ಸಚಿವ ಡಾ ಜಿ ಪರಮೇಶ್ವರ್, ಸಚಿವ ದಿನೇಶ್ ಗುಂಡೂರಾವ್ ಅಂತಿಮ ದರ್ಶನ ಪಡೆದರು.

ಈ ವೇಳೆ ಮಾತನಾಡಿದ ಕಸ್ತೂರಿ ರಂಗನ್ ಪುತ್ರ ಸಂಜಯ್ ರಂಗನ್ ತಂದೆ ಕುಟುಂಬ ತುಂಬಾ ದೊಡ್ಡದು. ಯಾರ ಹತ್ತಿರ ಮಾಡಿದರೂ ಎಲ್ಲಾ ಹೇಳ್ತಿದ್ದರು. ಇಷ್ಟೊಂದು ಜನರಿಗೆ ಅವರು ಮಾರ್ಗದರ್ಶನ ನೀಡಿದ್ದಾರೆ. ನಮ್ಮ ತಂದೆಯವರು ನಮ್ಮನ್ನ ಚನ್ನಾಗಿ ನೋಡಿಕೊಂಡಿದ್ದಾರೆ. ಜೀವನದಲ್ಲಿ ಏನ್ ಮಾಡಬೇಕು ಅದೆಲ್ಲಾ ಮಾಡಿದ್ದೀನಿ ಅಂತ‌ ಹೇಳುತ್ತಿದ್ದರು. ಅವರಿಗೆ ಹೇಗೆ ಬೇಕು ಹಾಗೆ ಕೊನೆ ದಿನಗಳಲ್ಲಿ ಇರುತ್ತಿದ್ದರು.ಕಳೆದ ವಾರ ನಾನು ಅವರ ಜೊತೆ ಇರಲಿಲ್ಲ. ಮೂರು ದಿನ ಕಣ್ಣು ತೆಗೆಯಲಿಲ್ಲವಂತೆ. ಆದ್ರೆ ಮೊನ್ನೆ ಅವರು ಕಣ್ಣು ತೆಗೆದು ಎಲ್ಲರನ್ನೂ ನೋಡಿ ಹೋದರು ವಿಧಿವಿಧಾನ ಬಗೆ ಗೊತ್ತಿಲ್ಲ, ಪ್ರಿಸ್ಟ್ ಏನ್ ಹೇಳ್ತಾರೆ ಅದನ್ನ ಮಾಡುತ್ತೇನೆ ಎಂದರು.

ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಜೊತೆ ನಟ ಸಾಧುಕೋಕಿಲ ಕಸ್ತೂರಿ ರಂಗನ್ ಅಂತಿಮ‌ ದರ್ಶನ ಪಡೆದರು. ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ನಮ್ಮ ರಾಜ್ಯದಿಂದ ಶಕ್ತಿ ಆಗಿದ್ದರು. ಇವತ್ತು ಇಸ್ರೋಗೆ ಹೆಸರು ಬರೋಕೆ ಇವರೇ ಕಾರಣ. ಕಸ್ತೂರಿ ಅವರು ಹಾಕಿದ್ದ ಅಡಿಪಾಯ.ಇವತ್ತು ಅವರನ್ನ ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಗಮಿಸಿದ್ದೇನೆ. ಮುಂದಿನ ದಿನಗಳಲ್ಲಿ ಕಸ್ತೂರಿ ರಂಗನ್ ಅವರ ವರದಿ, ಕಾಡನ್ನ ಉಳಿಸೋಕೆ‌ ಚರ್ಚೆ ಆಗ್ತಿದೆ. ಪರ ವಿರೋಧ ಇರಬಹುದು. ಅವರು ತೆಗೆದುಕೊಂಡ ನಿಲುವು ದೊಡ್ಡದು. ಇಡೀ ವಿಶ್ವದಲ್ಲೇ ಅವರು ಹೆಸರು ಬೇರುರಿದೆ. ಕರ್ನಾಟಕ ಸರ್ಕಾರ ಕೂಡ ಅವರಿಗೆ ಸರ್ಕಾರಿ ಗೌರವ ನೀಡುತ್ತದೆ. ಇಸ್ರೋ ವನ್ನು ಬೆಳೆಸುವ ವಿಜರದಲ್ಲಿ ಅವರ ಪಾತ್ರ ದೊಡ್ಡದು ಎಂದರು.

 

ನಾಳೆ ಬೆಳಗಾವಿ ಯಲ್ಲಿ ಪ್ರತಿಭಟನೆ ವಿಚಾರಾದ ಬಗ್ಗೆ ಮಾತನಾಡಿದ ಅವರು ನಾಳೆ ಪ್ರತಿಭಟನೆ ಇದೆ. ನಾನು , ಸಿಎಂ ಹೋಗುತ್ತಿದ್ದೇವೆ. ಸಂವಿಧಾನ ರಕ್ಷಣೆ ಮಾಡಬೇಕು, ಅನೇಕ ಚರ್ಚೆ ಆಗಲಿದೆ ಎಂದರು.ಯುದ್ದ ಬೇಡ ಎಂಬ ಸಿಎಂ ಹೇಳಿಕೆ ಪಾಕಿಸ್ತಾನ ಮಾಧ್ಯಮಗಳಲ್ಲಿ ಚರ್ಚೆ ಬಗ್ಗೆ ಮಾತನಾಡಿದ ಅವರು  ದೇಶದ ಐಕ್ಯತೆ, ಸಮಗ್ರತೆ ಬಹಳ ಮುಖ್ಯ. ನಾವೆಲ್ಲರೂ ಭಾರತೀಯರು. ರಾಹುಲ್ ಗಾಂಧಿ, ಮತ್ತು ಮಲ್ಲಿಕಾರ್ಜುನ್ ಖರ್ಗೆ ಅವರ ನಾಯಕತ್ವದಲ್ಲಿ ಸ್ಟಾಂಡ್ ತೆಗೆದು ಕೊಳ್ಳುತ್ತೇವೆ. ರಾಹುಲ್ ಗಾಂಧಿ ಹೇಳಿಕೆ ಮತ್ತು ಮಲ್ಲಿಕಾರ್ಜುನ್ ಹೇಳಿಕೆಗೆ ಬದ್ದರಾಗಿರುತ್ತೇವೆ. ಮುಖ್ಯ ಮಂತ್ರಿಗಳ ಹೇಳಿಕೆ ಬಗ್ಗೆ ನಾನು ಕಾಮೆಂಟ್ ಮಾಡಲ್ಲ ಎಂದರು.ಇನ್ನು ರಾಜ್ಯಪಾಲರಾದ ಥಾವರ್ ಚಂದ್ ಕೂಡ ಅಂತಿಮ ದರ್ಶನ ಪಡೆದರು. ಈ ವೇಳೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಶಾಸಕ ಅಶ್ವತ್ಥ್ ನಾರಾಯಣ್ ಮಾತನಾಡಿ ಅಪಾರ ಜ್ಞಾನಿಗಳು. ಅವರ ಅಪಾರ ಕೊಡುಗೆ ದೇಶಕ್ಕೆ ವಿಶ್ವಕ್ಕೆ ಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರ ಸೇರಿಸಿ ಸಾಮಾಜಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಇಸ್ರೋ ಚೇರ್ಮನ್ ಆಗಿ ಕೆಲಸ‌ ಮಾಡಿದ್ದಾರೆ ಎಂದರು.