ಮನೆ Latest News ಮಂಗಳೂರು : ಪೊಲೀಸ್ ಕಾನ್ಸ್ಟೇಬಲ್ ಯಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾ ಬಲೆಗೆ ಬಿದ್ದ ಪೊಲೀಸ್ ಇನ್ಸ್ಪೆಕ್ಟರ್

ಮಂಗಳೂರು : ಪೊಲೀಸ್ ಕಾನ್ಸ್ಟೇಬಲ್ ಯಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾ ಬಲೆಗೆ ಬಿದ್ದ ಪೊಲೀಸ್ ಇನ್ಸ್ಪೆಕ್ಟರ್

0

ಮಂಗಳೂರು : ಕರ್ತವ್ಯದ ಸ್ಥಳ ನಿಯೋಜಿಸಲು ಪೊಲೀಸ್ ಕಾನ್ಸ್ಟೇಬಲ್ ಯಿಂದ 18,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಲೋಕಾ ಬಲೆಗೆ ಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಏನಿದು ಪ್ರಕರಣ?

ಕೆ ಎಸ್ ಆರ್ ಪಿಯ ವಿಶೇಷ ಮೀಸಲು ಪಡೆ 7ನೇ ಬೆಟಾಲಿಯನ್, ಕೊಣಾಜೆ, ಮಂಗಳೂರು ಇಲ್ಲಿ ಮೀಸಲು ಪೊಲೀಸ್ ಕಾನ್ಸ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದೂರುದಾರ ಕಾನ್ಸ್ಟೇಬಲ್ ಗೆ   ಕರ್ನಾಟಕ ಪೊಲೀಸ್ ವಿಶೇಷ ಮೀಸಲು ಪಡೆ 7ನೇ ಬೆಟಾಲಿಯನ್ನ ಪೊಲೀಸ್ ಅತಿಥಿಗೃಹದ ನಿರ್ವಾಹಕರಾಗಿ ಕರ್ತವ್ಯವನ್ನು ನಿರ್ವಹಿಸುವ ಸಮಯದಲ್ಲಿ ಕರ್ನಾಟಕ ಪೊಲೀಸ್ ವಿಶೇಷ ಮೀಸಲು ಪಡೆ 7ನೇ ಬೆಟಾಲಿಯನ್ ಕೊಣಾಜೆ, ಮಂಗಳೂರು ಇಲ್ಲಿನ ಪೊಲೀಸ್ ನಿರೀಕ್ಷಕರಾದ ಮಹಮ್ಮದ್ ಆರಿಸ್ ಎಂಬವರು ಕರ್ತವ್ಯ ನಿರ್ವಹಿಸಬೇಕಾದರೆ ತನಗೆ 20,000/- ರೂ ಗಳನ್ನು ನೀಡಬೇಕೆಂದು ಹಾಗೂ ಪ್ರತಿ ತಿಂಗಳು ತನಗೆ ರೂ 6,000/-ದಂತೆ ಹಣ ನೀಡಬೇಕೆಂದು ದೂರುದಾರ ಕಾನ್ಸ್ಟೇಬಲ್ ಗೆ ಬೇಡಿಕೆಯನ್ನು ಇಟ್ಟಿದ್ದರು. ಅದರಂತೆ ದೂರುದಾರ ಕಾನ್ಸ್ಟೇಬಲ್ ಪೊಲೀಸ್ ಇನ್ಸ್ಪೆಕ್ಟರ್ ಆರೀಸ್ ಗೆ ಪ್ರತಿ ತಿಂಗಳು ರೂ. 6,000/- ವನ್ನು ದೂರುದಾರ ಕಾನ್ಸ್ಟೇಬಲ್ ಲಂಚವಾಗಿ ನೀಡುತ್ತಾ ಬಂದಿದ್ದರು. ಅದರಂತೆ  ಈವರೆಗೆ ಒಟ್ಟು 50,000/- ರೂಗಳನ್ನು ದೂರುದಾರ ಕಾನ್ಸ್ಟೇಬಲ್ ಪೊಲೀಸ್ ಇನ್ಸ್ಪೆಕ್ಟರ್ ಮಹಮ್ಮದ್ ಆರೀಸ್ ಅವರು ದೂರದಾರರಿಂದ ಪಡೆದಿದ್ದರು.

ಇದರ ಮಧ್ಯೆ ದೂರುದಾರ ಕಾನ್ಸ್ಟೇಬಲ್ ತಂದೆಯವರು ಅನಾರೋಗ್ಯಕ್ಕೆ ಈಡಾಗಿದ್ದರಿಂದ  2024ರ ಏಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗಿನ 3 ತಿಂಗಳ ರೂ 18,000/- ರೂಗಳನ್ನು ಲಂಚವಾಗಿ ಇನ್ಸ್ಪೆಕ್ಟರ್ ಮಹಮ್ಮದ್ ಆರೀಸ್‌ರವರಿಗೆ ಕೊಡಲು ದೂರುದಾರ ಕಾನ್ಸ್ಟೇಬಲ್ ಗೆ ಸಾಧ್ಯವಾಗಿರುವುದಿಲ್ಲ. ದೂರುದಾರ ಕಾನ್ಸ್ಟೇಬಲ್ 3 ತಿಂಗಳ ಬಾಕಿ 18,000/- ಹಣವನ್ನು ನೀಡಿಲ್ಲ ಎಂದು ಇನ್ಸ್ಪೆಕ್ಟರ್ ಮಹಮ್ಮದ್ ಆರೀಸ್‌ ಪ್ರತಿ ದಿನ ದೂರುದಾರ ಕಾನ್ಸ್ಟೇಬಲ್ ಗೆ ಕರೆ ಮಾಡಿ ನೀಡಲು ಬಾಕಿ ಇರುವುದನ್ನು ನೀಡು, ಇಲ್ಲವಾದರೆ ಡ್ಯೂಟಿ ಬದಲಾಯಿಸುತ್ತೇನೆ ಎಂಬುದಾಗಿ ತಿಳಿಸಿ ರೂ 18,000/-ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಅದರಂತೆ ಮಹಮ್ಮದ್ ಆರಿಸ್ ದೂರುದಾರ ಕಾನ್ಸ್ಟೇಬಲ್ ಅವರಿಂದ ರೂ.18,000 (ಹದಿನೆಂಟು ಸಾವಿರ) ಲಂಚದ ಹಣವನ್ನು ಸ್ವೀಕರಿಸುವಾಗ ಜು.10 ರಂದು ಸಂಜೆ ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇನ್ನೂ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು ಬಳಿಕ ಮಂಗಳೂರು ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಹಾಜರುಪಡಿಸಲಿದ್ದಾರೆ.

 

ಮಂಗಳೂರು ಲೋಕಾಯುಕ್ತ ಎಸ್ಪಿ ಎಂ.ಎ‌.ನಟರಾಜ ನೇತೃತ್ವದಲ್ಲಿ ಡಿವೈಎಸ್ಪಿ ಡಾ.ಗಾನಾ ಪಿ ಕುಮಾರ್ , ಇನ್ಸ್ಪೆಕ್ಟರ್ ಗಳಾದ ಅಮಾನುಲ್ಲಾ.ಎ, ಶ್ರೀ ಸುರೇಶ್ ಕುಮಾರ್,ಶ್ರೀ ಚಂದ್ರಶೇಖರ್ ಸಿ.ಎಲ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.