ಚಾಮರಾಜನಗರ; ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಉಗ್ರರು ಎಲ್ಲೇ ಇರಲಿ ಅವರನ್ನ ಬೆಳೆಯಲಿಕೆ ಅವಕಾಶ ಕೊಡಬಾರದು. ಅಮಾನವೀಯ ಕೃತ್ಯ ನಡೆದಿದೆ.ಇದನ್ನ ತೀವ್ರವಾಗಿ ಖಂಡಿಸುತ್ತೇನೆ. ಪುಲ್ವಾಮ ಘಟನೆ ನಡೆದಿತ್ತು, ಇದರಿಂದ ಎಚ್ಚರಿಕೆಯಿಂದ ಇರಬೇಕಿತ್ತು. ಸ್ವಲ್ಪವೂ ವಿಶ್ರಮಿಸಬಾರದಿತ್ತು. ಕೇಂದ್ರ ಸರ್ಕಾರದ ಇಂಟಲಿಜೆನ್ಸ್ ವೈಫಲ್ಯ ಇದೆ ಅನ್ಸುತ್ತೆ ಎಂದಿದ್ದಾರೆ.
ಘಟನೆಯಾದ ಬಳಿಕ ಕ್ರಮ ತೆಗೆದುಕೊಳ್ಳುವುದು ಬೇರೆ. ಅದನ್ನ ಕೇಂದ್ರ ಸರ್ಕಾರ ಮಾಡಬೇಕಿತ್ತು. ಪುಲ್ವಾಮ ದಾಳಿಯಲ್ಲಿ 40 ಸೈನಿಕರು ಜೀವ ತೆತ್ತಿದ್ದಾರೆ. ಇದು ಮೊತ್ತಮ್ಮೆ ನಡೆಯದಂತೆ ನೋಡಿಕೊಳ್ಳಬೇಕು. ಯಾವುದೇ ಜಾತಿ ಧರ್ಮಕ್ಕೆ ಸೇರಿದವರಾಗಲಿ ಅವರನ್ನ ಮಟ್ಟ ಹಾಕಬೇಕು. ಎಲ್ಲರ ಜೊತೆ ನಾವಿದ್ದೇವೆ. 10 ಲಕ್ಷ ಪರಿಹಾರ ಕೊಟ್ಟಿದ್ದೇವೆ. ಬಹಳ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಮೇಕೆದಾಟು ಮಾಡಲು ನಾವು ತಾಯರಿದ್ದೇವೆ. ಈಗಾಗಲೇ ಕೇಂದ್ರ ಸರ್ಕಾರದ ಜೊತೆ ಹಲವು ಭಾರಿ ಮಾತನಾಡಿದ್ದೇನೆ ಎಂದು ಮಲೆಮಹದೇಶ್ವರ ಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಕ್ಯಾಬಿನೆಟ್ ಸಭೆ
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಕ್ಯಾಬಿನೆಟ್ ಸಭೆ ನಡೆಯಿತು. ಸಭೆಯ ಆರಂಭದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಾ.ರಾಜ್ ಕುಮಾರ್ ೯೭ ನೇ ಜಯಂತಿ ಹಿನ್ನೆಲೆ ರಾಜಕುಮಾರ್ ಭಾವಚಿತ್ರಕ್ಕೆ ಸಿದ್ದರಾಮಯ್ಯ ಡಿಕೆಶಿವಕುಮಾರ್ ಸೇರಿ ಸಚಿವರಿಂದ ಪುಷ್ಪಾರ್ಚನೆ ಸಲ್ಲಿಕೆಯಾಯಿತು.
ಸಭೆಯ ಬಳಿಕ ಸಿಎಂ ಡಿಸಿಎಂ ಹಾಗೂ ಸಚಿವರಿಂದ ಸುದ್ದಿಗೋಷ್ಟಿ ನಡೆಯಿತು. ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಮಾದೇಶ್ವರನ ಬೆಟ್ಟದಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆಯನ್ನು ನಡೆಸಿದ್ದೇವೆ. ರಾಜ್ಯದ ನಾಲ್ಕೂ ವಿಭಾಗಗಳಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು ಅಂತ ತೀರ್ಮಾನ ಮಾಡಿ. ಈಗಾಗಲೇ ಕಲಬುರ್ಗಿ ವಿಭಾಗದಲ್ಲಿ ಸಭೆ ಆಗಿದೆ ಇವತ್ತು ಮೈಸೂರು ವಿಭಾಗದಲ್ಲೂ ಸಭೆ ಆಗಿದೆ. ಬೆಳಗಾವಿ ವಿಭಾಗದಲ್ಲೂ ಸಂಪುಟ ಸಭೆ ಮುಂದಿನ ದಿನಗಳಲ್ಲಿ ಮಾಡುತ್ತೇವೆ. ಬೆಳಗಾವಿ ವಿಭಾಗದ ಸಭೆಯನ್ನು ವಿಜಯಪುರದಲ್ಲಿ ಮಾಡಬೇಕು ಅಂತ ಮಾಡಿದ್ದೇವೆ. ಬೆಂಗಳೂರು ವಿಭಾಗದ ಸಭೆ ನಂದಿ ಬೆಟ್ಟದಲ್ಲಿ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ಮೊದಲು ಶ್ರೀನಗರದಲ್ಲಿ ಉಗ್ರರ ದಾಳಿ ಖಂಡಿಸುವ ಖಂಡನಾ ನಿರ್ಣಯ ಮಾಡಿದ್ದೇವೆ. ಹುತಾತ್ಮರಾದ ಎಲ್ಲ ನಾಗರೀಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕೆಲಸ ಸಂಪುಟ ಸಭೆಯಲ್ಲಿ ಮಾಡಿದ್ದೇವೆ .ಇನ್ನು ಪೋಪ್ ಅವರ ನಿಧನಕ್ಕೂ ಸಂತಾಪ ಸೂಚನೆ ನಿರ್ಣಯ ಮಾಡಿದ್ದೇವೆ ಮೈಸೂರು ವಿಭಾಗಕ್ಕೆ ಸಂಬಂಧಿಸಿ ೭೮ ವಿಷಯಗಳ ಮೇಲೆ ಚರ್ಚೆ ಮಾಡಿ ನಿರ್ಣಯ ಮಾಡಿದ್ದೇವೆ. ಎಂದರು.
ಗುಲಬರ್ಗಾ ವಿಭಾಗದಲ್ಲಿ ೫೬ ವಿಷಯ ಇತ್ತು ಇಲ್ಲಿ ೭೮ ವಿಷಯ ತೀರ್ಮಾನ ಆಗಿದೆ. ೩೬೪೭.೬೨ ಕೋಟಿ ಮೊತ್ತದ ಯೋಜನೆಗಳಿಗೆ ಇಂದಿನ ಕ್ಯಾಬಿನೆಟ್ ತೀರ್ಮಾನ ಮಾಡಿದ್ದೇವೆ ಅಂಗೀಕಾರದ ಮಾಡಿದ್ದೇವೆ. ನೀರಾವರಿ, ಲೋಕೋಪಯೋಗಿ, ಸಣ್ಣ ನೀರಾವರಿ ಸಂಬಂಧಿಸಿ ಇಂಧನ ಇಲಾಖೆ ಆರೋಗ್ಯ ಇಲಾಖೆ ಗ್ರಾಮೀಣಾಭಿವೃದ್ಧಿ ಕೆರೆ ನೀರು ತುಂಬಿಸುವುದು ಬುಡಕಟ್ಟು ಅಭಿವೃದ್ಧಿ, ಬುಡಕಟ್ಟು ಗ್ರಾಮಗಳ ರಸ್ತೆಗಳ ಅಭಿವೃದ್ಧಿ ನಿರ್ಣಯ ಮಾಡಿದ್ದೇವೆ. ಪರಿಶಿಷ್ಟ ಜಾತಿ ಪಂಗಡದ ವಾಸಿಸುವವರ ಕೇರಿಗಳ ಅಭಿವೃದ್ಧಿ ಗೆ ೨೪೦ ಕೋಟಿ ಮೊತ್ತದ ಯೋಜನೆ ಮಾಡಿದ್ದೇವೆ. ಆನೆ ಮಾನವ ಸಂಘರ್ಷ ತಡೆಯಲು ೨೧೦ ಕೋಟಿ ಮೀಸಲಿಟ್ಟಿದ್ದೇವೆ ರೈಲ್ವೇ ಬ್ಯಾರಿಕೇಡ್ ಅಳವಡಿಸುತ್ತೇವೆ. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ೨೫೦ ಬೆಡ್ ಗಳ ಜಿಲ್ಲಾ ಆಸ್ಪತ್ರೆಯನ್ನು ಕಟ್ಟುತ್ತೇವೆ. ಪ್ರವಾಸೋದ್ಯಮ ಇಲಾಖೆಗೆ ೩೦೦ ಕೋಟಿ ನೀಡುತ್ತೇವೆ. ಹನೂರು ಹೊಸ ತಾಲೂಕಾಗಿದ್ದರಿಂದ ತಾಲೂಕು ಕಚೇರಿ ಹಾಗೂ ತಾಲೂಕು ಆಸ್ಪತ್ರೆ ನಿರ್ಮಾಣ ಮಾಡ್ತೇವೆ. ಚಾಮರಾಜನಗರ ಜಿಲ್ಲೆ ಚಿಕ್ಕಲ್ಲೂರಿನಲ್ಲಿ ಮಂಟೇಸ್ವಾಮಿ ಸಿದ್ದಪ್ಪಾಜಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ತೀರ್ಮಾನಿಸಲಾಗಿದೆ ಎಂದರು.
ಇಲವಾಲ ಹೋಬಳಿಯಲ್ಲಿ ಕ್ರಿಕೇಟ್ ಸ್ಟೇಡಿಯಂ ಗೆ ಜಾಗ ನೀಡುತ್ತೇವೆ. ಭಾರತ್ ಜೋಡೋ ಯಾತ್ರೆಯಲ್ಲಿ ಗಾಂಧಿ ಭೇಟಿ ನೀಡಿದ ಬದನವಾಳು ಖಾದಿ ಗ್ರಾಮೋದ್ಯೋಗಕ್ಕೆ ನಾವೆಲ್ಲ ಭೇಟಿ ನೀಡಿದ್ದೆವು. ೪೭ ಕೋಟಿ ವೆಚ್ಚದಲ್ಲಿ ಖಾದಿ ಗ್ರಾಮೋದ್ಯೋಗ ಅಭಿವೃದ್ಧಿ ಮಾಡುತ್ತೇವೆ. ಮೈಸೂರು ಏರ್ ಪೋರ್ಟ್ ರನ್ ವೇ ವಿಸ್ತರಣೆಗೆ ಜಾಗ ಬೇಕಾಗಿತ್ತು. ರನ್ ವೇ ವಿಸ್ತರಣೆಗೆ ೧೦೧ ಕೋಟಿ ಮೀಸಲಿಟ್ಟಿದ್ದೇವೆ. ಮೈಸೂರು ನಗರದಲ್ಲಿ ಹಳೆ ಜಿಲ್ಲಾಧಿಕಾರಿ ಕಚೇರಿ ಶಿಫ್ಟ್ ಆಗಿದೆ. ಅಲ್ಲಿ ಹಳೆ ಅಠಾರಾ ಕಚೇರಿಯಲ್ಲಿ ಮ್ಯೂಸಿಯಂ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.
ವಿರೋಧ ಪಕ್ಷದವರು ಅಭಿವೃದ್ಧಿಗೆ ದುಡ್ಡಿಲ್ಲ ಅಂತಾರೆ. ಅವರು ರಾಜಕೀಯ ವಾಗಿ ಸುಳ್ಳು ಹೇಳ್ತಾರೆ. ಗ್ಯಾರಂಟಿ ಗಳಿಗೆ ಖರ್ಚು ಮಾಡಿಬಿಡ್ತಾರೆ ಅಂತಾ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಕ್ಯಾಬಿನೆಟ್ ಮಾಡಿದ್ದೇವೆ. ದುಡ್ಡಿಲ್ಲ ಅಂದರೆ ಇಷ್ಟು ಅಮೌಂಟ್ ಮಂಜೂರು ಮಾಡೋಕೆ ಆಗುತ್ತಿತ್ತಾ..?. ಇದರ ಬಗ್ಗೆ ಮಾಧ್ಯಮಗಳು ವಿಪಕ್ಷ ನಾಯಕ ರಿಗೆ ತಿಳಿಸಬೇಕು ಎಂದು ಸಿಎಂ ಹೇಳಿದ್ರು. ವಿಜಯನಗರ ಸಾಮ್ರಾಜ್ಯದ ದೊರೆ ಕೃಷ್ಣದೇವರಾಯನ ಸಮಾಧಿ ಇದೆ. ಸಮಾಧಿ ಅಭಿವೃದ್ಧಿ ಪಡಿಸಲು ನಿರ್ಣಯ ಕೈಗೊಂಡಿದ್ದೇವೆ ಎಂದ ಅವರು ಮೈಸೂರಿನಲ್ಲಿ ಮಹಾರಾಜರ ವಂಶಸ್ಥರಿಗೆ ಸೇರಿದ ಜಾಗದಲ್ಲಿ ಉಳುಮೆ ರೈತರು ಮಾಡುತ್ತಿರುವ ವಿಚಾರದ ಬಗ್ಗೆ ಮಾತನಾಡಿ ಯಾರು ಉಳುಮೆ ಮಾಡುತ್ತಿದ್ದಾರೋ ಅವರೇ ಮಾಲೀಕರು. ಉಳುಮೆ ಮಾಡುತ್ತಿರುವವರಿಗೆ ಮಾಲಿಕತ್ವ ಕೊಡಬೇಕಾಗುತ್ತದೆ ಎಂದ್ರು.